ವಿಶ್ವಕಪ್ – ಮಹಿಳಾ ಚಾಂಪಿಯನ್ಸ್‌ | ‘ಪುರುಷರ ತಂಡ ಎಂದಿಗೂ ಹೀಗೆ ಮಾಡಿಲ್ಲ’ ಎಂದಿದ್ದೇಕೆ ಆರ್ ಅಶ್ವಿನ್?

Date:

ಭಾನುವಾರ ನಡೆದ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಭೂತಪೂರ್ವ ಗೆಲುವು ಸಾಧಿಸಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡವು, ಚೊಚ್ಚಲ ವಿಶ್ವಕಪ್ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ದೇಶಾದ್ಯಂತ ಭಾರೀ ಮೆಚ್ಚುಗೆ ಮತ್ತು ಅಭಿನಂದನೆಯ ಮಹಾಪೂರವೇ ಹರಿಯುತ್ತಿದೆ. ಮಹಿಳಾ ತಂಡವು ಟ್ರೋಫಿ ಗೆದ್ದ ಐತಿಹಾಸಿಕ ಸಮಯದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ದಿಗ್ಗಜರಾದ ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ ಹಾಗೂ ಅಂಜುಮ್ ಚೋಪ್ರಾ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಹಾಜರಿದ್ದರು. ಕ್ರೀಡಾಂಗಣದಲ್ಲಿ ನಡೆದ ವಿಜಯೋತ್ಸವ ಮೆರವಣಿಗೆ ವೇಳೆ, ಹರ್ಮನ್‌ಪ್ರೀತ್ ಮತ್ತು ತಂಡವು ಮಿಥಾಲಿ ಮತ್ತು ಜೂಲನ್‌ಗೆ ಟ್ರೋಫಿಯನ್ನು ಹಸ್ತಾಂತರಿಸಿತು, ಎಲ್ಲರೂ ಭಾವುಕರಾದರು. ಈ ಕ್ಷಣವನ್ನು ಪುರುಷರ ತಂಡದ ಸ್ಟಾರ್ ಬೌಲರ್ ಆರ್‌ ಆಶ್ವಿನ್‌ ಶ್ಲಾಘಿಸಿದ್ದಾರೆ. ‘ಪುರುಷರ ತಂಡ ಎಂದಿಗೂ ಹೀಗೆ ಮಾಡಲಿಲ್ಲ’ ಎಂದಿದ್ದಾರೆ.

“ಭಾನುವಾರ, ಭಾರತೀಯ ಮಹಿಳಾ ತಂಡವು ಮಿಥಾಲಿ ರಾಜ್‌ ಅವರಿಗೆ ಟ್ರೋಫಿ ನೀಡಿ ಸಂಭ್ರಮಿಸಿತು. ಅವರು ಯಾಕೆ ಹಾಗೆ ಮಾಡಿದರು? ತಂಡವು ನಡೆಯುನ್ನು ನಾನು ಅಭಿನಂದಿಸುತ್ತೇನೆ. ಭಾರತೀಯ ಪುರುಷರ ತಂಡ ಎಂದಿಗೂ ಈ ರೀತಿ ಮಾಡಿಲ್ಲ. ಕೆಲವೊಮ್ಮೆ ಮಾಧ್ಯಮಗಳ ಮುಂದೆ, ನಾವು ‘ಈ ವ್ಯಕ್ತಿ ಇದನ್ನು ಮಾಡಿದರು’ ಅಥವಾ ‘ಆ ವ್ಯಕ್ತಿ ಅದನ್ನು ಮಾಡಿದರು’ ಎಂದೆಲ್ಲ ಹೇಳುತ್ತೇವೆ, ಆರೋಪಿಸುತ್ತೇವೆ. ಆದರೆ, ಹಿಂದಿನ ತಂಡಕ್ಎಕ ನಾವು ನಿಜವಾದ ಮನ್ನಣೆ ನೀಡುವುದನ್ನು ನಾನು ಹೆಚ್ಚಾಗಿ ನೋಡಿಲ್ಲ. ಬದಲಾಗಿ, ‘ನನ್ನ ಕಾಲದ ತಂಡ ಉತ್ತಮವಾಗಿದೆ’ ಮತ್ತು ‘ನಿಮ್ಮ ಕಾಲದ ತಂಡ ಅಷ್ಟು ಉತ್ತಮವಾಗಿರಲಿಲ್ಲ’ ಎಂದು ದೂಷಿಸಲಾಗುತ್ತದೆ. ನಾನು ಅಂತಹ ಬಹಳಷ್ಟು ಚರ್ಚೆಗಳನ್ನು ನೋಡಿದ್ದೇನೆ,” ಎಂದು ಅವರು ಹೇಳಿದ್ದಾರೆ.

“ಈ ಮಹಿಳಾ ತಂಡವು ಮಾಜಿ ಆಟಗಾರರಾದ ಅಂಜುಮ್ ಚೋಪ್ರಾ, ಮಿಥಾಲಿ ರಾಜ್ ಅವರಿಗೆ ಟ್ರೋಫಿಯನ್ನು ಹಸ್ತಾಂತರಿಸುವ ಮೂಲಕ, ಅವರು ಒಂದು ಕಾಲದಲ್ಲಿ ನೆಟ್ಟು, ಪೋಷಿಸಿದ ಬೀಜಗಳು ಇಂದು ವಿಜೇತರಾಗಿ ಎತ್ತರದ ಸ್ಥಾನದಲ್ಲಿ ನಿಂತಿವೆ ಎಂಬುದನ್ನು ಸಂಭ್ರಮಿಸಲು ಅವಕಾಶ ಮಾಡಿಕೊಟ್ಟರು. ಅದು ಎಂಥಹ ಕ್ಷಣ. ನಂಬಲಾಗದಷ್ಟು ಅತ್ಯುತ್ತಮ ಗಳಿಗೆಯೆಂದು ನಾನು ಭಾವಿಸಿದ್ದೇನೆ. ಭಾರತೀಯ ಮಹಿಳೆಯರು ಸಾಧಿಸಿದ ಈ ಗೆಲುವು – ಇಂದಿನದ್ದು ಮಾತ್ರವಲ್ಲ, 25 ವರ್ಷಗಳ ಶ್ರಮದ ಫಲಿತಾಂಶ” ಎಂದು ಅಶ್ವಿನ್ ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...