ಕಾವೇರಿಸಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನ – ಧೂಳೆಬ್ಬಿಸುವ ವಂದೇ ಮಾತರಂ – ಎಸ್ ಐ ಆರ್

Date:

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್.ಐ.ಆರ್) ಮತ್ತು ವಂದೇ ಮಾತರಂ ವಿವಾದಗಳು ಸೋಮವಾರದಿಂದ ಶುರುವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಧೂಳೆಬ್ಬಿಸುವ ನಿರೀಕ್ಷೆಯಿದೆ.

ವಂದೇ ಮಾತರಂ ವಿವಾದವನ್ನು ಕೆದಕಿ ಕೋಮುವಾದಿ ಕಿಡಿ ಎಬ್ಬಿಸುವ ಆಡಳಿತ ಪಕ್ಷದ ಇರಾದೆ ಮತ್ತು ಮತದಾರರ ಪಟ್ಟಿಯ ಪರಿಷ್ಕರಣೆಯ ಮೂಲಕ ಮತಗಳ್ಳತನದ ಕುತಂತ್ರದ ವಿರುದ್ಧ ಪ್ರತಿಪಕ್ಷಗಳ ಗಟ್ಟಿ ಗದ್ದಲಗಳು ಕಲಾಪವನ್ನು ಕವಿಯಲಿವೆ.

ಆಡಳಿತ ಪಕ್ಷದ ಕೋಮುವಾದಿ ಕಾರ್ಯಸೂಚಿಯ ವಿರುದ್ಧ ಪ್ರತಿಪಕ್ಷಗಳು ನಿರುದ್ಯೋಗದ ಸಮಸ್ಯೆಯನ್ನು ಎತ್ತಿ ಹೂಡಲಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಂದೇ ಮಾತರಂ ಗೀತೆಗೆ 150 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ, ಈ ರಾಷ್ಟ್ರಗೀತೆಯ ಎಲ್ಲ ಸಾಲುಗಳನ್ನು ಹಾಡಬೇಕೆಂಬ ಮತ್ತು ಈ ಗೀತೆಯ ‘ಮುಖ್ಯ ಸಾಲುಗಳನ್ನು’ 1937ರಲ್ಲಿ ಕೈಬಿಟ್ಟಿದ್ದೇ ದೇಶ ವಿಭಜನೆಗೆ ದಾರಿ ಮಾಡಿತು ಎಂಬ ವಾದವನ್ನು ಮೋದಿ ಸರ್ಕಾರ ಚರ್ಚೆಯ ಮುಖ್ಯಭೂಮಿಕೆಗೆ ಎಳೆದು ತರಲಿದೆ. ದಿನವಿಡೀ ನಡೆಯುವ ಈ ಚರ್ಚೆ ಚಳಿಯನ್ನು ಝಾಡಿಸಿ ಉಭಯ ಸದನಗಳ ತಾಪಮಾನ ಏರಿಸಲಿದೆ.

ವಂದೇ ಮಾತರಂನ ಹಳೆಯ ವಿವಾದವನ್ನು ಸಂಘಪರಿವಾರ ಈಗ ಮತ್ತೆ ಬಡಿದೆಬ್ಬಿಸಿದೆ. ಕೋಮುಧೃವೀಕರಣದ ಕುದಿ ಕೊಪ್ಪರಿಗೆ ಧಗಧಗಿಸಿಯೇ ಇರಿಸುವುದು ತನ್ನ ರಾಜಕಾರಣಕ್ಕೆ ಅನಿವಾರ್ಯ. ಬಾಬರಿ ಮಸೀದಿಯನ್ನು ಕೆಡವಿ ಆ ಸ್ಥಳದಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಆಯಿತು, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೆಯ ಅನುಚ್ಛೇದವನ್ನು ರದ್ದು ಮಾಡಿತು. ಸಮಾಜವನ್ನು ಒಡೆಯುವ ಕಾರ್ಯಸೂಚಿಗಳು ಖಾಲಿಯಾದಾಗ ಹೊಸತರ ಹುಡುಕಾಟ ನಡೆಸಿದೆ. ವಂದೇ ಮಾತರಂ ನೆವದಲ್ಲಿ ರಾಜಕೀಯ ವಿರೋಧಿಗಳನ್ನು ಹಣಿಯಲು ಹತಾರುಗಳನ್ನು ಮಸೆದು ಹರಿತಗೊಳಿಸತೊಡಗಿದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ‘ಕೊಟ್ಟ ಮಾತು’ ಗದ್ದಲ ಸೃಷ್ಟಿಸಿದ ಬಳಿಕ ಎಚ್ಚೆತ್ತ ಕಾಂಗ್ರೆಸ್

ಒಂಬತ್ತು ರಾಜ್ಯಗಳು-ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣಾ ಆಯೋಗದ ಮುಖಾಂತರ ಮತದಾರರ ಪಟ್ಟಿಯ ಪರಿಷ್ಕರಣೆಯ ಮೋದಿ ಸರ್ಕಾರದ ಹುನ್ನಾರವನ್ನು ಬಯಲು ಮಾಡುವುದು ಪ್ರತಿಪಕ್ಷಗಳ ಪಟ್ಟಿಯ ಪ್ರಮುಖ ಕಾರ್ಯಸೂಚಿ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧೀ ಮತದಾರರ ಪಟ್ಟಿ ಪರಿಷ್ಕರಣೆಯ ಹುನ್ನಾರಗಳನ್ನು ನಿದರ್ಶನಗಳ ಸಹಿತ ಬಯಲಿಗೆಳೆದಿದ್ದಾರೆ. 2026ರಲ್ಲಿ ವಿಧಾನಸಭೆ ಚುನಾವಣೆ ಎದುರಿಸುವ ರಾಜಕೀಯ ಮಹತ್ವದ ಎರಡು ರಾಜ್ಯಗಳು ಪಶ್ಚಿಮ ಬಂಗಾಳ ಮತ್ತು ತಮಿಳುನಾಡು. ಮಮತಾ ಬ್ಯಾನರ್ಜಿ ಮತ್ತು ಎಂ.ಕೆ.ಸ್ಟ್ಯಾಲಿನ್ ಅವರ ಪ್ರತಿಪಕ್ಷಗಳ ಸರ್ಕಾರಗಳ ಈ ರಾಜ್ಯಗಳಿಗೆ ಸಂಪೂರ್ಣ ಶಕ್ತಿಯೊಂದಿಗೆ ಲಗ್ಗೆ ಹಾಕುವುದು ಮೋಶಾ ರಣತಂತ್ರ. ಬಿಜೆಪಿ ಅಶ್ವಮೇಧದ ಕುದುರೆಗೆ ಇನ್ನೂ ಶರಣು ಹೇಳದಿರುವ ರಾಜ್ಯಗಳಿವು. ಕುತ್ತಿಗೆ ಸೀಳಿದರೂ ಮತದಾರರ ಹಕ್ಕುಗಳ ಅಪಹರಣಕ್ಕೆ ಅವಕಾಶ ಕೊಡುವುದಿಲ್ಲ ಎಂದು ಮಮತಾ ಪಣ ತೊಟ್ಟಿದ್ದಾರೆ. ತಮಿಳುನಾಡಿನ ಸ್ಟ್ಯಾಲಿನ್ ಸರ್ಕಾರ ಕೂಡ ಮತದಾರರ ಪಟ್ಟಿ ಪರಿಷ್ಕರಣೆಯ ಕುತಂತ್ರದ ವಿರುದ್ದ ಬಲವಾದ ದನಿಯೆತ್ತಿದೆ. ಉತ್ತರಪ್ರದೇಶದಲ್ಲಿ ಸಮಾಜವಾದಿ ಪಾರ್ಟಿಯೂ ಈ ವಿರೋಧಕ್ಕೆ ದನಿಗೂಡಿಸಿದೆ.

ಮೂರು ವಾರಗಳ ಅವಧಿಯ ಈ ಅಧಿವೇಶನದಲ್ಲಿ ಸರ್ಕಾರ ಉನ್ನತ ಶಿಕ್ಷಣ ಆಯೋಗ, ಷೇರು ಮಾರುಕಟ್ಟೆ, ಪರಮಾಣು ಶಕ್ತಿ, ಕಾರ್ಪೊರೇಟ್ ಕಾನೂನು ಹಾಗೂ ಚಂಡೀಗಢವನ್ನು ಕೇಂದ್ರಾಡಳಿತ ಪ್ರದೇಶವೆಂದು ಪರಿಗಣಿಸುವ ಕುರಿತ ಹತ್ತು ಮುಖ್ಯ ಮಸೂದೆಗಳನ್ನು ಮಂಡಿಸುವ ನಿರೀಕ್ಷೆ ಇದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...