‘ರೇಪಿಸ್ಟ್ ಮಕ್ಕಳನ್ನೂ ರಾಜಾ ಬೇಟಾ ಎಂದು ಮುದ್ದಿಸುವ ತಾಯಂದಿರು’-ಪಂಜಾಬ್ ಹರಿಯಾಣ ಹೈಕೋರ್ಟ್

Date:

ಕುಟುಂಬದ ಸದಸ್ಯರು- ತಾಯಂದಿರು ದುಷ್ಟ ಗಂಡು ಮಕ್ಕಳನ್ನೂ ‘ರಾಜಾ ಬೇಟಾ’ ಎಂದು ಕುರುಡಾಗಿ ಮುದ್ದಿಸುತ್ತಾರೆ. ದೇಶದ ಈ ಭಾಗದಲ್ಲಂತೂ ಇದು ಸರ್ವೇಸಾಮಾನ್ಯ. ಇಂತಹ ವಿಕೃತ ವ್ಯಕ್ತಿ ಪುರುಷತ್ವ ಅಳಿಯುವ ತನಕ ಜೈಲಲ್ಲಿ ಕೊಳೆಯಬೇಕು ಎಂದು ಟೀಕಿಸಿದೆ ಪಂಜಾಬ್- ಹರಿಯಾಣ ಹೈಕೋರ್ಟ್.

ಐದು ವರ್ಷ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದವನಿಗೆ 30 ವರ್ಷ ಸಜೆ ನೀಡಿದೆ ಪಂಜಾಬ್ ಹರಿಯಾಣ ಹೈಕೋರ್ಟು. ಅಷ್ಟೇ ಅಲ್ಲ, 30 ಲಕ್ಷ ರುಪಾಯಿಗಳ ಜುಲ್ಮಾನೆಯನ್ನು ಅತ್ಯಾಚಾರ-ಹತ್ಯೆಗೀಡಾದ ಮಗುವಿನ ಕುಟುಂಬಕ್ಕೆ ನೀಡುವಂತೆ ತಾಕೀತು ಮಾಡಿದೆ.

2025ರ ಮೇ 31ರಂದು ಮಗುವಿನ ತಂದೆಯ ಅಧೀನದಲ್ಲಿ ಕೆಲಸ ಮಾಡುತ್ತಿದ್ದ ನೌಕರನೇ ಹಸುಳೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ. ಮಗುವಿನ ತಂದೆ ಸಣ್ಣಪುಟ್ಟ ಟೆಂಟುಗಳನ್ನು ಹಾಕಿ ಹೊಟ್ಟೆ ಹೊರೆಯುತ್ತಿದ್ದ ವ್ಯಕ್ತಿ. ನೌಕರನು ಮಗುವನ್ನು ತನ್ನ ಮನೆಗೆ ಕರೆದೊಯ್ದು, ಅಲ್ಲಿ ಅತ್ಯಾಚಾರ ಎಸಗಿ ಅಡುಗೆಗೆ ಬಳಸುವ ಚಾಕುವಿನಿಂದ ಹತ್ಯೆಗೈದಿದ್ದಾನೆ. ತರುವಾಯ ಹಸುಳೆಯ ಮೃತ ದೇಹವನ್ನು ಅಡುಗೆ ಕೋಣೆಯ ದೊಡ್ಡ ಡಬ್ಬವೊಂದರಲ್ಲಿ ಅಡಗಿಸಿಟ್ಟಿದ್ದಾನೆ. ಈ ಹತ್ಯೆ ನಡೆದಾಗ ನೌಕರನ ತಾಯಿ ಹೊರಗೆ ಕೆಲಸಕ್ಕೆ ಹೋಗಿದ್ದಳು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಜಾಪ್ರಭುತ್ವ ಪೊರೆದ ಅಮೆರಿಕ; ಪುಡಿಗಟ್ಟುತ್ತಿರುವ ಭಾರತ

ಸುಳಿವು ತಿಳಿದ ಮಗುವಿನ ಪೋಷಕರು ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದರು. ಹಸುಳೆಯಾಗಲಿ, ಮಗನಾಗಲಿ ಮನೆಯಲ್ಲಿಲ್ಲ ಎಂದು ಬಾಗಿಲಿಗೆ ಅಡ್ಡ ನಿಂತಳು ತಾಯಿ. ಅಂಗಳದಲ್ಲಿದ್ದ ಡಬ್ಬದಲ್ಲಿ ಹಸುಳೆಯ ದೇಹ ಪತ್ತೆಯಾಯಿತು. ಆರೋಪಿಯನ್ನು ಪೋಕ್ಸೋ ಕಾಯಿದೆಯಡಿ ಬಂಧಿಸಲಾಗಿದೆ. ಅಪರಾಧಿಯ ರಕ್ಷಣೆಗೆ ಮುಂದಾದ ತಾಯಿಗೆ ನ್ಯಾಯಾಲಯ ಏಳು ವರ್ಷಗಳ ಕಠಿಣ ಸಜೆ ವಿಧಿಸಲಾಯಿತು. ತಾಯಿ-ಮಗ ಇಬ್ಬರೂ ಈ ತೀರ್ಪನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಿದರು. ತಾಯಿಯು ಮಗನನ್ನು ವಹಿಸಿಕೊಳ್ಳುವ ಸಾಮಾಜಿಕ ಧೋರಣೆಯು ಪಂಜಾಬ್-ಹರಿಯಾಣ ಸೀಮೆಯ ಪುರುಷಾಧಿಪತ್ಯದ ಮನಸ್ಥಿತಿ ಮತ್ತು ಸಂಸ್ಕೃತಿಯಲ್ಲಿ ಆಳವಾಗಿ ಬೇರು ಬಿಟ್ಟಿದೆ ಎಂದು ಹೈಕೋರ್ಟ ಹೇಳಿತು.

“ತನ್ನ ರಾಜಾ ಬೇಟಾ ತಾನು ತಿಳಿದಂತೆ ಅಮಾಯನಕನಲ್ಲವೆಂದೂ, ಹಸುಳೆಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವುದಾಗಿ ಗೊತ್ತಾದ ನಂತರವೂ ತಾಯಿ ಅವನ ರಕ್ಷಣೆಗೆ ನಿಂತಳು. ನಾಗರಿಕ ಸಮಾಜವೊಂದರಲ್ಲಿ ಇಂತಹ ಘಟನೆ ನಡೆಯುತ್ತಲೇ ಇರಲಿಲ್ಲ. ತನ್ನ ರಾಜಾ ಬೇಟಾನನ್ನು ಕಾಪಾಡಿಕೊಳ್ಳುವ ಬದಲಿಗೆ ಹಸುಳೆಗೆ ನ್ಯಾಯ ಒದಗಿಸಲು ಮುಂದಾಗಬೇಕಿತ್ತು ಈ ತಾಯಿ. ಈಕೆಯ ವರ್ತನೆ ಖಂಡನೀಯ. ಪುಟ್ಟ ಬಾಲಕಿಯು ಅಪಾದಿತನಲ್ಲಿ ಅಪರಿಮಿತ ವಿಶ್ವಾಸ ಇಟ್ಟಿದ್ದಳು. ಇತರೆ ಮಕ್ಕಳು ಮತ್ತು ಮಹಿಳೆಯರನ್ನು ಕಾಪಾಡಬೇಕಿದ್ದರೆ, ಅಪರಾಧಿಯು ಜೈಲಿನ ನಾಲ್ಕು ಗೋಡೆಗಳ ನಡುವೆ ಕೊಳೆಯಬೇಕು. ಈ ವಿಕೃತ ವ್ಯಕ್ತಿ, ತನ್ನ ಪುರುಷತ್ವ ಅಳಿಯುವ ತನಕವೂ ಬಂಧನದಲ್ಲೇ ಇರಬೇಕು” ಎಂದು ನ್ಯಾಯಾಲಯ ವಿಧಿಸಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...