ಮಠಕ್ಕೊಂದು ನ್ಯಾಯ, ವಕ್ಫ್ ಮಂಡಳಿಗೊಂದು ನ್ಯಾಯವೇ?

Date:

ಮಠಗಳಿಗೆ, ದೇವಸ್ಥಾನಗಳಿಗೆ ಸಿಕ್ಕ ಕಾನೂನಿನ ಅವಕಾಶ ಮುಸ್ಲಿಮರ ವಕ್ಫ್ ಗೆ ಇಲ್ಲವೇ? ವಕ್ಫ್ ಗೆ ಬಂದಿರುವ ಜಮೀನುಗಳು ಕೂಡಾ ಇಸ್ಲಾಮಿಕ್ ಭಕ್ತರಿಂದ ಬಂದಿರುವ ದಾನದ ಜಮೀನುಗಳೇ ಆಗಿವೆ. ಮುಸಲ್ಮಾನರು ದಾನ ಮಾಡಿದ ಆಸ್ತಿ ಯಾವುದೂ ಕೂಡ ಅವರ ಹೆಸರಲ್ಲಿ ಇರಲ್ಲ. ಸರ್ಕಾರದ ವಕ್ಫ್ ಬೋರ್ಡ್ ಹೆಸರಲ್ಲಿ ಇರುತ್ತೆ. ಮುಸ್ಲಿಂ ಜನಸಾಮಾನ್ಯರು ತಮ್ಮ ದುಡಿಮೆಯಿಂದ ದಾನವಾಗಿ ಕೊಟ್ಟ ಆಸ್ತಿಯೇ ವಕ್ಫ್ ಆಸ್ತಿ!

ಉಡುಪಿಯ ಶಿವಳ್ಳಿ ಗ್ರಾಮದ ಜಿ ಅನಂತ ಭಟ್ಟ ಎಂಬವರಿಗೆ ಯಾವುದೋ ಕಾಲದಲ್ಲಿ ಉಡುಪಿ ಅದಮಾರು ಮಠದ ಜಮೀನನ್ನು ಗೇಣಿಗೆ ನೀಡಲಾಗಿತ್ತು. ಇಂದಿರಾ ಗಾಂಧಿ-ದೇವರಾಜ ಅರಸುರವರು ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದಾಗ ಜಿ ಅನಂತ ಭಟ್ಟರೂ ಅರ್ಜಿ ಸಲ್ಲಿಸಿದರು. ಯಾವುದೋ ಕಾಲದಲ್ಲಿ ಅನಂತ ಭಟ್ಟ ಕುಟುಂಬಕ್ಕೆ ನೀಡಲಾದ ಭೂಮಿಯನ್ನು ಈಗ ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಅನಂತ ಭಟ್ಟ ಅನುಭವಿಸುತ್ತಿರುವ ಭೂಮಿ ಅದಮಾರು ಮಠಕ್ಕೇ ಸೇರಬೇಕು ಎಂದು ಅದಮಾರು ಮಠ ತಗಾದೆ ತೆಗೆಯಿತು. ಆಗ ಈ ವಿವಾದ ಭೂನ್ಯಾಯ ಮಂಡಳಿಯ ಮೆಟ್ಟಿಲೇರಿತು. ಭೂ ನ್ಯಾಯಮಂಡಳಿಯು ವಿಸ್ತೃತ ವಿಚಾರಣೆ ನಡೆಸಿತು. ಅದಮಾರು ಮಠದ ದಾಖಲೆಗಳನ್ನೂ ಪರಿಶೀಲಿಸಿ ‘ಭೂ ಸುಧಾರಣಾ ಕಾಯ್ದೆಯ ಪ್ರಕಾರ ಭೂಮಿ ಜಿ ಅನಂತ ಭಟ್ಟ ಕುಟುಂಬಕ್ಕೆ ಸೇರಿದ್ದು’ ಎಂದು ಆದೇಶ ಹೊರಡಿಸಿತು.

ಭೂ ನ್ಯಾಯ ಮಂಡಳಿಯ ಆದೇಶವನ್ನು ಪ್ರಶ್ನಿಸಿ ಅದಮಾರು ಮಠವು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತು. ವಾದ ವಿವಾದ ಆಲಿಸಿದ ಹೈಕೋರ್ಟ್ ಅದಮಾರು ಮಠದ ಪರವಾಗಿ ಆದೇಶ ನೀಡಿದೆ. ಆದೇಶದಲ್ಲಿ ಹೈಕೋರ್ಟ್ ಹೀಗೆ ಹೇಳಿದೆ. ‘‘ಗೇಣಿದಾರ ಅನುಭವಿಸುತ್ತಿರುವ ಜಮೀನು ಮಠದ ಜಮೀನಾಗಿದೆ. ಮಠ ಎನ್ನುವುದು ಧಾರ್ಮಿಕ ಮತ್ತು ದತ್ತಿ ಸಂಸ್ಥೆಯಾಗಿದೆ. ಧಾರ್ಮಿಕ ಚಟುವಟಿಕೆಗಳನ್ನು ನಡೆಸಲೆಂದೇ ಭಕ್ತರು ಮಠಕ್ಕೆ ಭೂಮಿಯನ್ನು ದಾನವಾಗಿ ನೀಡಿರುತ್ತಾರೆ. ಹಾಗಾಗಿ ಮಠಕ್ಕೆ ದಾನವಾಗಿ ಬಂದ ಭೂಮಿಯ ಲಾಭ ಮಠಕ್ಕೇ ಸಲ್ಲಬೇಕು’’ ಎಂದು ಸ್ಪಷ್ಟವಾಗಿ ಹೇಳಿದೆ. (Sri. Admar Mutt Rep By Its Manager vs Smt. Yashoda W/O Late G Anantha Bhatta WRIT APPEAL NO.15198/2011)

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅದಮಾರು ಮಠದ ಗೇಣಿದಾರ ಆಗಿದ್ದ ರಾಮಶೆಟ್ಟಿ ಎಂಬವರು ಭೂಸುಧಾರಣಾ ಕಾಯ್ದೆಯಡಿ ಅರ್ಜಿ ಹಾಕಿದ್ದರು. ಭೂ ನ್ಯಾಯಮಂಡಳಿಯ ಆದೇಶದ ಪ್ರಕಾರ ಅದಮಾರು ಮಠದ ಹೆಸರಿನಲ್ಲಿದ್ದ ಭೂಮಿ ರೈತ ರಾಮ ಶೆಟ್ಟಿ ಎಂಬವರಿಗೆ ಸೇರಬೇಕು. ಭೂನ್ಯಾಯ ಮಂಡಳಿಯ ಆದೇಶ ಪ್ರಶ್ನಿಸಿ ಅದಮಾರು ಮಠವು ಹೈಕೋರ್ಟ್ ಗೆ ಅರ್ಜಿ ಹಾಕಿತ್ತು. ಹೈಕೋರ್ಟ್ ತೀರ್ಪು ಮಠದ ಪರವಾಗಿ ತೀರ್ಪು ನೀಡಿತ್ತು. ‘‘ಧಾರ್ಮಿಕ ಸಂಸ್ಥೆಗಳಿಗೆ ಸೇರಿದ ಭೂಮಿಯ ಹಕ್ಕುದಾರಿಕೆಯ ಮನವಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. ಸರಿಯಾದ ದಾಖಲೆಗಳಿಲ್ಲದೇ ಧಾರ್ಮಿಕ ಸಂಸ್ಥೆಗಳ ಭೂಮಿಯನ್ನು ಗೇಣಿದಾರರಿಗೆ /ಬಾಡಿಗೆದಾರರಿಗೆ ನೀಡಬಾರದು. ಯಾಕೆಂದರೆ ಧಾರ್ಮಿಕ ಸಂಸ್ಥೆಗಳ ಅಭಿವೃದ್ದಿಗಾಗಿಯೇ ಭಕ್ತರು ಭೂಮಿಯನ್ನು ದಾನ ಮಾಡಿರುತ್ತಾರೆ. ಆ ದಾನದ ಆಶಯಗಳಿಗೆ ಚ್ಯುತಿ ತರಬಾರದು ಎಂಬ ಎಚ್ಚರಿಕೆ ಮಂಡಳಿಗೆ ಇರಬೇಕು’’ ಎಂದು ಆದೇಶ ನೀಡಿದೆ. ಓದಿ : SRI ADMAR MUTT, UDUPI AND ANOTHER vs. RAMA SHETTY (DEAD) ಅದಮಾರು ಮಠದ ಮತ್ತೊಂದು ಭೂಮಿ ವಿವಾದ ಆಗಿರುವ ಅದಮಾರು ಮಠ ವರ್ಸಸ್ ಶ್ಯಾಮ್ ಪ್ರಭು ಮತ್ತು ಪ್ರೆಸಿಲ್ಲ ವಿನೇಜಸ್ ಮತ್ತಿತರರು ಪ್ರಕರಣದಲ್ಲೂ ಹೈಕೋರ್ಟ್ ಇದನ್ನೇ ಹೇಳಿದೆ.

‘ಭಕ್ತರು ದೇವಸ್ಥಾನಗಳಿಗೆ ದಾನವಾಗಿ ನೀಡಿದ ಭೂಮಿಯನ್ನು ಧಾರ್ಮಿಕ ಸಂಸ್ಥೆಗಳು ಕಳೆದುಕೊಳ್ಳಬಾರದು. ದೇವಾಲಯಗಳು ತಮ್ಮ ಧಾರ್ಮಿಕ ಚಟುವಟಿಕೆಗಳಿಗಾಗಿ ಭಕ್ತರಿಂದ ಭೂಮಿಯನ್ನು ದಾನವಾಗಿ ಪಡೆಯುತ್ತವೆ. ಹಾಗಾಗಿ ರೈತರಿಗೆ ದೇವಾಲಯದ ಭೂಮಿಯನ್ನು ನೀಡುವಾಗ ಅಧಿಕಾರಿಗಳು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಬೇಕು. ಅದನ್ನು ಗಮನದಲ್ಲಿ ಇಟ್ಟುಕೊಂಡು ರೈತ/ಅರ್ಜಿದಾರ ದೇವಾಲಯದ ದಾನದ ಭೂಮಿಯನ್ನು ಪಡೆಯಲು ಅರ್ಹತೆ ಹೊಂದಿದ್ದಾನೆಯೇ ಎಂದು ನೋಡಬೇಕು’ ಎಂದು ಹೈಕೋರ್ಟ್ SRI ANJANEYASWAMY TEMPLE, THINDLU, BANGALORE vs. STATE OF KARNATAKA AND OTHERS ಪ್ರಕರಣದಲ್ಲಿ ಹೇಳುತ್ತದೆ.

ಅದಮಾರು ಮಠ ಉಡುಪಿ
ಉಡುಪಿಯ ಅದಮಾರು ಮಠ

ಮಠಗಳಿಗೆ, ದೇವಸ್ಥಾನಗಳಿಗೆ ಸಿಕ್ಕ ಕಾನೂನಿನ ಅವಕಾಶ ಮುಸ್ಲಿಮರ ವಕ್ಫ್ ಗೆ ಇಲ್ಲವೇ? ವಕ್ಫ್ ಗೆ ಬಂದಿರುವ ಜಮೀನುಗಳು ಕೂಡಾ ಇಸ್ಲಾಮಿಕ್ ಭಕ್ತರಿಂದ ಬಂದಿರುವ ದಾನದ ಜಮೀನುಗಳೇ ಆಗಿವೆ. ಮುಸಲ್ಮಾನರು ದಾನ ಮಾಡಿದ ಆಸ್ತಿ ಯಾವುದು ಕೂಡ ಅವರ ಹೆಸರಲ್ಲಿ ಇರಲ್ಲ. ದಾನ ಮಾಡಿದ ಭೂಮಿ ಸರ್ಕಾರದ ವಕ್ಫ್ ಬೋರ್ಡ್ ಹೆಸರಲ್ಲಿ ಇರುತ್ತೆ. ಮುಸ್ಲಿಂ ಜನಸಾಮಾನ್ಯರು ತಮ್ಮ ದುಡಿಮೆಯಿಂದ ದಾನವಾಗಿ ಕೊಟ್ಟ ಆಸ್ತಿಯೇ ವಕ್ಫ್ ಆಸ್ತಿ! ಈ ರೀತಿ ತನ್ನ ದುಡಿಮೆಯ ಆಸ್ತಿಯನ್ನು ದಾನ ಮಾಡಿದರೆ ನಮ್ಮ ಪೂರ್ವಜರಿಗೆ ಮತ್ತು ನಮಗೆ ದೇವರು ಒಳ್ಳೆಯದು ಮಾಡುತ್ತಾನೆ ಎಂಬ ಭಾವನೆ ಇದೆ. ಮಸೀದಿ, ಮದರಸ, ಶಿಕ್ಷಣ, ಇಸ್ಲಾಂ ಧರ್ಮದ ಚಟುವಟಿಕೆಗಳಿಗಾಗಿ ಮುಸ್ಲಿಮರು ಭೂದಾನ ಮಾಡುತ್ತಾರೆ. ಹಾಗಾಗಿ ಹೈಕೋರ್ಟ್ ಆದೇಶದ ಪ್ರಕಾರ ವಕ್ಫ್ ಆಸ್ತಿ ವಕ್ಫ್ ಗೇ ಸೇರಬೇಕು ತಾನೆ? ದಾನದ ಆಶಯ ಮಠಕ್ಕೂ, ವಕ್ಫ್ ಗೂ ಒಂದೇ ತಾನೆ?

ಇಷ್ಟಕ್ಕೂ ವಕ್ಫ್ ಎನ್ನುವುದು ಸರ್ಕಾರಿ ಮಂಡಳಿ. ಸರ್ಕಾರ ರೈತರಿಗೆ ನೋಟಿಸ್ ಕೊಟ್ಟಾಗ ಅದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬಹುದಾದ ಅವಕಾಶ ಇದೆ. ‘ನಿಮ್ಮ ಆಸ್ತಿ ವಕ್ಫ್ ಹೆಸರಿನಲ್ಲಿದೆ. ಹಾಗಾಗಿ ಇದು ನಿಮ್ಮದೇ ಆಸ್ತಿ ಎನ್ನುವುದಕ್ಕೆ ದಾಖಲೆ ಕೊಡಿ’ ಎಂದು ವಕ್ಫ್ ನೋಟಿಸ್ ನೀಡಿದ್ದರಿಂದ ರೈತರು ತಮ್ಮ ಆಸ್ತಿ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಿದಂತಾಗಿದೆ. ಆದರೆ ಮಠಗಳದ್ದು ಹಾಗಲ್ಲ. ಈಗಲೂ ಊರಿಗೂರೇ ಮಠಗಳ ಹೆಸರಿನಲ್ಲಿ ಜಮೀನುಗಳಿವೆ. ಮಠ ಎನ್ನುವುದು ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲೂ ಬರುವುದಿಲ್ಲ. ಹಾಗಾಗಿ ಪ್ರಭಾವಿಗಳಾಗಿರುವ, ಹಣವಂತರಾಗಿರುವ ಮಠಗಳ ಜೊತೆ ಬಡ ರೈತರು ಕಾನೂನು ಸಂಘರ್ಷ ಮಾಡಬೇಕಿದೆ. ಹಾಗೆ ಕಾನೂನು ಸಂಘರ್ಷ ನಡೆಸಿದ ರೈತರ ಪೈಕಿ ಯಾರೂ ಮಠದ ಮುಂದೆ ಗೆದ್ದವರಿಲ್ಲ! ಆದರೆ ವಕ್ಫ್ ನಿಂದ ರೈತರಿಗೆ ನೋಟಿಸ್ ಪ್ರಕರಣ ಹಾಗಲ್ಲ! ವಕ್ಫ್ ಆಸ್ತಿಗಳ ವಿವಾದಗಳ ನ್ಯಾಯ ತೀರ್ಮಾನಕ್ಕೆ ಟ್ರಿಬ್ಯುನಲ್ ಇದೆ. ಜಿಲ್ಲಾ ನ್ಯಾಯಾಧೀಶರೊಬ್ಬರು ಈ ಟ್ರಿಬ್ಯುನಲ್ ನಲ್ಲಿ ನ್ಯಾಯಾಧೀಶರಾಗಿ ಇರುತ್ತಾರೆ. ಸರ್ಕಾರದಿಂದ ನಿಯುಕ್ತಿಗೊಂಡ ಸಿಬ್ಬಂದಿಗಳೇ ಈ ಟ್ರಿಬ್ಯುನಲ್ ನಲ್ಲಿ ಇರ್ತಾರೆ. ಜಮೀನು ರೈತರದ್ದಾದರೆ ಅವರು ಕಟ್ಟಿರುವ ತೆರಿಗೆ, ಗ್ರಾಪಂ ದಾಖಲೆಗಳು, ಅನುಭವಿಸಿಕೊಂಡು ಬಂದ ವರ್ಷಗಳ ಬಗೆಗಿನ ದಾಖಲೆಗಳನ್ನು ಹಾಜರುಪಡಿಸಿದರೆ ರೈತರ ಭೂಮಿ ರೈತರಿಗೆ ಉಳಿಯುತ್ತದೆ. ರೈತನ ಆರ್‌ಟಿಸಿ (ಪಹಣಿ) ಯ ಹಕ್ಕುಗಳು ಕಾಲಂ ನಲ್ಲಿ ನಮೂದಾಗಿದ್ದ ‘ವಕ್ಫ್ ಆಸ್ತಿ’ ಎಂಬ ಉಲ್ಲೇಖವೂ ಮಾಯವಾಗುತ್ತದೆ. ಆ ಮೂಲಕ ರೈತನ ದಾಖಲೆಯೂ ಪಕ್ಕಾ ಆಗುತ್ತದೆ!

ಆದರೆ ಕರಾವಳಿಯ ಮಠಗಳ ಹೆಸರಿನಲ್ಲಿರುವ ರೈತನ ಜಮೀನಿನ ಕತೆ ಏನು? ಈಗಲೂ ಕರಾವಳಿಯ ನೂರಾರು ಎಕರೆ ರೈತರ ಜಮೀನುಗಳ ಪಹಣಿಯಲ್ಲಿ ಮಠಗಳ ಹೆಸರಿದೆ. ವಕ್ಫ್ ವಿವಾದದ ಬಗ್ಗೆ ಮಾತನಾಡುವ ಈ ಮಠಾಧೀಶರು ‘ಮಠಗಳ ಹೆಸರಿನಲ್ಲಿರುವ ರೈತರ ಜಮೀನುಗಳು ರೈತರಿಗೇ ಸೇರಿದ್ದು. ಈಗಲೇ ದಾಖಲೆಗಳನ್ನು ರೈತರ ಹೆಸರಿಗೆ ಮಾಡಿಕೊಳ್ಳಿ. ಮಠ ಅದಕ್ಕೆ ಸಂಪೂರ್ಣ ಸಹಕಾರ ನೀಡುತ್ತದೆ’ ಎಂದು ಘೋಷಿಸುತ್ತದೆಯೇ? ಇಲ್ಲ ತಾನೆ?

ಇದನ್ನೂ ಓದಿ ಬಾಗಲಕೋಟೆ | ದೇವಸ್ಥಾನದ ಕಾರ್ಯಕ್ರಮದಲ್ಲಿ ‘ವಕ್ಫ್‌’ ವಿಚಾರ: ಶಾಸಕ ಯತ್ನಾಳ್‌ಗೆ ಸಾರ್ವಜನಿಕರಿಂದ ಛೀಮಾರಿ

ಎಲ್ಲಕ್ಕಿಂತ ಮುಖ್ಯವಾಗಿ ಕಾನೂನು ಎಲ್ಲರಿಗೂ ಒಂದೇ. “ದಾನವಾಗಿ ಧಾರ್ಮಿಕ ಸಂಸ್ಥೆಗಳಿಗೆ ಬಂದ ಭೂಮಿ ರೈತರೂ ಸೇರಿದಂತೆ ಯಾರೇ ಹಕ್ಕುದಾರರಾಗಿದ್ದರೂ ಅದನ್ನು ಸರಿಯಾಗಿ ವಿಮರ್ಶಿಸಬೇಕು. ಸುಲಭವಾಗಿ ಧಾರ್ಮಿಕ ಸಂಸ್ಥೆಗಳು ಕಳೆದುಕೊಳ್ಳಬಾರದು. ಭೂ ಹಕ್ಕು ಪ್ರತಿಪಾದಕರ ದಾಖಲೆಯನ್ನು ಪರಿಶೀಲಿಸಿ ಭೂಮಿಯನ್ನು ನೀಡಬೇಕು” ಎಂದು ತೀರ್ಪು ನೀಡಿದ್ದ ಹೈಕೋರ್ಟ್ ಮಠಗಳಿಗೆ, ದೇವಸ್ಥಾನಗಳಿಗೆ ದಾನವಾಗಿ ಬಂದ ಭೂಮಿಯನ್ನು ಉಳಿಸಿದೆ. ಹೈಕೋರ್ಟ್ ಹೇಳಿದಂತೆ ‘ದಾನದ ಭೂಮಿಗಿರುವ ಮಹತ್ವ’ ಮಠಕ್ಕೂ ವಕ್ಫ್ ಗೂ ಒಂದೇ ಆಗಿದೆ. ಹಾಗಾಗಿ ಮಠಗಳ ಪರವಾಗಿನ ತೀರ್ಪು ವಕ್ಫ್ ಗೂ ಅನ್ವಯವಾಗುತ್ತದೆ ತಾನೆ?

Naveen suringe
ನವೀನ್‌ ಸೂರಿಂಜೆ
+ posts

ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ನವೀನ್‌ ಸೂರಿಂಜೆ
ನವೀನ್‌ ಸೂರಿಂಜೆ
ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...