ಕಳೆದ 6 ತಿಂಗಳಲ್ಲಿ ಮಹಾರಾಷ್ಟ್ರ ದಲ್ಲಿ 1267 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಅಮರಾವತಿ ವಿಭಾಗದ ವಿದರ್ಭ ಪ್ರಾಂತ್ಯದಲ್ಲಿ 557 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಜ್ಯ ಸರ್ಕಾರದ ಅಂಕಿಅಂಶಗಳು ತಿಳಿಸಿವೆ.
ಅಂಕಿಅಂಶಗಳ ಪ್ರಕಾರ ಜನವರಿಯಿಂದ ಜೂನ್ವರೆಗೆ ಛತ್ರಪತಿ ಸಾಂಬಾಜಿ ನಗರ ವಿಭಾಗದಲ್ಲಿ ಎರಡನೇ ಅತೀ ಹೆಚ್ಚು 430 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಾಸಿಕ್ ವಿಭಾಗದಲ್ಲಿ 137 ಹಾಗೂ ನಾಗ್ಪುರ ವಿಭಾಗದಲ್ಲಿ 130 ಹಾಗೂ ಪುಣೆ ವಿಭಾಗದಲ್ಲಿ 13 ಮಂದಿ ಸಾವಿಗೀಡಾಗಿದ್ದಾರೆ.
ಕರಾವಳಿಯ ಕೊಂಕಣ್ ವಿಭಾಗದಲ್ಲಿ ಒಂದೂ ಸಾವು ವರದಿಯಾಗಿಲ್ಲ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ(ಎನ್ಸಿಆರ್ಬಿ) ಪ್ರಕಾರ 2022ರಲ್ಲಿ ದೇಶದಲ್ಲಿಯೇ ಶೇ 37.6 ರಷ್ಟು ರೈತರು ಮಹಾರಾಷ್ಟ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಯ ‘ಭಗವಂತ’ನಿಗೇ ಎಚ್ಚರಿಕೆ ಕೊಟ್ಟರೆ ಭಾಗವತ್?
ಎನ್ಸಿಆರ್ಬಿ ಪ್ರಕಾರ 2022ರಲ್ಲಿ ಕೃಷಿ ವಲಯದಲ್ಲಿ ತೊಡಗಿಸಿಕೊಂಡ 11290 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಲ್ಲಿ 5207 ರೈತರು, 6083 ಕೃಷಿ ಕಾರ್ಮಿಕರು ಪ್ರಾಣ ತ್ಯಜಿಸಿದ್ದಾರೆ.
ದೇಶದ ಒಟ್ಟು 1,70,924 ಆತ್ಮಹತ್ಯೆಗಳನ್ನು ಪರಿಗಣಿಸಿದರೆ ರೈತರ ಸಂಖ್ಯೆ ಶೇ 6.6 ರಷ್ಟಿದೆ.
2021ರಲ್ಲಿ ದೇಶದಲ್ಲಿ 10,881 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, 5318 ರೈತರು ಹಾಗೂ 5563 ಕೃಷಿ ಕಾರ್ಮಿಕರು ಸಾವಿಗೀಡಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಶೇ.37.3 ರಷ್ಟು ದಾಖಲಾಗಿದೆ.
ಎನ್ಸಿಆರ್ಬಿ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಒಟ್ಟು 1,64,033 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಲ್ಲಿ ರೈತರ ಪ್ರಮಾಣ ಶೇ.6.6 ರಷ್ಟಿದೆ.
2020ರಲ್ಲಿ ದೇಶಾದ್ಯಂತ 1.53,052 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ರೈತರ ಪ್ರಮಾಣ ಶೇ.7 ರಷ್ಟಿದೆ. ಈ ಅವಧಿಯಲ್ಲಿ 10677 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಇದರ ಪ್ರಮಾಣ ಶೇ 37.7 ರಷ್ಟಿದೆ.





