ಕರಡಿಯದ್ದೇ ದರ್ಬಾರು! 3%ರಷ್ಟು ಕುಸಿತ ಕಂಡ ಷೇರು ಮಾರುಕಟ್ಟೆ

Date:

ಕಳೆದ ಎರಡು ದಿನಗಳಲ್ಲಿ ಗೂಳಿ ಹಾಗೂ ಕರಡಿಯಾಟದಲ್ಲಿ ಕರಡಿಯಾಟವೇ ಜೋರಾಗಿದೆ. ನಿಫ್ಟಿ ಮತ್ತು ಸೆನ್ಸೆಕ್ಸ್ ಸರಾಸರಿ 4% ಕುಸಿತದಿಂದ ಮುಕ್ತಾಯಗೊಂಡಿರುವ ಷೇರು ಮಾರುಕಟ್ಟೆಯು ಇನ್ನೂ ಮೂರ್ನಾಲ್ಕು ದಿನಗಳ ತನಕ ಇದೇ ವಾತಾವರಣ ಇರಲಿದೆ ಎಂದು ಷೇರು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಇಂದು ಸೆನ್ಸೆಕ್ಸ್ ಶೇ.2.74ರಷ್ಟು ಕುಸಿದು 78,759ಕ್ಕೆ ಮತ್ತು ನಿಫ್ಟಿ ಶೇ.2.68ರಷ್ಟು ಕುಸಿದು 24,055ಕ್ಕೆ ತಲುಪಿದೆ. ಒಟ್ಟು ಮಾರುಕಟ್ಟೆಯಲ್ಲಿ 3,084 ಕಂಪನಿಗಳ ಷೇರುಗಳು ಕುಸಿತ ಕಂಡಿವೆ. ಅಮೆರಿಕ ಮಾರುಕಟ್ಟೆಯ ಕುಸಿತದ ಕಾರಣಕ್ಕೆ ಏಷ್ಯನ್ ಮಾರುಕಟ್ಟೆಗಳೂ ಗಣನೀಯ ಹಿನ್ನಡೆ ಕಂಡಿವೆ. ಜಪಾನ್ ಮಾರುಕಟ್ಟೆಯ ನಿಕ್ಕಿ ಸೂಚ್ಯಂಕವು 1987 ರ ಬಳಿಕ ಅತಿ ದೊಡ್ಡ ಕುಸಿತಕ್ಕೆ ಸಾಕ್ಷಯಾಗಿದೆ.

ಭಾರತೀಯ ಮಾರುಕಟ್ಟೆಯ ನಿಫ್ಟಿ-50ರಲ್ಲಿ HUL-0.87%, Nestle-0.63%, HDFC Life-0.49% ಹಾಗೂ Tataconsumer product-0.48% ಮಾತ್ರ ಆಮೆಯ ಜಿಗಿತ ಕಂಡರೆ, ಉಳಿದಂತೆ TATA Motors-7.31%, ONGC-6.01%, Adani Ports-5.93%, TATA Steel- 5.31% ಹಾಗು Hindalco, Power Grid corp, SBI, Maruti Suzuki ಸೇರಿದಂತೆ ಇನ್ನುಳಿದ ಎಲ್ಲವೂ 4% ಕುಸಿತದೊಂದಿಗೆ 24,055.60 ಅಂಕಕ್ಕೆ ಮುಕ್ತಾಯ ಕಂಡಿದೆ.

ಸೆನ್ಸೆಕ್ಸ್ ನ ಮೊದಲ 30 ಕಂಪನಿಗಳಲ್ಲಿ 2ಕಂಪನಿಗಳು ಮಾತ್ರ ಸಕಾರಾತ್ಮಕ ಮುನ್ನಡೆ ಕಂಡರೆ, ಉಳಿದ 28 ಕಂಪನಿಗಳು ನಕಾರಾತ್ಮಕ ಹಿನ್ನಡೆಯಿಂದ ಕುಸಿದು, ಸುಮಾರು 2,222.55 ಅಂಕಗಳ ನಷ್ಟದಲ್ಲಿ 2.74% ನಷ್ಟದಲ್ಲಿ ಮುಕ್ತಾಯ ಕಂಡಿದೆ. ಇಸ್ರೇಲ್ ಮತ್ತು ಹಮಾಸ್ ಯುದ್ಧಗಳ ಕಾರಣದಿಂದ ಹಾಗೂ ಅಮೆರಿಕದಲ್ಲಿ ತಲೆದೂರಿರುವ ನಿರುದ್ಯೋಗದ ಪ್ರಭಾವ ಮತ್ತು ಜಪಾನ್ ದೇಶ ತೆಗೆದುಕೊಂಡಿರುವ ಕೆಲವು ಆರ್ಥಿಕ ತೀರ್ಮಾನಗಳ ಕಾರಣಕ್ಕೆ ಷೇರು ಮಾರುಕಟ್ಟೆಯ ಕುಸಿತ ಹೀಗೆ ಮುಂದುವರೆಯುತ್ತದೆ ಎನ್ನುವುದು ಷೇರು ತಜ್ಞರ ಅಭಿಪ್ರಾಯವಾಗಿದೆ.

WhatsApp Image 2024 07 10 at 12.02.28 9cc67b36 e1720593263863
ರಜಿನಿಕಾಂತ್ ಚಟ್ಟೇನಹಳ್ಳಿ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...