ಹಲವು ದೇಶಗಳಲ್ಲಿ ಪೇಪರ್ ಬ್ಯಾಲೆಟ್ ಬಳಕೆ ಮಾಡಲಾಗುತ್ತಿದೆ. ನಾವೂ ಕೂಡಾ ಅದೇ ಹಾದಿಯಲ್ಲಿ ಸಾಗಬೇಕು ಎಂದು ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಅವರು, “ನ್ಯಾಯವನ್ನು ನೀಡುವುದು ಮಾತ್ರವಲ್ಲ, ಸೇವೆ ಸಲ್ಲಿಸಲಾಗಿದೆ ಎಂದು ತೋರಬೇಕು. ಹಾಗೆಯೇ ಪ್ರಜಾಪ್ರಭುತ್ವವು ಮೇಲುಗೈ ಸಾಧಿಸುವುದು ಮಾತ್ರವಲ್ಲದೆ ನಿಸ್ಸಂದೇಹವಾಗಿ ಪ್ರಚಲಿತವಾಗಿದೆ ಎಂದು ತೋರಬೇಕು” ಎಂದು ಅಭಿಪ್ರಾಯಿಸಿದ್ದಾರೆ.
Just as justice should not only be served, but should also appear to have been served, so should democracy not only prevail but must appear to be prevalent undoubtedly.
In electoral practices across the world in almost every advanced democracy, paper ballots are used, not EVMs.…
— YS Jagan Mohan Reddy (@ysjagan) June 18, 2024
“ಪ್ರಪಂಚದಾದ್ಯಂತದ ಚುನಾವಣೆ ವೇಳೆ ಪ್ರತಿಯೊಂದು ಮುಂದುವರಿದ ಪ್ರಜಾಪ್ರಭುತ್ವದಲ್ಲಿ (ಮುಂದುವರಿದ ದೇಶ) ಪೇಪರ್ ಬ್ಯಾಲೆಟ್ಗಳನ್ನು ಬಳಸುತ್ತಿದೆಯೇ ಹೊರತು ಇವಿಎಂಗಳನ್ನು ಬಳಸಲಾಗುತ್ತಿಲ್ಲ. ನಮ್ಮ ಪ್ರಜಾಪ್ರಭುತ್ವದ ನಿಜವಾದ ಚೈತನ್ಯವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ನಾವೂ ಕೂಡಾ ಆ ದಾರಿಯಲ್ಲೇ ಸಾಗಬೇಕು” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆ| ದೋಷಪೂರಿತ ಇವಿಎಂಗಳ ಡೇಟಾ ಬಿಡುಗಡೆ ಮಾಡಿ: ಇಸಿಗೆ ಕಾಂಗ್ರೆಸ್ ಸಂಸದ ಆಗ್ರಹ
ವಿಶ್ವದ ಶ್ರೀಮಂತ ವ್ಯಕ್ತಿ, ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಇವಿಎಂ ಹ್ಯಾಕ್ ಆಗುವ ಸಾಧ್ಯತೆ ಬಗ್ಗೆ ಎಕ್ಸ್ ಪೋಸ್ಟ್ ಮಾಡಿದಾಗಿನಿಂದ ದೇಶದಲ್ಲಿ ಇವಿಎಂ ದೋಷ ಚರ್ಚೆಗೆ ಗ್ರಾಸವಾಗಿದೆ. ಚುನಾವಣಾ ಆಯೋಗ ಮತ್ತು ಬಿಜೆಪಿ ನಾಯಕರು ಇವಿಎಂ ಪರವಾಗಿ ಹೇಳಿಕೆಗಳನ್ನು ನೀಡಿದ್ದಾರೆ.
ಆದರೆ ಕಾಂಗ್ರೆಸ್ ಸೇರಿ ಹಲವಾರು ವಿಪಕ್ಷ ನಾಯಕರು ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆ ವೇಳೆ ಇವಿಎಂಗಳಲ್ಲಿ ಕಂಡು ಬಂದ ದೋಷಗಳ ಬಗ್ಗೆ ಪರಿಶೀಲನೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಚುನಾವಣೆ ವೇಳೆ ಎಷ್ಟು ಇವಿಎಂಗಳಲ್ಲಿ ದೋಷ ಕಂಡು ಬಂದಿದೆ ಎಂದು ಜನರಿಗೆ ತಿಳಿಸುವಂತೆ ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗಕ್ಕೆ ಆಗ್ರಹಿಸಿದ್ದಾರೆ.





