IIT ಮುಖ್ಯಸ್ಥ ಕಾಮಕೋಟಿಗೆ ಪದ್ಮಶ್ರೀ ಪ್ರಶಸ್ತಿ; ‘ಗೋಮೂತ್ರ ಸಂಶೋಧನೆ’ಗಾಗಿ ಕಾಂಗ್ರೆಸ್‌ – ಜೊಹೊ ಸಂಸ್ಥಾಪಕರ ‘ಟ್ವೀಟ್‌ ವಾರ್’

Date:

ಐಐಟಿ ಮದ್ರಾಸ್ ನಿರ್ದೇಶಕ ವಿ ಕಾಮಕೋಟಿ ಅವರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದ್ದನ್ನು ಕಾಂಗ್ರೆಸ್‌ ಟೀಕಿಸಿದ್ದು, ಕೇರಳ ಕಾಂಗ್ರೆಸ್‌ ಘಟಕ ಮತ್ತು ಜೊಹೊ ಸಂಸ್ಥಾಪಕ ಶ್ರೀಧರ್ ವೆಂಬು ನಡುವೆ ‘ಟ್ವೀಟ್‌ ವಾರ್’ ಆರಂಭವಾಗಿದೆ. ಗೋಮೂತ್ರ ಸಂಶೋಧನೆ ಕುರಿತು ವೆಂಬು ಅವರಿಗೆ ಕಾಂಗ್ರೆಸ್‌ ಸವಾಲು ಹಾಕಿದೆ.

2022ರಿಂದ ಐಐಟಿ ಮದ್ರಾಸ್‌ನ ನಿರ್ದೇಶಕರಾಗಿರುವ ವಿ ಕಾಮಕೋಟಿ ಅವರನ್ನು ಶಿಕ್ಷಣ ಮತ್ತು ಸಂಶೋಧನೆಗೆ ನೀಡಿದ ಕೊಡುಗೆಗಾಗಿ ಪದ್ಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ತಮ್ಮ ಆಯ್ಕೆಗೆ ಪ್ರತಿಕ್ರಿಯಿಸಿರುವ ಕಾಮಕೋಟಿ, “ಪದ್ಮಶ್ರೀ ಪ್ರಶಸ್ತಿ ನನಗೆ ಒಂದೇ ಒಂದು ಅರ್ಥ, ಅದು 2047ರ ವಿಕ್ಷಿತ್ ಭಾರತ್‌ಗೆ ನಾನು ನನ್ನ ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತೇನೆ. ಈ ಪ್ರಶಸ್ತಿ ಒಬ್ಬ ವ್ಯಕ್ತಿಯಾಗಿ ಸಾಧ್ಯವಿಲ್ಲ; ಇದು ಸಾಮೂಹಿಕ ಪ್ರಯತ್ನದಿಂದ ಬಂದಿದೆ” ಎಂದಿದ್ದಾರೆ.

ಅವರ ಮಾತಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕೇರಳ ಕಾಂಗ್ರೆಸ್‌ ಘಟಕ, “ಪ್ರಶಸ್ತಿ ಪಡೆದ ವಿ ಕಾಮಕೋಟಿಗೆ ಅಭಿನಂದನೆಗಳು. ಐಐಟಿ ಮದ್ರಾಸ್‌ನಲ್ಲಿ ಗೋಮೂತ್ರದ ಕುರಿತು ನಿಮ್ಮ ರಕ್ತಸಿಕ್ತ ಸಂಶೋಧನೆಯನ್ನು ರಾಷ್ಟ್ರವು ಗುರುತಿಸುತ್ತದೆ. ಇದು ಗೋಮೂತ್ರವನ್ನು ವಿಶ್ವ ವೇದಿಕೆಗೆ ಕೊಂಡೊಯ್ಯುತ್ತದೆ” ಎಂದು ವ್ಯಂಗ್ಯವಾಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕಳೆದ ವರ್ಷ ಸುದ್ದಿಯಾಗಿದ್ದ ಐಐಟಿ ಮದ್ರಾಸ್ ನಿರ್ದೇಶಕ ಕಾಮಕೋಟಿ, “ಗೋಮೂತ್ರವು ‘ಬ್ಯಾಕ್ಟೀರಿಯಾ ವಿರೋಧಿ’ ಮತ್ತು ‘ಶಿಲೀಂಧ್ರ ವಿರೋಧಿ’ ಗುಣಗಳನ್ನು ಹೊಂದಿದೆ. ಐಬಿಎಸ್ ಅಥವಾ ಕರುಳಿನ ಸಿಂಡ್ರೋಮ್ ಸೇರಿದಂತೆ ವಿವಿಧ ಕಾಯಿಲೆಗಳನ್ನು ಗುಣಪಡಿಸುತ್ತದೆ” ಎಂದು ಹೇಳಿದ್ದರು. ಅವರ ಈ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದ್ದವು. ವೈಜ್ಞಾನಿಕ ಮನೋಭಾವವನ್ನು ಪ್ರಚಾರ ಮಾಡುವ ಜವಾಬ್ದಾರಿಯುತ ವ್ಯಕ್ತಿ ಗೋಮೂತ್ರದ ಕುರಿತು ಕಲ್ಪನಾತೀತ ಹೇಳಿಕೆಗಳನ್ನು ನೀಡಿದ ಕುರಿತು ಆಕ್ಷೇಪಗಳು ವ್ಯಕ್ತವಾಗಿದ್ದವು. ಆದಾಗ್ಯೂ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದ ಕಾಮಕೋಟಿ, “ಗೋಮೂತ್ರದ ಶಿಲೀಂಧ್ರ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ವಿರೋಧಿ ಗುಣಲಕ್ಷಣಗಳನ್ನು ವೈಜ್ಞಾನಿಕವಾಗಿ ಪ್ರಸ್ತುತಪಡಿಸಲಾಗಿದೆ” ಎಂದು ಹೇಳಿಕೊಂಡಿದ್ದರು.

ಅವರ ಪೋಸ್ಟ್‌ಅನ್ನು ಉಲ್ಲೇಖಿಸಿ ಕಾಂಗ್ರೆಸ್‌ ಟೀಕಿಸಿದೆ. ಕಾಂಗ್ರೆಸ್‌ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಜೊಹೊ ಸಂಸ್ಥಾಪಕ ಶ್ರೀಧರ್ ವೆಂಬು, “ಪ್ರೊಫೆಸರ್ ಕಾಮಕೋಟಿ ಅವರು ‘ಡೀಪ್ ಟೆಕ್: ಮೈಕ್ರೋ-ಪ್ರೊಸೆಸರ್’ ವಿನ್ಯಾಸದಲ್ಲಿ ಕೆಲಸ ಮಾಡುತ್ತಾರೆ. ಅವರು ಭಾರತದ ಅತ್ಯುತ್ತಮ ತಾಂತ್ರಿಕ ಸಂಸ್ಥೆಯಾದ ಐಐಟಿ-ಮದ್ರಾಸ್‌ನ ನಿರ್ದೇಶಕರು. ಅವರು NSABನಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ಗೌರವಕ್ಕೆ ಅರ್ಹರು. ‘ಹಸುವಿನ ಸಗಣಿ ಮತ್ತು ಹಸುವಿನ ಮೂತ್ರವು ಮಾನವರಿಗೆ ಅಮೂಲ್ಯವಾದ ಅತ್ಯುತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ’. ಹೀಗಾಗಿ, ನಾನು ವೈಜ್ಞಾನಿಕ ಆಧಾರದ ಮೇಲೆ ಅವರನ್ನು ಸಮರ್ಥಿಸಿಕೊಂಡಿದ್ದೇನೆ” ಎಂದು ಹೇಳಿದ್ದಾರೆ.

“ಸಗಣಿ ಅಥವಾ ಗೋಮೂತ್ರ ಬಳಕೆಯು ವೈಜ್ಞಾನಿಕ ಪ್ರತಿಪಾದನೆಗಳಲ್ಲ ಎಂದು ಭಾವಿಸುವುದು ಗುಲಾಮ ವಸಾಹತುಶಾಹಿ ಮನಸ್ಥಿತಿ. ಒಂದು ದಿನ, ಹಾರ್ವರ್ಡ್ ಅಥವಾ MIT ಇದರ ಬಗ್ಗೆ ಅಧ್ಯಯನವನ್ನು ಪ್ರಕಟಿಸಿದಾಗ, ಈ ಗುಲಾಮ ಮನಸ್ಸುಗಳು ಅದನ್ನು ಸುವಾರ್ತೆ ಸತ್ಯವೆಂದು ಪೂಜಿಸುತ್ತವೆ” ಎಂದು ವೆಂಬು ಹೇಳಿದ್ದಾರೆ.

ಈ ಲೇಖನ ಓದಿದ್ದೀರಾ?: ಮನರೇಗಾ ಮರು ಜಾರಿಗೆ ಸ್ಟಾಲಿನ್ ಸರ್ಕಾರ ಆಗ್ರಹ: ವಿಬಿ ಜಿ ರಾಮ್‌ ಜಿ ವಿರುದ್ದ ಅಂಗೀಕರಿಸಿದ ಗೊತ್ತುವಳಿಗಳೇನು?

ವೆಂಬುಗೆ ಪ್ರತಿಕ್ರಿಸಿದ ಕಾಂಗ್ರೆಸ್‌, “ಸಂಶೋಧನೆಯು ವಾಸ್ತವಕ್ಕೆ ಹೊರತಾದ ಪಾಶ್ಚಿಮಾತ್ಯ ಸಂಶೋಧನಾ ಪ್ರಬಂಧಗಳನ್ನು ಉಲ್ಲೇಖಿಸುವುದರ ಕುರಿತದ್ದಲ್ಲ. ಹಸುವಿನ ಸಗಣಿ ಮತ್ತು ಗೋಮೂತ್ರದ ಮೇಲಿನ ಈ ಎಲ್ಲ ಸಂಶೋಧನೆಯ ಫಲಿತಾಂಶವೇನು? ನಾವು ಹಸುವಿನ ಸಗಣಿಗೇ ಏಕೆ ಸೀಮಿತರಾಗಿದ್ದೇವೆ? ಎಮ್ಮೆಗಳು, ಮೇಕೆಗಳು ಅಥವಾ ಮನುಷ್ಯರ ಮಲವಿಸರ್ಜನೆಯ ಬಗ್ಗೆ ಸಂಶೋಧನೆಗಳೇನು?” ಎಂದು ವ್ಯಂಗ್ಯವಾಡಿದೆ.

ಮುಂದುವರೆದು, “ಇತ್ತೀಚೆಗೆ, ಹಸುವಿನ ಸಗಣಿ ಕುರಿತು ಸಂಶೋಧನಾ ಯೋಜನೆಯ ಫಲಿತಾಂಶವು ಸಾರ್ವಜನಿಕವಾಗಿ ಬಹಿರಂಗವಾಯಿತು. ಮಧ್ಯಪ್ರದೇಶ ಸರ್ಕಾರವು ‘ಕ್ಯಾನ್ಸರ್ ಚಿಕಿತ್ಸೆಗಾಗಿ ಹಸುವಿನ ಸಗಣಿ, ಹಸುವಿನ ಮೂತ್ರ, ಹಾಲು, ಮೊಸರು ಮತ್ತು ತುಪ್ಪದಿಂದ ತಯಾರಿಸಿದ ಸಾಂಪ್ರದಾಯಿಕ ಮಿಶ್ರಣವಾದ ಪಂಚಗವ್ಯ’ವನ್ನು ಬಳಸುವ ಸಂಶೋಧನಾ ಯೋಜನೆಗೆ 3.5 ಕೋಟಿ ರೂ. ಹಣಕಾಸು ಒದಗಿಸಿತು. ಆ ಹಣಕಾಸಿನ ಕುರಿತು ಹೆಚ್ಚುವರಿ ಕಲೆಕ್ಟರ್ ರಘುವರ್ ಮರವಿ ಅವರು ತನಿಖೆ ನಡೆಸಿದರು. ತನಿಖೆಯಲ್ಲಿ, ಸಂಶೋಧನೆಗಾಗಿ ಹಸುವಿನ ಸಗಣಿ ಮತ್ತು ಮೂತ್ರವನ್ನು ಖರೀದಿಸಲು 1.92 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿರುವುದಾಗಿ ಬಹಿರಂಗವಾಯಿತು. ಆದರೆ, ವಾಸ್ತವಿಕ ಸಗಣಿಗಾಗಿನ ವೆಚ್ಚ ಸುಮಾರು 15-20 ಲಕ್ಷ ರೂ.ಗಳು ಮಾತ್ರ. ಉಳಿದ ಹಣವನ್ನು ಕಾರುಗಳನ್ನು ಖರೀದಿಸಲು, ಪೆಟ್ರೋಲ್ ಮತ್ತು ಡೀಸೆಲ್ ತುಂಬಿಸಲು ಹಾಗೂ ಗೋವಾ ಮತ್ತು ಬೆಂಗಳೂರು ಪ್ರವಾಸಗಳಿಗೆ ಸಹ ಖರ್ಚು ಮಾಡಲಾಗಿದೆ. ಅಂತಿಮವಾಗಿ, ಸಂಶೋಧನೆಯ ಫಲಿತಾಂಶವೇನು? ಏನೂ ಇಲ್ಲ! ಇದೇ ರೀತಿಯ ಯೋಜನೆಗಳನ್ನು ತನಿಖೆ ಮಾಡಿದರೆ ಹೆಚ್ಚಿನ ಹಗರಣಗಳು ಹೊರಬರುತ್ತವೆ” ಎಂದು ಕಾಂಗ್ರೆಸ್‌ ಹೇಳಿದೆ.

“ನಮಗೆ ಕ್ಯಾನ್ಸರ್ ಸಂಶೋಧನೆ ಬೇಕು ಎಂಬುದರಲ್ಲಿ ಸಂದೇಹವಿಲ್ಲ. ಆದರೆ, ಹಸುವಿನ ಸಗಣಿ ಅಥವಾ ಹಸುವಿನ ಮೂತ್ರ ಮಾತ್ರ ಕ್ಯಾನ್ಸರ್ಅನ್ನು ಗುಣಪಡಿಸಬಹುದು ಎಂದು ನೀವು ಒತ್ತಾಯಿಸುವುದೇಕೆ? ಕೋವಿಡ್ ಸಮಯದಲ್ಲಿ ವಂಚಕರು ಹಸುವಿನ ಸಗಣಿ ಮತ್ತು ಗೋಮೂತ್ರವನ್ನು ಬಳಸಿಕೊಂಡು ವೈರಸ್ ಅನ್ನು ಕೊಲ್ಲಬಹುದೆಂದು ಹೇಗೆ ಪ್ರಚಾರ ಮಾಡಿದರು. ಅಂತಿಮವಾಗಿ ಅದರ ಫಲಿತಾಂಶ ಏನಾಯಿತು ಎಂಬುದನ್ನೂ ನಾವು ನೋಡಿದ್ದೇವೆ” ಎಂದಿರುವ ಕಾಂಗ್ರೆಸ್‌, ‘ಗೋಮೂತ್ರದ ಮೇಲಿನ ಸಂಶೋಧನೆಗೆ ಹಣ ಹೂಡಿಕೆ’ ಮಾಡುವಂತೆ ವೆಂಬು ಅವರಿಗೆ ಸವಾಲು ಹಾಕಿದೆ.

“ನೀವು ಗೋಮೂತ್ರದ ಮಾಂತ್ರಿಕ ಪ್ರಯೋಜನಗಳನ್ನು ನಂಬುವ ಕೋಟ್ಯಾಧಿಪತಿಯಾಗಿರುವುದರಿಂದ, ನಿಮ್ಮ ಕಂಪನಿಯು ಸರಿಯಾದ ಗೋಮೂತ್ರ ಸಂಶೋಧನೆಯಲ್ಲಿ ಏಕೆ ಹೂಡಿಕೆ ಮಾಡುವುದಿಲ್ಲ? ಗೋಮೂತ್ರವು ಕ್ಯಾನ್ಸರ್ ಗುಣಪಡಿಸುವಲ್ಲಿ ಸಹಾಯ ಮಾಡಬಹುದಾದರೆ, ಅದು ಜಗತ್ತಿಗೆ ನಮ್ಮ ಅತ್ಯುತ್ತಮ ಕೊಡುಗೆಗಳಲ್ಲಿ ಒಂದಾಗುತ್ತದೆ. ನೀವು ಈ ಸವಾಲನ್ನು ಸ್ವೀಕರಿಸಿ ಹಣವನ್ನು ನಿಮ್ಮ ಬಾಯಿ (ಕಾಮಕೋಟಿ) ಮೇಲೆ ಯಾಕೆ ವ್ಯಯಿಸಬಾರದು” ಎಂದು ಪ್ರಶ್ನಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...