ಅರಬ್‌ -ಇಸ್ರೇಲ್‌ ಯುದ್ಧದ ಪರಿಣಾಮಗಳು ಮತ್ತು ವಿಶ್ವಸಂಸ್ಥೆಯ ಪ್ರಮಾದ

Date:

1947ರ ನವೆಂಬರ್‌ 29ರಂದು ವಿಶ್ವಸಂಸ್ಥೆಯು ಪ್ಯಾಲೆಸ್ತೀನ್‌ನ ವಿಭಜನೆಯ ಗೊತ್ತುವಳಿಯನ್ನು ಅಂಗೀಕರಿಸಿತು. ಸಹಜವಾಗಿಯೇ ಪ್ಯಾಲೆಸ್ತೀನರು ಮತ್ತು ಅರಬ್‌ ದೇಶಗಳು ಇದನ್ನು ಪ್ರಬಲವಾಗಿ ವಿರೋಧಿಸಿದವು. ಒಟ್ಟು 13 ರಾಷ್ಟ್ರಗಳು ಈ ಗೊತ್ತುವಳಿ ವಿರುದ್ಧ ಮತ ಚಲಾಯಿಸಿದವು. ಅವುಗಳಲ್ಲಿ ಭಾರತವೂ ಒಂದು.


1948ರ
ಅರಬ್‌ ಇಸ್ರೇಲ್‌ ಯುದ್ಧದ ಪರಿಣಾಮ ಪ್ಯಾಲೆಸ್ತೀನ್‌ನ ಶೇಕಡ 70 ರಷ್ಟು ಭೂಭಾಗವು ಇಸ್ರೇಲ್‌ ಕೈವಶವಾಯಿತು. ಪ್ಯಾಲೆಸ್ತೀನರು ವೆಸ್ಟ್‌ ಬ್ಯಾಂಕ್‌ ಮತ್ತು ಗಾಜಾ ಪ್ರದೇಶಗಳಲ್ಲಿ ನೆಲೆ ನಿಂತರು. ಇನ್ನುಳಿದವರು ನಿರಾಶ್ರಿತರಾಗಿ ಬೇರೆ ದೇಶಕ್ಕೆ ತೆರಳಿದರು. ಈ ಯುದ್ಧದಲ್ಲಿ ಅರಬ್ಬರು ಸೋಲಲು ಅನೇಕ ಕಾರಣಗಳಿದ್ದವು, ಅವುಗಳು ವ್ಯವಸಾಯ ಆಧಾರಿತ ಆರ್ಥಿಕ ವ್ಯವಸ್ಥೆಗಳು ಆಗಿದ್ದವು. ಹಾಗಾಗಿ ಯುದ್ಧಕ್ಕೆ ಬೇಕಾದ ಆಧುನಿಕ ಕೈಗಾರಿಕೆಗಳು ಅವುಗಳ ಬಳಿ ಇರಲಿಲ್ಲ. ಅಲ್ಲದೇ ನಾಯಕತ್ವ ಮತ್ತು ಒಗ್ಗಟ್ಟಿನ ಸಮಸ್ಯೆಯಿತ್ತು. ವಸಾಹತುಶಾಹಿ ದೇಶಗಳಾದ ಬ್ರಿಟನ್‌ ಮತ್ತು ಫ್ರಾನ್ಸ್‌ಗಳು ಇಸ್ರೇಲಿಗೆ ಆಧುನಿಕ ಮಿಲಿಟರಿ ಸಹಾಯ ನೀಡಿದ್ದರಿಂದ ಅದು ಸುಲಭವಾಗಿ ಜಯಗಳಿಸಿತು.

ಈಜಿಪ್ಟ್‌ ಪಡೆಗಳು ಗಾಜಾ ಪ್ರಾಂತವನ್ನು ಮತ್ತು ಜೋರ್ಡಾನ್‌ ಪಡೆಗಳು ಪೂರ್ವ ಜೆರುಸಲೆಮ್‌ ಒಳಗೊಂಡ ಪಶ್ಚೀಮ ತೀರವನ್ನು (ವೆಸ್ಟ್‌ ಬ್ಯಾಂಕ್‌) ವಶಪಡಿಸಿಕೊಂಡಿದ್ದರಿಂದ ಅವುಗಳು ಪ್ಯಾಲೆಸ್ತೀನ್‌ರ ಬಳಿಯೇ ಉಳಿದವು. ಇದರು ತರುವಾಯು 1949ರಲ್ಲಿ, ಇಸ್ರೇಲ್‌ ಮತ್ತು ಅರಬ್‌ ಪಡೆಗಳ ನಡುವೆ ತಾತ್ಕಾಲಿಕ ಶಾಂತಿ ಒಪ್ಪಂದವಾಯಿತು. ಆದರೆ ಪ್ಯಾಲೆಸ್ತೀನ್‌ರ ಬಹುತೇಕ ಭೂಭಾಗ ಇಸ್ರೇಲ್‌ ಕೈವಶವಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಗಾಜಾ ಮತ್ತು ಪಶ್ಚಿಮ ತೀರ (ವೆಸ್ಟ್‌ ಬ್ಯಾಂಕ್‌) ಹೊರತುಪಡಿಸಿ ಉಳಿದ ಭೂಪ್ರದೇಶದಲ್ಲಿದ್ದ ಲಕ್ಷಾಂತರ ಪ್ಯಾಲೆಸ್ತೀನಿಯನ್ನರು ನೆರೆಯ ಅರಬ್‌ ದೇಶಗಳಲ್ಲಿ ತೆರಳಿ ಅಲ್ಲೆ ನಿರಾಶ್ರಿತರಾಗಿ ವಾಸ ಮಾಡಲಾರಂಭಿಸಿದರು. ತದನಂತರದ ವರ್ಷಗಳಲ್ಲಿ ಅರಬ್ ದೇಶಗಳು ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಪಲ್ಲಟಗಳಿಗೆ ಒಳಗಾಗುತ್ತಿದ್ದಂತೆ ಅರಬ್‌ ದೇಶದ ರಾಜಕೀಯದಲ್ಲಿ ಪ್ರಮುಖ ಆದ್ಯತೆಯಾಗಿದ್ದ ಪ್ಯಾಲೆಸ್ತೀನ್‌ ಪ್ರಶ್ನೆ ಕೊನೆಯ ಆದ್ಯತೆಯಾಯಿತು.

ತದನಂತರ ರಾಜಕೀಯದಲ್ಲಿ ಏಕಪಕ್ಷಿಯ ಮತ್ತು ಸರ್ವಾಧಿಕಾರಿ ಧೋರಣೆಗಳು ಚಿಗುರುತ್ತಿದ್ದಂತೆ ಪ್ಯಾಲೆಸ್ತೀನ್‌ ನಿರಾಶ್ರಿತರ ಮೇಲೆ ಅದು ಪರಿಣಾಮ ಬೀರಿತು. ಇದರಿಂದ ನಿರಾಶ್ರಿತ ಪ್ಯಾಲೆಸ್ತೀನರ ರಾಜಕೀಯ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಲಾಯಿತು. ಈ ದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಲು ಪ್ಯಾಲೆಸ್ತೀನ್‌ ನಿರಾಶ್ರಿತರು ಹರಸಾಹಸ ಪಡಬೇಕಾಯಿತು. ಬೇರೆ ದೇಶಗಳಿಗೆ ತೆರಳಲು ಕೂಡ ನಿರ್ಬಂಧಗಳನ್ನು ಹೇರಿದ್ದರಿಂದ ನಿರಾಶ್ರಿತರ ಸಮಸ್ಯೆ ಬಿಗಡಾಯಿಸಿತ್ತು. ಜೊರ್ಡಾನ್‌ನಲ್ಲಿ ಮಾತ್ರ ಪ್ಯಾಲೆಸ್ತೀನರಿಗೆ ರಾಜಕೀಯ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿತ್ತು. ಸಕಾರಾತ್ಮಕ ಬೆಳವಣಿಗೆಯೇನೆಂದರೆ, ಅರಬ್‌ ದೇಶಗಳಲ್ಲಿ ನಾಗರಿಕತ್ವ ಪಡೆಯಲು ಕೆಲ ಪ್ಯಾಲೆಸ್ತೀನಿಯರಿಗೆ ಸಾಧ್ಯವಾಯಿತು.

ಆದರೆ, ಅರಬ್ಬರ ನಡುವೆ ಉಂಟಾಗಿದ್ದ ರಾಜಕೀಯ ಭಿನ್ನಾಭಿಪ್ರಾಯಗಳು ಪ್ಯಾಲೆಸ್ತೀನ್‌ ವಿಷಯದಲ್ಲಿ ಒಮ್ಮತಕ್ಕೆ ಬರಲು ಅಡ್ಡಿಯಾದವು. ಅರಬ್‌ ದೇಶಗಳು ಪ್ಯಾಲೆಸ್ತೀನ್‌ ರಾಷ್ಟ್ರ ಪುನರ್‌ಸ್ಥಾಪಿಸಲು ಯುದ್ಧದ ಮಾರ್ಗಗಳಿಂದ ದೂರ ಉಳಿಯಲು ನಿರ್ಧರಿಸಿದರು.

margolick 600

ವಿಶ್ವಸಂಸ್ಥೆಯ ಪ್ರಮಾದ
1947ರಲ್ಲಿ ಪ್ಯಾಲೆಸ್ತೀನ್‌ನಲ್ಲಿ ಬ್ರಿಟಿಷ್‌ ಮ್ಯಾಂಡೆಟ್‌ ಕೊನೆಯಾಗುತ್ತಿದ್ದಂತೆ ಜಿಯೋನಿಸ್ಟ್‌ ಮತ್ತು ಪ್ಯಾಲೆಸ್ತೀನ್‌ರ ನಡುವಿನ ಈ ಭೂ ವಿವಾದವನ್ನು ಬಗೆಹರಿಸಲು ವಿಶ್ವಸಂಸ್ಥೆ ಮಧ್ಯಪ್ರವೇಶಿಸಿತು.‌ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಯುರೋಪಿನಲ್ಲಿ ಹಿಟ್ಲರ್ ನಡೆಸಿದ ಯಹೂದಿಗಳ ನರಮೇಧದಿಂದ ಇಡಿ ವಿಶ್ವವೇ ನಲುಗಿ ಹೋಗಿತ್ತು. ಯಹೂದಿಗಳ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ ವಿಶ್ವದೆಲ್ಲೆಡೆ ಚರ್ಚೆಗಳಾದವು. ಅವರ ಹಕ್ಕುಗಳಿಗಾಗಿ ಒತ್ತಾಯಿಸಿ ಅಮೆರಿಕ ಮತ್ತು ಯುರೋಪಿನಲ್ಲಿ ಚಳವಳಿಗಳು ನಡೆದವು. ಅವರ ಮೇಲೆ ಅಪಾರ ಅನುಕಂಪ ಮೂಡಿತು. ಈ ಸಂದರ್ಭವನ್ನು ಜಿಯೋನಿಸ್ಟರು ಬಳಸಿಕೊಂಡರು. ಪ್ಯಾಲೆಸ್ತೀನ್‌ ನೆಲದಲ್ಲಿ ಇಸ್ರೇಲ್‌ ಸ್ಥಾಪಿಸಲು ಎಲ್ಲಾ ದೇಶಗಳಿಗೆ ಒತ್ತಾಯಿಸಿದರು. ವಿಶ್ವಸಂಸ್ಥೆಯ ಕಮಿಷನ್‌ ಈ ಭಾವನೆಗಳ ಆಧಾರದ ಮೇಲೆಯೇ ಜಿಯೋನಿಸ್ಟ್‌ ಮತ್ತು ಸ್ಥಳೀಯ ಪ್ಯಾಲೆಸ್ತೀನರ ನಡುವೆ ಪ್ಯಾಲೆಸ್ತೀನ್‌  ಭೂಭಾಗವನ್ನು ವಿಭಾಗಿಸುವ ಅಂಗೀಕಾರನ್ನು ಪ್ರಸ್ತಾಪಿಸಿತು. ಈ ಕಾರಣ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಇಸ್ರೇಲ್‌ ದೇಶದ ಸ್ಥಾಪನೆಯನ್ನು ಅಮೆರಿಕ, ಅಂದಿನ ಸೋವಿಯತ್‌ ಯೂನಿಯನ್‌ ಈ ಅನುಕಂಪದ ಆಧಾರದ ಮೇಲೆಯೆ ಈ ನಿರ್ಣಯವನ್ನು ಅನುಮೋದಿಸಿದವು.

1947ರ ನವೆಂಬರ್‌ 29ರಂದು ವಿಶ್ವಸಂಸ್ಥೆಯು ಪ್ಯಾಲೆಸ್ತೀನಿನ ವಿಭಜನೆಯ ಗೊತ್ತುವಳಿಯನ್ನು ಅಂಗೀಕರಿಸಿತು. ಸಹಜವಾಗಿಯೇ ಪ್ಯಾಲೆಸ್ತೀನರು ಮತ್ತು ಅರಬ್‌ ದೇಶಗಳು ಇದನ್ನು ಪ್ರಬಲವಾಗಿ ವಿರೋಧಿಸಿದವು. ಒಟ್ಟು 13 ರಾಷ್ಟ್ರಗಳು ಈ ಗೊತ್ತುವಳಿ ವಿರುದ್ಧ ಮತ ಚಲಾಯಿಸಿದವು. ಅರಬ್‌ ದೇಶಗಳ ಜೊತೆ ಭಾರತ, ಪಾಕಿಸ್ತಾನ, ಗ್ರೀಸ್‌ ಮತ್ತು ಕ್ಯೂಬಾ ಕೂಡ ಈ ಗೊತ್ತುವಳಿ ವಿರುದ್ಧ ಮತ ಚಲಾಯಿಸಿದವರಲ್ಲಿ ಪ್ರಮುಖವಾದವು.

ಈ ಗೊತ್ತುವಳಿಯಲ್ಲಿ ಇದ್ದ ಸಮಸ್ಯೆಯೇನೆಂದರೆ, ಇಸ್ರೇಲ್‌ ದೇಶದ ಹಾಗೇ ಪ್ಯಾಲೆಸ್ತೀನ್‌ ಸ್ವಾಯತ್ತತೆಯನ್ನು ಈ ಗೊತ್ತುವಳಿ ಎತ್ತಿ ಹಿಡಿಯಲಿಲ್ಲ. ಅಲ್ಲದೇ ಭೂಭಾಗಗಳನ್ನು ಧರ್ಮಗಳ ಆಧಾರದ ಮೇಲೆ ವಿಭಜಿಸಿತು. ಹೀಗಾಗಿ ಶೇಕಡ 56ರಷ್ಟು ಭೂಭಾಗವನ್ನು ಅಲ್ಪಸಂಖ್ಯಾತರಾಗಿದ್ದ ಯಹೂದಿಗಳಿಗೆ ನೀಡಿ, ಉಳಿದ ಭೂಭಾಗವನ್ನು ಪ್ಯಾಲೆಸ್ತೀನರಿಗೆ ಎಂದು ಘೋಷಿಸಲಾಯಿತು. ಐತಿಹಾಸಿಕ ಸುಳ್ಳುಗಳು ಮತ್ತು ಅವೈಜ್ಞಾನಿಕತೆಯಿಂದ ಕೂಡಿದ ಈ ಶಿಫಾರಸ್ಸುಗಳು ಜಿಯೋನಿಸ್ಟರ ಲಾಬಿ ಮತ್ತು ವಸಾಹತುಶಾಹಿ ದೇಶಗಳ ಹುನ್ನಾರದಿಂದ ಅಂಗೀಕಾರವಾದವು. ಇದೇ ಮುಂದೆ 1948ರಲ್ಲಿ, ಇಸ್ರೇಲ್‌ ಸ್ಥಾಪನೆಗೆ ಮತ್ತು ಅರಬ್‌ ಇಸ್ರೇಲ್‌ ಯುದ್ಧಕ್ಕೆ ಪ್ರಮುಖ ಕಾರಣವಾಯಿತು.

ಅರಬ್‌ ಇಸ್ರೇಲ್‌ ಯುದ್ಧದ ನಂತರ ಇಸ್ರೇಲ್‌ ದೇಶ ವಿಶ್ವಸಂಸ್ಥೆಯ ಗೊತ್ತುವಳಿಯನ್ನು ಮೀರಿ ಪ್ಯಾಲೆಸ್ತೀನ್‌ ಭೂಭಾಗಗಳನ್ನು ವಶಪಡಿಸಿಕೊಂಡಿತು. ಸ್ಥಳೀಯ ಪ್ಯಾಲೆಸ್ತೀನಿಯರನ್ನು ಅವರ ಭೂಭಾಗಗಳಿಂದ ಹೊರದಬ್ಬಿತು. ಆಗ ವಿಶ್ವಸಂಸ್ಥೆ, ವಶಪಡಿಸಿಕೊಂಡ ಭೂಭಾಗಗಳನ್ನು ಮರಳಿಸಲು ಇಸ್ರೇಲ್‌ಗೆ ಸೂಚಿಸಿತು. ಆದರೆ, ಅದು ಫಲಕಾರಿಯಾಗಲಿಲ್ಲ. ಪ್ಯಾಲೆಸ್ತೀನಿಯನ್ನರಿಗೆ ಅವರ ನೆಲೆಗಳನ್ನು ಮರಳಿಸಿ ಒದಗಿಸುವ ವಿಶ್ವಸಂಸ್ಥೆಯ ಎಲ್ಲಾ ಪ್ರಯತ್ನಗಳು ವಿಫಲವಾದವು. ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ಪ್ಯಾಲೆಸ್ತೀನಿಯರು ನಿರಾಶ್ರಿತರಾದರು.

(ಮುಂದುವರಿಯುವುದು)

WhatsApp Image 2025 11 17 at 5.19.24 PM
ವಸಂತ ಕಲಾಲ್‌
+ posts

ದೆಹಲಿಯ JNU ನಲ್ಲಿ ಸಂಶೋಧನಾ ವಿದ್ಯಾರ್ಥಿ

ಪೋಸ್ಟ್ ಹಂಚಿಕೊಳ್ಳಿ:

ವಸಂತ ಕಲಾಲ್‌
ವಸಂತ ಕಲಾಲ್‌
ದೆಹಲಿಯ JNU ನಲ್ಲಿ ಸಂಶೋಧನಾ ವಿದ್ಯಾರ್ಥಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...