ಭಾರತೀಯರ ವಿರುದ್ಧದ ಜನಾಂಗೀಯ ಪೋಸ್ಟ್‌ಗಳಲ್ಲಿ ವೈರಲ್ ಆಗುತ್ತಿರುವ ರಾಜೇಂದ್ರ ಪಾಂಚಾಲ್ ಯಾರು?

Date:

ಭಾರತೀಯರ ವಿರುದ್ಧ ಪಾಶ್ಚಿಮಾತ್ಯ ದೇಶಗಳ ಕೆಲವು ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಜಾನಾಂಗೀಯ ದ್ವೇಷದ ಪೋಸ್ಟ್‌ಗಳು ಹೆಚ್ಚಾಗಿ ಪ್ರಕಟವಾಗುತ್ತಿವೆ. ಆ ಪೋಸ್ಟ್‌ಗಳು ಭಾರತೀಯರನ್ನು ಅವಹೇಳನಕಾರಿ, ದ್ವೇಷ ಹಾಗೂ ಅಪಹಾಸ್ಯ ಮಾಡುತ್ತಿವೆ. ಭಾರತೀಯರ ವಿರುದ್ಧ ವರ್ಣಭೇದ ನೀತಿಯನ್ನು ಅನುಸರಿಸುತ್ತಿವೆ. ಅಂತಹ ಪೋಸ್ಟ್‌ಗಳಲ್ಲಿ ಓರ್ವ ಭಾರತೀಯನ ಚಿತ್ರವನ್ನು ಅಗಾಧವಾಗಿ ಬಳಸಿಕೊಳ್ಳಲಾಗುತ್ತಿದೆ. ಆತನನ್ನೂ ಸೇರಿದಂತೆ ಭಾರತೀಯರನ್ನು ನಿಂದಿಸಲಾಗುತ್ತಿದೆ.

ವರ್ಣಬೇಧ ನೀತಿಅನ್ನು ಅನುಸರಿಸುವ ಖಾತೆಗಳಲ್ಲಿ ಹಂಚಿಕೊಳ್ಳಲಾಗಿರುವ ಪೋಸ್ಟ್‌ಗಳಲ್ಲಿ ಕಾಣುವ ಚಿತ್ರವು ಪುಣೆಯ ರಾಜೇಂದ್ರ ಪಾಂಚಾಲ್ ಅವರದ್ದು. ಅವರು ಕೇವಲ ಒಂದು ವರ್ಷ ವಯಸ್ಸಿನವರಿದ್ದಾಗ, ನಡೆಯಲು ಆರಂಭಿಸಿದ್ದ ದಿನಗಳಲ್ಲಿ ಅವರು ಆಯತಪ್ಪಿ ಬಿದ್ದಿದ್ದರು. ಆಗ, ಅವರ ದವಡೆಗೆ ಗಂಭೀರವಾಗಿ ಪೆಟ್ಟುಬಿದ್ದಿತ್ತು. ಆ ಪೆಟ್ಟಿನಿಂದಾದ ಹಾನಿಯನ್ನು ಸರಿಪಡಿಸಿಕೊಳ್ಳಲು, ಅವರ ಆರ್ಥಿಕ ಪರಿಸ್ಥಿತಿಯಿಂದಾಗಿ ಉತ್ತಮ ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ, ಪಾಂಚಾಲ್‌ ಅವರ ದವಡೆಯು ಒಳಭಾಗಗಕ್ಕೆ ಬೆಸೆದುಕೊಂಡಿತು, ಅವರು ತಮ್ಮ ಬಾಯಿಯನ್ನು ಸರಿಸುಮಾರು 1.5 ಸೆಂ.ಮೀ ಗಿಂತ ಹೆಚ್ಚು ತೆರೆಯಲು ಸಾಧ್ಯವಾಗದ ಪರಿಸ್ಥಿತಿ ಉಂಟಾಯಿತು. ಇದನ್ನು, ಟೆಂಪೊರೊಮ್ಯಾಂಡಿಬ್ಯುಲರ್ ಜಾಯಿಂಟ್ (ಟಿಎಂಜೆ) ಆಂಕೈಲೋಸಿಸ್ ಎನ್ನುತ್ತಾರೆ.

ಕಳೆದ 38 ವರ್ಷಗಳಿಂದ ಪಾಂಚಾಲ್ ಅವರು ಘನ ಆಹಾರವನ್ನು ತಿನ್ನಲು ಸಾಧ್ಯವಾಗದೆ ಬಳಲುತ್ತಿದ್ದಾರೆ. ಅವರು ದ್ರವ ಮತ್ತು ಮೃದು ಆಹಾರ ಸೇವಿಸುತ್ತಲೇ ಬದುಕಿದ್ದಾರೆ. ಆಹಾರವನ್ನು ಸರಿಯಾಗಿ ಸೇವಿಸಲು ಸಾಧ್ಯವಾಗದ ಪರಿಸ್ಥಿತಿಯು ಅವರನ್ನು ಅಪೌಷ್ಟಿಕತೆಗೆ ದುಡಿತು. 2017ರಲ್ಲಿ, ಅವರು ಅಂತಿಮವಾಗಿ ಎಂ.ಎ ರಂಗೂನ್‌ವಾಲಾ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ಮತ್ತು ರಿಸರ್ಚ್ ಸೆಂಟರ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದರು. ಅಲ್ಲಿ ಅವರ ದವಡೆಯನ್ನು ಮರುಹೊಂದಿಸಲಾಯಿತು. ಮ್ಯಾಕ್ಸಿಲೊಫೇಶಿಯಲ್ ಸರ್ಜನ್ ಡಾ ಸಮೀರ್ ಗಾರ್ಡೆ ಅವರು ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಇದು ಅಪರೂಪದ ಪ್ರಕರಣ. ಸಾಮಾನ್ಯವಾಗಿ ಈ ರೀತಿಯ ಸಮಸ್ಯೆ ಇದ್ದಾಗ, ಹೆಚ್ಚು ವಿಳಂಬವಿಲ್ಲದೆ ಚಿಕಿತ್ಸೆ ನೀಡಲಾಗುತ್ತದೆ. ಆದರೆ, ಪಾಂಚಾಲ್ ಅವರು 38 ವರ್ಷಗಳಿಂದ ಈ ಸ್ಥಿತಿಯಲ್ಲಿಯೇ ಬದುಕಿದ್ದಾರೆ. ಇದು ಅತ್ಯಂತ ಅಪರೂಪವಾಗಿದೆ” ಎಂದು ಗಾರ್ಡೆ ಹೇಳಿದ್ದಾರೆ.

“ಶಸ್ತ್ರಚಿಕಿತ್ಸೆಯು ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ನಡೆಯಿತು. ಈ ಸಮಯದಲ್ಲಿ ಅವರ ಇಕ್ಕಟ್ಟಿನಿಂದ ಬೆಸೆದುಕೊಂಡಿದ್ದ ತಲೆಬುರುಡೆಯ ಮೂಳೆಯನ್ನು ಬಿಡುಗಡೆ ಮಾಡಲಾಯಿತು” ಎಂದು ಹೇಳಿದ್ದಾರೆ.

ಭಾರತೀಯರ ವಿರುದ್ಧ ವರ್ಣಭೇದ ನೀತಿ
ಭಾರತೀಯರ ವಿರುದ್ಧದ ವರ್ಣಭೇದ ನಿಂದನೆಯು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಅಮೆರಿಕದಿಂದ ಪ್ರಕಟವಾಗುತ್ತಿರುವ ಅವಹೇಳನಕಾರಿ ಪೋಸ್ಟ್‌ಗಳಿಗೆ ಪಾಂಚಾಲ್ ಮತ್ತು ಇತರ ಮತ್ತೊಬ್ಬ ವ್ಯಕ್ತಿಯ ಚಿತ್ರಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಅಲ್ಲದೆ, ಅಮೇರಿಕನ್ ಕ್ರಿಪ್ಟೋಕರೆನ್ಸಿ-ಆಧಾರಿತ ಪಾಲಿಮಾರ್ಕೆಟ್ ಕಂಪನಿಯು ‘ಭಾರತ, ನೈಜೀರಿಯಾ ಮತ್ತು ಟರ್ಕಿ ಮೂಲದ ಕೆಲವರು ಮಹಿಳೆಯರಂತೆ ವರ್ತಿಸುತ್ತಿದ್ದಾರೆ’ ಎಂದು ನಿಂದಿಸಿದೆ. ಬಳಿಕ ಆ ಪೋಸ್ಟ್‌ಅನ್ನು ಅಳಿಸಿಹಾಕಿದೆ.

ಬಳಿಕ, ಕಂಪನಿಯ ಮುಖ್ಯ ಕಾನೂನು ಅಧಿಕಾರಿ ನೀಲ್ ಕುಮಾರ್ ಅವರು, ತಮ್ಮ ಕಂಪನಿಯಿಂದ ಪ್ರಕಟವಾದ ಅವಹೇಳನಾಕಾರಿ ಪೋಸ್ಟ್‌ ಕಾರಣಕ್ಕಾಗಿ ಕ್ಷಮೆಯಾಚಿಸಿದ್ದಾರೆ. ಪೋಸ್ಟ್‌ ವಿಚಾರವಾಗಿ ಕಂಪನಿಯು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ. ನಾನೊಬ್ಬ ಭಾರತೀಯ ಅಮೆರಿಕನ್ ಪ್ರಜೆಯಾಗಿ ತಮ್ಮ ಕಂಪನಿ ಬಳಸಿದ ಪದಗಳ ಇತಿಹಾಸವನ್ನು ಹುಡುಕುತ್ತಿದ್ದೇನೆ ಎಂದು ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...