ಹಿಂದುತ್ವ ಅಂದರೆ ಹಿಂದುಗಳಿಗೆ ಹಿಂದುಗಳೇ ಅನ್ಯಾಯ ಮಾಡಿದರೆ ಬಾಯಿ ಮುಚ್ಚಿ ಕೂರುವುದಾ?‌

Date:

ಕಾರ್ಕಳದ ಸಾಮೂಹಿಕ ಅತ್ಯಾಚಾರ ಪ್ರಕರಣದ ಮೂರನೇ ಆರೋಪಿಯು ಪಾಲನೆ ಮಾಡುವ ಧರ್ಮ ಹಿಂದೂ ಧರ್ಮ ಎಂದು ಗೊತ್ತಾದಾಗ ನಿಮ್ಮ ಹೋರಾಟಕ್ಕೆ ಎಳ್ಳು ನೀರು ಬಿಟ್ಟಿದ್ದು ಯಾಕೆ ಸುನೀಲ್ ಅವರೇ ?

ಕಾರ್ಕಳ ಶಾಸಕ ಸುನೀಲ್ ಕುಮಾರ್‌ ಅವರೇ, ಹಿಂದುತ್ವ ಅಂದರೆ ಹಿಂದುಗಳಿಗೆ ಹಿಂದುಗಳೇ ಅನ್ಯಾಯ ಮಾಡಿದರೆ ಬಾಯಿ ಮುಚ್ಚಿ ಕೂರುವುದಾ? ಮುಸಲ್ಮಾನ ಮತ್ತು ಕ್ರಿಶ್ಚಿಯನ್ನರು ಮಾಡಿದರೆ ಬಿಜೆಪಿ ಹಾಗೂ ಸಂಘ ಪರಿವಾರದವರು ದಾರಿಯಲ್ಲಿ ಶಿಕ್ಷೆ ಕೊಡಬೇಕು ಎನ್ನುತ್ತೀರಿ! ಹಿಂದುಗಳು ಮಾಡಿದರೆ, ಅದನ್ನು ಕಾನೂನು‌ ನೋಡಿಕೊಳ್ಳಬೇಕು, ಆಗ ನಿಮ್ಮ ಬಾಯಿಗೆ ಬೀಗ ಅಲ್ಲವಾ?

ಕಾರ್ಕಳದ ಅತ್ಯಾಚಾರ ಪ್ರಕರಣದ ಮೂರನೇ ಆರೋಪಿಯು ಪಾಲನೆ ಮಾಡುವ ಧರ್ಮ ಹಿಂದೂ ಧರ್ಮ ಎಂದು ಗೊತ್ತಾದಾಗ ನಿಮ್ಮ ಹೋರಾಟಕ್ಕೆ ಎಳ್ಳು ನೀರು ಬಿಟ್ಟಿದ್ದು ಯಾಕೆ ಸುನೀಲ್ ಅವರೇ ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನೀವಾಗಲಿ, ನಾನಾಗಲೀ ಅರ್ಜಿ ಹಾಕಿ ಹುಟ್ಟುವುದಿಲ್ಲ, ಎಲ್ಲರ ಹುಟ್ಟು ಆಕಸ್ಮಿಕ. ಆದರೆ ನೀವು ನಿಮ್ಮ ರಾಜಕೀಯ ಬೇಳೆ ಬೇಯಿಸಲಿಕ್ಕೆ ಎರಡು ದಶಕಗಳಿಂದ ಅದೆಷ್ಟೋ ಬಾರಿ ಸಾವು ಹಾಗೂ ಕೊಲೆಗಳಲ್ಲಿ ಧರ್ಮ ನೋಡಿ ರಾಜಕೀಯ ಮಾಡುತ್ತಾ ಬಂದಿದ್ದೀರಿ. ಒಬ್ಬ ವ್ಯಕ್ತಿ ಮಾಡುವ ಒಳ್ಳೆ ಕೆಲಸಕ್ಕೆ ಆ ವ್ಯಕ್ತಿಯ ಧರ್ಮ ಕಾರಣ ಇರಬಹುದು, ಯಾಕೆಂದರೆ ಎಲ್ಲಾ ಧರ್ಮಗಳು ಬೋಧಿಸುವುದು ಒಳ್ಳೆಯದನ್ನೇ,ಕೆಟ್ಟ ಕೆಲಸ ಮಾಡುವ ವ್ಯಕ್ತಿ ಧರ್ಮ ಮಾರ್ಗವನ್ನು ತ್ಯಜಿಸಿದ್ದಾನೆಂದೇ ಅರ್ಥ. ಯಾವ ಧರ್ಮವೂ ಕೊಲೆ, ಅತ್ಯಾಚಾರ ಮಾಡಲು ಬೋಧಿಸುವುದಿಲ್ಲ.

ಇಂತಹ ಕೊಳಕು ರಾಜಕೀಯ ಮಾಡುತ್ತಾ, ನೀವು ಧರ್ಮ ಮಾರ್ಗದಿಂದ ಬಹಳ ದೂರ ಬಂದಾಗಿದೇ. ನೀವು ಮಾಡುವ ಎಲ್ಲಾ ಕೆಟ್ಟ ಕೆಲಸಗಳಿಗೆ ನಾವು ಹಿಂದೂ ಧರ್ಮವನ್ನು ದೂರಲು ಆಗುತ್ತಾ? ನಿಮಗೆ ಸರಿಯಾದ ಸಮಯದಲ್ಲಿ ಸರಿಯಾದ ಧರ್ಮ ಭೋಧನೆ ಆಗಲಿಲ್ಲ. ಹೊಡಿ-ಬಡಿ ಸಂಸ್ಕೃತಿಯ ಭಜರಂಗದಳದ ಪ್ರಭಾವದಿಂದ, ಸಂಘ ಪರಿವಾರದ ತರಬೇತಿಯಿಂದ ನೀವು ಅಧರ್ಮ ಮಾರ್ಗದಲ್ಲಿ ಸಾಗುತ್ತಾ ಇದ್ದೀರಿ ಅಷ್ಟೇ.

ನಿಮ್ಮ ಪರಿವಾರವು ಸೌಜನ್ಯ ಕೊಲೆ ವಿಚಾರಲ್ಲೂ ಮೊದಲು ಮುಸಲ್ಮಾನರ ಮೇಲೆ ಆರೋಪ ಹೊರಿಸಲು ಗದ್ದಲ ಮಾಡಿ ಕೊನೆಗೆ ಮೌನಕ್ಕೆ ಶರಣಾಯಿತು. ಪರೇಶ ಮೇಸ್ತಾನ ಕೊಲೆ ಜಿಹಾದಿಗಳಿಂದಾಗಿದೆ ಎಂದು ಚುನಾವಣೆಯನ್ನೇ ಗೆದ್ದ ಬಳಿಕ ಸಿಬಿಐ ಅದೊಂದು ಸಹಜ ಸಾವು ಅಂದಿತು. ನಾಚಿಕೆ, ಮಾನ, ಮರ್ಯಾದೆ ಇದ್ದರೆ ತಾವು, ತಮ್ಮ ಪಕ್ಷದವರು ಬಹಿರಂಗವಾಗಿ ಕ್ಷಮೆ ಕೇಳಬೇಕಿತ್ತು. ಶಿವಮೊಗ್ಗದಲ್ಲಿ ಹರ್ಷ ಕೊಲೆಗೆ ತಮ್ಮ ಸಂಸದರು ಶವಯಾತ್ರೆ ಮಾಡುತ್ತಾರೆ. ಮಂಗಳೂರಿನ ವಿನಾಯಕ ಬಾಳಿಗ ಕೊಲೆ ಪ್ರಕರಣದಲ್ಲಿ ನಿಮ್ಮ ಸಂಸದ, ಶಾಸಕರು ಮೌನವೃತ ಮಾಡುತ್ತಾರೆ.

ಸುನೀಲ್ ರವರೇ, ನೀವು ಹೆಬ್ರಿ ಸುಚೇತಾ ಕೊಲೆ ಪ್ರಕರಣದಿಂದ ರಾಜಕೀಯದಲ್ಲಿ ಅಬ್ಬರಿಸಲು ಪ್ರಾರಂಭಿಸಿದಿರಿ. ಶ್ರೀರಾಮ ದೇವರ ಮೇಲೆ ಆಣೆ ಹಾಕಿ ಹೇಳಿ ತಾವು ಸುಚೇತಾಗೆ ನ್ಯಾಯ ದೊರಕಿಸಿಕೊಟ್ಟಿರಾ? ತಾವು ಶಾಸಕರಾದ ಮೇಲೆ ತಮಗೆ ಆಕೆಯ ನೆನಪಿದೆಯಾ?

ಪರಶುರಾಮ ಸೃಷ್ಟಿ ಈ ಕರಾವಳಿ ಅನ್ನುತ್ತಾರೆ. ಪರಶುರಾಮ ಕಂಚಿನದ್ದೋ, ಫೈಬರ್‌ನದ್ದೋ ಎಂದು ಕರಾವಳಿಯ ಜನ ನೋಡಿದರು. ಅದರ ಉದ್ಘಾಟನಾ ಸಭೆಯನ್ನು ಅದ್ದೂರಿಯಾಗಿ ಮಾಡಿದಾಗ ಆ ಪ್ರತಿಮೆ ಪೂರ್ತಿ ಕಂಚಿನದ್ದೇ ಎಂದು ಹೇಳಿ ಕರಾವಳಿ ಜನರಿಗೆ ಕಿವಿ ಮೇಲೆ ದಾಸ್ವಾಳ ಇಟ್ಟದ್ದು ಹಿಂದೂ ವಿರೋಧಿ ಕೆಲಸವಲ್ಲವೇ ? ನಿಮ್ಮ ಆವೇಶ ನಿಮ್ಮ ಕೋಪ ನಿಮ್ಮ ಪ್ರತಿಭಟನೆಯನ್ನು ಬಿಜೆಪಿ ಪರ ಇರುವವರು ಆರೋಪಿಗಳಾಗಿರುವ ಕೊಲೆ, ಅತ್ಯಾಚಾರ ಪ್ರಕರಣಗಳಲ್ಲಿ ಏಕೆ ಇಲ್ಲ ಸುನೀಲ್? ನಾವೆಲ್ಲ ಭಾರತೀಯರು. ದಂಡ ಸಂಹಿತೆಯಲ್ಲಿ ಅಪರಾಧ ಮಾಡುವ ಹಾಗೂ ಅನ್ಯಾಯಕ್ಕೊಳಪಡುವ ವ್ಯಕ್ತಿಗಳ ಧರ್ಮ ಜಾತಿ ನೋಡಿ ಶಿಕ್ಷೆ ನೀಡುವ ಕ್ರಮ ಇಲ್ಲದಾಗ ನಿಮಗೆ ಏಕೆ ಉಸಾಬರಿ ಎಲ್ಲದರಲ್ಲೂ ‌ಧರ್ಮ ನೋಡುವ?

ಕಳೆದ ವರ್ಷ ಉಡುಪಿಯಲ್ಲಿ ಕಾಲೇಜೊಂದರ ವಿದ್ಯಾರ್ಥಿನಿಯರ ವೀಡಿಯೊ ಪ್ರಕರಣದಲ್ಲಿ ಹಿಂದು -ಮುಸ್ಲಿಮ್ ಮುಂದೆ ಮಾಡಿ, ಲವ್ ಜಿಹಾದ್‌ ಎಂದೆಲ್ಲ ಅರಚಾಡುತ್ತಾ ದೊಡ್ಡ ಗದ್ದಲ ಮಾಡಿದ ಬಿಜೆಪಿ ಕೊನೆಗೆ ಪ್ರಕರಣದಲ್ಲಿ ಹುರುಳಿಲ್ಲ ಎಂದು ಗೊತ್ತಾದ ತಕ್ಷಣ ಬಾಯಿ ಮುಚ್ಚಿತು. ಈಗ ಅರುಣ್ ಕುಮಾರ್ ಪುತ್ತಿಲ ಎಂಬ‌ ಭಜರಂಗದಳ ಬಿಜೆಪಿ ನಾಯಕರ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಅನೇಕ ಪ್ರಕರಣಗಳಲ್ಲಿ ಅತ್ಯಾಚಾರದ ಆರೋಪಿಗಳು ಹಿಂದುಗಳಾಗಿರುತ್ತಾರೆ. ವೀಡಿಯೋ ಮಾಡಿದ ಪ್ರಕರಣಗಳೂ ನಡೆದಿವೆ. ಪ್ರಜ್ವಲ್ ರೇವಣ್ಣ ಪ್ರಕರಣವೂ ನಡೆದಿದೆ, ಇವೆಲ್ಲಾ ಯಾವ ಜಿಹಾದ್?

ಸುನೀಲ್ ರವರೇ ಲವ್ ಜಿಹಾದ್ ಎಂಬ ಆರೋಪ ಹಾಕಿ ತಾವು ಒಂದು ಸಮುದಾಯವನ್ನೇ ಆರೋಪಿ‌ ಮಾಡುವಾಗ ಪುತ್ತಿಲ ಪ್ರಕರಣದಲ್ಲಿ ಏಕೆ ಸಂಘ ಪರಿವಾರವನ್ನೇ ಆರೋಪಿ ಮಾಡಬಾರದು? ಏಕೆ ಬಿಜೆಪಿಯನ್ನೇ ಅಪರಾಧಿ ಎನ್ನಬಾರದು? ನಿಮ್ಮ ಭಾಷೆ, ವರ್ತನೆ ಎಲ್ಲರಿಗೂ ಇಲ್ಲ. ಎಲ್ಲರೂ ಆರೋಪಿಯನ್ನು ಓರ್ವ ವ್ಯಕ್ತಿಯನ್ನಾಗಿ ನೋಡುತ್ತಾರೆ. ನಿಮ್ಮಂತಹ ಸ್ವಾರ್ಥ ರಾಜಕಾರಣಿಗಳು ಮಾತ್ರ ಆರೋಪಿಯ ಧರ್ಮವನ್ನು ನೋಡುತ್ತಾರೆ ಅಷ್ಟೇ.

ನೀವು ನಿಜವಾಗಿ ಹಿಂದೂ ವಿರೋಧಿ, ಧರ್ಮ ಶಾಸ್ತ್ರಗಳನ್ನೂ, ಸಂವಿಧಾನದ ಆಶಯಗಳನ್ನೂ ಎರಡನ್ನೂ ಗಾಳಿಗೆ ತೂರಿ ರಾಜಕೀಯ ಮಾಡುವ ತಮಗೆ ಶ್ರೀರಾಮ‌ ಮಾತ್ರ ಅಲ್ಲಾ ಪರಶುರಾಮ ಮಹರ್ಷಿಗಳೂ ತಕ್ಕ ಬುದ್ದಿ ಖಂಡಿತಾ ಕಲಿಸುತ್ತಾರೆ. ನನ್ನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರ ನೀಡಲು ತಮ್ಮಿಂದ ಸಾಧ್ಯ ಇದೆಯಾ?

WhatsApp Image 2025 11 17 at 3.16.03 PM
ಅಮೃತ್‌ ಶೆಣೈ
+ posts

ಅಧ್ಯಕ್ಷರು, ʼಸಹಬಾಳ್ವೆʼ ಉಡುಪಿ‌

ಪೋಸ್ಟ್ ಹಂಚಿಕೊಳ್ಳಿ:

ಅಮೃತ್‌ ಶೆಣೈ
ಅಮೃತ್‌ ಶೆಣೈ
ಅಧ್ಯಕ್ಷರು, ʼಸಹಬಾಳ್ವೆʼ ಉಡುಪಿ‌

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...