ಕರಡಿಗಳು ತನ್ನ ಗಂಡನ ಮೇಲೆ ದಾಳಿ ಮಾಡಿದ್ದು, ಆತನನ್ನ ರಕ್ಷಿಸಲು ಮಹಿಳೆಯೊಬ್ಬರು ತನ್ನ ಜೀವದ ಹಂಗುತೊರೆದು, ಕರಡಿಗಳೊಂದಿಗೆ ಸೆಣೆಸಾಡಿರುವ ಘಟನೆ ಒಡಿಶಾದ ಮಯೂರ್ಭಂಜ್ ಜಿಲ್ಲೆಯಲ್ಲಿ ನಡೆದಿದೆ.
ಮಯೂರ್ಭಂಜ್ ಜಿಲ್ಲೆಯ ಮಿಲು ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಮಾಲ್ಡೆ ಸೊರೆನ್ ಮತ್ತು ಲಿಲಿ ಸೊರೆನ್ ಅವರು ಎಲೆಗಳನ್ನು ಆರಿಸಲು ಕಾಡಿಗೆ ತೆರಳಿದ್ದರು. ಈ ವೇಳೆ, ಆರು ಕರಡಿಗಳು ಅವರ ಮೇಲೆ ದಾಳಿ ನಡೆಸಿವೆ ಎಂದು ಕಾರಂಜಿಯಾ ಅರಣ್ಯದ ರೇಂಜರ್ ಪ್ರಸಾಂತ್ ಕುಮಾರ್ ಸ್ವೈನ್ ಹೇಳಿದ್ದಾರೆ.
ಕರಡಿಗಳ ದಾಳಿಗೆ ಮಾಲ್ಡೆ ಸೊರೆನ್ ಸಿಕ್ಕಿಕೊಂಡಿದ್ದಾರೆ. ಆ ಸಮಯದಲ್ಲಿ, ಲಿಲಿ ಸೊರೆನ್ ಅವರು ತಪ್ಪಿಸಿಕೊಂಡು ಓಡಿಹೋಗುವ ಬದಲು, ತನ್ನ ಪತಿಯ ರಕ್ಷಣಗೆ ಧಾವಿಸಿದ್ದಾರೆ. ಕೊಡಲಿ ಹಿಡಿದು ಕರಡಿಗಳೊಂದಿಗೆ ಹೋರಾಡಿದ್ದಾರೆ. ಈ ವೇಳೆ, ಕರಡಿಯೊಂದಕ್ಕೆ ಪೆಟ್ಟುಬಿದ್ದಿದ್ದು, ಕರಡಿಗಳು ಮರಳಿ ಓಡಿಹೋಗಿವೆ ಎಂದು ವರದಿಯಾಗಿದೆ.
ಆ ವೇಳೆಗೆ, ಲಿಲಿ ಅವರಿಗೂ ತೀವ್ರ ಗಾಯಗಳಾಗಿದ್ದವು. ಅವರನ್ನು ಕಿಯೋಂಜಾರ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಜಾರ್ಖಂಡ್ನ ಹಜಾರಿಬಾಗ್ ಜಿಲ್ಲೆಯಲ್ಲಿ ಕುಟುಂಬವೊಂದರನಾಲ್ವರು ಸದಸ್ಯರು ಸೇರಿದಂತೆ ಆರು ಜನರನ್ನು ಕಾಡಾನೆಗಳ ಹಿಂಡು ತುಳಿದು ಕೊಂದ ಕೆಲವು ದಿನಗಳ ಬಳಿಕ ಈ ಘಟನೆ ನಡೆದಿದೆ.




