ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಟೆಂಪೋ, ಧಾನ್ಯದ ಚೀಲಗಳನ್ನು ತುಂಬಿದ್ದ ಟ್ರೇಲರ್ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಯಾತ್ರಿಕರು ಸಾವನ್ನಪ್ಪಿ, 14 ಮಂದಿ ಗಾಯಗೊಂಡಿರುವ ಘಟನೆ ಭಾನುವಾರ ಮುಂಜಾನೆ ರಾಜಸ್ಥಾನದ ರಾಷ್ಟ್ರೀಯ ಹೆದ್ದಾರಿ 125 ರ ಜೋಧ್ಪುರ-ಬಾಲೇಸರ್ ಪ್ರದೇಶದಲ್ಲಿ ನಡೆದಿದೆ.
ಗುಜರಾತ್ನ ಬನಸ್ಕಂತ ಮತ್ತು ಧನ್ಸುರ ಪ್ರದೇಶಗಳಿಂದ ಸುಮಾರು 20 ಯಾತ್ರಿಕರನ್ನು ರಾಮದೇವ್ರಾಗೆ ಕರೆದೊಯ್ಯುತ್ತಿದ್ದ ಟೆಂಪೋಗೆ ವಿರುದ್ಧ ದಿಕ್ಕಿನಿಂದ ವೇಗವಾಗಿ ಬರುತ್ತಿದ್ದ ಟ್ರೇಲರ್ ಡಿಕ್ಕಿ ಹೊಡೆದಿದೆ ಎಂದು ಬಾಲೇಸರ್ ಎಸ್ಎಚ್ಒ ಮೂಲ್ಸಿಂಗ್ ಭಾಟಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಬೆಳಗಾವಿ : ಭೀಕರ ಅಪಘಾತ ಇಬ್ಬರು ಸಾವು
ಅಪಘಾತದಲ್ಲಿ ಮೂವರು ಮಹಿಳೆಯರು ಸೇರಿದಂತೆ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೃತದೇಹವನ್ನು ಬಾಲೇಸರ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಗಾಯಗೊಂಡ 14 ಮಂದಿಯನ್ನೂ ಅದೇ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಬಳಿಕ ಅಲ್ಲಿಂದ ಜೋಧ್ಪುರದ ಎಂಡಿಎಂ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಮೂಲ್ಸಿಂಗ್ ಭಾಟಿ ಮಾಹಿತಿ ನೀಡಿದ್ದಾರೆ.
ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.





