ಈ ದಿನ ಕವಿತೆ | ಮಣಿಪುರಕ್ಕೆ

Date:

ಸತ್ಯವದು
ಚಕ್ರಾಧಿಪತಿಯ ಹೊಸ ದಿರಿಸು ಧರಿಸಿದಡೆ
ಬೀದಿಯಲಿ ಬೆತ್ತಲೆಯ ಮೆರವಣಿಗೆ
ದಿರಿಸೇ ನಾಗರೀಕತೆಯ ಮೊದಲೆಜ್ಜೆ
ಬಿಡುಬೀಸಿನ ಹಿನ್ನಡೆ

ಪಂದ್ಯವಾಗದೆ ಜಟ್ಟಿ ಕಾಳಗ
ವಿಜಯ ಸದಾ ಒಂದೆಡೆ

ಹರಾಜಾದಳು ನಿತ್ಯ ಆಕೆ
ಬಂಡವಾಳಶಾಹಿಯ ತೆಕ್ಕೆಗೆ
ಅಂಗಾಂಗ ಅಂಶ ಮರುನಾಮಕರಣ
ಗಿಣಿದನಿಯ ಒಡತಿಯಾಕೆ
ಕಾಶ್ಮೀರದಲ್ಲವಳ ಸ್ಪರ್ಶಿಸಿ
ಸಮ್ಮತಿಯ ಆಯ್ಕೆಯೇ ಅವಳಿಗಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಿವಸ್ತ್ರಾವಸ್ಥೆಯ ಆಕ್ರಂದನ
ತುಂಡು ಬಟ್ಟೆಯೇ ವಿಶಾಲ ಅಂಬರ
ಕೃಷ್ಣ ಚೆಲ್ಲಿದ್ದಾನೆ ತುಟಿ ಕೊಂಕಿಸಿ ನಗೆಯ

ಕಾಳಗಗಳೆಲ್ಲ ಕಪೋಲ ಕಲ್ಪಿತ ಜಿಹಾದ್ ನೊಡನೆ
ಘೋರಯುದ್ಧಗಳೆಲ್ಲ ಮರೆಯಾಗಿವೆ ಮಾತಿನ ಮರೆಯ ಓಘದಲ್ಲಿ:
ಬೇಟಿ ಬಚಾವೋ ಬೇಟಿ ಪಡೋ
ಬೇಟಿ ಕೋ ಬಚಾವೋ ಬೇಟೆ ಕೋ ಪಡಾವೋ!
ಜೀವಕೋಶಗಳವು ತಡೆಯಿಲ್ಲದೆ ದೇಹವೆಲ್ಲವ ಆಕ್ರಮಿಸಿ
ಕ್ಯಾನ್ಸರ್ ಪದನಾಮ ಪಡೆಯಲೊಲ್ಲ

ಮಕ್ಕಳಿವರಮ್ಮ ವಿನಾಶ ಪುತ್ರರು
ಮಾತೆಯ ನಗ್ನ ಮೆರವಣಿಗೆಗಾರರು

ಭಾರತಮಾತೆ

ವಸಾಹತುಶಾಹಿ ದೊರೆ ಅತ್ಯಾಚಾರಿ
ಪುತ್ರರಾದರೆ….?

ಇಂಗ್ಲಿಷ್ ಮೂಲ: Rukhaya. M. K.
ಅನುವಾದ:ರಾಜಲಕ್ಷ್ಮೀ.ಎನ್.ಕೆ, ಮಂಗಳೂರು

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...