ಇಂದಿನ ಅಘೋಷಿತ ತುರ್ತುಪರಿಸ್ಥಿತಿಯ ಬುಡಮೇಲು ಬಹು ಕಠಿಣ; ಚಿಂತಕ ಆಶೀಶ್ ನಂದಿ

Date:

‘ದೇಶದಲ್ಲಿ ಈಗ ಜಾರಿಯಲ್ಲಿರುವ ತುರ್ತುಪರಿಸ್ಥಿತಿಯನ್ನು ಬುಡಮೇಲು ಮಾಡುವುದು ಬಹು ಕಠಿಣ’ ಎಂದು ಹಿರಿಯ ಚಿಂತಕ ಆಶೀಶ್ ನಂದಿ ಹೇಳಿದ್ದಾರೆ.

50 ವರ್ಷಗಳ ಹಿಂದೆ ಇಂದಿರಾಗಾಂಧೀ ಅವರು ಹೇರಿದ್ದು ಘೋಷಿತ ತುರ್ತುಪರಿಸ್ಥಿತಿ. ಆದರೆ ಇಂದು ಜಾರಿಯಲ್ಲಿರುವುದು ಆಘೋಷಿತ ತುರ್ತುಪರಿಸ್ಥಿತಿ. ಅಘೋಷಿತ ತುರ್ತುಪರಿಸ್ಥಿತಿಯನ್ನು ಬುಡಮೇಲು ಮಾಡುವುದು ಘೋಷಿತ ತುರ್ತುಪರಿಸ್ಥಿತಿಯ ವಿರುದ್ಧ ಹೋರಾಡಿದಷ್ಟು ಸುಲಭ ಅಲ್ಲ ಎಂದು ಅವರು ಬುಧವಾರ ದೆಹಲಿಯಲ್ಲಿ ವಿವರಿಸಿದ್ದಾರೆ.

ಸುಗತ ಶ್ರೀನಿವಾಸರಾಜು ಅವರು ತುರ್ತುಪರಿಸ್ಥಿತಿಯ ಕುರಿತು ಬರೆದಿರುವ ಪುಸ್ತಕ The Conscience Network ನ ಬಿಡುಗಡೆ ಸಮಾರಂಭದಲ್ಲಿ ಅವರು ಭಾಗವಹಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈಗ ನಾವಿರುವುದು ಅತ್ಯಂತ ಕೇಡಿನ ಸ್ಥಿತಿ. ಇಂದಿರಾಗಾಂಧೀ ಹೇರಿದ ತುರ್ತುಪರಿಸ್ಥಿತಿ ಅತೀವ ಒರಟು ಮತ್ತು ಹಸಿಬಿಸಿಯಿಂದ ಕೂಡಿತ್ತು. ಅದನ್ನು ಭೇದಿಸುವುದು ಕಠಿಣ ಕಾರ್ಯವೇನೂ ಆಗಿರಲಿಲ್ಲ. ಹೀಗಾಗಿಯೇ ಅದು ಕೇವಲ ಎರಡೇ ವರ್ಷಗಳಲ್ಲಿ ಕುಸಿದು ಬಿತ್ತು. ಹಾಲಿ ತುರ್ತುಪರಿಸ್ಥಿತಿಯು ಹೆಚ್ಚು ಕುತಂತ್ರಿಯೂ ಕುಟಿಲವೂ ಆದದ್ದು. ಹೀಗಾಗಿ ಅದನ್ನು ಸೋಲಿಸುವುದು ಸುಲಭವಲ್ಲ ಎಂದು ಅವರು ಹೇಳಿದರು.

‘ಇಂಡಿಯನ್ಸ್ ಫಾರ್ ಡೆಮಕ್ರಸಿ’ ಎಂಬ ಸಂಘಟನೆಯ ಮೂಲಕ ಅಮೆರಿಕೆಯ ಅಂದಿನ ಆದರ್ಶವಾದಿ ಯುವ ಅನಿವಾಸಿ ಭಾರತೀಯರು ಇಂದಿರಾ ಅವರ ತುರ್ತುಪರಿಸ್ಥಿತಿಯ ವಿರುದ್ಧ ಕಟ್ಟಿದ ದಿಟ್ಟ ಹೋರಾಟದ ಕತೆಯೇ ಸುಗತ ಅವರ ಹೊಸ ಕೃತಿಯ ಜೀವಾಳ.  

ಕ್ಯಾಲಿಫೋರ್ನಿಯ, ಶಿಕಾಗೋ, ನ್ಯೂಯಾರ್ಕ್ ನಿಂದ ಹಲವಾರು ಮಂದಿ ಭಾರತೀಯರು ಒಟ್ಟಾಗಿ ಭಾರತದಲ್ಲಿನ  ಸರ್ವಾಧಿಕಾರದ ಕರಾಳ ಆಡಳಿತದ ವಿರುದ್ಧ ವಿದೇಶೀ ನೆಲದಲ್ಲಿ ಹೋರಾಡಿದರು. ನಾವು ಭಾರತಕ್ಕೆ ಹಿಂದಿರುಗಿ ಅರ್ಥಪೂರ್ಣ ಕೆಲಸದಲ್ಲಿ ತೊಡಗುವುದಿದ್ದಲ್ಲಿ ಅದು ಜನತಂತ್ರ ವ್ಯವಸ್ಥೆಯಿದ್ದರೆ ಮಾತ್ರ ಸಾಧ್ಯ ಎಂಬ ನಂಬಿಕೆ ನಮ್ಮ ಹೋರಾಟದ ಹಿಂದಿತ್ತು ಎಂದು ಹಿರಿಯ ಹೋರಾಟಗಾರ ಎಸ್.ಆರ್.ಹಿರೇಮಠ ಈ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಹೇಳಿದರು. ಅಂದು ಅಮೆರಿಕೆಯಲ್ಲಿ ಜರುಗಿದ ಹೋರಾಟದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಆ ಹೋರಾಟದಲ್ಲಿ ಹೆಗಲೆಣೆಯಾಗಿ ದುಡಿದಿದ್ದ ರವಿ ಛೋಪ್ರ ಮತ್ತು ಆನಂದಕುಮಾರ್ ಅವರೂ ಈ ಸಭೆಯಲ್ಲಿದ್ದರು.

ಅಂತಾರಾಷ್ಟ್ರೀಯ ಅಭಿಪ್ರಾಯಕ್ಕೆ ಸೂಕ್ಷ್ಮಮತಿಯಾಗಿದ್ದ ಇಂದಿರಾಗಾಂಧೀ ಅವರು, ಅಂತಾರಾಷ್ಟ್ರೀಯ ಒತ್ತಡದ ಕಾರಣಕ್ಕಾಗಿಯೇ ತುರ್ತುಪರಿಸ್ಥಿತಿಯನ್ನು ಕೊನೆಗೊಳಿಸಿ ಲೋಕಸಭೆಗೆ ಚುನಾವಣೆಗಳನ್ನು ಘೋಷಿಸಿದರು ಎಂಬ ಭಾವನೆ ವ್ಯಾಪಕವಾಗಿ ನೆಲೆಸಿದೆ. ಇಂತಹ ವ್ಯಾಪಕ ಅಂತಾರಾಷ್ಟ್ರೀಯ ಒತ್ತಡವನ್ನು ಸೃಷ್ಟಿಸಿದವರು ವಿದೇಶಗಳಲ್ಲಿ ನೆಲೆಸಿದ್ದ ಅತ್ಯಂತ ಸಾಧಾರಣ ಭಾರತೀಯರು. ಅವರು ಅಲ್ಲಿಗೆ ಹೋಗಿದ್ದ ಉದ್ದೇಶ ರಾಜಕಾರಣ ಮಾಡುವುದಲ್ಲ. ಆದರೆ ಭಾರತದಲ್ಲಿನ ತುರ್ತುಪರಿಸ್ಥಿತಿ ಕುರಿತು ಮೂಕಪ್ರೇಕ್ಷಕರಾಗಿ ಕೈ ಕಟ್ಟಿ ಕುಳಿತುಕೊಳ್ಳುವುದು ಅವರಿಂದ ಆಗಲಿಲ್ಲ. ಹೀಗಾಗಿ ಪ್ರತಿರೋಧದ ಸಮಾನಾಂತರ ಚರಿತ್ರೆಯನ್ನು ಸೃಷ್ಟಿಸಿದರು ಎಂದು The Conscience Network ನ ಕರ್ತೃ ಸುಗತ ಶ್ರೀನಿವಾಸರಾಜು ವಿವರಿಸಿದರು.

ಹಿರಿಯ ಪತ್ರಕರ್ತೆ ನೀರಜಾ ಚೌಧರಿ, ಸಾಮಾಜಿಕ-ರಾಜಕೀಯ ಹೋರಾಟಗಾರರಾದ ಡುನು ರಾಯ್, ಸುಹಾಸ್ ಬೋರ್ಕರ್ ಅವರೂ ಈ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...