ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮೂಲಭೂತ ಹಕ್ಕು; ಲಿಂಗತ್ವ ಅಲ್ಪಸಂಖ್ಯಾತ ಮಗುವಿಗೆ ಇಲ್ಲವೇ?

Date:

ಅತ್ಯಂತ ಅಂಚಿಗೆ ತಳ್ಳಲ್ಪಟ್ಟ ಮಗು ಲಿಂಗತ್ವ ಮತ್ತು ಲೈಂಗಿಕತೆ ಅಲ್ಪಸಂಖ್ಯಾತ ಮಗು (ಟ್ರಾನ್ಸ್‌ಜೆಂಡರ್). ಹಾಗಾದರೆ ಶಿಕ್ಷಣದ ಮೂಲಭೂತ ಹಕ್ಕು ಈ ಮಗುವಿಗೆ ಇಲ್ಲವೇ? ಈ ಮಗುವನ್ನು ಸಾಕ್ಷರಳನ್ನಾಗಿಸುವುದು ಸಮಾಜ ಮತ್ತು ಸರ್ಕಾರಗಳ ಹೊಣೆ ಅಲ್ಲವೇ?

ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಅಥವಾ ಶಿಕ್ಷಣ ಹಕ್ಕು ಕಾಯ್ದೆ ( RTE ) ಆಗಸ್ಟ್ 4, 2009 ರಂದು ಜಾರಿಗೆ ಬಂದಿದ್ದು, ಇದು ಭಾರತೀಯ ಸಂವಿಧಾನದ 21A ವಿಧಿಯ ಅಡಿಯಲ್ಲಿ ಭಾರತದಲ್ಲಿ 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಹತ್ವದ ವಿಧಾನಗಳನ್ನು ವಿವರಿಸುತ್ತದೆ. ಏಪ್ರಿಲ್ 1, 2010ರಂದು ಕಾಯ್ದೆ ಜಾರಿಗೆ ಬಂದಾಗ ಭಾರತವು ಶಿಕ್ಷಣವನ್ನು ಪ್ರತಿ ಮಗುವಿನ ಮೂಲಭೂತ ಹಕ್ಕನ್ನಾಗಿ ಮಾಡಿದ 135 ದೇಶಗಳಲ್ಲಿ ಒಂದಾಯಿತು.

6 ರಿಂದ 14 ವರ್ಷ ವಯಸ್ಸಿನ ಎಲ್ಲಾ ಮಕ್ಕಳು – ಅಂಗವಿಕಲ ಮಕ್ಕಳು, ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಗಳಿಗೆ ಸೇರಿದ ಮಕ್ಕಳು, ಹಿಂದುಳಿದ ಗುಂಪುಗಳಿಗೆ ಸೇರಿದವರು ಮತ್ತು ಎಲ್ಲಾ ಆದಾಯ ಗುಂಪುಗಳಿಗೆ ಸೇರಿದ ಮಕ್ಕಳು 1 ರಿಂದ 8 ನೇ ತರಗತಿಯವರೆಗಿನ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸುವವರೆಗೆ ನೆರೆಹೊರೆಯ ಶಾಲೆಯಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕನ್ನು ಹೊಂದಿರುತ್ತಾರೆ ಎಂದು ಸ್ಪಷ್ಟಪಡಿಸಲಾಗಿದೆ. ಈ ಮಕ್ಕಳ ಪಟ್ಟಿಯಲ್ಲಿ “ಲಿಂಗತ್ವ ಮತ್ತು ಲೈಂಗಿಕತೆ ಅಲ್ಪಸಂಖ್ಯಾತ ಮಕ್ಕಳು” ಎಂಬ ಪದವೂ ಸೇರಬೇಕಾಗಿದೆ.

ಸರ್ವ ಶಿಕ್ಷಣ ಅಭಿಯಾನ ಮಕ್ಕಳ ಶಿಕ್ಷಣಕ್ಕೆ ಒಂದು ವರವಾಗಿದೆ. ಅದರಲ್ಲೂ ಇದು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತಿರುವುದು ಸ್ವಾಗತಾರ್ಹ. ಏಕೆಂದರೆ ಗಂಡು ಮಕ್ಕಳಿಗೆ ಹೋಲಿಸಿದಾಗ ಹೆಣ್ಣು ಮಗುವಿಗೆ ಶಿಕ್ಷಣವನ್ನು ಕೊಡಿಸುವುದರಲ್ಲಿ ಪಾಲಕ ಪೋಷಕರು ನಿರಾಸಕ್ತಿಯನ್ನು ತೋರಿಸುತ್ತಿದ್ದಾರೆ. ಹಾಗಾದರೆ ಹೆಣ್ಣು ಮಗುವಿಗೆ ಹೋಲಿಸಿದಾಗಲೂ ಪಾಲಕ ಪೋಷಕರಿಂದ ಅತಿ ಹೆಚ್ಚು ಅಸಡ್ಡೆಗೆ ಒಳಗಾಗುತ್ತಿರುವ ಮಗು ಯಾವುದು? ಹೆಚ್ಚು ಅಸಮಾನತೆಗೆ ಒಳಗಾಗುತ್ತಿರುವ ಮಗು ಯಾವುದು? ಶೋಷಣೆ, ಹಿಂಸೆಗಳಿಗೆ ಒಳಗಾಗುತ್ತಿರುವ ಮಗು ಯಾವುದು? ಅತ್ಯಂತ ಅಂಚಿಗೆ ತಳ್ಳಲ್ಪಟ್ಟ ಮಗು ಯಾವುದು? ಆ ಮಗು ಯಾರೂ ಅಲ್ಲ, ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತ ಮಗು (ಟ್ರಾನ್ಸ್‌ಜೆಂಡರ್). ಹಾಗಾದರೆ ಶಿಕ್ಷಣದ ಮೂಲಭೂತ ಹಕ್ಕು ಈ ಮಗುವಿಗೆ ಇಲ್ಲವೇ? ಈ ಮಗುವನ್ನು ಸಾಕ್ಷರಳನ್ನಾಗಿಸುವುದು ನಮ್ಮ ಮತ್ತು ಸರ್ಕಾರಗಳ ಹೊಣೆ ಅಲ್ಲವೇ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಖಂಡಿತವಾಗಿಯೂ ಇದು ತಂದೆ -ತಾಯಿ‌, ಸರ್ಕಾರ, ಸಮಾಜದ ಹೊಣೆಗಾರಿಕೆ ಆಗಿದೆ. ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಪಡೆಯುವ ಹಕ್ಕು ಈ ಮಗುವಿಗೂ ಇದೆ. ಈವರೆಗೆ ಇಂಥ ಮಕ್ಕಳ ದಾಖಲಾತಿ ಮತ್ತು ಶಾಲೆ ಬಿಟ್ಟಿರುವ (ಡ್ರಾಪ್ ಔಟ್ ) ಕುರಿತಾದ ಅಂಕಿ ಅಂಶಗಳು ಸರಕಾರದ ಬಳಿ ಇವೆಯೇ? ಇವರು ಶಾಲೆಯನ್ನು ಬಿಡಲು ಕಾರಣಗಳನ್ನು ಶಿಕ್ಷಣ ಇಲಾಖೆ ತಿಳಿಸಬಲ್ಲದೇ? ಇವರು ಶಿಕ್ಷಣವನ್ನು ಪಡೆಯುವಲ್ಲಿ ಆಗುತ್ತಿರುವ ಶೋಷಣೆ ಹಿಂಸೆ ತಾರತಮ್ಯಗಳ ಬಗ್ಗೆ ಮಾಹಿತಿ ಕೊಡಬಲ್ಲರೇ? ದಾಖಲಾತಿಗಳಿಗಾಗಿ (ಟಿ ಸಿ, ಅಂಕಪಟ್ಟಿ, ಉತ್ತೀರ್ಣ ಪ್ರಮಾಣ ಪತ್ರ, ಹೆಸರು ಬದಲಾವಣೆ, ಲಿಂಗ-ಲಿಂಗತ್ವ ಬದಲಾವಣೆ, ಅಧ್ಯಯನ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ, ಇನ್ನಿತರೆ) ಇವರು ಎದುರಿಸುತ್ತಿರುವ ಸಮಸ್ಯೆಗಳು ತಮ್ಮ ಗಮನಕ್ಕೆ ಬಂದಿವೆಯೇ? ಸುಪ್ರೀಂ ಕೋರ್ಟಿನ ತೀರ್ಪುಗಳಿದ್ದರೂ, ಸರ್ಕಾರದ ಆದೇಶಗಳಿದ್ದರೂ ಅವೆಲ್ಲವೂ ಕಾಗದ ಪತ್ರಗಳಿಗೆ ಅಂಟಿದ ಮಸಿಯಾಗಿವೆಯೇ ಹೊರತು ಅನುಷ್ಠಾನಗೊಳ್ಳುತ್ತಿಲ್ಲ ಎಂಬುವುದು ತಿಳಿದಿದೆಯೇ? ಸರ್ಕಾರವು ಕೊಡ ಮಾಡಿರುವ 1% ಉದ್ಯೋಗ ಮೀಸಲಾತಿಯನ್ನು ಬಳಸಿಕೊಳ್ಳುವಲ್ಲಿರುವ ಅಡೆತಡೆಗಳ ಸಂಖ್ಯೆ ನಿಮಗೆ ಗೊತ್ತೇ?

ಈ ಕುರಿತು ಶೀಘ್ರವೇ ಶಿಕ್ಷಣ ಇಲಾಖೆ ಮತ್ತು ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಸಮೀಕ್ಷೆಯೊಂದನ್ನು ಮಾಡಿ ತಾವು ತಿಳಿದುಕೊಂಡು ಮತ್ತು ಸಮಾಜಕ್ಕೆ ತಿಳಿಸಬೇಕಾಗಿದೆ.

ಈ ನಿಟ್ಟಿನಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣವು ನಮ್ಮ ಸಮುದಾಯದ ಮಗುವಿನ ಜನ್ಮಸಿದ್ಧ ಹಕ್ಕು. ಈ ಹಕ್ಕು ನಮ್ಮ ಸಮುದಾಯದ ಮಗುವಿಗೆ ಸಿಗಲೇಬೇಕು. ಇದಕ್ಕಾಗಿ ಈ ಕೆಳಗಿನ ಪರಿಹಾರೋಪಾಯಗಳು ಸಹಾಯಕವಾಗಲಿವೆ.

ಪರಿಹಾರಗಳು :

  • ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ಸಮುದಾಯದ ಸಹಭಾಗಿತ್ವ ಕಡ್ಡಾಯ
  • ಎಲ್ಲಾ ಶಾಲಾ ಆಡಳಿತ ಮಂಡಳಿಯಲ್ಲಿ ಒಬ್ಬರಾದರೂ ನಮ್ಮವರಿರಬೇಕು.
  • ಎಲ್ಲಾ ರಾಷ್ಟೀಯ ಹಬ್ಬ ಆಚರಣೆಗೂ ನಮಗೆ ಆಹ್ವಾನವಿರಬೇಕು.
  • ಶಾಲೆಯ ಸಭೆ ಸಮಾರಂಭಗಳು ನಮ್ಮನ್ನು ಒಳಗೊಳ್ಳಬೇಕು.
  • ಪ್ರತಿ ಶಾಲೆಯಲ್ಲಿ ಕನಿಷ್ಠ ಒಬ್ಬ ಶಿಕ್ಷಕರಾದರೂ ನಮ್ಮವರಿರಬೇಕು.
  • ನಮ್ಮ ಪರಿಚಯದ, ಅರಿವು ಮೂಡಿಸುವ ಪಠ್ಯಕ್ರಮ ರಚನೆ ಆಗಬೇಕು.
  • ಶಿಕ್ಷಣ ಇಲಾಖೆಯ ವಿವಿಧ ಹುದ್ದೆಗಳಲ್ಲೂ ನಾವು ಇರಬೇಕು.
  • ಶೈಕ್ಷಣಿಕ ನೀತಿ ರೂಪಿಸುವಲ್ಲಿ ನಮ್ಮನ್ನು ಒಳಗೊಳ್ಳಬೇಕು.
  • ಪಠ್ಯಕ್ರಮ ರಚನಾ ಸಮಿತಿಯಲ್ಲಿ ನಮ್ಮವರಿರಬೇಕು.
  • ಎಲ್ಲಾ ತರಗತಿಯ ಮಕ್ಕಳ ಪಠ್ಯಕ್ರಮದಲ್ಲಿ ನಮ್ಮ ಕುರಿತಾದ ಪದ್ಯಗಳು ಪಾಠಗಳು ಇರಬೇಕು.
  • ಶಿಕ್ಷಕ ವರ್ಗವು ನಮ್ಮ ಕುರಿತಾಗಿ ಪಾಠಗಳನ್ನು ಬೋಧಿಸಲು ನಿರಾಕರಿಸಬಾರದು.
  • ದಾಖಲಾತಿಯಲ್ಲಿ ಹೆಣ್ಣು ಗಂಡು ಎಂದು ದಾಖಲಿಸಿದರೂ ಮಗು 18 ವರುಷಗಳ ನಂತರ ತನ್ನನ್ನು ತಾನು ಏನೆಂದು ಗುರುತಿಸಿಕೊಳ್ಳುತ್ತದೆಯೋ ಅದೇ ಗುರುತಿನಲ್ಲಿ ಆ ಮಗು ಪ್ರಮಾಣ ಪತ್ರವನ್ನು ಪಡೆಯಲು ಅನುಕೂಲವಾಗುವಂತೆ, ದಾಖಲಾತಿ ಸಮಯದಲ್ಲಿ ಮೂರನೇ ಕಾಲಂ ಇಡಬೇಕು.
  • ಮಗುವಿನ ಮೇಲೆ ಆಗುವಂತಹ ಹಿಂಸೆ, ದೌರ್ಜನ್ಯ, ತಾರತಮ್ಯ, ಅವಮಾನ, ತಿರಸ್ಕಾರಗಳ ಕುರಿತಾಗಿ ವಿಶೇಷ ಕಾಳಜಿಯನ್ನು ವಹಿಸಬೇಕು.

    ಇವು ಕನಿಷ್ಠ ಪರಿಹಾರೋಪಾಯಗಳಾಗಿದ್ದು ಸರ್ಕಾರ ಮತ್ತು ಇಲಾಖೆಗಳು ಈ ಕುರಿತು ಸಮೀಕ್ಷೆ ಮತ್ತು ಸಂಶೋಧನೆಗಳನ್ನು ಕೈಗೊಂಡು ಇನ್ನೂ ವಸ್ತುನಿಷ್ಠ, ನಿಖರ, ವೈಜ್ಞಾನಿಕ, ತಾರ್ಕಿಕವಾದ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕಾಗಿದೆ. ‌

    ಇದನ್ನೂ ಓದಿ ಮದುವೆ ಕಡ್ಡಾಯ ಎಂದು ನಮ್ಮ ಸಂವಿಧಾನದ ಯಾವ ವಿಧಿಯಲ್ಲಿ ಹೇಳಲಾಗಿದೆ?
lakshman
ಲಕ್ಷ್ಮಣ್ (ಮಾಳವಿಕ )
+ posts

ಲಿಂಗತ್ವ ಅಲ್ಪಸಂಖ್ಯಾತೆ. ʼಒಂದೆಡೆ ಸಂಸ್ಥೆʼ, ರಾಯಚೂರು

ಪೋಸ್ಟ್ ಹಂಚಿಕೊಳ್ಳಿ:

ಲಕ್ಷ್ಮಣ್ (ಮಾಳವಿಕ )
ಲಕ್ಷ್ಮಣ್ (ಮಾಳವಿಕ )
ಲಿಂಗತ್ವ ಅಲ್ಪಸಂಖ್ಯಾತೆ. ʼಒಂದೆಡೆ ಸಂಸ್ಥೆʼ, ರಾಯಚೂರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...