ಚಲಿಸುತ್ತಿದ್ದ ರೈಲು ಹತ್ತಲು ಹೋಗಿ, ರೈಲ್ವೇ ಹಳಿಗೆ ಬಿದ್ದು ಯುವಕನೊಬ್ಬ ಎರಡೂ ಕಾಲುಗಳನ್ನು ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಕಿನ್ವಾಟ್ ರೈಲು ನಿಲ್ದಾಣದಲ್ಲಿ ಘಟನೆ ನಡೆದಿದೆ. ನಿಲ್ದಾಣಕ್ಕೆ ಬಂದ ನಾಂದೇಡ್ ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲು, ಚಲಿಸಲು ಆರಂಭಿಸಿದಾಗ, ಯುವಕ ಮಹೇಶ್ ಕನ್ನೇಕರ್ ರೈಲು ಹತ್ತಲು ಯತ್ನಿಸಿದ್ದಾನೆ. ಕಾಲು ಜಾರಿ ಪ್ಲಾಟ್ಫಾರಂಗೆ ಬಿದಿದ್ದು, ರೈಲು ಮತ್ತು ಪ್ಲಾಟ್ಫಾರಂ ನಡುವೆ ಸಿಲುಕಿಕೊಂಡಿದ್ದಾರೆ. ಪರಿಣಾಮ ಎರಡೂ ಕಾಲುಗಳೂ ಮುರಿದಿವೆ.
ಗಂಭೀರ ಪರಿಸ್ಥಿತಿಯಲ್ಲಿದ್ದ ಮಹೇಶ್ ಅವರನ್ನು ಕಿನ್ವಾಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತುರ್ತು ಚಿಕಿತ್ಸೆ ನೀಡಿದ ಬಳಿಕ, ಆದಿಲಾಬಾದ್ ಆಸ್ಪತ್ರೆಗೆ ರವಾನಿಸಲಾಗಿದೆ.




