ಹೋಳಿ ಹಬ್ಬದ ಸಂದರ್ಭದಲ್ಲಿ ಶುಭಕೋರಿದ್ದಕ್ಕಾಗಿ ದಲಿತ ಯುವಕನನ್ನು ಬ್ರಾಹ್ಮಣ ಕುಟುಂಬವೊಂದು ಇರಿದು ಕೊಂದಿರುವ ಘಟನೆ ಉತ್ತರ ಪ್ರದೇಶದ ಲಕ್ನೋದ ದುಬಗ್ಗಾ ಪ್ರದೇಶದಲ್ಲಿ ನಡೆದಿದೆ. ಮಾರ್ಚ್ 4ರಂದು ಘಟನೆ ನಡೆದಿದೆ ಎಂದು ವರದಿಯಾಗಿದೆ.
ದುಬಗ್ಗಾ ಪ್ರದೇಶದ ಬೆಗಾರಿಯಾ ಗ್ರಾಮದ ಸೂರಜ್ ಗೌತಮ್ ಜಾತಿಗ್ರಸ್ಥರ ಕ್ರೌರ್ಯಕ್ಕೆ ಬಲಿಯಾದ ದಲಿತ ಯುವಕ ಎಂದು ಗುರುತಿಸಲಾಗಿದೆ. ಸೂರಜ್ ತನ್ನ ನೆರೆಮನೆಯ ನಿವಾಸಿ ಮನೋರ್ ತಿವಾರಿಗೆ ‘ಹೋಳಿ ಹಬ್ಬದ ಶುಭಾಶಯಗಳು’ ಎಂದು ಹಾರೈಸಿದ್ದರೆಂದು ವರದಿಯಾಗಿದೆ.
ಸ್ಥಳೀಯರ ಮಾಹಿತಿಯ ಪ್ರಕಾರ, ಸೂರಜ್ ತನಗೆ ಶುಭಾಶಯ ತಿಳಿಸಿದ್ದಕ್ಕಾಗಿ ತಿವಾರಿ ಕೋಪಗೊಂಡರು. ಸೂರಜ್ ಜೊತೆ ಜಗಳಕ್ಕಿಳಿದರು.ಈ ವೇಳೆ, ತಿವಾರಿ ಅವರ ಸಹೋದರಿ ಶಿವಾನಿ ಮತ್ತು ತಾಯಿ ರಂಜನಾ ಕೂಡ ಗೌತಮ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಆರೋಪಿಸಲಾಗಿದೆ.
ನೈಟ್ಗೌನ್ ಧರಿಸಿದ್ದ ಶಿವಾನಿ, ಚಾಕು ಹೊರತೆಗೆದು ಗೌತಮ್ಗೆ ಮೂರು ಬಾರಿ ಇರಿದಿದ್ದಾರೆ. ಯುವಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಗಮಭೀರ ಗಾಯಗಳಿಂದ ಆತ ಸಾವನ್ನಪ್ಪಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ʼಕಾಂಕ್ರೀಟ್ʼ ಮಾಡುವ ಗಾಯಕ್ಕೆ ಜಪಾನಿ ʼಮಿಯಾವಾಕಿʼಯೇ ಮದ್ದು!
ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ; ಗೌತಮ್ ಅವರ ಕುಟುಂಬವು ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದೆ. ‘ಹ್ಯಾಪಿ ಹೋಳಿ’ ಎಂದು ಯಾರನ್ನಾದರೂ ಸ್ವಾಗತಿಸುವುದು ಕಾರಣಕ್ಕೆ ಕೊಲೆ ಮಾಡಬಹುದೇ? ಯಾವ ಪುಸ್ತಕವು ಅಂತಹ ಹಿಂಸಾಚಾರವನ್ನು ಸಮರ್ಥಿಸುತ್ತದೆ. ದಲಿತ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಈ ದಾಳಿ ನಡೆದಿದೆ ಎಂದು ಗೌತಮ್ ತಾಯಿ ಆರೋಪಿಸಿದ್ದಾರೆ.
ಮಾಹಿತಿ ಪಡೆದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ತಿವಾರಿ, ಶಿವಾನಿ ಹಾಗೂ ರಂಜನಾ ಅವರನ್ನು ಬಂಧಿಸಿದ್ದಾರೆ.




