ಒಂದು ಜೀವವಾಗಿ ಟಾಟಾ ಗೌರವಾರ್ಹರು – ಆದರೆ…!

Date:

ಭಾರತದಂತಹ ಜಾತಿಗ್ರಸ್ತ ಸಮಾಜದಲ್ಲಿ ಮೇಲ್ಜಾತಿಯ ವ್ಯಕ್ತಿಯೊಬ್ಬ ತನ್ನ Social capital ಪ್ರಭಾವದಿಂದ ಬೃಹತ್ ಬಂಡವಾಳಶಾಹಿಯಾಗಿ ಬೆಳೆಯುವುದು ನಿಜಕ್ಕೂ ದೊಡ್ಡ ಸಾಧನೆ ಅಲ್ಲವೇ ಅಲ್ಲ. ಮೇಲ್ಜಾತಿಯಾದ ಕಾರಣಕ್ಕೆ ಹಾಗೂ ಸರ್ಕಾರದ ಸಖ್ಯವಿದ್ದ ಕಾರಣಕ್ಕೆ ದೇಶದ ಸಂಪನ್ಮೂಲಗಳ ಬಳಕೆಯಲ್ಲಿ bargain ಮಾಡಿಕೊಂಡು ಕೋಟಿ ಕೋಟಿ ಸಂಪಾದಿಸಿ, ಅದರಿಂದ ಒಂದಷ್ಟು ಜನಕ್ಕೆ ಉದ್ಯೋಗ ಹಾಗೂ ದೇಶದ ಉತ್ಪಾದನಾ ರಂಗಕ್ಕೆ ವೇಗ ಕೊಡುವುದೂ ಸಹ ದೊಡ್ಡಸ್ಥಿಕೆ ಏನಲ್ಲ. ಅದರಲ್ಲೂ ಕೃಷಿಕರೇ ಹೆಚ್ಚಿದ್ದ 60-90ರ ದಶಕದಲ್ಲಿ ದೇಶದ ಬೆನ್ನೆಲುಬಾಗಿದ್ದವರು ರೈತರೇ. ಈಗಲೂ ಸಹ ಭಾರತದ ಜಿಡಿಪಿಯಲ್ಲಿ ರೈತರು, ಕೂಲಿಕಾರ್ಮಿಕರು, ಅಸಂಘಟಿತ ಕಾರ್ಮಿಕರು ಹಾಗೂ MSMEಗಳ ಪಾಲೇ ಹೆಚ್ಚು. ಈ ಕೋಟ್ಯಾಧಿಪತಿ ಕಾರ್ಪೊರೇಟಿಗರು ಸೃಷ್ಟಿಸಿರುವ ಉದ್ಯೋಗ ತೀರ ಕಡಿಮೆ. ಆದರೆ, ಗಳಿಸಿರುವ ಲಾಭ ಬೆಟ್ಟದಷ್ಟು. ಭಾರತದ ಒಂದೆರಡು ವರ್ಷದ ಬಜೆಟ್ಟಿಗೆ ಸಮನಾಗುವಷ್ಟು.

ಇಂತಹ ಬಂಡವಾಳಶಾಹಿಗಳು ಯಾವುದೇ ಕಾಲವಿರಲಿ, ಮತ್ತಷ್ಟು ಬಲಿತು ಬೆಳೆಯುತ್ತಾರೆಯೇ ಹೊರತು ಇಳಿಯುವುದಿಲ್ಲ. ಕಳೆದ ದಶಕದಲ್ಲಿ ಅಂಬಾನಿ-ಅದಾನಿಗಳು ಟಾಟಾ-ಬಿರ್ಲಾರನ್ನು replace ಮಾಡಿದರೇ ಹೊರತು ದೇಶದ ಬಡತನ, ಜಾತೀಯತೆ, ಪುರುಷಾಧಿಪತ್ಯ ಕಡಿಮೆ ಮಾಡುವಲ್ಲಿ ಇವರ ಪಾಲೇನೂ ಇಲ್ಲ. ಬದಲಾಗಿ ಅದನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಇವರ ಕಾಣಿಕೆ ಸಾಕಷ್ಟಿದೆ.

ಈ ವರದಿ ಓದಿದ್ದೀರಾ?: ʼಈ ದಿನʼ ವಿಶ್ಲೇಷಣೆ | ಹರಿಯಾಣ ಚುನಾವಣೆ ಕಾಂಗ್ರೆಸ್ ಕೈ ತಪ್ಪಿದ್ದೇಕೆ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಅತಿ ಶ್ರೀಮಂತರು ತಾವು ಅಕ್ರಮವಾಗಿ ಗಳಿಸಿದ (ಅವರು ಗಳಿಸಿರುವ ಎಲ್ಲವೂ ಅಕ್ರಮವೇ) ಪ್ರತಿ ನೂರು ರೂಪಾಯಿಯಲ್ಲಿ ಒಂದು ಪೈಸೆಯನ್ನು ತಮ್ಮದೇ ಹೆಸರಿನ ಚಾರಿಟಿಯಿಂದ ಸಮಾಜದ ಪ್ರಗತಿಗೆ ದೇಣಿಗೆಯಾಗಿ ನೀಡುತ್ತಾ ಉಳಿದಂತೆ ಮಿಗುತಾಯವಾದ 99.99 ರೂಪಾಯಿ ಬೆವರಿಲ್ಲದ ಲಾಭವನ್ನು ಜೇಬಿಗೆ ಹಾಕಿಕೊಂಡಿರುವುದನ್ನು ಮರೆಮಾಚಿಸುತ್ತಾರೆ. ಸಾಮಾನ್ಯ ಜನರ ಬಾಯಲ್ಲಿ ದೇವರಾಗಿ ಬಿಡುತ್ತಾರೆ. ಆದರೆ, ಪ್ರಜ್ಞಾವಂತರು ಈ ಖೆಡ್ಡಾಕೆ ಬೀಳಬಾರದು. ಏಕೆಂದರೆ, ಇಂದಿಗೂ direct tax ಕಡಿಮೆ‌ ಕಟ್ಟುವುದು ಉದ್ಯಮಿಗಳೇ. indirect tax ಹೆಚ್ಚು ಕಟ್ಟುವುದು ಬಡವರೇ.

ಒಂದು ಜೀವವಾಗಿ ಟಾಟಾ ಗೌರವಾರ್ಹರು. ಆದರೆ, ಉದ್ಯಮಿಯಾಗಿ ದುಡಿವ ಜನರ ಬೆವರಿನ ಪಾಲನ್ನು ಕಿತ್ತುಕೊಂಡು ತಮ್ಮ ಜೇಬಿಗೆ ಹಾಕಿಕೊಂಡು ಐಷಾರಾಮಿ ಜೀವನ ಸಾಗಿಸಿದ, ಶ್ರಮಿಕರನ್ನು ಶೋಷಿಸಿದ, ದೇಶದ ಬಡತನವನ್ನು ಹೆಚ್ಚಿಸಿದ ಬಂಡವಾಳಶಾಹಿ ಎಂಬುದನ್ನು ನಾವು ಮರೆಯಬಾರದು.

ಪೋಸ್ಟ್ ಹಂಚಿಕೊಳ್ಳಿ:

ವಿಕಾಸ್ ಮೌರ್ಯ
ವಿಕಾಸ್ ಮೌರ್ಯ
ವಿಜ್ಞಾನ ಶಿಕ್ಷಕ, ಬರಹಗಾರ, ಹೋರಾಟಗಾರ. ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ತನ್ನ ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವವರು. ಲೇಖನಗಳ ಸಂಗ್ರಹ 'ಚಮ್ಮಟಿಕೆ', 'ನೀಲವ್ವ' ಎಂಬ ಕಥಾಸಂಕಲನ ಪ್ರಕಟ. ಆಫ್ರಿಕನ್ ಅಮೆರಿಕನ್ ಬರಹಗಾರ ಫೆಡರಿಕ್ ಡಾಗ್ಲಾಸ್ ನ ಆತ್ಮಕಥೆಯನ್ನು 'ಕಪ್ಪು ಕುಲುಮೆ' ಎಂಬ ಹೆಸರಿನಲ್ಲಿ ಕನ್ನಡೀಕರಿಸಿದ್ದಾರೆ. 'ಸಾವಿತ್ರಿ ಬಾಯಿ ಫುಲೆ ಮತ್ತು ನಾನು' ಎಂಬ ಅನುವಾದಿತ ಕೃತಿ ಹಾಗೂ ಎಲಿನಾರ್ ಝೆಲಿಯೇಟ್ ಅವರ 'Ambedkar's World: The making of Babasaheb Ambedkar and the Dalit movement' ಕೃತಿಯನ್ನು 'ಅಂಬೇಡ್ಕರ್ ಜಗತ್ತು' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ದಲಿತ ಸಂವೇದನೆಯನ್ನು ಅಕ್ಷರಮುಖಿ ನಿರ್ವಚನದ ಆಚೆಗೂ ಪಡಿಮೂಡಿಸುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...