ಬಿಹಾರದ ಪಾಟ್ನಾದಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಕರ ಹುದ್ದೆ ಭರ್ತಿ ಮಾಡುವಂತೆ ಆಗ್ರಹಿಸಿ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದರು.
ಬಿಹಾರ ಲೋಕ ಸೇವಾ ಆಯೋಗ (ಬಿಪಿಎಸ್ಸಿ) ಪರೀಕ್ಷಾ ಪ್ರಕ್ರಿಯೆಯನ್ನು ಕೇಂದ್ರೀಕರಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಸರ್ಕಾರದ ಭ್ರಷ್ಟಾಚಾರ, ವಿಳಂಬಗಳು ಹಾಗೂ ಈಡೇರದ ಭರವಸೆಗಳು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಬಿಹಾರದಲ್ಲಿ ಸುಮಾರು 1.4 ಲಕ್ಷ ಶಿಕ್ಷಕರ ಕೊರತೆ ಇದ್ದರೂ, ಬಿಪಿಎಸ್ಸಿ ಟಿಆರ್ಇ ಕೇವಲ 80 ಸಾವಿರ ಹುದ್ದೆಗಳನ್ನು ಘೋಷಿಸಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಈ ವರ್ಷದ ಜನವರಿಯಲ್ಲೂ ಇದೇ ರೀತಿಯ ಪ್ರತಿಭಟನೆಗಳು ನಡೆದು ಪೊಲೀಸರೊಂದಿಗೆ ಘರ್ಷಣೆಗಳು ನಡೆದಿದ್ದವು. ಪೊಲೀಸರು ವಿದ್ಯಾರ್ಥಿಗಳ ವಿರುದ್ಧ ಲಾಠಿ ಚಾರ್ಜ್ ಮತ್ತು ಜಲ ಫಿರಂಗಿಗಳನ್ನು ಬಳಸಿದ್ದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ರಾಹುಲ್ ಹೇಳಿದ್ದನ್ನೆಲ್ಲ ಮೋದಿ ಮಾಡುತ್ತಿದ್ದಾರಲ್ಲ?
ವಿದ್ಯಾರ್ಥಿಗಳ ಹೋರಾಟದ ಕಿಚ್ಚು 2025 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಉದ್ವಿಗ್ನತೆ ಹೆಚ್ಚಾಗಿದೆ. “ಗೋಧಿ ಮೀಡಿಯಾ” ಎಂದು ಕರೆಯಲ್ಪಡುವ ಮುಖ್ಯವಾಹಿನಿಯ ಮಾಧ್ಯಮಗಳು, ರಾಜಕೀಯ ಪ್ರಾಮುಖ್ಯತೆಯಿಂದಾಗಿ ನೇಪಾಳದ ಇತ್ತೀಚಿನ ಅಶಾಂತಿಯನ್ನು ವಿಶಾಲವಾಗಿ ವರದಿ ಮಾಡಿದಂತೆ, ಈ ಪ್ರತಿಭಟನೆಗಳನ್ನು ಸಮಾನವಾಗಿ ವರದಿಮಾಡುತ್ತವೆಯೇ ಎಂದು ನೂರಾರು ನೆಟ್ಟಿಗರು ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನಿಸಿದ್ದಾರೆ.
ದಿ ಹಿಂದೂ ಮತ್ತು ಫ್ರಂಟ್ಲೈನ್ನಂತಹ ಜಾತ್ಯತೀತ ಧೋರಣೆಯುಳ್ಳ ಮಾಧ್ಯಮಗಳು 2025 ರ ಆರಂಭದಲ್ಲಿ ಬಿಪಿಎಸ್ಸಿ ಪ್ರತಿಭಟನೆಗಳ ಬಗ್ಗೆ ವರದಿ ಮಾಡಿದ್ದವು. ಸಾಮಾಜಿಕ ಮಾಧ್ಯಮಗಳು ಮತ್ತು ಸ್ಥಳೀಯ ಪತ್ರಕರ್ತರು ಈ ಕೊರತೆಯನ್ನು ಹೋಗಲಾಡಿಸುತ್ತಿದ್ದಾರೆ. ಗೋಧಿ ಮಾಧ್ಯಮಗಳು ಸೆಪ್ಟೆಂಬರ್ 4 ರಂದು ಎನ್ಡಿಎ ಆಯೋಜಿಸಿದ್ದ ಬಿಹಾರ ಬಂದ್, ಪಿಎಂ ಮೋದಿಯವರ ವಿರುದ್ಧದ ಟೀಕೆಗಳನ್ನು ಹೆಚ್ಚು ವರದಿ ಮಾಡಿದ್ದವು.
ವಿಪಕ್ಷದ ನಾಯಕರಾದ ಆರ್ಜೆಡಿ’ಯ ತೇಜಸ್ವಿ ಯಾದವ್ ಸರ್ಕಾರದ ನಿಷ್ಕ್ರಿಯತೆಯನ್ನು ಟೀಕಿಸಿದ್ದರೆ, ಪ್ರಶಾಂತ್ ಕಿಶೋರ್ರಂತಹ ನಾಯಕರು ವಿದ್ಯಾರ್ಥಿಗಳ ಜೊತೆಗೂಡಿ ಅವರ ಹೋರಾಟಕ್ಕೆ ಬಲ ತುಂಬಿದ್ದಾರೆ. ಬಿಹಾರದಲ್ಲಿ ಶಿಕ್ಷಣ ವ್ಯವಸ್ಥೆಯು ಎದುರಿಸುತ್ತಿರುವ ಸಮಸ್ಯೆಯ ಜೊತೆ ಹತ್ತಾರು ಸಮಸ್ಯೆಗಳನ್ನು ವಿಪಕ್ಷಗಳು ಎತ್ತಿ ತೋರಿಸಿವೆ.
BREAKING : Massive protest against BJP government in Bihar 🔥
— Amock_ (@Amockx2022) September 9, 2025
Students are hitting streets in Patna regarding the teachers vacancy
Will Godi media channels who covered Nepal protest telecast it? 😂pic.twitter.com/n2EW6mqQsT





