ಈ ದಿನ ಕವಿತೆ | ಪಟ್ಟಾಭಿಷೇಕ

Date:

ಅರಸನೊಬ್ಬ ರಾಜದಂಡವಿಡಿದು ಗಂಭೀರ ನಡಿಗೆಯಲಿ
ನಡೆದಿದ್ದಾನೆ ತನ್ನ ಪ್ರಭುತ್ವದ ಮಹತಿಯ ಮಹಲಿನಲಿ

ಹಿಂದೆ ಮುಂದೆ ಸುತ್ತ ಮುತ್ತ ಖಾಷಾಯ ವಸ್ತ್ರಧಾರಿಗಳು
ಜಟಾಧಾರಿಗಳು -ಭಸ್ಮ ಕುಂಕುಮ ಭೂಷಿತ ದೇಹಗಳು
ಸಾವಿರಾರು ಮಂದಿ ವೀಕ್ಷಿಸುತ್ತಾರೆ ಎವೆಯಿಕ್ಕದೆ
ವಿಚಿತ್ರ ದೃಶ್ಯವಿದು
ಅರಸ ಘೋಷಿಸಿದ್ದಾನೆ-ಈ ಮಹಲು ಪ್ರಜಾಪ್ರಭುತ್ವದ ಭವನವೆಂದು
ಆದರೆ, ನಡೆಯುತ್ತಿದೆಯಲ್ಲಿ
ಹವನ ಹೋಮ ಧೂಪ ಧೂಮದ ನಡುವೆ
ಪಟ್ಟಾಭಿಷೇಕ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಹಲಿನ ಹೊರಗೆ
ಪ್ರಭುತ್ವ ಹಾಗೂ ವಿರೋಧಿಗಳ ನಡುವೆ
ನಡೆದಿದೆ ಜಟ್ಟಿ ಕಾಳಗ
ರಾಜಾಜ್ಞೆಯಿದೆ-
ಪಟ್ಟಾಭಿಷೇಕ ವಿರೋಧಿಗಳು ಹದ್ದುಮೀರಿ
ದುರಾಚಾರಕ್ಕಿಳಿದು ತಡೆಯೊಡ್ಡಿದರೆ
ಕಠಿಣ ಶಿಕ್ಷೆಯ ಆದೇಶ

ಆಧಿಪತ್ಯದ ಹಿಂಸೆಯನ್ನಪ್ರಶ್ನಿಸುವ ಜನ, ಮನದ ಮೇಲೆ
ಅಧಿಕಾರದ ಕ್ರೌರ್ಯಭರಿತ ಶಕ್ತಿಯ ಕಟ್ಟೆಯೊಡೆಯಲಾಗಿದೆ
ಕ್ರೌರ್ಯ ಹರಿದಿದೆ

ಅನಿಯಂತ್ರಿತ ದುರಾಚಾರದ ದುಷ್ಟ ರಂಪಾಟದಲ್ಲಿರುವ
ರಾಜಾನುಯಾಯಿಗಳು ರಾಜಾಶ್ರಯದಲ್ಲಿ ರಕ್ಷಿತರು

ನಡೆದಿದ್ದಾನೆ ಅರಸ ಗಂಭೀರನಾಗಿ
ಕರದೊಳಗಿನ ರಾಜದಂಡಕ್ಕಿದೆ ಪುರಾಣಲೇಪಿತ ಪುಣ್ಯ ಘಳ ಘಳ ಹೊಳಪು
ಪ್ರಜೆಗಳ ಕರದ ಜಮಾವಣೆ ಅದ್ದೂರಿಯಾಗಿ ವ್ಯಯವಾಗುತ್ತಿದೆ

ಗರಿಬಿಚ್ಚಿದ ನವಿಲುಗಳು
ಕೊಂಬೆ ಚಾಚಿ ಹಬ್ಬಿದ ಆಲದ ಮರಗಳು
ಅರಳಿದ ತಾವರೆಗಳು
ಸ್ತಬ್ಧವಾಗಿ ಬಂಧಿಯಾಗಿವೆ ಮಹಲಿನ ಗೋಡೆಯಲಿ
ಪಸರಿಸಿದೆ ಮಹಲ ತುಂಬಾ ಭವ್ಯ ಐಷಾರಾಮದ ಕಂಪು

ಅರಸನ ಕಣ್ಣು ಕುಕ್ಕುವ ವೈಭೋಗ
ಜನರನ್ನ ಕುರುಡು ಮಾಡಿದೆ
ಅವನ ಕಂಚಿನ ಕಂಠ ಸಿರಿಯ ಕಟುಮಾಧುರ್ಯ
ನಿದ್ದೆಯ ಅಮಲಿಗೆ ಜಾರಿಸಿದೆ
ಗಂಭೀರನಾಗಿ ನಡೆದಿದ್ದಾನೆ ಅವನು
ಅವರ ದೇಹಗಳ ಮೆಟ್ಟಲಾಗಿಸಿ
ಅವನನುಯಾಯಿಗಳು ಹಿಂಬಾಲಿಸಿದ್ದಾರೆ
ರಕ್ತದ ರಂಗೋಲಿ ಹರಡುತ್ತಾ
ಅವನು ಪಟ್ಟಾಭಿಷಿಕ್ತ ಸಿಂಹಾಸನ ರೂಢನಾದ.

ಇಂಗ್ಲಿಷ್‌ ಮೂಲ : ಪರಿಣಿತಾ ಶೆಟ್ಟಿ

ಕನ್ನಡಕ್ಕೆ : ರಾಜಲಕ್ಷ್ಮಿ/ವರ್ಷಾ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...