ಪಂಜಾಬ್ನಲ್ಲಿ ಈ ವರ್ಷದ ಮಳೆ ಋತುವಿಲ್ಲಿ ಅತ್ಯಧಿಕ ಬೆಂಕಿ ಅವಘಡಗಳು (ಕೃಷಿ ಭೂಮಿಗೆ ಬೆಂಕಿ ಹಚ್ಚುವುದು) ಸೋಮವಾರ ಸಂಭವಿಸಿವೆ. ಒಂದೇ ದಿನ 147 ಬೆಂಕಿ ಅವಘಡಗಳು ಘಟಿಸಿವೆ. ಸೆಪ್ಟೆಂಬರ್ 15ರಿಂದ ಈಚೆಗೆ ಸಂಭವಿಸಿದ ಅವಘಡಗಳ ಒಟ್ಟು ಸಂಖ್ಯೆ 890ಕ್ಕೆ ಏರಿಕೆಯಾಗಿದೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ.
ಪಂಜಾಬ್ ಮಾಲಿನ್ಯ ನಿಯಂತ್ರಣ ಮಂಡಳಿ (ಪಿಪಿಸಿಬಿ) ದತ್ತಾಂಶದ ಪ್ರಕಾರ, ಹೆಚ್ಚಿನ ರೈತರು ಬೆಳೆ ತ್ಯಾಜ್ಯ ಸುಡುವುದನ್ನು ನಿಲ್ಲಿಸುವಂತೆ ರಾಜ್ಯ ಸರ್ಕಾರ ಮನವಿ ಮಾಡಿದ್ದರೂ, ರೈತರು ನಿರ್ಲಕ್ಷಿಸುತ್ತಲೇ ಇದ್ದಾರೆ. ಅಕ್ಟೋಬರ್ 20ರ ವೇಳೆಗೆ 353 ಕೃಷಿ ಬೆಂಕಿ ಅವಘಡಗಳು ಸಂಭವಿಸಿದ್ದವು. ಕಳೆದ ಒಂದು ವಾರದಲ್ಲಿ ಅವಘಡಗಳ ಸಂಖ್ಯೆ 890ಕ್ಕೆ ಏರಿಕೆಯಾಗಿದೆ.
ಅಂಕಿಅಂಶದ ಪ್ರಕಾರ, ಟಾರ್ನ್ ತರಣ್ನಲ್ಲಿ 249, ಅಮೃತಸರದಲ್ಲಿ 169, ಫಿರೋಜ್ಪುರದಲ್ಲಿ 87, ಸಂಗ್ರೂರ್ನಲ್ಲಿ 79, ಪಟಿಯಾಲದಲ್ಲಿ 46, ಗುರುದಾಸ್ಪುರದಲ್ಲಿ 41, ಬಟಿಂಡಾದಲ್ಲಿ 38 ಮತ್ತು ಕಪುರ್ತಲಾದಲ್ಲಿ 35 ಬೆಂಕಿ ಅವಘಡಗಳು ವರದಿಯಾಗಿವೆ.
ಪಠಾಣ್ಕೋಟ್ ಮತ್ತು ರೂಪನಗರ ಜಿಲ್ಲೆಗಳಲ್ಲಿ ಇದುವರೆಗೆ ಯಾವುದೇ ಕೃಷಿ ಹುಲ್ಲು ಸುಡುವ ಘಟನೆಗಳು ವರದಿಯಾಗಿಲ್ಲ. ಎಸ್ಬಿಎಸ್ ನಗರ ಮತ್ತು ಹೋಶಿಯಾರ್ಪುರದಲ್ಲಿ ಮೂರು, ಮಲೇರ್ಕೋಟ್ಲಾದಲ್ಲಿ ನಾಲ್ಕು ಮತ್ತು ಲುಧಿಯಾನದಲ್ಲಿ ಒಂಬತ್ತು ಪ್ರಕರಣಗಳು ವರದಿಯಾಗಿವೆ.
ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ಭತ್ತದ ಬೆಳೆ ಕೊಯ್ಲು ಮಾಡಿದ ನಂತರ ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗಲು ಪಂಜಾಬ್ ಮತ್ತು ಹರಿಯಾಣದಲ್ಲಿ ಕೃಷಿ ಹುಲ್ಲು ಸುಡುತ್ತಿರುವುದೇ ಕಾರಣವೆಂದು ದೂಷಿಸಲಾಗುತ್ತದೆ.
ಭತ್ತದ ಕೊಯ್ಲಿನ ನಂತರ ರಬಿ ಬೆಳೆಯಾದ ಗೋಧಿ ಬಿತ್ತನೆ ಮಾಡಲು ಸಮಯ ಬಹಳ ಕಡಿಮೆ ಇರುತ್ತದೆ. ಹೀಗಾಗಿ, ಕೆಲವು ರೈತರು ಕೃಷಿ ಚಟುವಟಿಕೆಗಳನ್ನು ತ್ವರಿತವಾಗಿ ಆರಂಭಿಸಲು ತಮ್ಮ ಗದ್ದೆಗಳಿಗೆ ಹುಲ್ಲಿಗೆ ಬೆಂಕಿ ಹಚ್ಚುತ್ತಾರೆ.
ಈ ಲೇಖನ ಓದಿದ್ದೀರಾ?: ಸಂಘಿಗಳು ತುಂಬಿರುವ ಕಾಂಗ್ರೆಸ್ಸಿನಲ್ಲಿ ಸಿದ್ದು- ಖರ್ಗೆ-ಹರಿಪ್ರಸಾದ್-ಜಾರಕಿಹೊಳಿ ಸೈದ್ಧಾಂತಿಕ ಬದ್ಧತೆ
ಪಿಪಿಸಿಬಿ ಪ್ರಕಾರ, ಈ ವರ್ಷ ಪಂಜಾಬ್ನಲ್ಲಿ ಒಟ್ಟು 31.72 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಾಗಿದೆ. ಅಕ್ಟೋಬರ್ 26 ರವರೆಗೆ ಶೇ.59.82ರಷ್ಟು ಕಟಾವು ಮಾಡಲಾಗಿದೆ.
ಇಲ್ಲಿಯವರೆಗೆ, 386 ಬೆಂಕಿ ಹಚ್ಚಿದ ಪ್ರಕರಣಗಳಲ್ಲಿ ಪರಿಸರಕ್ಕೆ ಹಾನಿ ಆರೋಪದಲ್ಲಿ 19.80 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ. ಒಟ್ಟು 13.40 ಲಕ್ಷ ರೂ.ಗಳನ್ನು ಸಂಗ್ರಹಿಸಲಾಗಿದೆ ಎಂದು ಪಿಪಿಸಿಬಿ ದತ್ತಾಂಶವು ತೋರಿಸಿದೆ.
ಕೃಷಿ ಭೂಮಿಯಲ್ಲಿ ಬೆಂಕಿ ಹಚ್ಚಿದ ಘಟನೆಗಳಿಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತದ ಸೆಕ್ಷನ್ 223 (ಸಾರ್ವಜನಿಕ ಸೇವಕರು ಘೋಷಿಸಿದ ಆದೇಶದ ಉಲ್ಲಂಘನೆ) ಅಡಿಯಲ್ಲಿ ಒಟ್ಟು 302 ಎಫ್ಐಆರ್ಗಳನ್ನು ದಾಖಲಿಸಲಾಗಿದೆ ಎಂದು ಪಿಪಿಸಿಬಿ ಹೇಳಿದೆ.
ಪಂಜಾಬ್ 2023ರಲ್ಲಿ 36,663 ಕೃಷಿ ಬೆಂಕಿ ಅವಘಡಗಳಿಗೆ ಹೋಲಿಸಿದರೆ 2024ರಲ್ಲಿ ಒಟ್ಟು 10,909 ಕೃಷಿ ಬೆಂಕಿ ಪ್ರಕರಣಗಳು ದಾಖಲಾಗಿದ್ದವು. ಅಂದರೆ, ಪ್ರಕರಣಗಳಲ್ಲಿ 70% ಇಳಿಕೆಯಾಗಿತ್ತು. ಈ ವರ್ಷ ಇನ್ನೂ ಕಡಿಮೆಯಾಗುವ ಸಾಧ್ಯತೆಗಳಿವೆ.




