ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

Date:

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ…ಇನ್ನು ಕೆಲವರ ಕೆಲಸ ಕಾರ್ಯ ತೀವ್ರ ನಿರಾಸೆ ಹುಟ್ಟಿಸುತ್ತದೆ’ ಎಂದು ಸುಪ್ರೀಮ್ ಕೋರ್ಟ್ ಮುಖ್ಯ ನ್ಯಾಯಮೂರ್ತಿ(CJI) ಬಿ.ಆರ್.ಗವಾಯಿ ಹೇಳಿದ್ದಾರೆ.

‘ಸರ್ವರಿಗೂ ನ್ಯಾಯ ಸಲ್ಲಿಸುವುದು ಹೇಗೆ- ಕಾನೂನು ನೆರವು ಮತ್ತು ಮಧ್ಯಸ್ಥಿಕೆ: ವಕೀಲರು ಮತ್ತು ಜಡ್ಜುಗಳು ಜೊತೆಗೂಡಿ ವಹಿಸಬೇಕಿರುವ ಪಾತ್ರ’ ಎಂಬ ವಿಷಯ ಕುರಿತು ಸುಪ್ರೀಮ್ ಕೋರ್ಟ್ ವಕೀಲರ ಸಂಘ ಏರ್ಪಡಿಸಿರುವ ಉಪನ್ಯಾಸ ಮಾಲೆಯ ಉದ್ಘಾಟನಾ ಭಾಷಣ ಮಾಡಿದರು ಗವಾಯಿ.

‘ಜಗತ್ತಿನ ಬಹುದೊಡ್ಡ ಜನತಂತ್ರದಲ್ಲಿ (ಭಾರತ) ನ್ಯಾಯವೆಂಬುದು ಇತ್ತೀಚಿನವರೆಗೆ ಉಳ್ಳವರ ಕೈಗೆಟುಕುವ ವಿಶೇಷಾಧಿಕಾರವಾಗಿತ್ತು. ಕಾನೂನು ಶುಲ್ಕಗಳು ಕಕ್ಷಿದಾರರ ಮಾಸಿಕ ವೇತನಗಳಿಗೆ ಗ್ರಹಣ ಹಿಡಿಸುತ್ತವೆ, ವಿಧಿವಿಧಾನಗಳು ಇನ್ನೂ ಕೋಟಿ ಕೋಟಿ ಅನಕ್ಷರರ ದೇಶದಲ್ಲಿ ಸಾಕ್ಷರತೆಯನ್ನು ಬೇಡುತ್ತವೆ. ಕೋರ್ಟ್ ಹೌಸ್ ಕಾರಿಡಾರ್ ಗಳು ಕಕ್ಷಿದಾರರನ್ನು ಸ್ವಾಗತಿಸುವ ಬದಲಿಗೆ ಭಯಗೊಳಿಸಿ ಬೆಚ್ಚಿಬೀಳಿಸುತ್ತವೆ. ಯಾವ ಜನರ ಸೇವೆಗೆಂದು ಈ ನ್ಯಾಯದೇಗುಲಗಳನ್ನು ಕಟ್ಟಲಾಗಿದೆಯೋ, ಆ ಜನರ ಪ್ರವೇಶವೇ ದುಸ್ಸಾಧ್ಯ ಎನಿಸುವಂತೆ ಅವುಗಳ ಬಾಗಿಲುಗಳನ್ನು ತೀರಾ ಕಿರಿದು ಮಾಡಿ ಇಡಲಾಗಿದೆ. ತಮ್ಮ ದೂರುದುಮ್ಮಾನಗಳನ್ನು ಇಬ್ಬದಿಗಳೂ ಹೇಳಿಕೊಳ್ಳುವ ಅವಕಾಶವಿರಬೇಕು. ಆದರೆ ಒಂದೇ ಬದಿಯವರು (ಉಳ್ಳವರು) ಮಾತ್ರವೇ ಕೋರ್ಟಿನ ಕದ ಬಡಿಯುವುದು ಸಾಧ್ಯವೆನಿಸಿದೆ. ಹೀಗಾದರೆ ನ್ಯಾಯದ ತಕ್ಕಡಿ ಮೇಲೆದ್ದು ಸಮವಾಗಿ ತೂಗುವುದಾದರೂ ಹೇಗೆ’ ಎಂದು ಗವಾಯಿ ಪ್ರಶ್ನಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿ ಯುಗಧರ್ಮ | ಚುನಾವಣಾ ಆಯೋಗದ ಕುರಿತು ಎತ್ತಲಾದ ಪ್ರಶ್ನೆಗಳು; ಈಗ ಕಳ್ಳತನದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದೀರಾ?

‘ವಿಳಂಬವಾಗಿ ದೊರೆಯುವ ನ್ಯಾಯವು, ನ್ಯಾಯ ನಿರಾಕರಣೆ ಮಾಡಿದಂತೆಯೇ ಸರಿ. ನ್ಯಾಯನೀಡಿಕೆ ಸಕಾಲಕ್ಕೆ ಆಗಬೇಕು. ಹೀಗಾಗಿ ಮೊಕದ್ದಮೆಗಳ ವಿಚಾರಣೆ ಬಾಕಿಯು ಬೆಟ್ಟದಂತೆ ಬೆಳೆಯುವುದು ನ್ಯಾಯ ನೀಡಿಕೆಯ ನಿರಾಕರಣೆಗೆ ದಾರಿ ಮಾಡಿಕೊಡುತ್ತಿದೆ’ ಎಂದೂ ಅವರು ಹೇಳಿದ್ದಾರೆ.

‘ವಕೀಲರು ಮತ್ತು ನ್ಯಾಯಾಧೀಶರು ಸದುದ್ದೇಶ ಉಳ್ಳವರೇ ಆಗಿದ್ದಾರೆ. ಆದರೆ ವಿಳಂಬ ಉಂಟಾಗುವ ಪದ್ಧತಿಗಳನ್ನೇ ಅನುಸರಿಸಿದ್ದಾರೆ. ಮುಂದೂಡಿಕೆಯ ವಿನಂತಿಗಳು ವಿರಳವಾಗಿರಬೇಕು, ಆದರೆ ನಿತ್ಯ ವಿಚಾರಣೆಯ ಭಾಗವೇ ಆಗಿ ಹೋಗಿವೆ’ ಎಂದಿದ್ದಾರೆ. 

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...