ಪೆಟ್ರೋಲ್ ಬಂಕ್ನಲ್ಲಿ ಸಿಗರೇಟ್ ಸೇದಬಾರದು ಎಂದು ಹೇಳಿದ ಕಾರಣಕ್ಕಾಗಿ ಪುಂಡ ಯುವಕಬೊಬ್ಬ ಪೆಟ್ರೋಲ್ಗೆ ಪೈಪ್ಗೆ ಬೆಂಕಿ ಹಚ್ಚಿರುವ ಘಟನೆ ಛತ್ತೀಸ್ಗಢದ ರಾಯ್ಪುರ ನಗರದಲ್ಲಿ ನಡೆದಿದೆ. ಘಟನೆಯಲ್ಲಿ ಬೈಕ್ ಹೊತ್ತಿ ಉರಿದಿದೆ. ಪೆಟ್ರೋಲ್ ಬಂಕ್ಗೆ ನಾನಾ ಭಾಗಗಳಿಗೂ ಹಾನಿಯಾಗಿದೆ.
ಘಟನೆ ಗುರುವಾರ ಸಂಜೆ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸರ ಮಾಹಿತಿ ಪ್ರಕಾರ ಧರ್ಮೇಂದ್ರ ಕ್ಷತ್ರಿ ಮತ್ತು ಇಮ್ರಾನ್ ಎಂಬ ಇಬ್ಬರು ಬೈಕ್ಗೆ ಇಂಧನ ತುಂಬಿಸಿಕೊಳ್ಳಲು ಪೆಟ್ರೋಲ್ ಬಂಕ್ಗೆ ಬಂದಿದ್ದರು. ಈ ವೇಳೆ, ಪೆಟ್ರೋಲ್ ತುಂಬಿಸುವಾಗ ಧರ್ಮೇಂದ್ರ ಎಂಬಾತ ಸಿಗರೇಟ್ ಸೇದಲು ಯತ್ನಿಸಿದ್ದನು ಎಂದು ಹೇಳಲಾಗಿದೆ.
ಧರ್ಮೇಂದ್ರನಿಂದ ಪೆಟ್ರೋಲ್ ಬಂಕ್ನಲ್ಲಿ ಧೂಮಪಾನ ಮಾಡಬಾರದೆಂದು ಅಲ್ಲಿನ ಸಿಬ್ಬಂದಿ ಹೇಳಿದ್ದಾರೆ. ಕುಪಿತಗೊಂಡ ಧರ್ಮೇಂದ್ರ ಇಂಧನ ತುಂಬುತ್ತಿದ್ದ ಪೈಪ್ಗೆ ಬೆಂಕಿ ಹಚ್ಚಿದ್ದಾನೆ. ಪೆಟ್ರೋಲ್ ಪಂಪ್ ಸಿಬ್ಬಂದಿ ತಕ್ಷಣವೇ ಎಚ್ಚೆತ್ತುಕೊಂಡು ಬೆಂಕಿಯನ್ನು ನಂದಿಸಿದ್ದಾರೆ. ಆದಾಗ್ಯೂ, ಬೈಕ್ ಹೊತ್ತಿ ಉರಿದಿದೆ.
छत्तीसगढ़ के रायपुर में पेट्रोल पंप पर सिगरेट पीने से मना करने पर धर्मेंद्र ने लाइटर से पंप के नोजल पाइप में आग लगा दी। pic.twitter.com/zuGvvVgOkF
— गुरु प्रसाद यादव, लखनऊ (@guruprasadyada5) February 20, 2026
ಪೆಟ್ರೋಲ್ ಪಂಪ್ ಮ್ಯಾನೇಜರ್ ನೀಡಿದ ದೂರಿನ ಆಧಾರದ ಮೇಲೆ ಉರ್ಲಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.




