ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಗುರುವಾರ ತನ್ನ ಮೊದಲ ಬಂಧನವನ್ನು ಮಾಡಿದೆ. ಪಾಟ್ನಾದಲ್ಲಿ ವಿಚಾರಣೆಗೆ ಕರೆದ ಬಳಿಕ ಆರೋಪಿಗಳಾದ ಮನೀಶ್ ಪ್ರಕಾಶ್ ಮತ್ತು ಅಶುತೋಷ್ ಕುಮಾರ್ ಅವರನ್ನು ಬಂಧಿಸಿದೆ.
ನೀಟ್ ಪ್ರಶ್ನಾ ಪತ್ರಿಕೆ ಸೋರಿಕೆ ಪ್ರಕರಣವು ರಾಷ್ಟ್ರವ್ಯಾಪಿ ಕೋಲಾಹಲ ಸೃಷ್ಟಿಸಿದ್ದು, ಪ್ರತಿಪಕ್ಷಗಳು ಸಂಸತ್ತಿನ ಹೊರಗೆ ಈ ವಿಷಯವನ್ನು ಪ್ರಸ್ತಾಪಿಸಿವೆ. ಈ ನಡುವೆ ಇಬ್ಬರನ್ನು ಬಂಧಿಸಲಾಗಿದೆ.
ನೀಟ್ ಪೇಪರ್ ಸೋರಿಕೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಮನೀಶ್ ಪ್ರಕಾಶ್ ಒಬ್ಬನಾಗಿದ್ದಾನೆ. ಮನೀಶ್ ಪ್ರಕಾಶ್ ನೀಟ್ ಪರೀಕ್ಷೆಗೆ ಒಂದು ದಿನಕ್ಕೂ ಮುಂಚೆ ಪರೀಕ್ಷೆಯ ಅಭ್ಯರ್ಥಿಗಳಿಗೆ ತನ್ನ ಸ್ನೇಹಿತ ಅಶುತೋಷ್ ಮೂಲಕ ಶಾಲೆಯೊಂದನ್ನು (Learn and Play School) ಬುಕ್ಕಿಂಗ್ ಮಾಡಿದ್ದರು ಎಂಬ ಆರೋಪವಿದೆ.
ಇದನ್ನು ಓದಿದ್ದೀರಾ? ಗದಗ | ನೀಟ್-ಯುಜಿಸಿ ಪರೀಕ್ಷೆ ಭ್ರಷ್ಟಾಚಾರ ಹಗರಣ; ನ್ಯಾಯಕ್ಕಾಗಿ ಎಸ್ಎಫ್ಐ ಆಗ್ರಹ
ಪಾಟ್ನಾದ ಖೇಮ್ನಿ ಚಾಕ್ನಲ್ಲಿರುವ ಲರ್ನ್ ಅಂಡ್ ಪ್ಲೇ ಸ್ಕೂಲ್ನಲ್ಲಿ ಅರ್ಧ ಸುಟ್ಟ ನೀಟ್ ಪ್ರಶ್ನೆಪತ್ರಿಕೆ ಪತ್ತೆಯಾಗಿದ್ದು, ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಸಾಕ್ಷ್ಯಗಳಲ್ಲಿ ಇದು ಒಂದಾಗಿದೆ. ಮನೀಶ್ ಪ್ರಕಾಶ್ ಈ ಶಾಲೆಯನ್ನು ಒಂದು ರಾತ್ರಿಗೆ ಬುಕ್ಕಿಂಗ್ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಇನ್ನು ಸಿಬಿಐ ಇಬ್ಬರು ಶಂಕಿತ ಆರೋಪಿಗಳಾದ ಚಿಂಟು ಮತ್ತು ಮುಖೇಶ್ ಅವರನ್ನು ವಶಕ್ಕೆ ಪಡೆದುಕೊಂಡಿದೆ. ಅವರನ್ನು ಬ್ಯೂರ್ ಜೈಲಿನಿಂದ ಸ್ಥಳಾಂತರಿಸಲಾಗಿದ್ದು, ಸಿಬಿಐ ಕಚೇರಿಗೆ ಕರೆದೊಯ್ಯುವ ಮೊದಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
ಈ ವಾರದ ಆರಂಭದಲ್ಲಿ ಸಿಬಿಐ ಆರೋಪಿಗಳಾದ ಚಿಂಟು ಮತ್ತು ಮುಖೇಶ್ ಅವರನ್ನು ಏಳು ದಿನಗಳ ವಶಕ್ಕೆ ಪಡೆದುಕೊಂಡಿದೆ. ಎರಡು ಸಿಬಿಐ ತಂಡಗಳನ್ನು ನಳಂದಾ ಮತ್ತು ಸಮಸ್ತಿಪುರದಲ್ಲಿ, ಇನ್ನೊಂದು ತಂಡವನ್ನು ಹಜಾರಿಬಾಗ್ನಲ್ಲಿ ನಿಯೋಜಿಸಲಾಗಿದೆ. ಓಯಸಿಸ್ ಶಾಲೆಯ ಪ್ರಾಂಶುಪಾಲರು ಸೇರಿದಂತೆ ಎಂಟು ಮಂದಿಯನ್ನು ಪ್ರಸ್ತುತ ವಿಚಾರಣೆ ನಡೆಸಲಾಗುತ್ತಿದೆ.
CBI arrests Manish Prakash and Ashutosh from Patna in NEET-UG exam paper leak case: Officials pic.twitter.com/lNY4wYU7Ib
— ANI (@ANI) June 27, 2024





