ಮೇ 21ಕ್ಕೆ ‘ವಿಶ್ವ ದಿನದ ಅಂತ್ಯ’ | ಇಲ್ಲಿದೆ ಆಚರಣೆಯ ಹಿಂದಿರುವ ಅಸಲೀ ಕಾರಣ

Date:

  • 2011ರ ಮೇ 21ಕ್ಕೆ ವಿಶ್ವ ದಿನದ ಅಂತ್ಯ ಎಂದು ಬೈಬಲ್‌ನಲ್ಲಿ ಉಲ್ಲೇಖ
  • ಪ್ರಳಯದ ಮಾಹಿತಿ ನೀಡಿದ್ದ ರೇಡಿಯೊ ನಿರೂಪಕ ಹೆರಾಲ್ಡ್ ಕ್ಯಾಂಪಿಂಗ್

‘ವಿಶ್ವ ದಿನದ ಅಂತ್ಯ’ ಎಂದು ಮೇ 21 ಅನ್ನು ಆಚರಿಸಲಾಗುತ್ತದೆ. ಇಡೀ ಜಗತ್ತಿನಲ್ಲಿ ಜನರು ಇದನ್ನು ಸಂಭ್ರಮಿಸುತ್ತಾರೆ.

ಇಂತಹ ವಿಶ್ವದ ದಿನದ ಅಂತ್ಯವನ್ನು ಆಚರಿಸುತ್ತಾರೆಯೇ ಎಂದು ಹಲವರು ಹುಬ್ಬೇರಿಸುತ್ತಾರೆ. ಆದರೆ ವಿಚಿತ್ರವಾದರೂ ಇಂತಹ ಆಚರಣೆ ನಡೆಯುತ್ತದೆ ಎಂಬುದು ವಾಸ್ತವ.

ಈ ದಿನದ ಆಚರಣೆಯ ಹಿಂದೆ ಒಂದು ಕುತೂಹಲಕಾರಿ ಕಥನವಿದೆ. ಇದು ಚಾರಣಿಗರು, ಸಮಾನ ಮನಸ್ಕರ ಚಿತ್ತ ಸೆರೆಹಿಡಿಯುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ದಿನವನ್ನು ಪ್ರಳಯದ ದಿನ ಅಥವಾ ವಿಶ್ವದ ಅಂತ್ಯದ ದಿನ ಎಂದು ಕರೆಯಲಾಗುತ್ತದೆ. 2011ರ ಮೇ 21 ರಂದು ಬಹಳ ನಿರ್ಣಾಯಕ ದಿನ ಎನಿಸಿದ್ದು ಅಂದು ವಿಶ್ವ ದಿನದ ಅಂತ್ಯ ಸೂಚಿಸುತ್ತದೆ ಎಂದು ಅನೇಕ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಇದರಿಂದ ಅನೇಕರು ಭೀತಿಗೊಂಡಿದ್ದ ಘಟನೆಗಳು ವರದಿಯಾದವು. ಅನೇಕರು ಮೇ 21ಕ್ಕೆ ಪ್ರಳಯ ಉಂಟಾಗಿ ತಾವು ಇಹಲೋಕ ತ್ಯಜಿಸುತ್ತೇವೆ ಎಂದು ತರಹೇವಾರಿ ತಯಾರಿ ನಡೆಸಿದ್ದರು.

ವಿಶ್ವದ ದಿನದ ಅಂತ್ಯ ವರದಿಯು ಅಂತಹ ಭ್ರಮಾಲೋಕವನ್ನು ಸೃಷ್ಟಿಸಿತ್ತು.

ಅಮೇರಿಕದ ರೇಡಿಯೊ ನಿರೂಪಕ ಮತ್ತು ನೆಟ್‌ವರ್ಕ್‌ನ ಮಾಜಿ ಅಧ್ಯಕ್ಷ ಹೆರಾಲ್ಡ್ ಕ್ಯಾಂಪಿಂಗ್ ಜಗತ್ತಿಗೆ ಬೈಬಲ್‌ನಲ್ಲಿ ಉಲ್ಲೇಖಿತ ಪ್ರಳಯದ ಎಚ್ಚರಿಕೆ ನೀಡಿದ್ದರು.

2011ರ ಮೇ 21 ರಂದು ಈ ಜಗತ್ತು ಅಂತ್ಯವಾಗಿ ಕ್ರೈಸ್ತರು ಸ್ವರ್ಗವನ್ನು ಪ್ರವೇಶಿಸುತ್ತಾರೆ. ಆ ದಿನವನ್ನು ತೀರ್ಪಿನ ದಿನ ಎಂದು ಗುರುತಿಸಲಾಗುತ್ತದೆ ಎಂದು ಹೆರಾಲ್ಡ್‌ ಹೇಳಿದ್ದರು.

ವಿಶ್ವದ ದಿನದ ಅಂತ್ಯ ಘೋಷಿತ ದಿನಾಂಕದಿಂದ ಐದು ತಿಂಗಳ ನಂತರ ಸಂಭವಿಸಬೇಕಿತ್ತು ಎಂದು ಹೆರಾಲ್ಡ್‌ ಹೇಳಿದ್ದರು.

ಹೆರಾಲ್ಡ್‌ ಕ್ಯಾಂಪಿಂಗ್‌ ತನ್ನ ಪುಸ್ತಕ, ಫ್ಯಾಮಿಲಿ ಸ್ಟೇಷನ್ಸ್‌ ಇಂಕ್‌ ಪ್ರಕಟಿತ ‘ವಿ ಆರ್‌ ಆಲ್‌ಮೋಸ್ಟ್‌ ದೇರ್‌’ ಪುಸ್ತಕದಲ್ಲಿ ಪ್ರಪಂಚದ ಅಂತ್ಯದ ಕುರಿತು ಉಲ್ಲೇಖಿಸಿದ್ದಾನೆ.

ಈ ಸುದ್ದಿ ಓದಿದ್ದೀರಾ? 2 ಸಾವಿರ ನೋಟು ಹಿಂತೆಗೆತ : ಮೋದಿಯ ತುಘಲಕ್ ದರ್ಬಾರ್ ಎಂದ ಜೈರಾಮ್‌ ರಮೇಶ್

“ಯಾವುದೇ ಹಿಂಜರಿಕೆಯಿಲ್ಲದೆ ಜಗತ್ತಿನ ವಿನಾಶದ ಬಗ್ಗೆ ಬೈಬಲ್‌ನಲ್ಲಿ ನೀಡಿರುವ ಪುರಾವೆಗಳ ಬಗ್ಗೆ ಸಾಧ್ಯವಾದಷ್ಟು ಜನರಿಗೆ ತಿಳಿಸುವುದು ಮಾತ್ರ ಈ ಪುಸ್ತಕದ ಉದ್ದೇಶವಾಗಿದೆ. ಆಡಮ್‌ ಮತ್ತು ಈವ್‌ ದೇವರಿಗೆ ಅವಿಧೇಯರಾಗಿ ನಡೆದುಕೊಂಡ ನಂತರ ಮನುಕುಲದ ಸರ್ವೋಚ್ಚ ನಾಯಕ ಏಸುಕ್ರಿಸ್ತನು ಈಡನ್‌ ಉದ್ಯಾನದಲ್ಲಿ ಪ್ರಾರಂಭವಾದ ತೀರ್ಪು ಪ್ರಕ್ರಿಯೆ ಪೂರ್ಣಗೊಂಡಾಗ ಉಂಟಾಗುವ ಪ್ರಪಂಚದ ವಿನಾಶ ಅದ್ಭುತ ಮತ್ತು ಭಯಾನಕ ಕ್ಷಣವಾಗಿರುತ್ತದೆ. ನಾವು ಈಗಾಗಲೇ ಆ ಕ್ಷಣ ತಲುಪಿದ್ದೇವೆ” ಎಂದು ಹೆರಾಲ್ಡ್‌ ಕ್ಯಾಂಪಿಂಗ್‌ ಪುಸ್ತಕದಲ್ಲಿ ಬರೆಯಲಾಗಿದೆ.

ವಿಶ್ವ ದಿನದ ಅಂತ್ಯ ಎಂದು ಮೇ 21 ಅನ್ನು ಆ ದಿನದ ಸ್ಮರಣಾರ್ಥ ಆಚರಿಸಲಾಗುತ್ತದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...