“ನೀವು ಅಸ್ಪೃಶ್ಯರು” ಎಂದು ಅಜ್ಞಾನದಿಂದ ಕರೆಯುವವರಿಗೆ ಜ್ಞಾನದ ಸ್ಪಷ್ಟನೆ

Date:

ಆರೋಪ ಮಾಡಿದವರೇ ಆರೋಪಿಗಳು ಆಗಿರುವುದರಿಂದ ನೆಲ ಮೂಲ ಸಂಸ್ಕೃತಿಯ ಬಹುಜನರು ತಾವು “ಅಸ್ಪೃಶ್ಯರು” ಎಂಬ ಆರೋಪವನ್ನು ಸಂಪೂರ್ಣವಾಗಿ ತಮ್ಮ ವಿಶಾಲವಾದ ಮನಸ್ಸಿನಿಂದ ಕಿತ್ತೆಸೆದು ಭಾರತ- ಭಾರತೀಯ ಹಾಗೂ ಭಾರತೀಯತೆಯ ಹಿನ್ನೆಲೆಯಲ್ಲಿ ಸತ್ಪ್ರಜೆಯಾಗಿ ತಲೆಯೆತ್ತಿ ನಿಲ್ಲಬೇಕಾಗಿದೆ.

ಅಸ್ಪೃಶ್ಯತೆ ಎಂಬುವುದು ಜಾತಿ ಅಲ್ಲ – ಇದು ನಾವು ಶ್ರೇಷ್ಠರು, ನಾವೇ ಸ್ಪೃಶ್ಯರು ಎಂದು ಹೇಳಿಕೊಳ್ಳುವವರು ಮಾಡಿರುವ ಬಹುದೊಡ್ಡ ಅವೈಜ್ಞಾನಿಕ ಆರೋಪ ಅಷ್ಟೇ. ಆರೋಪ ಮಾಡಿದ ತಕ್ಷಣಕ್ಕೆ ಸಾಕ್ಷಿ ಆಧಾರಗಳಿಲ್ಲದೆ ಆರೋಪಿಯಾಗಲು ಸಾಧ್ಯವಿಲ್ಲ. ಈ ಅರ್ಥದಲ್ಲಿ ಆರೋಪ ಮಾಡಿದವರೇ ಆರೋಪಿ ಸ್ಥಾನದಲ್ಲಿ ನಿಂತಿರುವುದು ಸಂವಿಧಾನದ ಆಧಾರದಲ್ಲಿ ಸತ್ಯವಾಗಿದೆ. ಅಂದರೆ ಸಂವಿಧಾನದ ಪ್ರಕಾರ ಆರೋಪ ಮಾಡಿದವರೇ ಆರೋಪಿಗಳಾಗಿದ್ದಾರೆ. ಈ ಹಿನ್ನಲೆಯಿಂದ ಭಾರತದಲ್ಲಿ ಅಸ್ಪೃಶ್ಯರು ಎಂದು ಕರೆಸಿಕೊಳ್ಳುತ್ತಿರುವವರು ಎಂದಿಗೂ ಅಸ್ಪೃಶ್ಯರಲ್ಲ ಎಂಬುದು ಸ್ಪಷ್ಟವಾಗುತ್ತದೆ. ಮುಂದುವರೆದು ಇಷ್ಟು ಶತಮಾನಗಳ ಕಾಲ ಅಸ್ಪೃಶ್ಯರು ಎಂದು ಆರೋಪ ಹೊರಿಸಿದವರೇ- ಅಸ್ಪೃಶ್ಯತೆಯ ಆರೋಪಿಗಳಾಗಿರುವುದು ಸ್ಪಷ್ಟವಾಗುತ್ತದೆ.

“ನಾವೇ ಸ್ಫೃಶ್ಯರು- ಶ್ರೇಷ್ಠ ಕುಲದವರು” ಎಂದು ಹೇಳಿಕೊಳ್ಳುವವರು ಈ ನೆಲ ಮೂಲ ಸಂಸ್ಕೃತಿಯನ್ನು ಒಡಲಾಳದಿಂದ ತೆರೆದ ಕಣ್ಣಿನಿಂದ ನೋಡದೆ, ತಮ್ಮ ಪಾರಂಪರಿಕ ಮೋಹದ ಅಜ್ಞಾನದಿಂದ ತುಂಬಿದ ಹೃದಯದಲ್ಲಿ ಶ್ರೇಷ್ಠತೆಯ ಮೋಹವನ್ನು ಅದುಮಿಕೊಂಡು ಶ್ರಮದ ಮೂಲಕ ದುಡಿಯುವ ಜನರ ಮೇಲೆ ಮಾಡಿರುವ ಸ್ವಾರ್ಥಪರ ಹಿನ್ನೆಲೆಯ ಬಹುದೊಡ್ಡ ಆರೋಪವೇ ಅಸ್ಪೃಶ್ಯರು ಎಂದು ಕರೆದಿರುವುದು – ಇವರು ಅಸ್ಪೃಶ್ಯರು ಎಂಬ ಬಹುದೊಡ್ಡ ಆರೋಪ.

ತಮ್ಮ ಸ್ವಾರ್ಥಪರ ಸಾಧನೆಗಾಗಿ ಅಥವಾ ಇವರಿಂದ ದುಡಿಸಿಕೊಂಡು ತಾವು ಕುಳಿತು ಹೊಟ್ಟೆ ತುಂಬಾ ತಿಂದು ಉಣ್ಣುವ ಕಾರಣಕ್ಕಾಗಿ ಅಸ್ಪೃಶ್ಯರು ಎಂಬ ಶ್ರಮಜೀವಿ ವರ್ಗವನ್ನು ಸೃಷ್ಟಿಸಿ, ಇವರಿಗೆ ಮಾನವರಿಗೆ ಬದುಕಲು ಬೇಕಾದ ಕೆಲವೇ ಕೆಲವು ಮೂಲಭೂತ ಹಕ್ಕುಗಳನ್ನು ನೀಡದೆ ಜೀವಿಸುವಂತೆ ಮಾಡಿದ್ದು ಇವರೇ ಹೇಳಿಕೊಳ್ಳುವಂತೆ “ಮಾನವ ಕುಲದಲ್ಲಿಯೇ ಶ್ರೇಷ್ಠರು” ಅಥವಾ “ಮಾನವ ಕುಲದಲ್ಲಿ ನಾವು ಮಾತ್ರ ಸ್ಪೃಶ್ಯರು” ಅಲ್ಲ. ಬದಲಿಗೆ ಇವರ ತಲೆಯಲ್ಲಿ ಶತಶತಮಾನಗಳಿಂದ ಎಂದಿಗೂ ಚಲಿಸದೆ ಇವರ ಅಜ್ಞಾನದ ಬಾವಿಯಲ್ಲಿ ತುಂಬಿ ನಿಂತಲ್ಲಿ ನಿಂತಿರುವ ನೀರಿನ ಪಾರಂಪರಿಕ ಅಜ್ಞಾನಕ್ಕೆ ಒಳಗಾದ ಇವರ ಮನಸ್ಸಿನ ನಿಜ ‘ಅಸ್ಪೃಶ್ಯತೆ’ ಎಂಬುವುದನ್ನು ಬಹು ಸೂಕ್ತವಾಗಿ ಮನಗಾಣಬೇಕಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಹಿನ್ನಲೆಯಿಂದ ಈ ನೆಲದಲ್ಲಿ ‘ಅಸ್ಪೃಶ್ಯರು’ ಎಂಬುವರು ಇದ್ದರೆ ಅದು ‘ಅಸ್ಪೃಶ್ಯತೆ’ ಯನ್ನು ಅಸಂವಿಧಾನಾತ್ಮಕವಾಗಿ ಚಾಚೂ ತಪ್ಪದೇ ಆಚರಣೆ ಮಾಡುವವರೇ ಆಗಿದ್ದಾರೆ ಎಂಬುವುದೂ ಸಹ ಸ್ಪಷ್ಟವಾದ್ದದ್ದೇ. ಇಂಥ ಸಂದರ್ಭದಲ್ಲಿ ಯೋಚಿಸಿ ನೀವೇ ಹೇಳಿ ಯಾರು ಸ್ಪೃಶ್ಯರು….? ಯಾರು ಅಸ್ಪೃಶ್ಯರು….? ಎಂದು.

ಈ ಆರೋಪವನ್ನು ಬುದ್ಧನಿಂದ ಮೊದಲುಗೊಂಡು- ಬಸವಾದಿ ಶರಣ, ಶರಣೀಯರು, ದಾಸರು, ಸೂಫಿ ಸಂತರು, ನವ ಭಾರತದ ಸಮಸಮಾಜ ಪ್ರತಿಪಾದಕರು, ದೇಶ ವಿದೇಶದ ಸಮಸಂಸ್ಕೃತಿಯ ಚಿಂತಕರು, ಇವರೆಲ್ಲರ ಬೌದ್ಧಿಕ ಚಿಂತನೆಯ ಸಮಾಗಮವಾಗಿದ್ದ ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರವರೆಗೂ ಸ್ಪಷ್ಟವಾಗಿ ಸಾಕ್ಷಿ ಸಹಿತ ಆರೋಪ ಮಾಡಿದವರಿಗೆ ಹಾಗೂ ಮಾಡುವವರಿಗೆ ಸ್ಪಷ್ಟವಾದ ಕಠಿಣ ಶಬ್ದಗಳಿಂದ ಉತ್ತರ ನೀಡಿದ್ದಾರೆ. ಹಾಗೆ ಕಠಿಣ ಶಬ್ದಗಳಿಂದ ಖಂಡಿಸಿದ್ದಾರೆ. ಇವರೆಲ್ಲರ ಚಿಂತನೆ- ಹೋರಾಟ ಹಾಗೂ ಬರವಣಿಗೆಯಿಂದ ಮೇಲಿನವರ “ಇವರು ಅಸ್ಪೃಶ್ಯರು” ಎಂಬ ಆರೋಪ ಸಾಕ್ಷಿ ಸಮೇತ ಬೌದ್ಧಿಕ ಕಟಕಟೆಯಲ್ಲಿ ಚರ್ಚೆಯಾಗಿ ಸೋತು ಆರೋಪ ಮಾಡಿದವರೇ ಆರೋಪಿಯ ಸ್ಥಾನದಲ್ಲಿ ನಿಂತು ತಲೆತಗ್ಗಿಸುವಂತೆ ಮಾಡಿದೆ . ಇದು ಸಹ ಸಂವಿಧಾನಾತ್ಮಕವಾಗಿ ವಾಸ್ತವ.

bcdb047af52bf7cb5caabdf7b2bd1672

‘ಆರೋಪ ಮಾಡಿದವರೇ ಆರೋಪಿಗಳು’ ಆಗಿರುವುದರಿಂದ ನೆಲ ಮೂಲ ಸಂಸ್ಕೃತಿಯ ಬಹುಜನರು ತಾವು “ಅಸ್ಪೃಶ್ಯರು” ಎಂಬ ಆರೋಪವನ್ನು ಸಂಪೂರ್ಣವಾಗಿ ತಮ್ಮ ವಿಶಾಲವಾದ ಮನ ಹಾಗೂ ಮನೆಯಿಂದ ಕಿತ್ತೆಸೆದು ಭಾರತ- ಭಾರತೀಯ ಹಾಗೂ ಭಾರತೀಯತೆಯ ಹಿನ್ನೆಲೆಯಲ್ಲಿ ಸತ್ಪ್ರಜೆಯಾಗಿ ತಲೆಯೆತ್ತಿ ನಿಲ್ಲಬೇಕಾಗಿದೆ. ಇದನ್ನೇ ನಮ್ಮ ದೇಶದ ಆಳ್ವಿಕೆ ಶ್ರೇಷ್ಠ ಗ್ರಂಥ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ ಸಾರಿ ಸಾರಿ ಹೇಳುವುದು. ಸಂವಿಧಾನ ತನ್ನ ಸಂವಿಧಾನ ಬದ್ಧತೆಯಿಂದ ಅಸ್ಪೃಶ್ಯತೆಯನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಮೂಲಕ – ಅಸ್ಪೃಶ್ಯತೆಯನ್ನು ಮಾಡುವವರಿಗೆ ಕಠಿಣ ಶಿಕ್ಷೆಯನ್ನು ನೀಡುವ ರೂಪದಲ್ಲಿ ನಮ್ಮ ದೇಶದಲ್ಲಿ ಸಾರ್ವಭೌಮ, ಸಮಾನತೆ ಹಾಗೂ ಭ್ರಾತೃತ್ವದ ಹಿನ್ನೆಲೆಯಿಂದ ಆಳ್ವಿಕೆ ಮಾಡುತ್ತಿದೆ. ಇಂತಹ ಸಮ ಸಂಸ್ಕೃತಿಯನ್ನು ಬಯಸಲು ರಚಿತವಾಗಿರುವ ಅಂಬೇಡ್ಕರ್ ಅವರ ಸಂವಿಧಾನ ಭಾರತದಲ್ಲಿ ಸ್ವಚ್ಛಂದ ಆಳ್ವಿಕೆ ಮಾಡಿದರೆ ಮಾತ್ರ ನಮ್ಮ ದೇಶ ವಸುದೇವ ಕುಟುಂಬಕಂ ಎಂದು ಕರೆಸಿಕೊಳ್ಳಲು ಸಾರ್ಥಕವಾಗುತ್ತದೆ. ಇದು ಜಾರಿಯಾಗದಿದ್ದರೆ 2000 ವರ್ಷಗಳಿಂದ ಇಂದಿನವರೆಗೂ ಜಾರಿಯಲ್ಲಿರುವ ನಮ್ಮ ದೇಶದ ಅಲಿಖಿತ ಸಂವಿಧಾನದ ಮಾದರಿಯ ಸ್ಪೃಶ್ಯ- ಅಸ್ಪೃಶ್ಯ ಕುಟುಂಬಕಂ ದೇಶವಾಗುತ್ತದೆ.

ವಾಸ್ತವದ ಮೂಲಕ ಇಂದು ಸ್ವ-ಘೋಷಿತ ಸ್ಪ್ರಶ್ಯರಿಂದ ಏಕಮುಖವಾಗಿ ಕರೆಸಿಕೊಳ್ಳುತ್ತಿರುವ ಅಸ್ಪೃಶ್ಯರು ಮೂಲತಃ ಅಸ್ಪೃಶ್ಯರೇ ಅಲ್ಲ – ಆದರೆ ದೇವರು, ದೇವರು ಮಿಶ್ರಿತ ಧರ್ಮದ ಹಿನ್ನೆಲೆಯ ಪುರಾಣದ ಬಹುದೊಡ್ಡ ತಳ- ಬುಡವಿಲ್ಲದ ಆರೋಪದ ಮೂಲಕ ಮಾತ್ರ ಇವರು ಅಸ್ಪೃಶ್ಯರಾಗಿದ್ದಾರೆ. ಬಹುಮುಖ್ಯವಾಗಿ ಇದಕ್ಕೆ ಧರ್ಮ- ಧರ್ಮದೊಳಗೆ ಸೇರಿಕೊಂಡ ಬಹುದೊಡ್ಡ ಜನವರ್ಗದ ಸಮ ಸಂಸ್ಕೃತಿಯನ್ನು ಪ್ರತಿಪಾದನೆ ಮಾಡಲು ಇದ್ದಂತಹ ಈ ಭಾರತದ ಸಮಾಜವನ್ನೇ ನಿಯಂತ್ರಿಸುತ್ತಿರುವ ‘ದೇವರು – ದೇವರಿಂದ’ ತಮ್ಮ ಬದುಕನ್ನು ಉಜ್ವಲ ಗೊಳಿಸಿಕೊಳ್ಳಲು ಬಯಸಿದ ಕೆಲವೇ ಕೆಲವು ಬೆರಳೆಣಿಕೆಯ ಜನ ಇದರ ಸೃಷ್ಟಿಕರ್ತರು.

ಇಂತಹ ಅನೀತಿ ಸೃಷ್ಟಿಯನ್ನು ಅರಿಯದವರು ತಮ್ಮನ್ನು ತಾವೇ “ನಾವು ಅಸ್ಪೃಶ್ಯರು” ಎಂದು ಕರೆದುಕೊಂಡು ಸಾಂಸ್ಕೃತಿಕವಾಗಿ ಸೊರಗುತ್ತಿದ್ದಾರೆ.

ಈ ಹಿನ್ನೆಲೆಯಿಂದ ಪುರಾಣದ ಮೂಲಕ ಆರೋಪ ಮಾಡಿದವರೇ – ವಾಸ್ತವದ ಮೂಲಕ ಆರೋಪಿಗಳಾಗಿದ್ದಾರೆ . ಸಂವಿಧಾನಾತ್ಮಕವಾಗಿ ಇದೂ ಸಹ ವಾಸ್ತವ. ಆದ್ದರಿಂದ ಈ ನೆಲದಲ್ಲಿ ವಾಸಿಸುತ್ತಿರುವ ಅಸ್ಪೃಶ್ಯರು ಎಂದು ಕರೆಸಿಕೊಳ್ಳುವವರು ಎಂದೆಂದಿಗೂ ಸಹ ಸಂವಿಧಾನಾತ್ಮಕವಾಗಿ ಅಸ್ಪೃಶ್ಯರಲ್ಲ.

ಮಾನವ – ಮಾನವೀಯತೆಯ ವಿರುದ್ಧವಾಗಿ ಶತಶತಮಾನಗಳಿಂದಲೂ “ಇವರು ಅಸ್ಪೃಶ್ಯರು” ಎಂದು ಕರೆದು, ಕಟ್ಟುನಿಟ್ಟಿನ ಸಾಮಾಜಿಕ ನಿರ್ಬಂಧನೆಗಳ ಸಂಕೋಲೆಯಲ್ಲಿ ಸಿಲುಕಿಸಿ, ಈ ಸಂಕೋಲೆಗೆ ಎಲ್ಲೂ ಸಹ ಚ್ಯತಿ ಬರದ ಹಾಗೆ ಆಚರಣೆ ಮಾಡಿಸಿಕೊಂಡು ಇವರ ಮಾನವ ಹಕ್ಕುಗಳನ್ನು ದುರ್ಬಳಕೆ ಮಾಡಿಕೊಂಡವರು ನಿಜವಾಗಲೂ ಅಸ್ಪೃಶ್ಯರು ಎಂಬುದನ್ನು ಮರೆಯಬಾರದು. ಇದೇ ಅಂಬೇಡ್ಕರ್ ಅವರು ಭಾರತ ಹಾಗೂ ನಿಜ ಭಾರತೀಯರಿಗೆ ಸಾರಿ ಸಾರಿ ಹೇಳಿದ ಅವರ ಬೌದ್ಧಿಕ ವಾದದ ಪ್ರಮುಖ ತಿರುಳು.

WhatsApp Image 2025 11 17 at 3.26.35 PM
ಎನ್ ಚಿನ್ನಸ್ವಾಮಿ ಸೋಸಲೆ
+ posts

ಪ್ರಾಧ್ಯಾಪಕ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಎನ್ ಚಿನ್ನಸ್ವಾಮಿ ಸೋಸಲೆ
ಎನ್ ಚಿನ್ನಸ್ವಾಮಿ ಸೋಸಲೆ
ಪ್ರಾಧ್ಯಾಪಕ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...