ಕಲ್ಲಡ್ಕ ಭಟ್ಟ ಹೇಳಿದ್ದು ಹಿಂದೂ ಜಾತಿಗ್ರಸ್ತ ಸಮಾಜದ ‘ಅಲಿಖಿತ ಪದ್ಧತಿ’

Date:

ಆಂಧ್ರದಲ್ಲಿ ನಕ್ಸಲ್ ಚಳವಳಿ ಯಾಕೆ ಗಟ್ಟಿಯಾಗಿ ನೆಲೆ ಊರಿತ್ತು ಎಂಬುದನ್ನು ನೋಡಿದರೆ, ಭಟ್ಟರ ‘ದಿನಕ್ಕೊಬ್ಬ ಗಂಡ’ನ ಕಾನ್ಸೆಪ್ಟ್ ಅರ್ಥ ಆಗುತ್ತದೆ

“ದಿನಕ್ಕೊಬ್ಬ ಗಂಡ” – ಸನಾತನ ಧರ್ಮದೊಳಗಿನ ಮಹಿಳಾ ದೌರ್ಜನ್ಯದ ಈ ಪಿಡುಗು ಮತ್ತು ಅದರ ವಿರುದ್ದದ ಬಂಡಾಯ ಚರಿತ್ರೆಯೇ ದೊಡ್ಡದಿದೆ. ‘ಮುಸ್ಲಿಂ ಮಹಿಳೆಯರಿಗೆ ದಿನಕ್ಕೊಬ್ಬ ಗಂಡ : ಪರ್ಮನೆಂಟ್ ಗಂಡನೇ ಇಲ್ಲ’ ಎಂದು ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ ಕೇವಲ ರಾಜಕೀಯ ಹಿನ್ನಲೆ ಹೊಂದಿದೆಯೇ ಹೊರತು ಮುಸ್ಲಿಮರ ಧಾರ್ಮಿಕ, ಸಾಮಾಜಿಕ ಇತಿಹಾಸದಲ್ಲಿ ಅಂತಹ ಕುರುಹುಗಳಿಲ್ಲ. ಆದರೆ ಸಂವಿಧಾನ ಜಾರಿಯಾಗುವ ಮೊದಲು ಹಿಂದೂ ಸಮಾಜದಲ್ಲಿ ‘ದಿನಕ್ಕೊಬ್ಬ ಗಂಡ’ ಪಿಡುಗು ಈ ನೆಲದ ಕಾನೂನೆಂಬಂತೆ ಜಾರಿಯಲ್ಲಿತ್ತು.

ದ್ರೌಪದಿಗೆ ಐದು ಗಂಡಂದಿರು ಸೇರಿದಂತೆ ಪುರಾಣ, ಧಾರ್ಮಿಕ ಕತೆಗಳಲ್ಲಿ ಬರುವ ದಿನಕ್ಕೊಬ್ಬರು ಗಂಡಂದಿರ ನೂರಾರು ಕತೆಯನ್ನು ಬದಿಗಿಡೋಣಾ. ತೀರಾ ಇತ್ತಿಚೆಗೆ, ಅಂದರೆ ನಮ್ಮ ಹಿಂದಿನ ತಲೆಮಾರು ಅನುಭವಿಸಿದ ಸಂಕಟಗಳನ್ನೊಮ್ಮೆ ಅವಲೋಕಿಸಿ. ಭಾರತದಲ್ಲಿ ಸಂವಿಧಾನ ಜಾರಿಯಾಗುವುದಕ್ಕೂ ಮೊದಲು ಭಾರತದ ಹಲವು ಹಳ್ಳಿಗಳಲ್ಲಿ ಹಿಂದುಳಿದ ವರ್ಗದ ಯುವಕರು ಮದುವೆಯಾದ ಮೊದಲ ದಿನ ವಧುವನ್ನು ಜಮೀನ್ದಾರರ ಮನೆಗೆ ಬಿಟ್ಟು ಬರಬೇಕು ಎಂಬ ನಿಯಮವಿತ್ತು. ಈ ನಿಯಮದ ವಿರುದ್ದ ಬಂಡಾಯ, ಹಿಂಸೆಗಳೇ ನಡೆದ ಇತಿಹಾಸ ಈ ನೆಲದಲ್ಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆಂಧ್ರದಲ್ಲಿ ನಕ್ಸಲ್ ಚಳವಳಿ ಯಾಕೆ ಗಟ್ಟಿಯಾಗಿ ನೆಲೆ ಊರಿತ್ತು ಎಂಬುದನ್ನು ನೋಡಿದರೆ, ಭಟ್ಟರ ‘ದಿನಕ್ಕೊಬ್ಬ ಗಂಡ’ನ ಕಾನ್ಸೆಪ್ಟ್ ಅರ್ಥ ಆಗುತ್ತದೆ. ತೆಲಂಗಾಣ, ಆಂಧ್ರದ ಹಲವು ಹಳ್ಳಿಗಳಲ್ಲಿರುವ ತೀರಾ ಹಿಂದುಳಿದ ವರ್ಗಗಳ ಮನೆಗೆ ಕೆಲಸ ಮುಗಿಸಿ ಬಂದ ಗಂಡ, ತನ್ನದೇ ಮನೆಯ ಹೊರಗೆ ಜಮೀನ್ದಾರನ ಚಪ್ಪಲಿ ಕಂಡರೆ ವಾಪಸ್ ಹೋಗಬೇಕಿತ್ತು. ಒಂದೆರಡು ತಾಸು ಬಿಟ್ಟು ವಾಪಸ್ ಬಂದಾಗ ಮನೆ ಎದುರು ಜಮೀನ್ದಾರರ ಚಪ್ಪಲಿ ಇದ್ದರೆ ಮತ್ತೆ ವಾಪಸ್ ಹೋಗಬೇಕಿತ್ತು. ಹಿಂದೂ ಸಮಾಜದೊಳಗೆ ನಡೆಯುತ್ತಿದ್ದ ಈ ದೌರ್ಜನ್ಯವನ್ನು ವಿರೋಧಿಸಿದ್ದು ನಕ್ಸಲರು ಮಾತ್ರ. ಆ ಕಾರಣಕ್ಕಾಗಿಯೇ ಆಂಧ್ರ, ತೆಲಂಗಾಣದ ಹಲವು ಹಳ್ಳಿಗಳು ಬೇಷರತ್ತಾಗಿ ನಕ್ಸಲ್ ಚಳವಳಿಯನ್ನು ಬೆಂಬಲಿಸಿದವು.

“ನಾನು ಆಂಧ್ರದ ಹಲವು ಹಳ್ಳಿಗಳಲ್ಲಿ ಹಿಂದುಳಿದ-ಬುಡಕಟ್ಟು ಸಮುದಾಯದ ಅಧ್ಯಯನ ನಡೆಸಿದ್ದೇನೆ. ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಜಮೀನ್ದಾರರು ಶೂದ್ರರ ಕಾಲನಿಗಳಿಗೆ ತಮಗೆ ಬೇಕಾದಾಗ ಹೋಗಿ ಸುಂದರವಾಗಿದ್ದ ಮಹಿಳೆಯರ ಜೊತೆ ಲೈಂಗಿಕ ಚಟುವಟಿಕೆ ನಡೆಸುತ್ತಿದ್ದರು. ಈ ದೌರ್ಜನ್ಯದ ಸಮಯದಲ್ಲಿ ಮನೆ ಮಂದಿ ಮನೆಯಿಂದ ಹೊರಗೆ ನಿಂತು ಜಮೀನ್ದಾರರಿಗೆ ಸಹಕರಿಸಬೇಕು. ಈಗಲೂ ಈ ಪದ್ಧತಿ ಕೆಲವು ಹಳ್ಳಿಗಳಲ್ಲಿ ಇದೆ. ನಕ್ಸಲರು ಮತ್ತು ಕಮ್ಯುನಿಸ್ಟರನ್ನು ಹೊರತುಪಡಿಸಿ ಬೇರೆ ಯಾರೂ ಕೂಡಾ ಇದರ ವಿರುದ್ದ ಮಾತನಾಡುವುದಿಲ್ಲ” ಎನ್ನುತ್ತಾರೆ ಹಿರಿಯ ನ್ಯಾಯವಾದಿ ಎಸ್ ಬಾಲನ್.

ಮುಸ್ಲಿಂ ಮಹಿಳೆಯರಿಗೆ ಪರ್ಮನೆಂಟ್ ಗಂಡಂದಿರನ್ನು ಕೊಟ್ಟ ಪ್ರಧಾನಿಗಳು ಮತ್ತು ಅದನ್ನು ಬೀದಿಯಲ್ಲಿ ನಿಂತು ಕೆಟ್ಟದಾಗಿ ಆಡಿಕೊಳ್ಳುವ ಆರ್‌‌ಎಸ್‌ಎಸ್‌, ಹಳ್ಳಿಗಳ ಈ ದುರಂತ ಕಥನಕ್ಕೆ ಅಂತ್ಯ ಹಾಡಲು ಏನಾದರೂ ಮಾಡಿದ್ದಾರೆಯೇ? ನೀವು ದೇಶದ್ರೋಹಿಗಳು ಎಂದು ಕರೆಯುವ ನಕ್ಸಲರು ಮತ್ತು ಕಮ್ಯುನಿಸ್ಟರೇ ಈ ಹಿಂದೂ ಮಹಿಳೆಯರಿಗೆ ಪರ್ಮನೆಂಟ್ ಗಂಡನಿರಬೇಕು ಎಂದು ಹೋರಾಡಿ ನ್ಯಾಯ ಒದಗಿಸಿದವರು‌.

ಹರಿಯಾಣದಲ್ಲಿ ಇತ್ತೀಚೆಗೆ ‘ವಧು ಕಳ್ಳಸಾಗಾಣಿಕೆ’ ಬಗ್ಗೆ ವರದಿಯಾಗಿತ್ತು. ದೇಶದ ಬೇರೆ ಬೇರೆ ರಾಜ್ಯಗಳಿಂದ ‘ಮದುಮಗಳ’ನ್ನು ಹರಿಯಾಣಕ್ಕೆ ತರಿಸಿಕೊಂಡು ‘ಒಂದಕ್ಕಿಂತ ಹೆಚ್ಚು ಗಂಡಂದಿರಿಗೆ ಹಂಚಲಾಗುತ್ತಿತ್ತು’ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿತ್ತು. ಈ ವಧುಗಳ ಪೈಕಿ ಒಬ್ಬರೇ ಒಬ್ಬರು ಇಸ್ಲಾಂ ಧರ್ಮಕ್ಕೆ ಸಂಬಂಧಪಟ್ಟವರಲ್ಲ!

ಹಿಂದೆಯೂ, ಈಗಲೂ ಕಲ್ಲಡ್ಕ ಪ್ರಭಾಕರ ಭಟ್ಟರು ಬೆಂಬಲಿಸುವ ಜಮೀನ್ದಾರಿ ವರ್ಗವು ‘ದಿನಕ್ಕೊಂದು ಗಂಡ’ ಪದ್ದತಿಯನ್ನು ಜಾರಿಯಲ್ಲಿಟ್ಟಿದೆ. ಈ ಪದ್ದತಿಯನ್ನು ವಿರೋಧಿಸಿಯೇ ಅಂಬೇಡ್ಕರ್, ಬಸವಣ್ಣ, ಮಾರ್ಕ್ಸ್, ಮಾವೋ ಸಿದ್ದಾಂತಗಳು ಕೆಲಸ ಮಾಡಿದವು. ದಿನಕ್ಕೊಬ್ಬ ಗಂಡ ಎಂಬ ಹೀನ ಅಲಿಖಿತ ಪದ್ದತಿ ಹಿಂದೂ ಜಾತಿಗ್ರಸ್ತ ಸಮಾಜದಲ್ಲಿ ಇದೆಯೇ ಹೊರತು ಇಸ್ಲಾಂನಲ್ಲಿ ಅಲ್ಲ!

Naveen suringe
ನವೀನ್‌ ಸೂರಿಂಜೆ
+ posts

ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ನವೀನ್‌ ಸೂರಿಂಜೆ
ನವೀನ್‌ ಸೂರಿಂಜೆ
ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...