10ನೇ ಬಾರಿಗೆ ಬಿಹಾರ ಸಿಎಂ ಆದ ನಿತೀಶ್‌ ಕುಮಾರ್‌; ಸಂಪುಟದಲ್ಲಿ 26 ಮಂದಿ ಸಚಿವರು

Date:

ಹತ್ತನೆಯ ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್ ಅವರ ನೂತನ ಸಂಪುಟದಲ್ಲಿ ಜಾತಿವಾರು ಪ್ರಾತಿನಿಧ್ಯ ನೀಡಲಾಗಿದೆ.ಹಿಂದಿನ ಸಂಪುಟದಲ್ಲಿದ್ದ ಏಕೈಕ ಮುಸ್ಲಿಂ ಸಚಿವರನ್ನು ಮತ್ತೆ ಪರಿಗಣಿಸಲಾಗಿದೆ.

ಸಂಪುಟದಲ್ಲಿ ಮೇಲ್ವರ್ಗದ 8 ಮಂದಿಗೆ ಅವಕಾಶ ನೀಡಲಾಗಿದೆ ಭೂಮಿಹಾರ್‌ ಸಮುದಾಯದ ಇಬ್ಬರಿಗೆ ಅವಕಾಶ ನೀಡಲಾಗಿದ್ದು, ವಿಜಯ್ ಕುಮಾರ್ ಸಿನ್ಹಾ, ವಿಜಯ್ ಕುಮಾರ್ ಚೌಧರಿ ಸಂಪುಟ ಸೇರಿದ್ದಾರೆ.

ರಜಪೂತ ಸಮುದಾಯದ 4 ಮಂದಿ ಸಂಜಯ್ ಸಿಂಗ್ ಟೈಗರ್, ಶ್ರೇಯಸಿ ಸಿಂಗ್, ಸಂಜಯ್ ಕುಮಾರ್ ಸಿಂಗ್ ಸಚಿವರಾಗಿದ್ದಾರೆ. ಬ್ರಾಹ್ಮಣ ಸಮುದಾಯದ ಮಂಗಲ್ ಪಾಂಡೆ ಮತ್ತು ಕಾಯಸ್ಥ ಸಮುದಾಯದ ನಿತಿನ್ ನವೀನ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ದಲಿತ ಸಮುದಾಯದ 5 ಮಂದಿ ಸಚಿವರಾಗಿದ್ದು ಅಶೋಕ್ ಚೌಧರಿ (ಪಾಸಿ), ಸಂತೋಷ್ ಕುಮಾರ್ ಸುಮನ್ (ಮುಷಾರ್), ಸುನಿಲ್ ಕುಮಾರ್, ಸಂಜಯ್ ಕುಮಾರ್ (ಪಾಸ್ವಾನ್), ಮತ್ತು ಲಖೇಂದ್ರ ಕುಮಾರ್ ರೋಷನ್ (ಪಾಸ್ವಾನ್) ಅವರನ್ನು ಪರಿಗಣಿಸಲಾಗಿದೆ.

ಹಿಂದುಳಿದ ವರ್ಗಕ್ಕೂ ಸಹ 8 ಸ್ಥಾನ ನೀಡಲಾಗಿದ್ದು ಇದರಲ್ಲಿ 2 ಕುಶ್ವಾಹರು ಸಾಮ್ರಾಟ್ ಚೌಧರಿ, ದೀಪಕ್ ಪ್ರಕಾಶ್ ಸಚಿವರಾಗಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕೃಷಿಕ ಕುರ್ಮಿ ಸಮುದಾಯದ ಶ್ರವಣ್ ಕುಮಾರ್ ಸಚಿವರಾಗಿದ್ದಾರೆ. ಯಾದವ ಸಮುದಾಯದ ಇಬ್ಬರನ್ನು ಪರಿಗಣಿಸಲಾಗಿದ್ದು ವಿಜೇಂದ್ರ ಪ್ರಸಾದ್ ಯಾದವ್, ರಾಮಕೃಪಾಲ್ ಯಾದವ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ವೈಶ್ಯ ಸಮುದಾಯದ ದಿಲೀಪ್ ಜೈಸ್ವಾಲ್, ಅರುಣ್ ಶಂಕರ್ ಪ್ರಸಾದ್, ನಾರಾಯಣ ಪ್ರಸಾದ್ ಸಚಿವರಾಗಿದ್ದು ಮೂವರಿಗೆ ಪ್ರಾತಿನಿಧ್ಯ ನೀಡಿದಂತಾಗಿದೆ.

ಏಕೈಕ ಮುಸ್ಲಿಂ ಪ್ರತಿನಿಧಿ ಮೊಹಮ್ಮದ್ ಜಾಮಾ ಖಾನ್ ಸಂಪುಟ ಸೇರಿದ್ದು ಈ ಹಿಂದೆಯೂ ಸಚಿವರಾಗಿದ್ದು ಅವರನ್ನು ಮತ್ತೆ ಪರಿಗಣಿಸಲಾಗಿದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕಬ್ಬಿನ ನಂತರ ಮೆಕ್ಕೆಜೋಳ, ಬೀದಿಗೆ ಬಂದ ರೈತರ ಬದುಕು

ಅತ್ಯಂತ ಹಿಂದುಳಿದ ಜಾತಿಗಳ ಪ್ರತಿನಿಧಿಗಳಾಗಿ ನಾಲ್ವರು ಸಚಿವರಾಗಿದ್ದಾರೆ. ಸಹಾನಿ/ನಿಶಾದ್ ನಾಯಕರಾದ ಮದನ್ ಸಾಹ್ನಿ ಮತ್ತು ರಾಮ ನಿಶಾದ್, ಚಂದ್ರವಂಶಿ ಪ್ರತಿನಿಧಿ ಡಾ.ಪ್ರಮೋದ್ ಕುಮಾರ್ ಮತ್ತು ಧನುಕ್ ನಾಯಕ ಸುರೇಂದ್ರ ಮೆಹ್ತಾ ಸಚಿವರಾಗಿದ್ದಾರೆ.

26 ಮಂದಿ ಸಚಿವರ ಪಟ್ಟಿ ಇಂತಿದೆ

ಡಿಸಿಎಂ ಸಾಮ್ರಾಟ್ ಚೌಧರಿ (ಬಿಜೆಪಿ)

ಡಿಸಿಎಂ ವಿಜಯ್ ಕುಮಾರ್ ಸಿನ್ಹಾ (ಬಿಜೆಪಿ)

ದಿಲೀಪ್ ಜೈಸ್ವಾಲ್ (ಬಿಜೆಪಿ)

ಮಂಗಲ್ ಪಾಂಡೆ (ಬಿಜೆಪಿ)

ವಿಜಯ್ ಕುಮಾರ್ ಚೌಧರಿ (ಜೆಡಿಯು)

ಬಿಜೇಂದ್ರ ಪ್ರಸಾದ್ ಯಾದವ್ (ಜೆಡಿಯು)

ಶ್ರವಣ್ ಕುಮಾರ್ (ಜೆಡಿಯು)

ಅಶೋಕ್ ಚೌಧರಿ (ಜೆಡಿಯು)

ಲೇಶಿ ಸಿಂಗ್ (ಜೆಡಿಯು)

ಮದನ್ ಸಾಹ್ನಿ (ಜೆಡಿಯು)

ಸುನೀಲ್ ಕುಮಾರ್ (ಜೆಡಿಯು)

ರಾಮ್ ಕೃಪಾಲ್ ಯಾದವ್ (ಬಿಜೆಪಿ)

ಸಂತೋಷ್ ಸುಮನ್ (ಬಿಜೆಪಿ)

ನಿತಿನ್ ನಬಿನ್ (ಬಿಜೆಪಿ)

ಮೊಹಮ್ಮದ್ ಜಮಾ ಖಾನ್ (ಜೆಡಿಯು)

ಸಂಜಯ್ ಸಿಂಗ್ ಟೈಗರ್ (ಬಿಜೆಪಿ)

ಅರುಣ್ ಶಂಕರ್ ಪ್ರಸಾದ್ (ಬಿಜೆಪಿ)

ಸುರೇಂದ್ರ ಮೆಹ್ತಾ (ಬಿಜೆಪಿ)

ನಾರಾಯಣ ಪ್ರಸಾದ್ (ಬಿಜೆಪಿ)

ರಾಮ ನಿಶಾದ್ (ಬಿಜೆಪಿ)

ಲಖೇಂದ್ರ ಕುಮಾರ್ ರೋಷನ್ (ಬಿಜೆಪಿ)

ಪ್ರಮೋದ್ ಕುಮಾರ್ (ಬಿಜೆಪಿ)

ಸಂಜಯ್ ಕುಮಾರ್ ಸಿಂಗ್ (ಬಿಜೆಪಿ)

ದೀಪಕ್ ಪ್ರಕಾಶ್ (ಬಿಜೆಪಿ)

ಸಂಜಯ್ ಕುಮಾರ್ (ಬಿಜೆಪಿ)

ಶ್ರೇಯಸಿ ಸಿಂಗ್ (ಬಿಜೆಪಿ)

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...