ಆರೆಸ್ಸೆಸ್ ನಾಯಕನಿಂದಲೇ ಗುಟ್ಟು ರಟ್ಟು: ಮುಸ್ಲಿಂ ಗಡ್ಡ – ಟೋಪಿ ಬಗ್ಗೆ ಬೈಗುಳ ಬಳಸುವಂತೆ ಕೋರಿದ್ದ ಟೀವಿ ಆ್ಯಂಕರ್!

Date:

ಮೋದಿ ಮಡಿಲಲ್ಲಿ ಆಡುವ ‘ಗೋದಿ ಮೀಡಿಯಾ’ ತಮ್ಮ ಸ್ಟುಡಿಯೋಗಳಲ್ಲಿ ಮುಸ್ಲಿಂ ದ್ವೇಷದ ವಿಡಿಯೋಗಳನ್ನು ಹೇಗೆ ತಯಾರಿಸುತ್ತಾರೆಂದು ರಾಜ್ಯಸಭಾದ ಮಾಜಿ ಸದಸ್ಯ ಮತ್ತು ಆರೆಸ್ಸೆಸ್ ಮುಂದಾಳು ಪ್ರೊ. ರಾಕೇಶ್ ಸಿನ್ಹಾ ಬಹಿರಂಗಪಡಿಸಿದ್ದಾರೆ.
ಅವರ ಭಾಷಣದ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಟೀವಿ ಚರ್ಚೆಯಲ್ಲಿ ಮುಸಲ್ಮಾನರ ಗಡ್ಡ ಮತ್ತು ಟೋಪಿ ಕುರಿತು ಬೈಗುಳದ ಭಾಷೆ ಬಳಸುವಂತೆ ರಾಷ್ಟ್ರಮಟ್ಟದ ಟೀವಿ ಚಾನೆಲ್ಲೊಂದರ ಆ್ಯಂಕರ್ ಮುಂಚಿತವಾಗಿಯೇ ತಮಗೆ ಸೂಚಿಸಿದ್ದಾಗಿಯೂ, ಎಂತೆಂತಹ ಬೈಗುಳಗಳನ್ನು ಬಳಸಬಹುದು ಎಂಬುದನ್ನು ಹೇಳಿಕೊಟ್ಟಿದ್ದಾಗಿ ಪ್ರೊ. ಸಿನ್ಹಾ ಬಯಲು ಮಾಡಿದ್ದಾರೆ.

‘ಇಂದಿನ ಭಾರತದಲ್ಲಿ ಮುಸಲ್ಮಾನರ ಭವಿಷ್ಯತ್ತು’ ಕುರಿತು ನಯೀ ದುನಿಯಾ ನ್ಯಾಷನಲ್ ಫೋರಮ್ ಇದೇ ಜನವರಿ 16ರಂದು ಏರ್ಪಡಿಸಿದ್ದ ವಿಚಾರಸಂಕಿರಣದ ಸಂದರ್ಭ. ಕಾಂಗ್ರೆಸ್ಸಿನ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್, ರಾಷ್ಟ್ರೀಯ ಜನತಾದಳದ ವಕ್ತಾರ ಮತ್ತು ರಾಜ್ಯಸಭಾ ಸದಸ್ಯ ಪ್ರೊ. ಮನೋಜ್ ಝಾ ಹಾಗೂ ನಯೀ ದುನಿಯಾ ಪತ್ರಿಕೆಯ ಸಂಪಾದಕ ಶಾಹಿದ್ ಸಿದ್ದೀಖಿ ಕೂಡ ಈ ಕಾರ್ಯಕ್ರಮದ ವೇದಿಕೆಯಲ್ಲಿದ್ದರು. ಆ್ಯಂಕರ್ ಮತ್ತು ತಮ್ಮ ನಡುವೆ ನಡೆದ ಮಾತುಕತೆಯನ್ನು ಪ್ರೊ. ಸಿನ್ಹಾ ಸಭೆಯ ಮುಂದೆ ಪ್ರಸ್ತಾಪಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪ್ರೊ. ಸಿನ್ಹಾ: ‘ರಾಷ್ಟ್ರ ಮಟ್ಟದ ಟೀವಿ ಚಾನೆಲ್ಲೊಂದರಿಂದ ನನಗೆ ಫೋನ್ ಬಂದಿತ್ತು. ಆ ಚಾನೆಲ್‌ನ ಹೆಸರು ಹೇಳೋದು ಸರಿಯಲ್ಲ.  ಆ ವೇಳೆ ನಾನು ದಿಲ್ಲಿಯ ರತನ್ ಟಾಟಾ ಲೈಬ್ರರಿಯಲ್ಲಿದ್ದೆ. ‘ಇಂದಿನ ಚರ್ಚೆಯನ್ನು ನಿಮ್ಮ ಹೇಳಿಕೆಯಿಂದ ಶುರು ಮಾಡ್ತೀನಿ’ ಅಂತ ಆ್ಯಂಕರ್ ತಿಳಿಸಿದ. ನನಗೆ ಖುಷಿಯೆನಿಸಿತು’.

ಆ್ಯಂಕರ್: ‘ಚರ್ಚೆಗೆ ನನ್ನ ಮಿತ್ರರೊಬ್ಬರು ಬರ್ತಿದ್ದಾರೆ. ಏನು ಮಾತಾಡಬೇಕೆಂದು ಅವರಿಗೂ ಹೇಳಿದ್ದೇನೆ. ನೀವು ಉಗ್ರರಾಗಿ ಮಾತಾಡಬೇಕು, ಶಾಂತರಾಗಿರ್ತೀರಿ. ಚೆನ್ನಾಗಿ ಕಾಣಲ್ಲ’.

ಪ್ರೊ. ಸಿನ್ಹಾ: ಹೇಗ ಮತ್ತು ಏನನ್ನು ಹೇಳಬೇಕೆಂದು ಹೇಳಿ, ಹಾಗೇ ಹೇಳ್ತೀನಿ ಅಂದೆ.(ದಾಡಿ ಮತ್ತು ಟೋಪಿಯ ಕುರಿತು ಕೆಲ ಬೈಗುಳ ಮತ್ತು ಬರ್ಬರ ಪದಗಳನ್ನು ಬಳಸುವಂತೆ ಆತನ ನನಗೆ ಸೂಚಿಸಿದ). ಸರಿ, ಖಂಡಿತ ಹೇಳ್ತೀನಿ. ಇನ್ನೂ ಏನಾದ್ರೂ ಇದ್ರೆ ಹೇಳಿಬಿಡಿ ಅಂದೆ. ಇದು ಸಾಲದು ಇನ್ನಷ್ಟು ಹೇಳಿಕೊಡಿ ಅಂದೆ ಕೂಡ. ಸರ್, ನೀವು ಏನು ಬೇಕಾದರೂ ಹೇಳಿ ಸರ್. ನೀವಿಬ್ರೂ ಜಗಳ ಆಡಬೇಕು. ನಾನು ಮಧ್ಯಪ್ರವೇಶಿಸಿ ಜಗಳ ಬಿಡಿಸುವಂತೆ ನಟಿಸುತ್ತೇನೆ. ಚರ್ಚೆ ಹಿಟ್ ಆಗುತ್ತೆ. ನೀವೂ ಟ್ರೆಂಡಿಂಗ್ ಮಾಡಿ ನಾನೂ ಟ್ವಿಟರ್ ನಲ್ಲಿ ಟ್ರೆಂಡಿಂಗ್ ಮಾಡ್ತೀನಿ ಅಂದ.

ಪ್ರೊ. ಸಿನ್ಹಾ: ಇದಾದ ನಂತರ ಟೀವಿ ಚಾನೆಲ್ ವಾಹನ ಬಂತು. ನನಗೆ ತುರ್ತು ಕೆಲಸವೊಂದರ ಮೇಲೆ ಮುಂಬಯಿಗೆ ಹೋಗಬೇಕಾಗಿದೆ. ಚರ್ಚೆಗೆ ಬರೋಕಾಗಲ್ಲ ಅಂತ ಹೇಳಿದೆ. ಏನಾಯ್ತು ಸರ್ ಅಂತ ಆತ ಕೇಳಿದ. ನೀವು ಏನೇನು ಹೇಳಬೇಕೆಂದು ಸೂಚನೆ ನೀಡಿದ ನಂತರ ನಾನು ಬಾತ್ ರೂಮ್ ಗೆ ಹೋಗಿ ಹಲವಾರು ಸಲ ರಿಹರ್ಸಲ್ ಮಾಡಿದೆ, ಮಾಡುತ್ತ ಮಾಡುತ್ತ ನನ್ನ ಮುಖವನ್ನು ಕನ್ನಡಿಯಲ್ಲಿ ಗಮನಿಸಿ ನೋಡಿದೆ. ನಾನು ಸಾಕಷ್ಟು ಎತ್ತರದ ಆಳು, ನೋಡಲೂ ಲಕ್ಷಣವಾಗಿದ್ದೇನೆ ಅನಿಸಿತು. ಇಷ್ಟೆಲ್ಲ ಇದ್ದಮೇಲೆ ಮುಂಬಯಿಗೆ ಹೋಗಿ ಚಲನಚಿತ್ರಗಳಲ್ಲಿ ಯಾಕೆ ನಟಿಸಬಾರದು ಅನಿಸಿದೆ ಅಂದೆ.

‘2016ರಲ್ಲಿ ನಡೆದ ಮಾತುಕತೆಯಿದು. ಈ ದೇಶದಲ್ಲಿ ಯಾರದಾದರೂ ಗಡ್ಡ ಎಳೆದಾಡಲು ಅಥವಾ ಟೋಪಿಯನ್ನು ಕಿತ್ತು ಹಾಕಲು ಹುಟ್ಟಿಲ್ಲ ನಾನು. ಹಾಗೆ ಟೋಪಿ ಎಳೆದು ಹಾಕುವವರ ವಿರುದ್ಧ ಹೋರಾಡಲು ಹುಟ್ಟಿದ್ದೇನೆ. ಆರೆಸ್ಸೆಸ್ ಸ್ವಯಂಸೇವಕ ನಾನು. ನನ್ನ ಜವಾಬ್ದಾರಿ ಏನೆಂದು ಚೆನ್ನಾಗಿ ಬಲ್ಲೆ’ ಎಂದೂ ಸಿನ್ಹಾ ಅವರು ಸಭೆಯಲ್ಲಿ ತಮ್ಮ ಮಾತು ಮುಂದುವರೆಸಿ ಹೇಳಿರುವುದು ವಿಡಿಯೋದಲ್ಲಿದೆ.

ಈ ವರದಿ ಓದಿದ್ದೀರಾ?: ಮಹಾ ಕುಂಭಮೇಳ ಯಾರಿಗಾಗಿ, ಯಾತಕ್ಕಾಗಿ?

ವಿಚಿತ್ರವೆಂದರೆ ಬಿಜೆಪಿಯ ಅಧಿಕೃತ ಸೋಷಿಯಲ್ ಮೀಡಿಯಾ ಟ್ರೋಲ್ ಸೇನೆ ಇಂತಹುದೇ ಭಾಷೆ ಮತ್ತು ಬೈಗುಳಗಳನ್ನು ಬಹಳ ವರ್ಷಗಳಿಂದ ಬಳಸುತ್ತ ಬಂದಿದೆ. ಲೋಕಸಭೆಯಲ್ಲಿ ಬಿಜೆಪಿ ಸಂಸದ ರಮೇಶ್ ಬಿಧೂರಿ ಅವರು ಕುಂವರ್ ದಾನಿಶ್ ಅಲಿ ಎಂಬ ಸಂಸದರನ್ನು ‘ಶಿಶ್ನದ ಮುಂದೊಗಲು ಕತ್ತರಿಸಿಕೊಂಡವನೇ, ತಲೆಹಿಡುಕನೇ, ಭಯೋತ್ಪಾದಕನೇ, ನಿನ್ನನ್ನು ಹೊರಗೆ ನೋಡಿಕೊಳ್ತೀನಲೋ ಮುಲ್ಲಾ…..’ ಎಂದೆಲ್ಲ ಬೈದಿದ್ದರು. ಉತ್ತರಪ್ರದೇಶದ ಯತಿ ನರಸಿಂಹಾನಂದ ಎಂಬುವರು ಬಾರಿ ಬಾರಿಗೆ ಮುಸಲ್ಮಾನರ ವಿರುದ್ಧ ಅವಾಚ್ಯ ಪದಗಳನ್ನು ಬಳಸುತ್ತಿರುತ್ತಾರೆ. ಪ್ರಧಾನಿ ಮೋದಿ ಅವರೇ ಮುಸಲ್ಮಾನರನ್ನು ಹೆಚ್ಚು ಮಕ್ಕಳ ಹುಟ್ಟಿಸುವವರು ಮುಂತಾಗಿ ಬೈದಿದ್ದಾರೆ, ಮುಸ್ಲಿಮರ ವಿರುದ್ಧ ಯೋಗಿ ಆದಿತ್ಯನಾಥ್ ಅವರ ಕುಖ್ಯಾತ ಹೇಳಿಕೆಗಳು ಉಲ್ಲೇಖಗಳು ಈಗಲೂ ಲಭ್ಯ. ಇಂತಹ ಯಾವುದೇ ಹೇಳಿಕೆಗಳನ್ನು ಪ್ರೊ.ಸಿನ್ಹಾ ಪ್ರಸ್ತಾಪಿಸಿಲ್ಲ.

ಸಿನ್ಹಾ ಅವರು ರಾಜ್ಯಸಭೆ ಸದಸ್ಯರಾಗುವ ಸಲುವಾಗಿ ವರ್ಷಗಟ್ಟಲೆ ಮುಸ್ಲಿಮ್ ನಿಂದನೆ ಮಾಡಿರುವುದು ವಾಸ್ತವ ಎಂಬ ಪ್ರತಿಕ್ರಿಯೆಗಳೂ ಸಿನ್ಹಾ ಅವರ ಈ ವಿಡಿಯೋ ಸಂಬಂಧದಲ್ಲಿ ವ್ಯಕ್ತವಾಗಿವೆ..

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...