ಪ್ರಧನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 11 ವರ್ಷಗಳ ಆಡಳಿತವನ್ನು ನಟ ಕಿಶೋರ್ ವಿಮರ್ಶಿಸಿದ್ದಾರೆ. ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೋದಿ ಅವರ ಹೆಸರು ಹೇಳದೆ, ಅವರನ್ನು ಟೀಕಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರಯವ ಕಿಶೋರ್, ‘ನಿನಾರಿಗಾದೆಯೋ ಎಲೆ ಮಾನವ’ ಎಂದು ಪ್ರಶ್ನಿಸಿದ್ದಾರೆ.
ಕಿಶೋರ್ ಅವರ ಪೋಸ್ಟ್ ಹೀಗಿದೆ;
ದೆಹಲಿ ಉಸಿರುಗಟ್ಟುತ್ತಿದ್ದರೂ ಲಡಾಖಿನಂತೆ, ಹಿಮಾಚಲದಂತೆ ಅರಾವಳಿಯನ್ನೂ ನಿನ್ನ ಗಣಿಧಣಿಗಳಿಗೆ ಮಾರುವ ದಲ್ಲಾಳಿಯಾದೆ. ಮೌಸಮ್ ಕಾ ಮಜಾ ತಗೋಳಿ ಎಂದೆ.
ನಿರುದ್ಯೋಗಿ ಯುವಕರು ಬೊಬ್ಬೆಯಿಟ್ಟರೂ ಕೇಳದೇ ಅಗ್ನಿವೀರರನ್ನಾಗಿಸಿದೆ
ರೈತರು ಸತ್ತರೂ ಪರವಾಗಿಲ್ಲೆಂದು ಕೃಷಿ ಕಾನೂನು ತಂದೆ
ಹಳ್ಳಿಗಳು ಹಾಳಾದರೆ ನನಗೇನೆಂದು ಗಾಂಧಿ ಹೆಸರ ಕಿತ್ತು ಜೀ ರಾಮ್ ಜೀ ತಂದೆ
ವಿದ್ವಾಂಸರ ವಿಜ್ಞಾನಿಗಳ ಜೈಲಿಗೆ ತಳ್ಳಿ ಬುದ್ಧಿಜೀವಿಗಳೆಂದು ಗೇಲಿ ಮಾಡಿದೆ
ಮಹಿಳೆಯರು ಸತ್ತರೆ ನನಗೇನೆಂದು ಅತ್ಯಚಾರಿಗಳ ಗಲಭೆಕೋರರ ಬೀದಿ ಬೀದಿ ತಿರುಗ, ಬಡವರ ಮೇಲೆ ಬುಲ್ಡೋಜರ್ ಬಿಟ್ಟೆ, ಜನರ ಗೂಢಚಾರಿಕೆ ಮಾಡಲು ಸಂಚಾರ ಭಾರತಿ ತಂದೆ, ಉತ್ತರ ಯಾಕೆ ಕೊಡಬೇಕೆಂದು RTI ಮುಗಿಸಿದೆ.
ಜನ ಕ್ಯೂನಲ್ಲಿ ಸತ್ತರೇನೆಂದು ನಗದು ಅಮಾನ್ಯ ಮಾಡಿ ಜಿಎಸ್ಟಿ ತಂದು ಕೊಳ್ಳೆ ಹೊಡೆದೆ,
ರೂಪಾಯಿ ಬಿದ್ದರೂ ಡೀಸಲ್ ಕದ್ದರೂ ಬ್ರಿಡ್ಜು ಬಿದ್ದರೂ ರೈಲು ಮಗುಚಿದರೂ ವಿಮಾನಗಳುರುಳಿದರೂ ಬಡತನ ಆಗಸಕ್ಕೇರಿದರೂ ಹೊಗಳು ಭಟ್ಟ ಮಾಧ್ಯಮಗಳ ಹೊಗಳಲು ಛೂ ಬಿಟ್ಟೆ,
ದೇಶದ ಸಂಪತ್ತನ್ನೆಲ್ಲ ನಿನ್ನ ಧಣಿಗಳಿಗೆ ಮಾರಿ ಬಂದ ಕಾಸಲ್ಲಿ ವಾರ್ ರುಕ್ವಾದೀ ಪಾಪಾ ಎಂದೆ,
ಜನ ಕೊರೋನಾದಿಂದ ಸಾಯುತ್ತಿದ್ದಾಗ ಜನರ ದುಡ್ಡಲ್ಲಿ ನಿನಗೆ ನೀನೇ ಥ್ಯಾಂಕ್ಸ್ ಹೇಳಿ ನೀನೇ ಪೋಸ್ಟರ್ ಹಾಕಿಕೊಂಡೆ,
ಬಾಂಗ್ಲಾದೇಶದಲ್ಲಿ (ಹಿಂದೂ) ಅಲ್ಪಸಂಖ್ಯಾತರನ್ನು ಕೊಲ್ಲುತಿದ್ದಾಗ ಹಸೀನಾಳನ್ನು ತಂದು ಬಾಯಿಮುಚ್ಚಿ ಕೂತೆ,
ನಿನ್ನ ಕರ್ಮ ಕಾಂಡ ಮುಚ್ಚಲು ನೆಹರೂ ಅಂದೆ, ರಾಮ ಮಂದಿರ ಎಂದೆ, ಹಿಂದೂ ಮುಸ್ಲಿಂ ಎಂದೆ, 370 ಎಂದೆ, ದುನಿಯ ಮೆ ಡಂಕಾ ಅಂತ ತಟ್ಟೆ ಬಡಿದು ಕುಣಿದೆ… ಮಹಾಮಾನವನೆಂದೆ..
ಕೊನೆಗೆ ನೀನಾರಿಗಾದೆಯೋ ಎಲೆ ಮಹಾಮಾನವ??




