ರಾಜಕೀಯ ದೇಣಿಗೆಗಳಿಗೆ ವಿನಾಯಿತಿ; ಸರ್ಕಾರದ ಖಜಾನೆಗೆ 11,813 ಕೋಟಿ ರೂ. ತೆರಿಗೆ ನಷ್ಟ!

Date:

ರಾಜಕೀಯ ಪಕ್ಷಗಳಿಗೆ ನೀಡಲಾಗುವ ದೇಣಿಗೆಗಳಿಗೆ ತೆರಿಗೆ ವಿನಾಯಿತಿ ನೀಡಿರುವ ಕಾರಣ ಕಳೆದ 10 ವರ್ಷಗಳಲ್ಲಿ ಸರ್ಕಾರ ಖನಾನೆಗೆ ಬರೋಬ್ಬರಿ 11,812.98 ಕೋಟಿ ರೂ. ತೆರಿಗೆ ನಷ್ಟವಾಗಿದೆ. ಸರ್ಕಾರವು ಬೃಹತ್ ಪ್ರಮಾಣದ ತೆರಿಗೆ ಆದಾಯವನ್ನು ಕಳೆದುಕೊಂಡಿದೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ.

ಕಾಮನ್ವೆಲ್ತ್ ಮಾನವ ಹಕ್ಕುಗಳ ಕಾರ್ಯಕ್ರಮದ ಹಿರಿಯ ಸಂಶೋಧಕ ವೆಂಕಟೇಶ್ ನಾಯಕ್ ಅವರು ಈ ಅಧ್ಯಯನ ನಡೆಸಿದ್ದಾರೆ. 2015ರಿಂದ 2024ರವರೆಗೆ ರಾಜಕೀಯ ಪಕ್ಷಗಳು ಪಡೆದಿರುವ ದೇಣಿಗೆಗಳ ಆಧಾರದ ಮೇಲೆ ಅಧ್ಯಯನ ನಡೆದಿದೆ. ‘ರೆವೆನ್ಯೂ ಇಂಪ್ಯಾಕ್ಟ್‌ ಆಫ್ ಡೊನೇಷನ್ಸ್‌ ಟು ಪೊಲಿಟಿಕಲ್ ಪಾರ್ಟೀಸ್: ಎ ಪ್ರಿಲಿಮಿನರಿ ಸ್ಟಡಿ’ (ರಾಜಕೀಯ ಪಕ್ಷಗಳಿಗೆ ದೇಣಿಗೆಗಳ ಆದಾಯದ ಪರಿಣಾಮ: ಪ್ರಾಥಮಿಕ ಅಧ್ಯಯನ) ಎಂಬ ಶೀರ್ಷಿಕೆಯಡಿ ವರದಿಯನ್ನು ರಚಿಸಲಾಗಿದೆ.

ವರದಿಯು ಕೇಂದ್ರ ಸರ್ಕಾರದ ರಶೀದಿ ದಾಖಲೆಗಳು ಮತ್ತು ‘ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ನಿಂದ (ADR) ಪಡೆಯಲಾದ ಚುನಾವಣಾ ಆಯೋಗದ ಫೈಲಿಂಗ್‌ಗಳು ಮತ್ತು ಲೆಕ್ಕಪರಿಶೋಧನೆಗಳ ಅಂಕಿಅಂಶಗಳನ್ನು ವಿಶ್ಲೇಷಿಸಿದೆ. ವಿವಾದಿತ ಚುನಾವಣಾ ಬಾಂಡ್‌ಗಳನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದ ಬಳಿಕ, ಈ ವಿಶ್ಲೇಷಣೆಯನ್ನು ಮಾಡಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದರಲ್ಲಿ ವೈಯಕ್ತಿಕ ದಾನಿಗಳು ಅಥವಾ ಹಿಂದು ಅನ್‌ಡಿವೈಡೆಡ್ ಫ್ಯಾಮಿಲೀಸ್ (ಹಿಂದು ಅವಿಭಜಿತ ಕುಟುಂಬಗಳು -HUFs) ಕಾಪೋರೇಟ್ ಕಂಪನಿಗಳಿಗಿಂತ ಹೆಚ್ಚು ಕೊಡುಗೆ ನೀಡಿವೆ ಎಂದು ವರದಿ ಹೇಳಿದೆ.

ವರದಿ ಪ್ರಕಾರ, 2022-23ರ ಹಣಕಾಸು ವರ್ಷದಲ್ಲಿ, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿರುವ ವೈಯಕ್ತಿಕ ದಾನಿಗಳು 2,275.85 ಕೋಟಿ ರೂ. ಮೌಲ್ಯದ ತೆರಿಗೆ ವಿನಾಯಿತಿಗ ಪಡೆದಿದ್ದಾರೆ. ಕಾರ್ಪೊರೇಟ್ ಕಂಪನಿಗಳು 514.4 ಕೋಟಿ ರೂ. ಮತ್ತು ಸಂಘ-ಸಂಸ್ಥೆಗಳು 115.71 ಕೋಟಿ ರೂ. ವಿನಾಯಿತಿ ಪಡೆದಿವೆ.

ಈ ಪ್ರವೃತ್ತಿಯು 2023-24ರ ಆರ್ಥಿಕ ವರ್ಷದಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಒಟ್ಟು ತೆರಿಗೆ ವಿನಾಯತಿಯಲ್ಲಿ ವೈಯಕ್ತಿಕ ದಾನಿಗಳು ಗರಿಷ್ಠ (78.3%) ವಿನಾಯತಿ ಪಡೆಯುವ ನಿರೀಕ್ಷೆ ಇದೆ ಎಂದು ವರದಿ ಹೇಳಿದೆ.

2015-16ನಿಂದ 2023-24ರ ವೇಳೆಗೆ, ವೈಯಕ್ತಿಕ/HUF ವಿನಾಯಿತಿಗಳು 66.1 ಕೋಟಿ ರೂ. ನಿಂದ 2,275.85 ಕೋಟಿ ರೂ.ಗೆ ಏರಿಕೆಯಾಗಿದೆ. ಏತನ್ಮಧ್ಯೆ, ಕಾರ್ಪೊರೇಟ್ ಕಂಪನಿಗಳು 2019-20ರ ಆರ್ಥಿಕ ವರ್ಷದಲ್ಲಿ (ಲೋಕಸಭಾ ಚುನಾವಣೆಯ ವರ್ಷ) 1,159.91 ಕೋಟಿ ರೂ. ತೆರಿಗೆ ವಿನಾಯತಿ ಪಡೆದಿವೆ. ಆದರೆ, ಚುನಾವಣೆಯ ಬಳಿಕ, ಅವುಗಳು ಪಡೆದಿರುವ ವಿನಾಯತಿ ಕುಸಿದಿದೆ.

2015-16ರಲ್ಲಿ ರಾಜಕೀಯ ಪಕ್ಷಗಳಿಗೆ (43 ಪಕ್ಷಗಳು) ಘೋಷಿತ ದೇಣಿಗೆಯು 714 ಕೋಟಿ ರೂ. ಇತ್ತು. ಇದು, 2023-24ರಲ್ಲಿ 7,203 ಕೋಟಿ ರೂ.ಗಳಿಗೆ (27 ಪಕ್ಷಗಳು) ಏರಿಕೆಯಾಗಿದೆ. ಆದಾಗ್ಯೂ, 9 ವರ್ಷಗಳಲ್ಲಿ ನೀಡಲಾದ ಒಟ್ಟು ದೇಣಿಗೆಗಳಲ್ಲಿ ಕೇವಲ 41.76% (28,287 ಕೋಟಿ ರೂ.) ದೇಣಿಗೆಗೆ ಮಾತ್ರ ತೆರಿಗೆ ವಿನಾಯಿತಿ ನೀಡಲಾಗಿದೆ ಎಂದು ಅಂಕಿಅಂಶಗಳು ಹೇಳಿವೆ. ಉಳಿದ 58% ದೇಣಿಗೆ ತೆರಿಗೆ ವಿನಾಯತಿ ನೀಡುವ ಬಗ್ಗೆ ಮಾಹಿತಿ ಇಲ್ಲ ಎಂದು ವರದಿ ತಿಳಿಸಿದೆ.

“ಈ ಅಂಕಿಅಂಶಗಳು ವಿರೋಧಾಭಾಸವನ್ನು ಸೂಚಿಸುತ್ತವೆ. 100% ತೆರಿಗೆ ವಿನಾಯಿತಿ ಪಡೆಯುವ ಅವಕಾಶವಿದ್ದರೂ ಹೆಚ್ಚಿನ ದಾನಿಗಳು ವಿಶೇಷವಾಗಿ ಕಾರ್ಪೊರೇಟ್‌ ಸಂಸ್ಥೆಗಳು ವಿನಾಯಿತಿಯ ಪ್ರಯೋಜನಗಳನ್ನು ಪಡೆಯುವುದಿಲ್ಲ. ತೆರಿಗೆ ವಿನಾಯಿತಿ ಪಡೆಯದೇ ದೇಣಿಗೆ ನೀಡಲು ಅವರು ಮುಂದೆ ಬಂದಿದ್ದೇಕೆ? ಅವರು ಬೇರೆ ಯಾವ ಪ್ರಯೋಜನ, ಪ್ರೋತ್ಸಾಹಗಳನ್ನು ಪಡೆದಿದ್ದಾರೆ? ಪಾರದರ್ಶಕತೆಯ ಕೊರತೆಯಿಂದಾಗಿ ಉತ್ತರಗಳೂ ದೊರೆಯದಂತಾಗಿವೆ” ಎಂಬುದರ ಮೇಲೆ ವರದಿ ಬೆಳಕು ಚೆಲ್ಲಿದೆ.

ಕಾರ್ಪೊರೇಟ್ ಸಂಸ್ಥೆಗಳು 2024ರ ಚುನಾವಣೆಗೂ ಮೊದಲು ಹೆಚ್ಚಿನ ದೇಣಿಗೆ ನೀಡಿವೆ; 2019ರ ಲೋಕಸಭಾ ಚುನಾವಣೆಗೂ ಹಿಂದಿನ 2018-19ರ ಹಣಕಾಸು ವರ್ಷದಲ್ಲಿ ಕಾರ್ಪೊರೇಟ್‌ ಕಂಪನಿಗಳು 801.58 ಕೋಟಿ ರೂ. ವಿನಾಯಿತಿ ಪಡೆದಿವೆ. ಚುನಾವಣಾ ವರ್ಷವೂ ಆಗಿದ್ದ 2019-20ರ ಆರ್ಥಿಕ ವರ್ಷದಲ್ಲಿ ಕಂಪನಿಗಳು ತೆರಿಗೆ ವಿನಾಯತಿಯು 1,159.91 ಕೋಟಿ ರೂ.ಗಳಿಗೆ ಏರಿಕೆಯಾಗಿದೆ.

ಆದಾಗ್ಯೂ, 2020ರ ನಂತರ, ಕಾರ್ಪೊರೇಟ್ ಸಂಸ್ಥೆಗಳು ಪಡೆದ ತೆರಿಗೆ ವಿನಾಯತಿ ಕಸಿದಿದೆ. 2020-21ರ ಆರ್ಥಿಕ ವರ್ಷದಲ್ಲಿ ಕಾರ್ಪೊರೇಟ್ ಕಂಪನಿಗಳಳು ಪಡೆದ ವಿನಾಯತಿಯು 256 ಕೋಟಿ ರೂ.ಗೆ ಕುಸಿದಿದೆ. ಇದಕ್ಕೆ, ಬಹುಶಃ ಚುನಾವಣಾ ಬಾಂಡ್‌ಗಳು ಕಾರಣವಿರಬಹುದು ಎಂದು ನಾಯಕ್ ಹೇಳಿದ್ದಾರೆ.

“ಚುನಾವಣಾ ಬಾಂಡ್‌ಗಳು ಅನಾಮಧೇಯ, ಹಿಂಬಾಗಿಲಿನ ಹಣಕಾಸು ಪ್ರೋತ್ಸಾಹವನ್ನು ಹೆಚ್ಚಿಸಿತು. ಕಂಪನಿಗಳು ಸಾರ್ವಜನಿಕ ಪರಿಶೀಲನೆ ಮತ್ತು ತೆರಿಗೆ ವಿನಾಯಿತಿಗಳನ್ನು ಪಡೆಯದೆ ರಹಸ್ಯವಾಗಿ ದೇಣಿಗೆ ನೀಡಿರಬಹುದು. ಬಾಂಡ್‌ಗಳನ್ನು ರದ್ದುಗೊಳಿಸಿದ ನಂತರ, ಕಾರ್ಪೊರೇಟ್‌ ಕಂಪನಿಗಳು ಮತ್ತೆ ವಿನಾಯಿತಿಗಳನ್ನು ಪಡೆಯಲು ಮುಂದಾಗಬಹುದು. ಆದರೆ, 2023-24ರಲ್ಲಿ 577.98 ಕೋಟಿ ರೂ. ತೆರಿಗೆ ವಿನಾಯತಿಯನ್ನು ಮಾತ್ರವೇ ಸೂಚಿಸುತ್ತಿದೆ” ಎಂದು ಅವರು ತಿಳಿಸಿದ್ದಾರೆ.

ವೈಯಕ್ತಿಕ ದಾನಿಗಳ ಹೆಚ್ಚಳದ ಬಗ್ಗೆ ಪ್ರತಿಕ್ರಿಯಿಸಿರುವ ನಾಯಕ್, “ಸಾಮಾನ್ಯ ನಾಗರಿಕರು ಹೆಚ್ಚು ದೇಣಿಗೆ ನೀಡುತ್ತಿದ್ದಾರೆಯೇ ಅಥವಾ ಇದು ಸಂಪತ್ತಿನ ಕೇಂದ್ರೀಕರಣವೇ? ಆದಾಯ ತೆರಿಗೆ ಇಲಾಖೆಯಿಂದ ಸೂಕ್ಷ್ಮ ದತ್ತಾಂಶವಿಲ್ಲದ ಕಾರಣ, ನಮಗೆ ಹೆಚ್ಚಿನ ಮಾಹಿತಿ ದೊರೆತಿಲ್ಲ. ರಾಜಕೀಯ ಪಕ್ಷಗಳು ತಮ್ಮ ದಾನಿಗಳ ವಿವರಗಳನ್ನು ಬಹಿರಂಗಪಡಿಸಬೇಕು. ಇದು ಕೇವಲ ತೆರಿಗೆ ವಿನಾಯಿತಿಯ ವಿಚಾರವಲ್ಲ, ಪ್ರಜಾಪ್ರಭುತ್ವದ ಹೊಣೆಗಾರಿಕೆಯೂ ಆಗಿದೆ” ಎಂದು ಹೇಳಿದ್ದಾರೆ.

ಈ ವರದಿ ಓದಿದ್ದೀರಾ?: ಚುನಾವಣಾ ಬಾಂಡ್ | ಆರೋಪಿ, ಅಪರಾಧಿಗಳೇ ಇಲ್ಲದ ಹಗರಣವೇ?

ಗಮನಾರ್ಹವಾಗಿ, 2022-23ನೇ ಹಣಕಾಸು ವರ್ಷದಲ್ಲಿ 25 ರಾಜಕೀಯ ಪಕ್ಷಗಳು ಒಟ್ಟು 3,912 ಕೋಟಿ ರೂ. ದೇಣಿಗೆ ಪಡೆದಿರುವುದಾಗಿ ಘೋಷಿಸಿದವು. ಘೋಷಿಸದ ಮೊತ್ತ ಮತ್ತು ಪಕ್ಷಗಳೂ ಇವೆ. 40ಕ್ಕೂ ಹೆಚ್ಚು ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಕಡ್ಡಾಯ ಆಡಿಟ್ ವರದಿಗಳನ್ನು ಸಲ್ಲಿಸಲು ವಿಫಲವಾಗಿವೆ. ಹೀಗಾಗಿ, ಘೋಷಿತ ದೇಣಿಗೆಗಳು ಅತ್ಯಂತ ಕಡಿಮೆ ಮೊತ್ತವೆಂದು ವರದಿ ಸೂಚಿಸುತ್ತದೆ.

ದಾನಿಗಳ ದತ್ತಾಂಶವನ್ನು ಕೋರಿ ನಾಯಕ್ ಅವರು ಹಲವು ಬಾರಿ ಆರ್‌ಟಿಐ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆದರೆ, ಆದಾಯ ತೆರಿಗೆ ಇಲಾಖೆ ಮಾಹಿತಿ ಕೊಡಲು ಪದೇ ಪದೇ ನಿರಾಕರಿಸಿದೆ. “ಸರ್ಕಾರವು ‘ಒಂದು ಬಟನ್‌ ಕ್ಲಿಕ್ ಮಾಡುವುದರ ಮೂಲಕ’ ದೇಣಿಗೆ ಮತ್ತು ತೆರಿಗೆ ವಿನಾಯತಿಯ ಡೇಟಾವನ್ನು ಸಂಗ್ರಹಿಸಿ, ಮಾಹಿತಿ ಕೊಡಬಹುದು. ಆದರೆ, ಅವರು ಕೊಡುತ್ತಿಲ್ಲ. ಈ ಗೌಪ್ಯತೆ ಏಕೆ? ಪಾದದರ್ಶಕತೆಯು ಸಾರ್ವಜನಿಕ ಹಿತಾಸಕ್ತಿಯನ್ನು ಹೆಚ್ಚಿಸುತ್ತದೆ. ಅದರೆ, ಅದಾಗುತ್ತಿಲ್ಲ” ಎಂದು ನಾಯಕ್ ಹೇಳಿದ್ದಾರೆ.

ವರದಿಯು ಗಂಭೀರ ಪ್ರಶ್ನೆಯೊಂದನ್ನು ಮುನ್ನೆಲೆಗೆ ತಂದಿದೆ; 58% ದಾನಿಗಳು ತೆರಿಗೆ ವಿನಾಯಿತಿಗಳನ್ನು ಏಕೆ ಪಡೆದಿಲ್ಲ? ಸಾವಿರಾರು ಕೋಟಿಗಳನ್ನು ದೇಣಿಗೆ ನೀಡುವ ವ್ಯಕ್ತಿಗಳು/HUFಗಳು ಯಾರು? ಕಾರ್ಪೊರೇಟ್ ದೇಣಿಗೆಗಳು ಚುನಾವಣಾ ಬಾಂಡ್‌ ರದ್ದತಿಯ ನಂತರ ಮತ್ತೆ ತೆರಿಗೆ ವಿನಾಯತಿ ಪಡೆಯುತ್ತವೆಯೇ?

“ಈ ಪ್ರವೃತ್ತಿಗಳು ಮತ್ತು ಪ್ರಶ್ನೆಗಳ ಕುರಿತು ಸಂಸದೀಯ ಚರ್ಚೆ ನಡೆಯಬೇಕು” ಎಂದು ನಾಯಕ್ ಪ್ರತಿಪಾದಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...