ಖ್ಯಾತ ಬಾಣಸಿಗ ಕುನಾಲ್ ಕಪೂರ್ಗೆ ವಿಚ್ಛೇದನಕ್ಕೆ ಅನುಮತಿ ನೀಡಿದ್ದ ದೆಹಲಿ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್ವಿಎನ್ ಭಟ್ಟಿ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠವು ವಿಚ್ಛೇದನಕ್ಕೆ ತಡೆ ನೀಡಿದ್ದು ಇತ್ಯರ್ಥ ಮಾಡಿಕೊಳ್ಳಲು ಸಾಧ್ಯವೆ ಎಂದು ನೋಡಲು ತಿಳಿಸಿದೆ.
ದೆಹಲಿ ಹೈಕೋರ್ಟ್ ಈ ವರ್ಷದ ಏಪ್ರಿಲ್ನಲ್ಲಿ ಕಪೂರ್ಗೆ ವಿಚ್ಛೇದನವನ್ನು ಮಂಜೂರು ಮಾಡಿದೆ. ಪತ್ನಿಯು ಕುನಾಲ್ ಮೇಲೆ ದೌರ್ಜನ್ಯ ಎಸಗುತ್ತಾರೆ ಎಂದು ಆರೋಪಿಸಲಾಗಿದ್ದು, ಮಹಿಳೆಯ ವರ್ತನೆಯು “ಗೌರವ ಮತ್ತು ಸಹಾನುಭೂತಿಯಿಂದ ದೂರವಿದೆ” ಎಂದು ದೆಹಲಿ ಹೈಕೋರ್ಟ್ ಹೇಳಿತ್ತು.
“ಒಬ್ಬ ಸಂಗಾತಿಯು ಇನ್ನೊಬ್ಬರ ಬಗ್ಗೆ ಗೌರವವಿಲ್ಲದ ಸ್ವಭಾವವನ್ನು ಹೊಂದಿರುವಾಗ ಅದು ವಿವಾಹವೆಂಬ ಮೂಲ ತತ್ವಕ್ಕೆ ಕಳಂಕವನ್ನು ತರುತ್ತದೆ. ಸಂಕಟದಲ್ಲಿ ಜೊತೆಯಾಗಿ ಬದುಕುವಂತೆ ಒತ್ತಾಯ ಮಾಡಲಾಗದು” ಎಂದೂ ಹೈಕೋರ್ಟ್ ಅಭಿಪ್ರಾಯಿಸಿತ್ತು.
ಇದನ್ನು ಓದಿದ್ದೀರಾ? ಪುಟಿನ್ ಬಾಣಸಿಗ ಪ್ರಿಗೋಷಿನ್ ಯಾರು? ಪುಟಿನ್ ವಿರುದ್ಧವೇ ಬಂಡಾಯವೆದ್ದಿದ್ದೇಕೆ?
ದಂಪತಿಗಳು ಏಪ್ರಿಲ್ 2008ರಲ್ಲಿ ವಿವಾಹವಾಗಿದ್ದು ಓರ್ವ ಪುತ್ರನಿದ್ದಾನೆ.
ಕುನಾಲ್ ಕಪೂರ್ ‘ಮಾಸ್ಟರ್ ಚೆಫ್ ಇಂಡಿಯಾ’ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿದ್ದರು. ಕುನಾಲ್, “ನನ್ನ ಪತ್ನಿ ನನಗೆ ಮತ್ತು ನನ್ನ ಪೋಷಕರನ್ನು ಗೌರವಯುತವಾಗಿ ನೋಡಿಕೊಳ್ಳುವುದುಲ್ಲ” ಎಂದು ಆರೋಪಿಸಿದ್ದರು.
ಇದೇ ವೇಳೆ ಮಹಿಳೆ, ನ್ಯಾಯಾಲಯದ ದಾರಿತಪ್ಪಿಸಲು ಕುನಾಲ್ ಈ ರೀತಿ ಸುಳ್ಳು ಆರೋಪ ಮಾಡಿದ್ದಾರೆ ಎಂದು ಆರೋಪಿಸಿದ್ದರು.
Supreme Court stays Delhi High Court order granting divorce to chef Kunal Kapur
— Bar and Bench (@barandbench) July 30, 2024
Read story: https://t.co/Y751PntoQy pic.twitter.com/fQ0zsWIhkU




