ಲೋಕಸಭೆಯಲ್ಲಿ ಜುಲೈ 1ರಂದು ರಾಹುಲ್ ಗಾಂಧಿ ಮಾಡಿದ ಭಾಷಣವನ್ನು ಉದ್ಧವ್ ಠಾಕ್ರೆ ಬಣದ ಶಿವಸೇನೆಯ ಮುಖವಾಣಿ ‘ಸಾಮ್ನಾ’ ಹೊಗಳಿದ್ದು, ನೀವು ಗಾಂಧಿಯನ್ನು ತಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ರಾಹುಲ್ ಗಾಂಧಿ ಅವರ ಭಾಷಣದಂತೆ ಮುಂದಿನ ದಿನಗಳಲ್ಲಿ ಸರ್ವಾಧಿಕಾರಿಗಳು ಪತನಗೊಳ್ಳಲಿದ್ದಾರೆ. ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿಯ ನಾಯಕರು ಇಂತಹ ಸನ್ನಿವೇಷವನ್ನು ಎದುರಿಸಿಲ್ಲ. ರಾಹುಲ್ ಗಾಂಧಿ ಅವರು ಮೋದಿಯ ದೈವತ್ವದ ಸಿಂಧೂರವನ್ನು ಕಳಚಿದ್ದಾರೆ. ಇದಕ್ಕಾಗಿ ವಿಪಕ್ಷದ ನಾಯಕನನ್ನು ಎಷ್ಟು ಅಭಿನಂದಿಸಿದರೂ ಸಾಲದು ಎಂದು ಸಾಮ್ನಾ ಮುಖವಾಣಿಯಲ್ಲಿ ತಿಳಿಸಲಾಗಿದೆ.
ಸಂಸತ್ತಿನಲ್ಲಿ ರಾಹುಲ್ ಗಾಂಧಿ ಹೇಳಿದಂತೆ ಬಿಜೆಪಿಯು ಹಿಂದುತ್ವದ ಏಕಸ್ವಾಮ್ಯವನ್ನು ಹೊಂದಿಲ್ಲ. ಈ ಮಾತು ಕಳೆದ 10 ವರ್ಷಗಳಲ್ಲಿಯೇ ಸಂಸತ್ತಿನಲ್ಲಿ ಬಿರುಗಾಳಿ ಎಬ್ಬಿಸಿದೆ. ಅಮಿತ್ ಶಾ ಕೂಡ ಲೋಕಸಭೆ ಸ್ಪೀಕರ್ ಅವರಿಂದ ರಕ್ಷಣೆ ಕೇಳಿದ್ದಾರೆ ಎಂದು ಸಾಮ್ನಾದಲ್ಲಿ ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಗಾಯ ನೆಕ್ಕಿಕೊಳ್ಳುತ್ತಿರುವ ಮೋದಿ ಎಚ್ಚರಿಕೆ- ಹೊಸ ದಮನ ದಾಳಿ ದಸ್ತಗಿರಿಗಳ ಮುನ್ಸೂಚನೆ
ಚುನಾವಣೆಗಳಿಗಾಗಿ ಹಿಂದುತ್ವದ ಹೆಸರಿನಲ್ಲಿ ಕೆಲವರು ಗಲಭೆಗಳನ್ನು ಸೃಷ್ಟಿಸಿ ಕೋಮುವಾದದ ವಿಷಬೀಜವನ್ನು ಬಿತ್ತಿದರು. ನಿಜವಾದ ಹಿಂದುತ್ವ ಶಾಂತಿ, ಸ್ವಾತಂತ್ರ್ಯ, ಸತ್ಯವನ್ನು ನಿರ್ಬಯವಾಗಿ ಬೆಂಬಲಿಸುತ್ತದೆ. ಇದರಿಂದ ಕೋಪಗೊಂಡ ಮೋದಿ ವಿರೋಧ ಪಕ್ಷದ ನಾಯಕನ ಮೇಲೆ ‘ಹಿಂದುತ್ವಕ್ಕೆ ಅವಮಾನ’ ಎಂದು ಆರೋಪಿಸಿದರು.
ಇಲ್ಲಿಯವರೆಗೂ ಮೋದಿ – ಅಮಿತ್ ಶಾ ಅವರು ಬಹುಮತದ ಮೂಲಕ ತಮ್ಮ ಪಾದವನ್ನು ಸಂಸತ್ತಿನ ಕೆಳಗಿಡಲು ಪ್ರಯತ್ನಿಸಿದ್ದರು. ಆದರೀಗ ರಾಹುಲ್ ಗಾಂಧಿ ನೇತೃತ್ವದ ಬಿಲಿಷ್ಠ ವಿಪಕ್ಷ ಸಂಸತ್ತಿನಲ್ಲಿ ಹೊರಹೊಮ್ಮಿದೆ. ಇಂತಹ ಕಡಿವಾಣವಿಲ್ಲದ ಜನರನ್ನು ನಿಯಂತ್ರಿಸಲಾಗಿದೆ. ಬಿಜೆಪಿಯವರು ಹಿಂದುತ್ವ ಹಾಗೂ ಧರ್ಮದ ಹೆಸರಿನಲ್ಲಿ ಕಳೆದ 10 ವರ್ಷಗಳಿಂದ ಚುನಾವಣೆಯನ್ನು ಎದುರಿಸುತ್ತಿದ್ದರು. ಆದರೆ ಅವರಿಗೆ ಈಗ ಕನ್ನಡಿಯಲ್ಲಿ ನಿಜವಾದ ಮುಖವನ್ನು ತೋರಿಸಲಾಗಿದೆ ಎಂದು ಸಾಮ್ನಾದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲಾಗಿದೆ.
ನಾನು ದೇವರಿಂದ ನೇರವಾಗಿ ಸೃಷ್ಟಿಯಾದವನು ಎಂದು ಹೇಳಿದ ಮೋದಿಯವರು ಸಂಸತ್ತಿನಲ್ಲಿ ಅಪಹಾಸ್ಯಕ್ಕೊಳಗಾದರು. ಬಿಜೆಪಿ ನಾಯಕರ ಬಂಡವಾಳವನ್ನು ರಾಹುಲ್ ಗಾಂಧಿ ಬಿಚ್ಚಿಟ್ಟಿದ್ದಾರೆ. ಇದಾದ ನಂತರ ಮೋದಿ-ಶಾ ಅವರು ಸ್ಪೀಕರ್ ರಕ್ಷಣೆ ಕೇಳಿದ್ದಾರೆ. ಈ ಸಂದೇಶವು ಇ.ಡಿ. ಸಿಬಿಐ ಹಾಗೂ ಇತರೆ ಸಂಸ್ಥೆಗಳಿಗೆ ತಲುಪಿರುತ್ತದೆ ಎಂದು ಸಾಮ್ನಾದಲ್ಲಿ ಹೇಳಲಾಗಿದೆ.





