ಹತ್ತನೆಯ ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್ ಅವರ ನೂತನ ಸಂಪುಟದಲ್ಲಿ ಜಾತಿವಾರು ಪ್ರಾತಿನಿಧ್ಯ ನೀಡಲಾಗಿದೆ.ಹಿಂದಿನ ಸಂಪುಟದಲ್ಲಿದ್ದ ಏಕೈಕ ಮುಸ್ಲಿಂ ಸಚಿವರನ್ನು ಮತ್ತೆ ಪರಿಗಣಿಸಲಾಗಿದೆ.
ಸಂಪುಟದಲ್ಲಿ ಮೇಲ್ವರ್ಗದ 8 ಮಂದಿಗೆ ಅವಕಾಶ ನೀಡಲಾಗಿದೆ ಭೂಮಿಹಾರ್ ಸಮುದಾಯದ ಇಬ್ಬರಿಗೆ ಅವಕಾಶ ನೀಡಲಾಗಿದ್ದು, ವಿಜಯ್ ಕುಮಾರ್ ಸಿನ್ಹಾ, ವಿಜಯ್ ಕುಮಾರ್ ಚೌಧರಿ ಸಂಪುಟ ಸೇರಿದ್ದಾರೆ.
ರಜಪೂತ ಸಮುದಾಯದ 4 ಮಂದಿ ಸಂಜಯ್ ಸಿಂಗ್ ಟೈಗರ್, ಶ್ರೇಯಸಿ ಸಿಂಗ್, ಸಂಜಯ್ ಕುಮಾರ್ ಸಿಂಗ್ ಸಚಿವರಾಗಿದ್ದಾರೆ. ಬ್ರಾಹ್ಮಣ ಸಮುದಾಯದ ಮಂಗಲ್ ಪಾಂಡೆ ಮತ್ತು ಕಾಯಸ್ಥ ಸಮುದಾಯದ ನಿತಿನ್ ನವೀನ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ದಲಿತ ಸಮುದಾಯದ 5 ಮಂದಿ ಸಚಿವರಾಗಿದ್ದು ಅಶೋಕ್ ಚೌಧರಿ (ಪಾಸಿ), ಸಂತೋಷ್ ಕುಮಾರ್ ಸುಮನ್ (ಮುಷಾರ್), ಸುನಿಲ್ ಕುಮಾರ್, ಸಂಜಯ್ ಕುಮಾರ್ (ಪಾಸ್ವಾನ್), ಮತ್ತು ಲಖೇಂದ್ರ ಕುಮಾರ್ ರೋಷನ್ (ಪಾಸ್ವಾನ್) ಅವರನ್ನು ಪರಿಗಣಿಸಲಾಗಿದೆ.
ಹಿಂದುಳಿದ ವರ್ಗಕ್ಕೂ ಸಹ 8 ಸ್ಥಾನ ನೀಡಲಾಗಿದ್ದು ಇದರಲ್ಲಿ 2 ಕುಶ್ವಾಹರು ಸಾಮ್ರಾಟ್ ಚೌಧರಿ, ದೀಪಕ್ ಪ್ರಕಾಶ್ ಸಚಿವರಾಗಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕೃಷಿಕ ಕುರ್ಮಿ ಸಮುದಾಯದ ಶ್ರವಣ್ ಕುಮಾರ್ ಸಚಿವರಾಗಿದ್ದಾರೆ. ಯಾದವ ಸಮುದಾಯದ ಇಬ್ಬರನ್ನು ಪರಿಗಣಿಸಲಾಗಿದ್ದು ವಿಜೇಂದ್ರ ಪ್ರಸಾದ್ ಯಾದವ್, ರಾಮಕೃಪಾಲ್ ಯಾದವ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ವೈಶ್ಯ ಸಮುದಾಯದ ದಿಲೀಪ್ ಜೈಸ್ವಾಲ್, ಅರುಣ್ ಶಂಕರ್ ಪ್ರಸಾದ್, ನಾರಾಯಣ ಪ್ರಸಾದ್ ಸಚಿವರಾಗಿದ್ದು ಮೂವರಿಗೆ ಪ್ರಾತಿನಿಧ್ಯ ನೀಡಿದಂತಾಗಿದೆ.
ಏಕೈಕ ಮುಸ್ಲಿಂ ಪ್ರತಿನಿಧಿ ಮೊಹಮ್ಮದ್ ಜಾಮಾ ಖಾನ್ ಸಂಪುಟ ಸೇರಿದ್ದು ಈ ಹಿಂದೆಯೂ ಸಚಿವರಾಗಿದ್ದು ಅವರನ್ನು ಮತ್ತೆ ಪರಿಗಣಿಸಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕಬ್ಬಿನ ನಂತರ ಮೆಕ್ಕೆಜೋಳ, ಬೀದಿಗೆ ಬಂದ ರೈತರ ಬದುಕು
ಅತ್ಯಂತ ಹಿಂದುಳಿದ ಜಾತಿಗಳ ಪ್ರತಿನಿಧಿಗಳಾಗಿ ನಾಲ್ವರು ಸಚಿವರಾಗಿದ್ದಾರೆ. ಸಹಾನಿ/ನಿಶಾದ್ ನಾಯಕರಾದ ಮದನ್ ಸಾಹ್ನಿ ಮತ್ತು ರಾಮ ನಿಶಾದ್, ಚಂದ್ರವಂಶಿ ಪ್ರತಿನಿಧಿ ಡಾ.ಪ್ರಮೋದ್ ಕುಮಾರ್ ಮತ್ತು ಧನುಕ್ ನಾಯಕ ಸುರೇಂದ್ರ ಮೆಹ್ತಾ ಸಚಿವರಾಗಿದ್ದಾರೆ.
26 ಮಂದಿ ಸಚಿವರ ಪಟ್ಟಿ ಇಂತಿದೆ
ಡಿಸಿಎಂ ಸಾಮ್ರಾಟ್ ಚೌಧರಿ (ಬಿಜೆಪಿ)
ಡಿಸಿಎಂ ವಿಜಯ್ ಕುಮಾರ್ ಸಿನ್ಹಾ (ಬಿಜೆಪಿ)
ದಿಲೀಪ್ ಜೈಸ್ವಾಲ್ (ಬಿಜೆಪಿ)
ಮಂಗಲ್ ಪಾಂಡೆ (ಬಿಜೆಪಿ)
ವಿಜಯ್ ಕುಮಾರ್ ಚೌಧರಿ (ಜೆಡಿಯು)
ಬಿಜೇಂದ್ರ ಪ್ರಸಾದ್ ಯಾದವ್ (ಜೆಡಿಯು)
ಶ್ರವಣ್ ಕುಮಾರ್ (ಜೆಡಿಯು)
ಅಶೋಕ್ ಚೌಧರಿ (ಜೆಡಿಯು)
ಲೇಶಿ ಸಿಂಗ್ (ಜೆಡಿಯು)
ಮದನ್ ಸಾಹ್ನಿ (ಜೆಡಿಯು)
ಸುನೀಲ್ ಕುಮಾರ್ (ಜೆಡಿಯು)
ರಾಮ್ ಕೃಪಾಲ್ ಯಾದವ್ (ಬಿಜೆಪಿ)
ಸಂತೋಷ್ ಸುಮನ್ (ಬಿಜೆಪಿ)
ನಿತಿನ್ ನಬಿನ್ (ಬಿಜೆಪಿ)
ಮೊಹಮ್ಮದ್ ಜಮಾ ಖಾನ್ (ಜೆಡಿಯು)
ಸಂಜಯ್ ಸಿಂಗ್ ಟೈಗರ್ (ಬಿಜೆಪಿ)
ಅರುಣ್ ಶಂಕರ್ ಪ್ರಸಾದ್ (ಬಿಜೆಪಿ)
ಸುರೇಂದ್ರ ಮೆಹ್ತಾ (ಬಿಜೆಪಿ)
ನಾರಾಯಣ ಪ್ರಸಾದ್ (ಬಿಜೆಪಿ)
ರಾಮ ನಿಶಾದ್ (ಬಿಜೆಪಿ)
ಲಖೇಂದ್ರ ಕುಮಾರ್ ರೋಷನ್ (ಬಿಜೆಪಿ)
ಪ್ರಮೋದ್ ಕುಮಾರ್ (ಬಿಜೆಪಿ)
ಸಂಜಯ್ ಕುಮಾರ್ ಸಿಂಗ್ (ಬಿಜೆಪಿ)
ದೀಪಕ್ ಪ್ರಕಾಶ್ (ಬಿಜೆಪಿ)
ಸಂಜಯ್ ಕುಮಾರ್ (ಬಿಜೆಪಿ)
ಶ್ರೇಯಸಿ ಸಿಂಗ್ (ಬಿಜೆಪಿ)





