ಕಾರ್ಗಿಲ್ ಯೋಧನ ಮನೆಗೆ ನುಗ್ಗಿ ಪೌರತ್ವಕ್ಕೆ ಪುರಾವೆ ಕೇಳಿದ ಪೊಲೀಸ್‌ ಗುಂಪು

Date:

ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಕಾರ್ಗಿಲ್ ಯೋಧನ ಮನೆಗೆ ಪೊಲೀಸರು ನುಗ್ಗಿ, ಅವರ ಕುಟುಂಬದ ಪೌರತ್ವವನ್ನು ಸಾಬೀತು ಪಡಿಸುವಂತೆ ಕಿರುಕುಳ ನೀಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ತಾವೇ ದೇಶಭಕ್ತರು ಎಂದು ಹೇಳಿಕೊಳ್ಳುವ ಬಿಜೆಪಿ ಸರ್ಕಾರವೇ ಯೋಧನ ಮನೆ ಮೇಲೆ ದಾಳಿ ಮಾಡಿಸಿದೆ. ಇದು ಯಾವ ರೀತಿಯ ದೇಶಭಕ್ತಿ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದ ನಿವೃತ್ತ ಸೈನಿಕ ಹಕೀಮುದ್ದೀನ್ ಶೇಖ್ ಅವರು ಮೂಲತಃ ಉತ್ತರ ಪ್ರದೇಶದ ಪ್ರತಾಪ್‌ಗಢದವರು. ಅವರ ಕುಟುಂಬವು 1960ರಿಂದಲೂ ಪುಣೆಯ ಚಂದನ್ ನಗರದಲ್ಲಿ ನೆಲೆಸಿದೆ. ಹಕೀಮುದ್ದೀನ್ ಶೇಖ್ ಅವರು 2013ರಲ್ಲಿ ಮರಳಿ ಪ್ರತಾಪ್‌ಗಢಕ್ಕೆ ಹೋಗಿದ್ದು, ಅಲ್ಲಿಯೇ ನೆಲೆಸಿದ್ದಾರೆ. ಆದಾಗ್ಯೂ, ಅವರ ಸಹೋದರರು ಮತ್ತು ಅವರ ಕುಟುಂಬಗಳು ಪುಣೆಯಲ್ಲಿಯೇ ಉಳಿದಿವೆ.

ಅವರ ಮನೆಗೆ ಮಂಗಳವಾರ ರಾತ್ರಿ ಪೊಲೀಸರು ಸೇರಿದಂತೆ 30-40 ಮಂದಿಯ ಗುಂಪು ನುಗ್ಗಿದ್ದು, ತಮ್ಮ ಭಾರತೀಯ ಪೌರತ್ವವನ್ನು ಸಾಬೀತುಪಡಿಸುವಂತೆ ಒತ್ತಾಯಿಸಿದೆ. ಮಾತ್ರವಲ್ಲದೆ, ಕುಟುಂಬದ ಕೆಲವು ಸದಸ್ಯರನ್ನು ಪೊಲೀಸರು ಪೊಲೀಸ್‌ ಠಾಣೆಗೂ ಕರೆದೊಯ್ದಿದ್ದಾರೆ ಎಂದು ವರದಿಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಯೋಧ ಶೇಖ್ ಅವರ ಕುಟುಂಬಸ್ಥರು, “ಮಧ್ಯರಾತ್ರಿಯೇ ನಮ್ಮ ಕುಟುಂಬದ ಪುರುಷರನ್ನು ಪೊಲೀಸ್‌ ಠಾಣೆಗೆ ಕರೆದೊಯ್ದರು. ಬೆಳಗಿನ ಜಾವ 3 ಗಂಟೆವರೆಗೂ ನಮ್ಮನ್ನು ಕಾಯುವಂತೆ ಹೇಳಿದರು. ನಮ್ಮ ಪೌರತ್ವವನ್ನು ಸಾಬೀತುಪಡಿಸಲು ವಿಫಲವಾದರೆ, ನಮ್ಮನ್ನು ಬಾಂಗ್ಲಾದೇಶಿ ಅಥವಾ ರೋಹಿಂಗ್ಯಾ ಮುಸ್ಲಿಮರೆಂದು ಘೋಷಿಸುವುದಾಗಿ ಬೆದರಿಕೆ ಹಾಕಿದರು” ಎಂದು ಹೇಳಿಕೊಂಡಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಪಿ ಸೋಮಯ್ ಮುಂಡೆ, “ಸಂಶಯಿತ ಅಕ್ರಮ ವಲಸಿಗರ ಕುರಿತು ಬಂದ ಮಾಹಿತಿಯ ಮೇಲೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ನಮ್ಮ ತಂಡ ದಾಖಲೆಗಳನ್ನು ಕೇಳಿದೆ. ಅವರು ಭಾರತೀಯರು ಎಂಬುದು ಸ್ಪಷ್ಟವಾದ ನಂತರ, ನಾವು ಅವರನ್ನು ಬಿಟ್ಟುಬಿಟ್ಟೆವು. ಪೊಲೀಸ್ ತಂಡದೊಂದಿಗೆ ಯಾವುದೇ ಮೂರನೇ ವ್ಯಕ್ತಿ ಇರಲಿಲ್ಲ. ನಮ್ಮಲ್ಲಿ ವೀಡಿಯೊ ದೃಶ್ಯಾವಳಿಗಳಿವೆ” ಎಂದು ಸಮರ್ಥಿಸಿಕೊಂಡಿದ್ದಾರೆ.

58 ವರ್ಷದ ಹಕೀಮುದ್ದೀನ್ ಶೇಖ್ ಅವರು 1984 ರಿಂದ 2000 ರವರೆಗೆ ಭಾರತೀಯ ಸೇನೆಯ 269 ಎಂಜಿನಿಯರ್ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ. “ನಾನು ಕಾರ್ಗಿಲ್‌ನಲ್ಲಿ ಈ ದೇಶಕ್ಕಾಗಿ ಹೋರಾಡಿದೆ. ನನ್ನ ಇಡೀ ಕುಟುಂಬ ಈ ದೇಶಕ್ಕೆ ಸೇರಿದೆ. ಅದನ್ನು ಸಾಬೀತುಪಡಿಸಲು ನಮ್ಮನ್ನು ಕೇಳಲಾಗುತ್ತಿದೆ. ಯಾಕೆ ಹೀಗೆ” ಎಂದು ಶೇಖ್ ಪ್ರಶ್ನಿಸಿದ್ದಾರೆ.

ಹಕೀಮುದ್ದೀನ್ ಅವರ ಸಹೋದರ ಇರ್ಷಾದ್ ಶೇಖ್ ಹೇಳಿವಂತೆ; “ಅಪರಿಚಿತ ಪುರುಷರ ಗುಂಪೊಂದು ಘೋಷಣೆಗಳನ್ನು ಕೂಗುತ್ತಾ ಬಾಗಿಲು ಒದೆಯುತ್ತಾ ನಮ್ಮ ಮನೆಗೆ ನುಗ್ಗಿತು. ಅವರು ದಾಖಲೆಗಳನ್ನು ಕೇಳಿದರು. ಓರ್ವ ಅಧಿಕಾರಿ ಆ ಗುಂಪನ್ನು ಮೌನಗೊಳಿಸಲು ಯತ್ನಿಸಿದರು. ಪೊಲೀಸ್ ವ್ಯಾನ್ ರಸ್ತೆಯ ಒಂದು ಭಾಗದಲ್ಲಿ ಕಾಯುತ್ತಿತ್ತು” ಎಂದಿದ್ದಾರೆ.

ಹಕೀಮುದ್ದೀನ್ ಶೇಖ್ ಮಾತ್ರವಲ್ಲದೆ, ಅವರ ಕುಟುಂಬದಲ್ಲಿ ಇನ್ನೂ ಇಬ್ಬರು – ಶೇಖ್ ನಯೀಮುದ್ದೀನ್ ಮತ್ತು ಶೇಖ್ ಮೊಹಮ್ಮದ್ ಸಲೀಂ – ಯೋಧರಿದ್ದಾರೆ. ಅವರು 1965 ಮತ್ತು 1971ರ ಯುದ್ಧಗಳಲ್ಲಿ ಭಾಗಿಯಾಗಿದ್ದರು, ಹೋರಾಡಿದ್ದರು. “ಸೈನಿಕರ ಕುಟುಂಬಗಳನ್ನು ಹೀಗೆ ನಡೆಸಿಕೊಳ್ಳಲಾಗುತ್ತದೆಯೇ? ಯಾರಾದರೂ ಬಾಗಿಲು ತಟ್ಟಿದಾಗಲೆಲ್ಲ ನಾವು ಪೌರತ್ವವನ್ನು ಸಾಬೀತುಪಡಿಸಬೇಕೇ? ಭಾರತೀಯರಾಗಿರುವುದು ಎಂದರೆ, ಅದರ ಅರ್ಥವೇನು” ಎಂದು ಇರ್ಷಾದ್ ಶೇಖ್ ಪ್ರಶ್ನಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಗೇಮ್ ಚೇಂಜರ್ ಆಗ್ತಾರಾ ಪ್ರಶಾಂತ್ ಕಿಶೋರ್?

ನಮ್ಮಲ್ಲಿರುವ ಮಾನ್ಯ ದಾಖಲೆಗಳನ್ನು ಒಪ್ಪಿಕೊಳ್ಳಲು ಆ ಗುಂಪು ನಿರಾಕರಿಸಿತು. ಗುಂಪಿನಲ್ಲಿದ್ದವರು ಗೂಂಡಾಗಳಂತೆ ವರ್ತಿಸುತ್ತಿದ್ದರು. ಹಕೀಮುದ್ದೀನ್ ಅವರ ಸೋದರಳಿಯರಾದ ನೌಶಾದ್ ಮತ್ತು ನವಾಬ್ ಶೇಖ್ ಅವರು ತಮ್ಮ ಕುಟುಂಬಗಳ ಆಧಾರ್ ಕಾರ್ಡ್‌ಗಳನ್ನು ತೋರಿಸಿದ ನಂತರವೂ, ಅವರ ದಾಖಲೆಗಳು ನಕಲಿ ಎಂದು ಆ ಗುಂಪು ಅಪಹಾಸ್ಯ ಮಾಡಿರುವುದಾಗಿ ವರದಿಯಾಗಿದೆ.

ಸೈನಿಕರ ಕುಟುಂಬಗಳನ್ನು ಅಮಾನವೀಯವಾಗಿ ನಡೆಸಿಕೊಂಡಿರುವ ಪೊಲೀಸರು ಮತ್ತು ಕುಟುಂಬಗಳಿಗೆ ಕಿರುಕುಳ ನೀಡಿರುವ ದಾಳಿಕೋರ ಗುಂಪಿನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. “ಭಾರತಕ್ಕಾಗಿ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ, ಯುದ್ಧಗಳಲ್ಲಿ ಹೋರಾಡಿದ್ದವರ ಕುಟುಂಬವನ್ನು ಈ ಪರಿ ನಡೆಸುವ ಸಮಾಜ ಹಾಗೂ ವ್ಯವಸ್ಠೆ ಸಾಮಾನ್ಯ ಮುಸ್ಲೀಮರನ್ನು ಯಾವ ರೀತಿಯಲ್ಲಿ ನಡೆಸಿಕೊಳ್ಳುತ್ತಿರಬಹುದು!” ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...