ಕ್ರಿಕೆಟ್‌ನಲ್ಲಿ ಮೀಸಲಾತಿ ಪ್ರಶ್ನೆ ಮತ್ತೆ ಮುನ್ನೆಲೆಗೆ

Date:

ಐಸಿಸಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ತಂಡ ಸೋತ ಬೆನ್ನಲ್ಲೇ, ಕ್ರಿಕೆಟ್‌ನಲ್ಲಿ ಮೀಸಲಾತಿ ಪ್ರಶ್ನೆ ಮುನ್ನೆಲೆಗೆ ಬಂದಿದೆ.

ಕೋಮುವಾದಿ ಅಜೆಂಡಾಗಳ ಮೂಲಕ ಟೀಕೆಗಳಿಗೆ ಒಳಗಾಗಿರುವ ಆಜ್‌ತಕ್‌ ಪತ್ರಕರ್ತ ಸುಧೀರ್‌ ಚೌದರಿ ಇತ್ತೀಚೆಗೆ ಪರಿಶಿಷ್ಟ ಜಾತಿ, ಒಬಿಸಿ ಸಮುದಾಯಗಳ ಪ್ರತಿಭೆಗಳನ್ನು ಅಣಕಿಸಿ ಕಾರ್ಯಕ್ರಮ ಮಾಡಿದ್ದರು.

ನ್ಯೂಝಿಲ್ಯಾಂಡ್ ತಂಡದ ವಿರುದ್ಧ ಸೆಮಿಫೈನಲ್‌ನಲ್ಲಿ ಭಾರತ ತಂಡ ಗೆದ್ದಿದ್ದನ್ನು ಶ್ಲಾಘಿಸುತ್ತಾ  ‘ಬ್ಲಾಕ್‌ ಆ್ಯಂಡ್ ವೈಟ್’ ಪ್ರೈಮ್ ಟೈಮ್ ಶೋನಲ್ಲಿ ಮಾತನಾಡಿದ್ದ ಚೌದರಿ, “ತಂಡದ ಆಯ್ಕೆಯ ಪ್ರಕ್ರಿಯೆಯಲ್ಲಿ ಮೀಸಲಾತಿ ಇಲ್ಲದೆ ಇರುವುದರಿಂದಾಗಿಯೇ ಭಾರತ ತಂಡವಿಂದು ಜಗತ್ತಿನಲ್ಲೇ ಅತ್ಯುತ್ತಮ ತಂಡವಾಗಿ ಹೊರಹೊಮ್ಮಿದೆ” ಎಂದಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮುಂದುವರಿದು, “ಭಾರತ ಕ್ರಿಕೆಟ್ ತಂಡದ ಸಾಧನೆಗೆ ಜಾತಿ, ಧರ್ಮ ಅಥವಾ ಇನ್ನಿತರ ಅಂಶಗಳನ್ನು ಪರಿಗಣಿಸದೆ, ಆಟಗಾರರ ಪ್ರತಿಭೆಯನ್ನು ಮಾತ್ರ ಪರಿಗಣಿಸಿ ತಂಡಕ್ಕೆ ಆಯ್ಕೆ ಮಾಡಿರುವುದರಿಂದಾಗಿ ಭಾರತ ತಂಡ ಇಂತಹ ಸಾಧನೆಗೈಯ್ಯಲು ಸಾಧ್ಯವಾಗಿದೆ. ಒಂದು ವೇಳೆ ಮೀಸಲಾತಿಯನ್ನು ತೆಗೆದು ಹಾಕಿ, ಜನರನ್ನು ಅವರ ಪ್ರತಿಭೆಯ ಆಧಾರದಲ್ಲಿ ಎಲ್ಲ ವಲಯಗಳಲ್ಲಿ ಆಯ್ಕೆ ಮಾಡಿದರೆ ನಮ್ಮದೇಶ ಮತ್ತಷ್ಟು ಅದ್ಭುತ ಸಾಧನೆ ಮಾಡುವುದಿಲ್ಲವೆ ಹಾಗೂ ಮತ್ತಷ್ಟು ಅದ್ಭುತ ಮೈಲಿಗಲ್ಲುಗಳನ್ನು ಸೃಷ್ಟಿಸಲು ಸಾಧ್ಯವಾಗುವುದಿಲ್ಲವೆ?” ಎಂದು ಪ್ರಶ್ನಿಸಿದ್ದರು.

ಬಲಾಢ್ಯ ಜಾತಿಗಳಿಗೆ ಇಡಬ್ಲ್ಯುಎಸ್ ಅಡಿಯಲ್ಲಿ ಶೇ.10ರಷ್ಟು ಮೀಸಲಾತಿಯನ್ನು ನೀಡಲಾಗಿದೆ. ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಗಳ ಮೀಸಲಾತಿ ಮಿತಿ ಶೇ. 50ರಷ್ಟು ಮೀರಲಾಗದೆ ಒದ್ದಾಡುತ್ತಿದೆ. ಇಂತಹ ಸಂದರ್ಭದಲ್ಲಿ ಸುಧೀರ್‌ ಚೌದರಿ ಮೀಸಲಾತಿ ಕುರಿತು ಅಸಹನೆಯನ್ನು ಹೊರಹಾಕಿದ್ದು ಭಾರೀ ಟೀಕೆಗೆ ಒಳಗಾಗಿತ್ತು. ಆದರೆ ಫೈನಲ್‌ನಲ್ಲಿ ಭಾರತ ತಂಡ ಸೋತ ಬಳಿಕ ಕ್ರಿಕೆಟ್‌ನಲ್ಲಿ ಮೀಸಲಾತಿಯ ಅಗತ್ಯತೆ ಕುರಿತು ಚರ್ಚೆ ಶುರುವಾಗಿದೆ.

ನಟ ಹಾಗೂ ಹೋರಾಟಗಾರ ಚೇತನ್ ಅಹಿಂಸಾ ಅವರು ಈ ಕುರಿತು ಪೋಸ್ಟ್ ಮಾಡಿದ್ದು,  “ನಾನು ಮತ್ತೆ ಹೇಳುತ್ತಿದ್ದೇನೆ/ ಒತ್ತಿಹೇಳುತ್ತಿದ್ದೇನೆ, ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೀಸಲಾತಿಯ ಅಗತ್ಯವಿದೆ. ಕ್ರಿಕೆಟ್‌ನಲ್ಲಿ ಮೀಸಲಾತಿ ಇದ್ದಿದ್ದರೆ, ಭಾರತ ವಿಶ್ವಕಪ್‌ಅನ್ನು ಸುಲಭವಾಗಿ ಗೆಲ್ಲುತ್ತಿತ್ತು” ಎಂದಿದ್ದಾರೆ.

ಲೇಖಕರಾದ ವಿ.ಆರ್‌.ಕಾರ್ಪೆಂಟರ್‌ ಪ್ರತಿಕ್ರಿಯಿಸಿದ್ದು,  “ಗೆಳೆಯ ಚೇತನ್ ಅವರ ಮಾತಿಗೆ ನನ್ನ ಸಹಮತವಿದೆ. ಯಾಕೆಂದರೆ ಭಾರತದಲ್ಲಿ ಕ್ರಿಕೆಟ್ ಆಟಗಾರರಿಗೆ ಬರವಿಲ್ಲ. ಅದ್ಭುತವಾಗಿ ಆಡುವ ಕೊಹ್ಲಿ, ರೋಹಿತ್ ಶರ್ಮಾ ಅಂಥವರನ್ನೂ ಮೀರಿಸುವ ಆಟಗಾರರು SC/ST, OBC ಗಳಲ್ಲೂ ಇದ್ದಾರೆ. ಮೀಸಲಾತಿ ತಂದರೆ ಅಂಥವರ ಅನ್ವೇಷಣೆ ಆಗುತ್ತದೆ, ಅವಕಾಶ ಸಿಗುತ್ತದೆ. ಆದರೆ, ಭಾರತದ ಕ್ರಿಕೆಟ್‌ನೊಳಗಿರುವ ಜಾತೀಯತೆ ಬೌಲಿಂಗ್ ಮಾಡುವ ಮುಸ್ಲಿಂ ಆಟಗಾರರಿಗೆ ಚಾನ್ಸ್ ಕೊಡುತ್ತದಷ್ಟೇ, ಅಪ್ಪಿತಪ್ಪಿ ದಲಿತರಿಗೆ ಕೊಡುವುದಿಲ್ಲ. 1792ರಲ್ಲಿ ಬ್ರಿಟಿಷರಿಂದ ಶುರುವಾದ ಈ ಭಾರತೀಯ ಕ್ರಿಕೆಟ್‌ನ ಇತಿಹಾಸದಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ ದಲಿತ ಆಟಗಾರರ ಸಂಖ್ಯೆ ನಾಲ್ಕು ಮೀರಲ್ಲ” ಎಂದು ವಿಷಾದಿಸಿದ್ದಾರೆ.

“ಈಗಿರುವ ತಂಡ ಅದ್ಭುತವಾಗಿ ಆಡಿದೆ. ಅದರಲ್ಲಿ ಎರಡು ಮಾತಿಲ್ಲ. ಹಾಗಂತ ಅವಕಾಶ ವಂಚಿತರಿಗೆ ಅವಕಾಶ ಬೇಡವ? ಅವಕಾಶವೇ ಇಲ್ಲದಿದ್ದರೆ ದಲಿತ, ಹಿಂದುಳಿದ ಜಾತಿಗಳಲ್ಲಿ ಇರುವ ಸಚಿನ್, ಕೋಹ್ಲಿ, ರೋಹಿತ್, ಜಾಹೀರ್ ಖಾನ್, ಕೈಫ್, ಶಮಿಗಳ ಕತೆ ಏನಾಗಬೇಕು? ಅವಕಾಶವನ್ನೇ ಕಲ್ಪಿಸದೇ ‘ಹೇ ಕ್ರಿಕೆಟ್‌ಗೆಲ್ಲಾ ಮೀಸಲಾತಿ ಬೇಕ?’ ಎಂದು ಗಹಗಹಿಸುವುದು ಮೂರ್ಖತನವಷ್ಟೇ ಅಲ್ಲ, ಜಾತೀಯತೆಯ ನಂಜು ಕೂಡ” ಎಂದು ಅಭಿಪ್ರಾಯಪಟ್ಟಿದ್ದಾರೆ.

“ಇವತ್ತು ಸೌತ್ ಆಫ್ರಿಕಾ ತಂಡ ಮೀಸಲಾತಿ ಅಳವಡಿಸಿಕೊಂಡಿದೆ. ಮೀಸಲಾತಿ ಇಲ್ಲದಿದ್ದಾಗಲೂ ಅವರು ಸೆಮಿಫೈನಲ್ ದಾಟಿಲ್ಲ, ಇದ್ದಾಗಲೂ ದಾಟಿಲ್ಲ. ಆದರೆ ಅಲ್ಲಿನ ಕರಿಯ ಆಟಗಾರರಿಗೆ ಪ್ರಾತಿನಿದ್ಯ ದೊರಕಿದೆ. ರಬಾಡ, ಲುಂಗಿ ಎಂಗಿಡಿ ಥರದ ಆಟಗಾರರು ನಿರ್ಭೀತಿಯಿಂದ ಆಡುತ್ತಿದ್ದಾರೆ. ಕೇಶವ ಮಹರಾಜ್ ಎಂಬ ಹಿಂದುಳಿದ ಜಾತಿಯ ಆಟಗಾರನಿಗೂ ಅಲ್ಲಿ ಕರಿಯರ ಪ್ರಾತಿನಿಧಿಕದಲ್ಲೇ ಅವಕಾಶ ಕಲ್ಪಿಸಲಾಗಿದೆ. ಅಂಥ ಒಬ್ಬ ಒಳ್ಳೆಯ ಬೌಲರ್ ಭಾರತದಲ್ಲಿ ಇದ್ದಿದ್ದರೆ, ಇಲ್ಲಿನ ಜಾತೀ ವ್ಯವಸ್ಥೆ ಖಂಡಿತವಾಗಿ ಆತನಿಗೆ ಸಣ್ಣ ಅವಕಾಶವನ್ನೂ ಕಲ್ಪಿಸುತ್ತಿರಲಿಲ್ಲ. ಒಲಂಪಿಕ್ಸ್ ನಲ್ಲೂ ಮೀಸಲಾತಿ ಇಲ್ಲ! ಹಾಗಾದರೆ ಭಾರತ ಎಷ್ಟು ಚಿನ್ನದ ಪದಕಗಳನ್ನು ಗೆದ್ದಿದೆ?” ಎಂದು ಪ್ರಶ್ನಿಸಿದ್ದಾರೆ.

ರಾಜಕೀಯಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಸುಭಜಿತ್ ನಾಸ್ಕರ್‌ ಅವರು ’ಎಕ್ಸ್‌’ ಖಾತೆಯಲ್ಲಿ ಮಾಡಿರುವ ಪೋಸ್ಟ್‌ ಚರ್ಚೆಗಳನ್ನು ಹುಟ್ಟು ಹಾಕಿದೆ. “ಹೊಸ ಮುಖಗಳೊಂದಿಗೆ ಇಡೀ ಭಾರತೀಯ ಕ್ರಿಕೆಟ್ ತಂಡವನ್ನು ಬದಲಿಸಬೇಕಿದೆ. ಇವರು ಲಕ್ಷಾಂತರ ಜನರ ಭಾವನೆಯೊಂದಿಗೆ ಸೋತಿದ್ದಾರೆ. ಶರ್ಮಾ, ಕೊಹ್ಲಿ, ಗಿಲ್, ಅಯ್ಯರ್, ಶಮಿ, ಯಾದವ್ಸ್, ಬುಮ್ರಾ, ಸಿರಾಜ್, ಜಡೇಜಾ ಇತ್ಯಾದಿ ಯಾರೂ ಎಸ್ಸಿ ಎಸ್ಟಿ ಅಲ್ಲ” ಎಂದು ತಿಳಿಸಿದ್ದಾರೆ.

ಕ್ರೀಡೆಯಲ್ಲಿ ಮೀಸಲಾತಿ ನೀಡಬೇಕೆಂಬ ಚರ್ಚೆ ಮೊದಲಿನಿಂದಲೂ ನಡೆಯುತ್ತಿದೆ. ಜಾತಿಗಳೇ ತುಂಬಿರುವ ಭಾರತದಲ್ಲಿ ಕೆಲವು ಕ್ರೀಡೆಗಳಿಗಷ್ಟೇ ಹೆಚ್ಚಿನ ಮಾನ್ಯತೆ ದೊರೆತಿದೆ. ಬಲಾಢ್ಯ ಜಾತಿಗಳವರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತಿವೆ ಎಂಬ ಆರೋಪಗಳಿವೆ. ಈ ಕುರಿತು ಗಂಭೀರ ಚರ್ಚೆ ಆಗಬೇಕಿದೆ ಎಂಬುದು ಅನೇಕರ ಅಭಿಪ್ರಾಯ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...