ಸತ್ಯಶೋಧನೆ | ಮಂಗಳೂರಿನ ಸೇಂಟ್‌ ಜೆರೋಸಾ ಶಾಲೆ ಹಿಂದೂ ವಿರೋಧಿಯೇ?

Date:

ಇಲ್ಲಿ ಶಿಕ್ಷಕಿಯ ಮೇಲಿನ ಆರೋಪ ಮತ್ತು ತನಿಖೆ ಇಷ್ಟೇ ವ್ಯಾಪ್ತಿಯಲ್ಲಿರಬೇಕಾದ ವಿಚಾರ, ಮತಾಂತರ, ಕ್ರೈಸ್ತ ಶಾಲೆಗಳಿಂದ ಹಿಂದೂ ವಿದ್ಯಾರ್ಥಿಗಳು ಹೊರಗೆ ಬನ್ನಿ… ಇಂತಹ ಭೀಕರ ಹೇಳಿಕೆಗಳಿಗೆ ವಿಸ್ತರಿಸಿಕೊಂಡು ಅಸಲಿ ಸಮಸ್ಯೆ ಗೌಣವಾಯಿತು. ಅದಕ್ಕೆ ಕಾರಣ ಶಾಸಕರ ದುಡುಕಿನ ಹೇಳಿಕೆ ಮತ್ತು ವರ್ತನೆ.

 

ಮಂಗಳೂರಿನ ಸೇಂಟ್ ಜೆರೋಸಾ ಶಾಲೆಯ ಪ್ರಕರಣದ ಕುರಿತು ತನಿಖೆ ಪ್ರಾರಂಭವಾಗಿದೆ. ಶಿಕ್ಷಕಿಯ ವಿರುದ್ಧ ಮತ್ತು ಶಾಲೆಯ ವಿರುದ್ಧ ವಿದ್ಯಾರ್ಥಿಗಳು ಪೋಷಕರು ಮಾಡಿದ ಪ್ರತೀ ಅರೋಪವೂ ತನಿಖೆಯಾಗಬೇಕು. ಶಿಕ್ಷಕಿಯ ತಪ್ಪಿದ್ದರೆ ಶಿಕ್ಷೆ ಆಗಬೇಕು. ಅದಕ್ಕೆ ಆಡಳಿತ ಮಂಡಳಿ ಸಹಕರಿಸಬೇಕು. ಈ ಹೋರಾಟದ ನಾಯಕಿ ಕವಿತಾ ಅನ್ನುವವರಿಗೆ ಜೀವ ಬೆದರಿಕೆ ಬಂದಿದೆಯಂತೆ. ಅದೂ ತನಿಖೆಯಾಗಿ ಆರೋಪಿಯನ್ನು ಬಂಧಿಸಬೇಕು. ಕ್ರೈಸ್ತ ಧರ್ಮದ ಬಗ್ಗೆ ತೀರಾ ಅವಹೇಳನದ ಸಂದೇಶ ಹಾಕುತ್ತಿರುವ ಓರ್ವ ವ್ಯಕ್ತಿಯ ವಿರುದ್ಧವೂ ಕೇಸ್ ಆಗಬೇಕು.

ಈಗ ವಿಷಯಕ್ಕೆ ಬರುತ್ತೇನೆ… ಜೆರೋಸಾ ಶಾಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಈ ಹಿಂದೆ ಮಾತನಾಡಿದ್ದಕ್ಕೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಕೇಳಿದ್ದರು. ಇದೇ ಪ್ರಶ್ನೆಗಳನ್ನು ನಾನು ಅದೇ ಶಾಲೆಗೆ ಭೇಟಿ ನೀಡಿ ಕೇಳಿದ್ದೇನೆ. ಅವರೂ ಉತ್ತರಿಸಿದ್ದಾರೆ.‌

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

10-2-24ರ ಬೆಳಿಗ್ಗೆ 4 ಪಾಲಕರು ಬಂದು ಮೌಖಿಕವಾಗಿ ದೂರು ಸಲ್ಲಿಸಿದ್ದು, ಶಾಲಾ ಮುಖ್ಯಸ್ಥರು ಶಿಕ್ಷಕಿಯನ್ನು ಮತ್ತು ವಿದ್ಯಾರ್ಥಿಗಳನ್ನು ವಿಚಾರಿಸಿ ಮುಂದಿನ ಕ್ರಮ ಕೈಗೊಳ್ಳಲು ಎರಡು ದಿನ ಅವಕಾಶ ಕೇಳಿದ್ದಾರೆ. ಅದನ್ನು ಪಾಲಕರು ನಿರಾಕರಿಸಿದ್ದಾರೆ. ಶಿಕ್ಷಕಿ ಈಗಲೇ ಬರುತ್ತಾರೆ, ಮಾತನಾಡೋಣ ಎಂದರೂ ತಮಗೆ ಸಮಯವಿಲ್ಲವೆಂದು ಪಾಲಕರು ಹೊರ ಹೋಗಿದ್ದಾರೆ. ಸ್ವಲ್ಪ ಸಮಯದಲ್ಲೇ ಪ್ರಭಾ ಮೇಡಂ ಬಂದಿದ್ದಾರೆ. ಶಿಕ್ಷಕಿ ಓರ್ವ ಪಾಲಕರಿಗೆ ಪೋನ್ ಮಾಡಿದ್ದಾರೆ. ದೂರವಾಣಿ ಕರೆಗಳ ದಾಖಲೆ ಪರಿಶೀಲನೆ ಮಾಡಬಹುದು. ಅವರು ಬರಲು ನಿರಾಕರಿಸಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಶಾಲೆಯಲ್ಲಿ ನಿರಂತರ ಹಿಂದೂ ಅವಹೇಳನ ಎಂದು ವಿಡಿಯೋ ವೈರಲ್ ಮಾಡಿದ್ದಾರೆ. ತಕ್ಷಣ ಪ್ರತಿಭಟನೆ ಪ್ರಾರಂಭವಾಗಿದೆ. ಶಾಲೆಯವರು ಪೊಲೀಸ್ ಅಧಿಕಾರಿಗಳು ಆಡಿಯೋ ವೈರಲ್ ಮಾಡಿದ ಬಗ್ಗೆ ದೂರು ನೀಡಿದ್ದಾರೆ.

ಇಲ್ಲಿ ಈ ಹೋರಾಟವನ್ನು ಸಂಘಟಿಸಿದ ಕವಿತಾ ಅನ್ನುವವರು ಕುದ್ರುವಿನಲ್ಲಿ ಕ್ರೈಸ್ತರೇ ನಡೆಸುವ ಅಂಗನವಾಡಿ ಟೀಚರ್ ಆಗಿದ್ದು, ಅದು ಬಂದ್ ಆದ ಮೇಲೆ ರಾಜಕೀಯ ಮುಖಂಡರ ಪ್ರಭಾವ ಬಳಸಿ ತೊಕ್ಕೊಟ್ಟಿನ ಕ್ರೈಸ್ತ ಶಾಲೆಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರಂತೆ.

ಕ್ರೈಸ್ತ ಸಮುದಾಯದ ಸಂಸ್ಥೆಯಲ್ಲಿ ಕೆಲಸ ಮಾಡುವ ಕಾರಣಕ್ಕೆ ಅನ್ಯಾಯವನ್ನು ಪ್ರಶ್ನಿಸಬಾರದು ಅನ್ನುವುದು ಸರಿಯಲ್ಲ.

ಆದರೆ, ಅವರಿಗೆ ಹಲವಾರು ಕ್ರೈಸ್ತ ಮುಖಂಡರ, ಧಾರ್ಮಿಕ ಮುಂದಾಳುಗಳ ಪರಿಚಯವಿತ್ತು. ಅವರಲ್ಲಿ ತನ್ನ ನೋವು ಹೇಳಬಹುದಿತ್ತು. ಅದು ಸಾಧ್ಯವಾಗದು ಎಂದಾದರೆ, ಓರ್ವ ಶಿಕ್ಷಕಿಗೆ ಶಾಲೆಯ ವಿಷಯ ಕುರಿತು ಮೊದಲು ಮುಖ್ಯಸ್ಥೆಗೆ ದೂರು ಸಲ್ಲಿಸಬೇಕು. ನಂತರ ಶಿಕ್ಷಣ ಇಲಾಖೆ, ಅದೂ ಆಗದಿದ್ದರೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಬೇಕು ಎಂಬ ಎಲ್ಲಾ ಮಾಹಿತಿ ಅವರಿಗೆ ತಿಳಿದಿತ್ತು. ಇಂತಹ ಪ್ರಕರಣಗಳಾದಾಗ ಶಿಕ್ಷಣ ಸಂಸ್ಥೆ ಹೇಗೆ ನಿರ್ವಹಿಸುತ್ತದೆ ಎಂಬ ಸ್ಪಷ್ಟವಾದ ಕಲ್ಪನೆ ಅವರಿಗಿತ್ತು.

ಅದೇ ರೀತಿ ಇನ್ನೋರ್ವ ಪೋಷಕಿ ತನ್ನ ಮಗಳ ಶುಲ್ಕ ರಿಯಾಯಿತಿಗೆ ಕ್ರೈಸ್ತ ಮುಖಂಡರನ್ನು ಸಂಪರ್ಕಿಸಿ ಸಹಾಯ ಪಡೆದವರು. ಅವರೂ ಕೂಡಾ ಈ ನಾಯಕರ ಗಮನಕ್ಕೆ ತರಬಹುದಿತ್ತು. ಹೀಗೆ ಸರಳವಾಗಿದ್ದ ಎಲ್ಲಾ ಅವಕಾಶ ಬಿಟ್ಟು ಆಡಿಯೋ ವೈರಲ್ ಮಾಡಿದ ಉದ್ದೇಶಕ್ಕೆ ವಿವರಣೆ ಅವರೇ ಹೇಳಬೇಕು. ತನಿಖಾಧಿಕಾರಿ ಈ ಕುರಿತು ತನಿಖೆ ಮಾಡಬೇಕು.

ಇನ್ನು ದೂರಿನ ತನಿಖೆಗೇ ಶಿಕ್ಷಣ ಸಂಸ್ಥೆ ತಯಾರಿಲ್ಲ ಎಂಬ ಅಪವಾದ. ಓರ್ವ ಶಿಕ್ಷಕಿಯಲ್ಲಿ ಕೆಲಸದಿಂದ ಅಮಾನತು ಮಾಡಲು ಒಂದು ದೂರು ಅರ್ಜಿಯಾದರೂ ಬೇಕು. ಇಲ್ಲಿ ಶಾಲೆಗೆ ಯಾರೂ ಬರೆದುಕೊಟ್ಟದ್ದೇ ಇಲ್ಲ. ಶಿಕ್ಷಣ ಇಲಾಖೆಗೆ ದೂರು ಕೊಟ್ಟು ಅದರ ಮಾಹಿತಿಯಾದರೂ ಶಾಲೆಗೆ ಬಂದಿತ್ತೋ ಅದೂ ಇಲ್ಲ. ಈ ಬಗ್ಗೆ ಸರಿಯಾದ ತನಿಖೆಯಾಗಬೇಕು.

ತನಿಖೆಗೆ ತಡೆಯಾದ ಪ್ರತಿಭಟನೆ: 12-2-24 ರ ಬೆಳಿಗ್ಗೆ 11.25 ರ ವೇಳೆಗೆ ಬಿ. ಇ. ಓ. ಶಾಲೆಗೆ ಬಂದು ತನಿಖೆ ಪ್ರಾರಂಭಿಸಿದ್ದಾರೆ. ಸುಮಾರು 20 ಶಿಕ್ಷಕರ ಹೇಳಿಕೆ ಪಡೆದಿದ್ದಾರೆ. ಹಲವು ಪೋಷಕರಿಗೂ ಮೀಟಿಂಗ್‌ಗೆ ಬರಲು ಕರೆ ಹೋಗಿದೆ. ಹಾಗಾಗಿ ತನಿಖೆ ಮಾಡಲು ಶಾಲೆಯವರು ಒಪ್ಪಿಲ್ಲ ಅನ್ನುವುದೇ ಸುಳ್ಳು.

ಆದರೆ, ಸುಮಾರು 12.45 ಗಂಟೆಗೆ ಗೇಟಿನ ಬಳಿ ಶಾಸಕರು, ಡಿಡಿಪಿಐ ಮತ್ತು ಇನ್ನೋರ್ವ ಮಹಿಳಾ ಅಧಿಕಾರಿ ಬಂದಿದ್ದಾರೆ. ಏಕಾಏಕಿ ಪ್ರತಿಭಟನೆ ಪ್ರಾರಂಭವಾಗಿದೆ. ಶಾಲೆಯೊಳಗೆ ತನಿಖೆ ಪ್ರಾರಂಭವಾದದ್ದು ಹಿರಿಯ ಅಧಿಕಾರಿಗೆ ಗೊತ್ತಿರಲೇಬೇಕು.

ಇಲ್ಲಿ ಶಾಸಕರು ಮತ್ತು ಅಧಿಕಾರಿಗಳು ನೇರ ಶಾಲೆಯೊಳಗೆ ಬಂದು ತನಿಖೆ ಮುಂದುವರಿಸಿದರೆ ಇತ್ಯರ್ಥ ಆಗುತ್ತಿತ್ತು. ಆದರೆ ಶಾಸಕರು ಮತ್ತು ಅಧಿಕಾರಿಗಳು ಗೇಟಿನ ಬಳಿ ನಿಂತರೇ ಹೊರತು ಒಳಗೆ ಬರಲೇ ಇಲ್ಲ. ಕಚೇರಿಯಲ್ಲಿ ತನಿಖೆ ಮಾಡುತ್ತಿದ್ದ ಕಿರಿಯ ಅಧಿಕಾರಿ ತನ್ನ ತನಿಖೆ ನಿಲ್ಲಿಸಿ ಹೋರ ಹೋಗಿದ್ದರು. ಅಂದರೆ ಪ್ರತಿಭಟನೆಯ ಮೊದಲೇ ತನಿಖೆ ಪ್ರಾರಂಭವಾಗಿದೆ. ಅದನ್ನು ನಿಲ್ಲಿಸಿದ್ದು ಶಾಸಕರು ಮತ್ತು ಹಿರಿಯ ಅಧಿಕಾರಿಗಳು.

ಶಾಸಕರು ಕೇವಲ ಅಧಿಕಾರಗಳ ಜೊತೆ ನೇರವಾಗಿ ಶಾಲೆಯ ಒಳಗೆ ಹೋಗುವ ಅಧಿಕಾರವಿದೆ. ಅಥವಾ ಹಿರಿಯ ಅಧಿಕಾರಿಗಳನ್ನು ಕಚೇರಿಗೆ ಕರೆಸಿಕೊಳ್ಳುವ ಅಧಿಕಾರವೂ ಇದೆ. ಅವರು ಅದನ್ನೆಲ್ಲ ಬಿಟ್ಟು ಒಮ್ಮೆಲೇ, ತಾವೇ ಪ್ರತಿಭಟನೆಗೆ ಇಳಿದದ್ದು, ಮಕ್ಕಳನ್ನು ಸೇರಿಸಿಕೊಂಡದ್ದು ಯಾಕೆ ಅನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆ.

ಇನ್ನೂ ಒಂದು ವಿಚಿತ್ರವಿದೆ. ಈ ಪ್ರಕರಣದ ಸಂಘಟಕಿ ಎನ್ನಲಾದ ಪೋಷಕಿ “ತನ್ನ ಮಗಳು ಬಂದು, ಶಿಕ್ಷಕಿ ಹಿಂದೂ ದೇವರ ಅವಹೇಳನ ಮಾಡಿದ್ದಾರೆ “ಎಂದು ತನ್ನ ಗಮನಕ್ಕೆ ತಂದಳು ಎಂಬ ಹೇಳಿಕೆ ನೀಡಿದ್ದಾರೆ.

ಅವರ ಮಗಳು 7th B. ಆದರೆ, ಗಲಾಟೆಗೆ ಕಾರಣವಾದ ಪಾಠವಾಗಿದ್ದು 7th A ನಲ್ಲಿ. ಅಂದರೆ ಅವಳ ಮಗಳು ಆ ಕ್ಲಾಸಿನಲ್ಲೇ ಇರಲಿಲ್ಲ. ಹಾಗಾದರೆ ಅವರ ಮಗಳು ಇದನ್ನು ಹೇಳಿದ್ದು ಹೇಗೆ?

ಇನ್ನು ಕ್ರೈಸ್ತ ಶಾಲೆಗಳು ಹಿಂದೂ ವಿರೋಧಿ, ಹಿಂದೂಧರ್ಮದ ಅವಹೇಳನ ಮಾಡುತ್ತಾರೆ, ಕ್ರೈಸ್ತ ಧರ್ಮ ತುರುಕಿಸುತ್ತಾರೆ ಇತ್ಯಾದಿ ಪ್ರಶ್ನೆ ಕೇಳಿದ್ದೀರಿ. ನಾನು ನೇರವಾಗಿ ಅವರಿಗೂ ಕೇಳಿದೆ. ಅವರ ಉತ್ತರಗಳು, ಸರ್, ನಮ್ಮ ಶಾಲೆಗೆ 60 ವರ್ಷವಾಗಿದೆ. 60 ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ಹೊರಹೊಗಿದ್ದಾರೆ. ನೀವು ಒಂದಿಷ್ಟು ನಿರ್ದಿಷ್ಟ ದೂರುಗಳನ್ನು ತೋರಿಸಿ. ಶೇ 70ಕ್ಕೂ ಹೆಚ್ಚು ಹಿಂದೂ ವಿದ್ಯಾರ್ಥಿಗಳೇ ಇರುವುದು. ಹಿಂದೂ ಮುಸ್ಲಿಂ ಕ್ರೈಸ್ತ ಶಿಕ್ಷಕರು ಇದ್ದಾರೆ (ದಾಖಲೆಗಳನ್ನು ತೋರಿಸಿದ್ದಾರೆ)

ಇದನ್ನೂ ಓದಿ ಕರಾವಳಿಗೆ ಸರ್ಕಾರಿ ಮೆಡಿಕಲ್‌ ಕಾಲೇಜು ಯಾಕಿಲ್ಲ? ಶಾಸಕರು ಹೋರಾಡುತ್ತಿರುವುದು ಯಾವ ವಿಚಾರಕ್ಕೆ?

ದೀಪಾವಳಿ, ರಂಜಾನ್, ಕ್ರಿಸ್ಮಸ್ ಆಚರಿಸುತ್ತೇವೆ. ಸಂದರ್ಭಕ್ಕೆ ಪೂರಕವಾಗಿ ಸೂಕ್ತವಾದ ಬೈಬಲ್, ಭಗವದ್ಗೀತೆ ಮತ್ತು ಕುರಾನಿನ ವಾಕ್ಯ ಓದಿಸುತ್ತೇವೆ. ನೀವು ಗ್ರಂಥಾಲಯಕ್ಕೆ ಹೋಗಿ ನೋಡಿ ಎಲ್ಲವೂ ಇದೆ. (ನೋಡಿದೆ. ಇರುವುದೂ ನಿಜ)

ಪ್ರತೀ ವರ್ಷ ನಾವು ಬಡ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ ನೀಡಿದ್ದೇವೆ. ಕೊರೋನಾ ಸಮಯದ ಒಂದು ವರ್ಷ ಸುಮಾರು 4.5 ಲಕ್ಷ ರೂ. ರಿಯಾಯಿತಿ ಮಾಡಿದ್ದೇವೆ. ಅದರ ಹೆಚ್ಚಿನ ಫಲಾನುಭವುಗಳು ಹಿಂದೂ ವಿದ್ಯಾರ್ಥಿಗಳು. (ತಗೊಳ್ಳಿ.. ದಾಖಲೆ ತೋರಿಸಿದ್ದಾರೆ. ನಾನೂ ಇಟ್ಟುಕೊಂಡಿದ್ದೇನೆ)

ಈಗ ಹೇಳಿ ಸರ್, ನಮ್ಮ ಶಾಲೆಯಿಂದ ಕಲಿತ ಕಾರಣಕ್ಕೆ ಮತಾಂತರ ಆದ ವಿದ್ಯಾರ್ಥಿಗಳ ಪಟ್ಟಿ ನೀವು ಹೇಳಬಹುದಾ? ಆರೋಪ ನನ್ನದಲ್ಲ. ಈ ಪ್ರಶ್ನೆ ಕೇಳಿದವರಿಗೆ ಇದನ್ನು ತಲುಪಿಸುವೆ ಎಂದಿದ್ದೇನೆ.

ಸರಿ ನಿಮ್ಮ ಶಿಕ್ಷಕಿ ತಪ್ಪು ಮಾಡಿದ್ದಾರೆ ಎಂದು ಅನ್ನಿಸುವುದಾ? ಕೇಳಿದೆ. ಕಳೆದ 6 ವರ್ಷಗಳಿಂದ ಪಾಠ ಮಾಡುತ್ತಿದ್ದಾರೆ. ಯಾವ ದೂರೂ ಬಂದಿಲ್ಲ. ಈಗಲೂ ದೂರಿನ ವಿವರ ನಮಗೆ ಕೊಡದೇ ಗಲಾಟೆಯಾಗುತ್ತಿದೆ. ಅದರ ತನಿಖೆ ಸರಿಯಾಗಿ ಆಗಲಿ. ಅವರು ತಪ್ಪು ಮಾಡಿದ್ದರೆ ನಾವು ಖಂಡಿತ ಒಪ್ಪುತ್ತೇವೆ. ಆದರೆ ಅವರಿಂದ ಒಂದು ವಿವರಣೆಯನ್ನೂ ಕೇಳದೇ ಶಾಲೆಯಿಂದ ಹೊರ ಕಳಿಸಿದ್ದು ನ್ಯಾಯವಲ್ಲ. ವಿದ್ಯಾರ್ಥಿಗಳು ಶಿಕ್ಷಕರ ವಿರುದ್ಧ ಘೋಷಣೆ ಕೂಗಿದ್ದು, ಶಾಸಕರು ನಮ್ಮನ್ನು ರಸ್ತೆಯಲ್ಲಿ ನಿಲ್ಲಿಸಿ ಬೈದು ಗದರಿಸಿದ್ದು ನಮಗೆ ಬೇಸರವಾಗಿದೆ.

ಸರಿ ನಿಮ್ಮ ವಿದ್ಯಾರ್ಥಿಗಳು ಹೇಳಿದ ದೂರುಗಳ ಬಗ್ಗೆ ನೀವು ಎನು ಹೇಳುವುದು. ಅವರ ದೂರಿನ ಬಗ್ಗೆ ತಜ್ಞರಿಂದ ತನಿಖೆಯಾಗಲಿ. ನಮ್ಮ ಅಭ್ಯಂತರವಿಲ್ಲ.

ಒಟ್ಟಾರೆ ಈ ಪ್ರಕರಣ ನಮಗೆ ಒಂದು ಅನುಭವ. ಒಂದು ಘಟನೆ ಆದ ತಕ್ಷಣ ಊರಿಗೆ ಊರೇ ಸಮಸ್ಯೆಯ ಮೇಲೆ ಬೀಳುವ ಹೊಡೆತಕ್ಕೆ ನೈಜವಾದ ಸಮಸ್ಯೆ ಆ ಗುಂಪಿನ ನಡುವೆ ತಪ್ಪಿಸಿಕೊಳ್ಳತ್ತದೆ. ಇಲ್ಲಿ ಶಿಕ್ಷಕಿಯ ಮೇಲಿನ ಆರೋಪ ಮತ್ತು ತನಿಖೆ ಇಷ್ಟೇ ವ್ಯಾಪ್ತಿಯಲ್ಲಿರಬೇಕಾದ ವಿಚಾರ, ಮತಾಂತರ, ಕ್ರೈಸ್ತ ಶಾಲೆಗಳಿಂದ ಹಿಂದೂ ವಿದ್ಯಾರ್ಥಿಗಳು ಹೊರಗೆ ಬನ್ನಿ ಇಂತಹ ಭೀಕರ ಹೇಳಿಕೆಗಳಿಗೆ ವಿಸ್ತರಿಸಿಕೊಂಡು ಅಸಲಿ ಸಮಸ್ಯೆ ಗೌಣವಾಯಿತು. ಅದಕ್ಕೆ ಕಾರಣ ಶಾಸಕರ ದುಡುಕಿನ ಹೇಳಿಕೆ ಮತ್ತು ವರ್ತನೆ. ಎಲ್ಲದರ ಬಗ್ಗೆ ತನಿಖೆಯಾಗಲಿ. ಸತ್ಯ ಹೊರಬರಲಿ.

WhatsApp Image 2025 11 17 at 3.25.04 PM
ಎಂ ಜಿ ಹೆಗಡೆ, ಮಂಗಳೂರು
+ posts

ಲೇಖಕ, ಜನಪರ ಹೋರಾಟಗಾರ

ಪೋಸ್ಟ್ ಹಂಚಿಕೊಳ್ಳಿ:

ಎಂ ಜಿ ಹೆಗಡೆ, ಮಂಗಳೂರು
ಎಂ ಜಿ ಹೆಗಡೆ, ಮಂಗಳೂರು
ಲೇಖಕ, ಜನಪರ ಹೋರಾಟಗಾರ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...