ಬಿಜೆಪಿ ಭದ್ರಕೋಟೆ ಗುಜರಾತ್‌ನಲ್ಲಿ ಬರೋಬ್ಬರಿ 4 ಲಕ್ಷಕ್ಕೂ ಅಧಿಕ ನೋಟಾ ಮತ!

Date:

ಗುಜರಾತ್ ಲೋಕಸಭಾ ಕ್ಷೇತ್ರಗಳಲ್ಲಿ ನೋಟಾ (ನನ್ ಆಫ್ ದಿ ಎಬೋವ್) ಎಂಬುವುದು ಓರ್ವ ಅಭ್ಯರ್ಥಿಯಾಗಿದ್ದರೆ ಖಂಡಿತವಾಗಿಯೂ ಚುನಾವಣೆಯಲ್ಲಿ ಉತ್ತಮ ಮತಗಳನ್ನು ಪಡೆಯುವುದು ಖಂಡಿತ. ಯಾಕೆಂದರೆ ಬಿಜೆಪಿಯ ಭದ್ರಕೋಟೆ ಗುಜರಾತ್‌ನಲ್ಲೇ ಬರೋಬ್ಬರಿ 4.60 ಲಕ್ಷ ನೋಟಾ ಮತಗಳನ್ನು ಹಾಕಲಾಗಿದೆ.

ಗುಜರಾತ್‌ನಲ್ಲಿ ಬಿಜೆಪಿ 2019ರಲ್ಲಿ ಎಲ್ಲಾ ಲೋಕಸಭೆ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಈ ಬಾರಿ ಬನಸ್ಕಾಂತ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆನಿಬೆನ್ ಠಾಕೂರ್ ಅವರು ಬಿಜೆಪಿಯ ರೇಖಾಬೆನ್ ಚೌಧರಿ ಅವರನ್ನು 30,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಉಳಿದೆಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದರೂ ಕೂಡಾ ನೋಟಾ ಮತಗಳ ಪ್ರಮಾಣ ಪ್ರಸ್ತುತ ಆಡಳಿತ ಪಕ್ಷದ ವಿರುದ್ಧ ಹೆಚ್ಚುತ್ತಿರುವ ಭಿನ್ನಮತದ ಅಲೆಯನ್ನು ಪ್ರತಿಬಿಂಬಿಸುತ್ತದೆ.

ಇದನ್ನು ಓದಿದ್ದೀರಾ?  ಕಣದಿಂದ ಹಿಂದೆ ಸರಿದ ಇಂದೋರ್‌ ಕಾಂಗ್ರೆಸ್ ಅಭ್ಯರ್ಥಿ; ನೋಟಾದತ್ತ ಜನರ ಚಿತ್ತ!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನೋಟಾ

ಗುಜರಾತ್‌ನ ಇಬ್ಬರು ಪ್ರಮುಖ ಬಿಜೆಪಿ ಅಭ್ಯರ್ಥಿಗಳಾದ ರಾಜ್ಯಾಧ್ಯಕ್ಷ ಸಿಆರ್ ಪಾಟೀಲ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅತೀ ಅಧಿಕ ಮತಗಳ ಅಂತರದಲ್ಲಿ ಗೆಲುವ ಪಡೆದುಕೊಂಡಿದ್ದಾರೆ. ಅದೇನೇ ಇದ್ದರೂ, ಅವರ ಕ್ಷೇತ್ರಗಳಲ್ಲಿ ಗಣನೀಯ ಪ್ರಮಾಣದಲ್ಲಿ ನೋಟಾ ಮತಗಳನ್ನು ಜನರು ಹಾಕಿದ್ದಾರೆ.

ಗುಜರಾತ್‌ನಲ್ಲಿ ನೋಟಾಗೆ ಒಟ್ಟು 4,60,341 ಮತಗಳು ಚಲಾವಣೆಯಾಗಿದ್ದು, ಒಟ್ಟು ಮತಗಳ ಶೇಕಡ 1.60 ರಷ್ಟಿದ್ದರೆ, ಸ್ವತಂತ್ರರು ಶೇಕಡ 1.89 ಪಡೆದಿದ್ದಾರೆ. ಅಮಿತ್ ಶಾ ಕ್ಷೇತ್ರವಾದ ಗಾಂಧಿನಗರದಲ್ಲಿ ಸುಮಾರು 22,005 ನೋಟಾ ಮತ ಚಲಾವಣೆಯಾಗಿದೆ. ಸಿ.ಆರ್.ಪಾಟೀಲ ಕ್ಷೇತ್ರವಾದ ನವಸಾರಿಯಲ್ಲಿ 20,462 ನೋಟಾ ಮತಗಳು ದಾಖಲಾಗಿವೆ.

ಅಂಕಿಅಂಶಗಳ ಪ್ರಕಾರ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಒಟ್ಟು 10,10,972 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಸೋನಾಲ್ ಪಟೇಲ್ 2,66,256 ಮತಗಳನ್ನು ಗಳಿಸಿದ್ದಾರೆ. ಅಮಿತ್ ಶಾ ಅವರು ಪಟೇಲ್ ಅವರನ್ನು 7,44,716 ಮತಗಳ ಅಂತರದಿಂದ ಸೋಲಿಸಿದ್ದಾರೆ. ಗುಜರಾತ್‌ನ ನವಸಾರಿಯಲ್ಲಿ ಬಿಜೆಪಿಯ ಸಿಆರ್ ಪಾಟೀಲ್ 7.73 ಲಕ್ಷ ಮತಗಳ ಅಂತರವನ್ನು ಸಾಧಿಸಿದ್ದಾರೆ.

ಇದನ್ನು ಓದಿದ್ದೀರಾ?  Viral video: ಅಮಿತ್ ಶಾ ವಿರುದ್ಧ ಸಿಡಿಮಿಡಿಗೊಂಡ ಯುಪಿ ಬಿಜೆಪಿ ಕಾರ್ಯಕರ್ತ: ವಿಡಿಯೋ ವೈರಲ್!

ದಾಹೋದ್ ಕ್ಷೇತ್ರದಲ್ಲಿ ಅತಿ ಹೆಚ್ಚು ನೋಟಾ ಮತಗಳು (34,938) ದಾಖಲಾಗಿದ್ದರೆ, ಅಹಮದಾಬಾದ್ ಪೂರ್ವದಲ್ಲಿ ಕಡಿಮೆ ನೋಟಾ ಮತಗಳು (10,503) ಹಾಕಲಾಗಿದೆ. ಅಹಮದಾಬಾದ್ ಪಶ್ಚಿಮದಲ್ಲಿ 14,007 ನೋಟಾ ಮತಗಳು, ರಾಜ್‌ಕೋಟ್‌ನಲ್ಲಿ 15,922 ಮತ್ತು ವಡೋದರಾದಲ್ಲಿ 18,388 ನೋಟಾ ಮತ ಚಲಾವಣೆ ಮಾಡಲಾಗಿದೆ.

ಛೋಟಾ ಉದೇಪುರ್ 29655, ಬಾರ್ಡೋಲಿ 25542, ಭರೂಚ್ 23283, ಬನಸ್ಕಾಂತ 22167 ಮತ್ತು ಸಬರ್ಕಾಂತ 21076, ಪಂಚಮಹಲ್ ಕ್ಷೇತ್ರದಲ್ಲಿ 20103, ಭಾವನಗರದಲ್ಲಿ 18765, ಕಛ್‌ನಲ್ಲಿ 18742, ಖೇಡಾದಲ್ಲಿ 18824, ವಲ್ಸಾದ್‌ನಲ್ಲಿ 18373, ಪಟಾನ್‌ನಲ್ಲಿ 16722, ಆನಂದ್‌ನಲ್ಲಿ 15930, ಜುನಾಗಢದಲ್ಲಿ 14013, ಪೋರಬಂದರ್‌ನಲ್ಲಿ 13563, ಸುರೇಂದ್ರನಗರದಲ್ಲಿ 13299, ಮೆಹ್ಸಾನಾದಲ್ಲಿ 11626, ಅಮ್ರೇಲಿಯಲ್ಲಿ 11349 ಮತ್ತು ಜಾಮ್‌ನಗರದಲ್ಲಿ 11084 ಮತಗಳ ಚಲಾವಣೆಯಾಗಿದೆ.

ಅಂಚೆ ಮತಪತ್ರದಲ್ಲಿಯೂ ನೋಟಾ

ಮುಖ್ಯವಾಗಿ, ಅಂಚೆ ಮತಪತ್ರದ ಮತದಾನದಲ್ಲಿಯೂ ನೋಟಾ ಮತಗಳು ಚಲಾವಣೆಯಾಗಿದ್ದು, 11,089 ಚುನಾವಣಾ ಕಾರ್ಯಕರ್ತರು ನೋಟಾ ಆಯ್ಕೆಯನ್ನು ಆರಿಸಿಕೊಂಡಿದ್ದಾರೆ. ಭಾವನಗರ ಕ್ಷೇತ್ರದಲ್ಲಿ ಅಂಚೆ ಮತಪತ್ರಗಳಲ್ಲಿ ಅತಿ ಹೆಚ್ಚು ನೋಟಾ ಮತಗಳು ದಾಖಲಾಗಿದ್ದು, 1,048 ಮಂದಿ ನೋಟಾಗೆ ಮತ ಹಾಕಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...