ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ- 15; ರಾಜ್ಯ ಸರ್ಕಾರದ ನಿರಾಸಕ್ತಿ

Date:

ಅಧಿಕಾರಕ್ಕೆ ಬಂದು ಆರು ತಿಂಗಳಾದರೂ ಸಾಹಿತ್ಯ, ಸಾಂಸ್ಕೃತಿಕ ಅಕಾಡೆಮಿಗಳಿಗೆ ಅಧ್ಯಕ್ಷರು ನೇಮಕವಾಗಿಲ್ಲ

ಚಲನ ಚಿತ್ರೋತ್ಸವಗಳೆಂದರೆ ಸಿನಿಮಾಸಕ್ತರಿಗೆ ಹಬ್ಬವಿದ್ದಂತೆ. ಭಾರತದಾದ್ಯಂತ ಹಲವು ನಗರಗಳಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳು ನಡೆಯುತ್ತವೆ.

ಈ ಹೊತ್ತಿಗೆ – ಜಿಯೊ ಮಾಮಿ ಮುಂಬೈ ಫಿಲಮ್ ಫೆಸ್ಟಿವಲ್ (MAMI) ಮತ್ತು ಗೋವಾದ ಇಂಟರ್ ನ್ಯಾಷನಲ್ ಫಿಲಮ್ ಫೆಸ್ಟಿವಲ್ (IFFI) ಮುಗಿದಿದೆ. ಇಂಟರ್ ನ್ಯಾಷನಲ್ ಫಿಲಮ್ ಫೆಸ್ಟಿವಲ್ ಆಫ್ ಕೇರಳ (IFFK) ಮತ್ತು ಕೊಲ್ಕತ್ತಾ ಇಂಟರ್ ನ್ಯಾಷನಲ್ ಫಿಲಮ್ ಫೆಸ್ಟಿವಲ್ (KIFF) ನಡೆಯುತ್ತಿದೆ. ಮುಂದೆ ಜನವರಿಯಲ್ಲಿ ಪುಣೆ ಇಂಟರ್ ನ್ಯಾಷನಲ್ ಫಿಲಮ್ ಫೆಸ್ಟಿವಲ್ (PIFF) ನಡೆಯಲಿದೆ. ಮಾರ್ಚ್‌‌ನಲ್ಲಿ ಜರುಗುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಚುಟುಕಾಗಿ Biffes (ಬಿಫೆಸ್) ಎಂದು ಕರೆಯುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮೊದಲ ಬಾರಿಗೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವನ್ನು ಡಿಸೆಂಬರ್ 2006ರಲ್ಲಿ ಸುಚಿತ್ರ ಫಿಲಮ್ ಸೊಸೈಟಿ ಆಯೋಜಿಸಿತು. ನಂತರ 2008, 2009ರಲ್ಲಿ ನಡೆದ ಎರಡನೇ ಮತ್ತು ಮೂರನೇ ಚಲನಚಿತ್ರೋತ್ಸವ ಕೂಡ ಸುಚಿತ್ರ ಫಿಲಮ್ ಸೊಸೈಟಿಯ ಉಸ್ತುವಾರಿಯಲ್ಲೇ ಮುಂದುವರೆಯಿತು. ಮುಂದೆ 4ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಕರ್ನಾಟಕ ಸರ್ಕಾರ ವಹಿಸಿಕೊಂಡು ಡಿಸೆಂಬರ್ 2011ರಲ್ಲಿ ನಡೆಸಿತು. ಅಲ್ಲಿಂದ ಮುಂದೆ ಒಂದೆರೆಡು ತಿಂಗಳು ವ್ಯತ್ಯಾಸವಾದರೂ ಪ್ರತಿ ವರ್ಷ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವನ್ನು ಕರ್ನಾಟಕ ಸರ್ಕಾರವೇ ಕರ್ನಾಟಕ ಚಲನಚಿತ್ರ ಅಕಾಡೆಮಿಯೊಂದಿಗೆ ನಡೆಸಿಕೊಂಡು ಬಂದಿದೆ. ಈ ವರ್ಷ 2023 ಮಾರ್ಚ್‌ನಲ್ಲಿ ನಡೆದದ್ದು 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ.

ಮುಂದಿನ ವರ್ಷ 2024ರಲ್ಲಿ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಬೇಕಿದೆ. ಆದರೆ, ಕರ್ನಾಟಕದಲ್ಲಿ ಬಹುಮತದಿಂದ ಗೆದ್ದು ಬೀಗಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಯಾವ ಮಂಕು ಬಡಿದಿದೆ ತಿಳಿಯುತ್ತಿಲ್ಲ. ಅಧಿಕಾರಕ್ಕೆ ಬಂದು ಆರು ತಿಂಗಳಾದರೂ ಸಾಹಿತ್ಯ, ಸಾಂಸ್ಕೃತಿಕ ಅಕಾಡೆಮಿಗಳಿಗೆ ಅಧ್ಯಕ್ಷರು ನೇಮಕವಾಗಿಲ್ಲ. ಹಾಗೆ ಕರ್ನಾಟಕ ಚಲನಚಿತ್ರ ಅಕಾಡೆಮಿಗೂ ಅಧ್ಯಕ್ಷರು ನೇಮಕಗೊಂಡಿಲ್ಲ. ಹೊಸ ಸಮಿತಿಯಾಗಲಿ ರಚನೆಯಾಗಿಲ್ಲ.

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸಲು ಕನಿಷ್ಟ ಆರು ತಿಂಗಳಾದರೂ ಪೂರ್ವ ತಯಾರಿ ಬೇಕಾಗುತ್ತದೆ. ಆದರೆ ಸಾಮಾನ್ಯವಾಗಿ ಫೆಬ್ರವರಿ, ಮಾರ್ಚ್‌ನಲ್ಲಿ ನಡೆಯಬೇಕಾದ ಚಿತ್ರೋತ್ಸವಕ್ಕೆ ಕೆಲವೇ ತಿಂಗಳುಗಳು ಉಳಿದಿರುವಾಗ ಸರ್ಕಾರ ಹೇಗೆ ತಯಾರಿ ನಡೆಸಿದೆಯೆಂಬ ಯಾವ ಮಾಹಿತಿಯೂ ಸಾರ್ವಜನಿಕವಾಗಿ ಲಭ್ಯವಿಲ್ಲ.

ಕಳೆದ ವರುಷಗಳಲ್ಲಿ ನಡೆದ ಚಿತ್ರೋತ್ಸವಗಳೂ ಬಹು ಶಿಸ್ತಿನಿಂದ ಕೂಡಿರದೆ ಆತುರಾತುರದಲ್ಲೇ ನಡೆದವು. ಚಿತ್ರೋತ್ಸವ ಪ್ರಾರಂಭವಾದರೂ ಡೆಲಿಕೆಟ್ ಪಾಸ್, ಪ್ರದರ್ಶನದ ಸಿನಿಮಾಗಳ ಪಟ್ಟಿ ವಿತರಣೆಯು ಸರಿಯಾದ ಸಮಯಕ್ಕೆ ಸಿನಿಮಾಸಕ್ತರಿಗೆ ಸಿಗದೆ ಪರದಾಡುವುದು ಸಾಮಾನ್ಯ ದೃಶ್ಯವಾಗಿತ್ತು. ಅದರಲ್ಲೂ ಕಳೆದೆರೆಡು ವರ್ಷ ನಡೆದ ಚಿತ್ರೋತ್ಸವದಲ್ಲಿ ಬಿಜೆಪಿ ಸರ್ಕಾರ ಸಿನಿಮಾಗಳ ಆಯ್ಕೆಯಲ್ಲಿ ತನ್ನ ಅಜೆಂಡಾ, ಪೂರ್ವಗ್ರಹಗಳನ್ನು ಹೇರಿ ಹೆಸರು ಕೆಡಿಸಿಕೊಂಡಿತ್ತು. ಇಷ್ಟೆಲ್ಲಾ ಅಪಸವ್ಯಗಳ ನಡುವೆ ಚಿತ್ರೋತ್ಸವಗಳು ನಡೆದರೂ, ಜನರಿಗೆ ಒಂದಷ್ಟು ಒಳ್ಳೆಯ ಗುಣಮಟ್ಟದ ಜಾಗತಿಕ ಸಿನಿಮಾಗಳು ಇದ್ದದ್ದು ಸಮಾಧಾನದ ಸಂಗತಿಯಾಗಿತ್ತು. ಆದರೆ, ಈ ಬಾರಿ ಸರ್ಕಾರದ ನಿರಾಸಕ್ತಿಯನ್ನು ಗಮನಿಸಿದರೆ ಚಿತ್ರೋತ್ಸವ ನಡೆಯುವುದೇ ಸಂಶಯವಾಗಿದೆ.

ಚಲನಚಿತ್ರೋತ್ಸವಗಳು ಜಗತ್ತಿಗೆ ತೆರೆದ ಕಿಟಕಿಯಿದ್ದಂತೆ. ಸಾಮಾನ್ಯರಿಗೆ ಜಾಗತಿಕ ಸಿನಿಮಾಗಳು ಹಲವು ಭಾಷೆ, ಸಂಸ್ಕೃತಿ, ಸಾಮಾಜಿಕ, ರಾಜಕೀಯ ಮುಖಗಳನ್ನು ಪರಿಚಯ ಮಾಡಿದರೆ, ಸಿನಿಮಾ ಕುತೂಹಲಿಗಳಿಗೆ, ಸಿನಿಮಾ ಆಸ್ತಕರಿಗೆ, ಸಿನಿಮಾ ವಿದ್ಯಾರ್ಥಿಗಳಿಗೆ ಪ್ರಯೋಗಾತ್ಮಕ ಸಿನಿಮಾಗಳನ್ನು ನೋಡಿ ಅದರ ವ್ಯಾಕರಣವನ್ನು ಅರಿಯುವ ವೇದಿಕೆಯಾಗುತ್ತವೆ. ಚಲನ ಚಿತ್ರೋತ್ಸವಗಳಲ್ಲಿ ಸತತವಾಗಿ ಭಾಗಿಯಾಗಿ, ಸ್ಫೂರ್ತಿಗೊಂಡು, ಕಲಿತು ತಾವೇ ಸಿನಿಮಾ ನಿರ್ಮಾಣ ಮಾಡಿದ ಹಲವು ಪ್ರಸಿದ್ಧ ನಿರ್ದೇಶಕರು ಕನ್ನಡದಲ್ಲೇ ಇದ್ದಾರೆ. ಸಾಹಿತ್ಯ, ನಾಟಕ, ಸಂಗೀತ, ಚಿತ್ರಕಲೆ, ಶಿಲ್ಪಕಲೆಯನ್ನು ಸಂಸ್ಕೃತಿಯ ಭಾಗವಾಗಿ ಕಾಣುವ ಭಾರತದಲ್ಲಿ ಸಿನಿಮಾವನ್ನು ಪಾಶ್ಚಿಮಾತ್ಯ ದೇಶಗಳಂತೆ ಸಂಸ್ಕೃತಿಯೆಂದು ಪರಿಗಣಿಸದೆ ಕೇವಲ ಮನರಂಜನೆಯ ಮಾಧ್ಯಮವಾಗಿ ನೋಡುತ್ತಿರುವುದು ವಿಷಾದಕರ.

ಸಾಹಿತ್ಯ, ನಾಟಕ, ಕಲೆಯ ಬಗ್ಗೆ ಸಂವೇದನೆ ಉಳ್ಳ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಲನಚಿತ್ರೋತ್ಸವದ ತಯಾರಿಗೆ ಚಾಲನೆ ನೀಡಿ, ಒಂದಷ್ಟು ದಿನಗಳು ತಡವಾದರೂ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ತಪ್ಪದೆ ನಡೆಯುವಂತೆ ಕ್ರಮ ಕೈಗೊಳ್ಳಬೇಕು. ಸಿನಿಮಾರಂಗದಲ್ಲಿರುವವರು ಈ ವಿಚಾರವಾಗಿ ಸರ್ಕಾರದ ಗಮನ ಸೆಳೆಯುತ್ತಾರೆಂದು ಆಶಿಸೋಣ.

WhatsApp Image 2025 11 17 at 3.47.16 PM
ಚಂದ್ರಪ್ರಭ ಕಠಾರಿ
+ posts

ಸಿನಿಮಾಸಕ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಚಂದ್ರಪ್ರಭ ಕಠಾರಿ
ಚಂದ್ರಪ್ರಭ ಕಠಾರಿ
ಸಿನಿಮಾಸಕ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇರಳ ಚುನಾವಣೆ | ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕೆ ನಾಲ್ವರ ಪೈಪೋಟಿ; ಹಿಂದೆ ಸರಿಯುವ ಮಾತೇ ಇಲ್ಲ!

ಕಾಂಗ್ರೆಸ್‌ನ ನಾಲ್ವರು ನಾಯಕರು ಒಳಗೆಷ್ಟು ಅಸಮಾಧಾನ, ಪೈಪೋಟಿ ಹೊಂದಿದ್ದರೂ ರಾಜ್ಯದ ಕಾಂಗ್ರೆಸ್...

‘ಜೋಗಿ’ಯಿಂದ ‘ಕೆಡಿ’ವರೆಗೆ: ಕಲಾತ್ಮಕ ಮೌಲ್ಯಗಳ ಕುಸಿತ?

ʼನಾನು ಎಣ್ಣೆ ಹಾಗೂ ಉಪ್ಪಿನಕಾಯಿಯ ಬಗ್ಗೆ ಬರೆದಿದ್ದೇನೆʼ. ʼಈ ಹಾಡಿನ ಸಾಹಿತ್ಯದಲ್ಲಿ...

ಟ್ರಂಪ್‌ಗೆ ಚಿತ್ತಭ್ರಮೆಯೇ?; ಅಮೆರಿಕ ಅಧ್ಯಕ್ಷರ ಮಾನಸಿಕ ಆರೋಗ್ಯದ ಸುತ್ತ ಅನುಮಾನದ ಹುತ್ತ

ವಿಶ್ವದ ಅತ್ಯಂತ ಬಲಿಷ್ಠ ರಾಷ್ಟ್ರದ ಚುಕ್ಕಾಣಿ ಹಿಡಿದಿರುವ ನಾಯಕನೊಬ್ಬನ ಮಾನಸಿಕ ಸ್ಥಿರತೆ...