ಪ್ರಯಾಗ್ರಾಜ್ನ ಮಾಘ ಮೇಳ ಆವರಣದಲ್ಲಿ ಪೊಲೀಸರು ಮತ್ತು ಜ್ಯೋತಿರ್ ಮಠ ಮುಖ್ಯಸ್ಥ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದರ ಸುಮಾರು 200 ಅನುಯಾಯಿಗಳ ನಡುವೆ ತೀವ್ರ ವಾಗ್ವಾದ ನಡೆದಿದೆ. ಇದಾದ ಬಳಿಕ ಮೂರು ಗಂಟೆಗಳಿಗೂ ಹೆಚ್ಚು ಕಾಲ ಉದ್ವಿಗ್ನತೆ ಉಂಟಾಗಿದೆ. ಶಂಕರಾಚಾರ್ಯರ ಅನುಯಾಯಿಗಳು ರಥ ಸಂಗಮದ ಕಡೆಗೆ ಕರೆದೊಯ್ಯಲು ಪ್ರಯತ್ನಿಸಿದ್ದು, ಈ ವೇಳೆ ಗಲಾಟೆ ನಡೆದಿದೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಅಧಿಕಾರಿಯೊಬ್ಬರು, “ಶಂಕರಾಚಾರ್ಯ ಸ್ವಾಮಿ ರಥದಲ್ಲಿ (ಪಾಲ್ಕಿ) ಸುಮಾರು 200 ಅನುಯಾಯಿಗಳೊಂದಿಗೆ ಸಂಗಮ ಕಡೆಗೆ ಚಲಿಸಲು ಪ್ರಯತ್ನಿಸಿದರು. ಪೊಲೀಸರು ಅವರನ್ನು ತಡೆದಾಗ, ಅವರು ದೀರ್ಘಕಾಲ ತಿರುಗುವ ಮಾರ್ಗದಲ್ಲಿ ನಿಂತಿದ್ದರು. ಮೌನಿ ಅಮವಾಸ್ಯೆಯ ಸಂದರ್ಭದಲ್ಲಿ ಸಂಗಮ ಬಳಿ ಭಕ್ತರ ದಟ್ಟಣೆ ಇದ್ದುದರಿಂದ, ಶಂಕರಾಚಾರ್ಯ ಸ್ವಾಮಿ ಮತ್ತು ಅವರ ಅನುಯಾಯಿಗಳು ತಡೆಗೋಡೆಗಳನ್ನು ಮುರಿದು ಗದ್ದಲ ಸೃಷ್ಟಿಸಿದರು” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಮನಮೋಹನ್ ಸಿಂಗ್ ಎಂಬ ‘ಕುರಿಮರಿ’ಯ ಮುಂದೆ ಸೋತಿದ್ದ ‘ಉಕ್ಕಿನ ಮನುಷ್ಯ’ ಆಡ್ವಾಣಿ
ಪೊಲೀಸರು ಶಂಕರಾಚಾರ್ಯ ಮತ್ತು ಅನುಯಾಯಿಗಳನ್ನು ಸಂಗಮದ ಕಡೆಗೆ ಹೋಗುವಂತೆ ಪದೇ ಪದೇ ಹೇಳಿದರು. ಆದರೆ ಅವರು ಮಾತು ಕೇಳಿಲ್ಲ. ರಥದಲ್ಲೇ ಸಂಗಮದ ಕಡೆಗೆ ಹೋಗುವುದಾಗಿ ವಾದಿಸಿದರು ಎಂದು ಹೇಳಲಾಗಿದೆ. ಈ ವೇಳೆ ಸ್ವಾಮಿ ಅವಿಮುಕ್ತೇಶ್ವರಾನಂದರ ಸಿಟ್ಟಿಗೆದ್ದು ಪೊಲೀಸರೊಂದಿಗೆ ವಾದಿಸಿದ್ದಾರೆ. ಒರಟಾಗಿ ನಡೆದುಕೊಂಡು ತೀವ್ರ ವಾಗ್ವಾದ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕೊನೆಗೆ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಪವಿತ್ರ ಸ್ನಾನ ಮಾಡದೆಯೇ ಹಿಂತಿರುಗಿದ್ದಾರೆ.





