ಮುಸ್ಲಿಮರ ಮೀಸಲಾತಿ ರದ್ದು| ಸಂಘ ಪರಿವಾರ – ಮೇಲ್ಜಾತಿಗಳ ಹುನ್ನಾರದ ಒಂದು ಆಟ

Date:

ಮುಸಲ್ಮಾನರಿಂದ ಕಿತ್ತುಕೊಂಡ ಹಕ್ಕು ನಮಗೆ ಬೇಡ. ಅವರ ಪಾಲನ್ನು ಅವರಿಗೆ ಹಿಂದಿರುಗಿಸಿ. ಅಷ್ಟು ಮಾತ್ರವಲ್ಲ, ಅವರ ಸಾಮಾಜಿಕ-ಆರ್ಥಿಕ ಸ್ಥಿತಿಗತಿ ಮತ್ತು ಜನಸಂಖ್ಯೆಯ ಆಧಾರದ ಮೇಲೆ ಅವರ ಪಾಲನ್ನು ಹೆಚ್ಚಿಸಿ’ ಎಂದು ಎಲ್ಲರಿಗಿಂತ ಮೊದಲು ಪ್ರತಿಭಟಿಸಬೇಕಾದವರು ಒಕ್ಕಲಿಗ, ಲಿಂಗಾಯತ ಮತ್ತು ಬ್ರಾಹ್ಮಣರು

ಕರ್ನಾಟಕ ಸರಕಾರವು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿಗಳಿಗೆ) ಒದಗಿಸಿದ ಮೀಸಲಾತಿ 2ಬಿ ಪ್ರವರ್ಗದ ಕೆಳಗೆ ಮುಸಲ್ಮಾನರಿಗೆಂದು ಇರುವ ಶೇಕಡಾ ನಾಲ್ಕರ ಪಾಲನ್ನು ತೆಗೆದು ಹಾಕಿ, ಅದನ್ನು ಒಕ್ಕಲಿಗರು ಮತ್ತು ವೀರಶೈವ-ಲಿಂಗಾಯತ ಸಮುದಾಯಗಳಿಗೆ ಶೇಕಡಾ ಎರಡರಂತೆ ಹಂಚಿರುವುದು ಬಹುದೊಡ್ಡ ಅನ್ಯಾಯದ ನಡೆ. ಸರಕಾರವು ಮುಸಲ್ಮಾನ ಸಮುದಾಯದ ಪಾಲನ್ನು ಕಿತ್ತುಕೊಂಡು, ಆ ಎರಡು ಸಮುದಾಯಗಳಿಗೆ ಕೊಟ್ಟಿದ್ದು ಮಾತ್ರ ತಪ್ಪೆಂದಲ್ಲ; ಹಾಗೆ ಕಿತ್ತುಕೊಂಡದ್ದನ್ನು ಅದು ಬೇರೆ ಯಾವುದೇ ಸಮುದಾಯ ಇಲ್ಲವೆ ಸಮುದಾಯಗಳಿಗೆ ಕೊಟ್ಟಿದ್ದರೂ ಅದು ದೊಡ್ಡ ಅನ್ಯಾಯವೇ ಆಗಿರುತ್ತಿತ್ತು.

ಮುಸಲ್ಮಾನರಿಗೆ ಇನ್ನು ಮೇಲೆ ಅರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (ಇಡಬ್ಲ್ಯುಎಸ್‍ ) ಒದಗಿಸಿದ ಸವಲತ್ತನ್ನು ಕೊಡಲಾಗುತ್ತದೆ ಎಂದು ಸರಕಾರವು ಜಾರಿಗೆ ತಂದಿರುವ ಹೊಸ ನೀತಿ ಕೂಡ ದೊಡ್ಡ ಅನ್ಯಾಯದ ನಡೆಯೇ.ಇಡಬ್ಲ್ಯುಎಸ್ ಕೋಟಾದ ಅಡಿ, ಮುಸಲ್ಮಾನರು ಈಗಾಗಲೇ ಸಾಮಾಜಿಕ ಬಂಡವಾಳ (ಸೋಷಿಯಲ್ ಕ್ಯಾಪಿಟಲ್) ಇರುವ ಬ್ರಾಹ್ಮಣರೇ ಮೊದಲಾದ ಪ್ರಬಲ ಜಾತಿಯ ಅಭ್ಯರ್ಥಿಗಳ ಜೊತೆಗೆ ಸ್ಪರ್ಧಿಸಬೇಕಾಗುತ್ತದೆ. ಹಾಗಾಗಿ ಅದು ತುಂಬ ಅಸಮವಾದ ಆಡುಂಬೊಲವೇ ಆಗಿದ್ದು, ಅಲ್ಲಿ ಮುಸಲ್ಮಾನರ ಹಕ್ಕುಗಳಿಗೆ ಖಂಡಿತವಾಗಿಯೂ ಧಕ್ಕೆ ಆಗುತ್ತದೆ.

ಇದೆಲ್ಲವೂ ಮುಸಲ್ಮಾನರ ಪಾಲಿನ ಇದ್ದಬದ್ದ ಹಕ್ಕನ್ನೂ ಕಿತ್ತುಕೊಂಡು ಅವರನ್ನು ಸಾಮಾಜಿಕ ಅವಕಾಶಗಳಿಂದ ಸಂಪೂರ್ಣ ದೂರಮಾಡುವ ಬಿಜೆಪಿ-ಸಂಘ ಪರಿವಾರ ಹಾಗೂ ಬಲಿಷ್ಠ ಜಾತಿಗಳವರು ಆಡುತ್ತಿರುವ ಆಟ; ಒಕ್ಕಲಿಗರು, ಲಿಂಗಾಯತರು ಮತ್ತು ಬ್ರಾಹ್ಮಣರ ವಿರುದ್ಧ ಮುಸಲ್ಮಾನರನ್ನೂ, ಮುಸಲ್ಮಾನರ ವಿರುದ್ಧ ಆ ಎಲ್ಲ ಸಮುದಾಯಗಳವರನ್ನೂ ಎತ್ತಿಕಟ್ಟಲು ಹೂಡಿರುವ ಹೂಟ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕರ್ನಾಟಕ ಸರಕಾರದ ಈ ನೀತಿಯ ವಿರುದ್ಧ ದನಿ ಎತ್ತಿ, ‘ಮುಸಲ್ಮಾನರಿಂದ ಕಿತ್ತುಕೊಂಡ ಹಕ್ಕು ನಮಗೆ ಬೇಡ. ಅವರ ಪಾಲನ್ನು ಅವರಿಗೆ ಹಿಂದಿರುಗಿಸಿ. ಅಷ್ಟು ಮಾತ್ರವಲ್ಲ, ಅವರ ಸಾಮಾಜಿಕ-ಆರ್ಥಿಕ ಸ್ಥಿತಿಗತಿ ಮತ್ತು ಜನಸಂಖ್ಯೆಯ ಆಧಾರದ ಮೇಲೆ ಅವರ ಪಾಲನ್ನು ಹೆಚ್ಚಿಸಿ,’ ಎಂದು ಎಲ್ಲರಿಗಿಂತ ಮೊದಲು ಪ್ರತಿಭಟಿಸಬೇಕಾದವರು ಒಕ್ಕಲಿಗ, ಲಿಂಗಾಯತ ಮತ್ತು ಬ್ರಾಹ್ಮಣ ಸಮುದಾಯದವರು. ಅವರನ್ನು ಪ್ರತಿನಿಧಿಸುವ ಒಕ್ಕಲಿಗರ ಸಂಘ, ವೀರಶೈವ-ಲಿಂಗಾಯತ ಮಹಾಸಭಾ ಹಾಗೂ ಬ್ರಾಹ್ಮಣ ಮಹಾಸಭಾ, ಮತ್ತು ಆ ಸಮುದಾಯಗಳವರ ಬೇರೆಲ್ಲ ಒಕ್ಕೂಟಗಳು.

ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್‍ ಕೂಡ ಸರಕಾರದ ಈ ಕ್ರಮದ ವಿರುದ್ಧ ಪ್ರತಿಭಟಿಸಬೇಕು. ಜೊತೆಗೆ, ಕರ್ನಾಟಕದ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಅಧ್ಯಾಪಕರ ಸಂಘಗಳು, ಸರಕಾರಿ ನೌಕರರ ಸಂಘಗಳು, ಶಾಲಾಶಿಕ್ಷಕರ ಸಂಘಗಳು, ಕಾರ್ಮಿಕ-ರೈತ ಸಂಘಟನೆಗಳು ಹಾಗೂ ಕರ್ನಾಟಕ ಲೇಖಕಿಯರ ಸಂಘದಂಥ ಸಾಂಸ್ಕೃತಿಕ ಸಂಘ-ಸಂಸ್ಥೆಗಳು ಕೂಡ ಈ ಅನ್ಯಾಯವನ್ನು ದೊಡ್ಡ ರೀತಿಯಲ್ಲಿ ಖಂಡಿಸಬೇಕು. ಎಲ್ಲರೂ ಸೇರಿ ಸರಕಾರವು ಈ ನೀತಿಯನ್ನು ಹಿಂದಕ್ಕೆ ಪಡೆಯುವಂತೆ ಮಾಡಬೇಕು. ಇಲ್ಲದಿದ್ದಲ್ಲಿ ಕರ್ನಾಟಕದ ಹೆಸರಲ್ಲಿ, ಕನ್ನಡಿಗರ ಹೆಸರಲ್ಲಿ ಈ ಸರಕಾರ ಮಾಡುತ್ತಿರುವ ಈ ಅಧರ್ಮದ ಕೆಲಸದಲ್ಲಿ ನಾವೆಲ್ಲ ಶಾಮೀಲಾದಂತಾಗುತ್ತದೆ.

WhatsApp Image 2023 05 29 at 7.32.13 PM
ರಘುನಂದನ
+ posts

ಕವಿ, ನಾಟಕಕಾರ, ರಂಗನಿರ್ದೇಶಕ

ಪೋಸ್ಟ್ ಹಂಚಿಕೊಳ್ಳಿ:

ರಘುನಂದನ
ರಘುನಂದನ
ಕವಿ, ನಾಟಕಕಾರ, ರಂಗನಿರ್ದೇಶಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...