ಸಾಹಿತ್ಯ ಸಮ್ಮೇಳನ | ಗೋಷ್ಠಿಗಳಲ್ಲೂ ಮಹಿಳಾ ಪ್ರಾತಿನಿಧ್ಯವಿರಲಿ; ರಾಜಕಾರಣಿಗಳು ಕೇಳುಗರಾಗಲಿ

Date:

ಸಾಹಿತ್ಯದ ಗಂಧಗಾಳಿ ಗೊತ್ತಿಲ್ಲದ ಜನರ ಮಾತುಗಳನ್ನು, ಭ್ರಷ್ಟರ ಭಾಷಣವನ್ನು ಸಾಹಿತ್ಯ ಸಮ್ಮೇಳನದ ವೇದಿಕೆಯಿಂದ ಜನ ಆಲಿಸಬೇಕಾಗಿದೆ. ಇದು ಎಂದಿಗೆ ನಿಲ್ಲುತ್ತದೋ ಅಂದು ಸಾಹಿತ್ಯ ಸಮ್ಮೇಳನಕ್ಕೊಂದು ಅರ್ಥ ಬರುತ್ತದೆ. ಕಸಾಪ, ಸ್ವಾಗತ ಸಮಿತಿಯವರೆಲ್ಲ ಸೇರಿ ಇಂತಹದೊಂದು ಆದರ್ಶದ ನಿರ್ಧಾರ ಕೈಗೊಳ್ಳಬೇಕಿದೆ.

ಮಂಡ್ಯದಲ್ಲಿ ಡಿಸೆಂಬರ್‌ 21ರಿಂದ ಮೂರು ದಿನ ನಡೆಯಲಿರುವ 87 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆಯ ಬಗ್ಗೆ ದಿನಕ್ಕೊಂದು ಊಹಾಪೋಹ ಸೃಷ್ಟಿಯಾಗುತ್ತಿದೆ. ಕೆಲ ದಿನಗಳ ಹಿಂದೆ ಸಾಹಿತ್ಯೇತರ ಸಾಧಕರು ಯಾಕೆ ಸಮ್ಮೇಳನದ ಅಧ್ಯಕ್ಷರಾಗಬಾರದು ಎಂದು ಪ್ರಶ್ನೆ ಮಾಡುವ ಮೂಲಕ ಕಸಾಪ ಅಧ್ಯಕ್ಷ ಮಹೇಶ್‌ ಜೋಶಿ ತಾವು ಕಸಾಪ ಅಧ್ಯಕ್ಷರಾದ ಮಾನದಂಡದಂತೆಯೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಗೂ ಸಾಹಿತ್ಯೇತರರು ಅಧ್ಯಕ್ಷರಾಗಲಿ ಎಂದು ಹೇಳಿಕೆಯೊಂದನ್ನು ತೇಲಿಬಿಟ್ಟರು. ಅದಕ್ಕೆ ಒಂದಷ್ಟು ವಿರೋಧ ಬರುತ್ತಿದ್ದಂತೆಯೇ, ಕಸಾಪಕ್ಕೆ ಬರುತ್ತಿರುವ ಶಿಫಾರಸ್ಸುಗಳ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಾ ಒಂದಷ್ಟು ರಾಜಕಾರಣಿಗಳು, ಮಠಾಧೀಶರು, ಕ್ರೀಡಾಪಟುಗಳ ಹೆಸರನ್ನು ತೇಲಿ ಬಿಟ್ಟರು. ಅಷ್ಟಾದ ನಂತರ ಮತ್ತೆ ಈ ಬಾರಿ ಮಹಿಳೆಯೊಬ್ಬರನ್ನು ಅಧ್ಯಕ್ಷ ಗಾದಿಗೆ ಆಯ್ಕೆ ಮಾಡುವಂತೆ ಸಲಹೆ ಬಂದಿದೆ ಎಂದು ಮೂರು ಹೆಸರುಗಳನ್ನು ಹರಿಯಬಿಟ್ಟರು. ಅ. 28 ರಂದು ಕಸಾಪದ ತುರ್ತು ಸಭೆ ನಡೆಸಲಾಗುವುದು ಎಂದರು. ಅದು ನಡೆಯಿತಾ, ಅಲ್ಲಿ ಅಧ್ಯಕ್ಷರ ಆಯ್ಕೆಯ ಬಗ್ಗೆ ಚರ್ಚೆ ಆಯ್ತಾ ಒಂದೂ ಗೊತ್ತಾಗಿಲ್ಲ. ಅದು ಆದಾಗ ಆಗಲಿ.

ಆದರೆ, ಸಾಹಿತ್ಯ ಸಮ್ಮೇಳನದಲ್ಲಿ ಮೂರು ದಿನಗಳ ಕಾಲ ನಡೆಯುವ ಗೋಷ್ಠಿಯ ವಿಷಯಗಳ ಆಯ್ಕೆ, ಪ್ರಬಂಧಕಾರರ ಆಯ್ಕೆ, ಗೋಷ್ಠಿಯ ಅಧ್ಯಕ್ಷತೆ ಕೂಡಾ ಅಷ್ಟೇ ಮುಖ್ಯ. ಅಲ್ಲೂ ಪುರುಷರದ್ದೇ ಮೇಲುಗೈ ಎಂಬುದಕ್ಕೆ ಪುರಾವೆ ಕೇಳುವಂತಿಲ್ಲ. ಹಿಂದಿನ ಸಮ್ಮೇಳನಗಳ ಆಮಂತ್ರಣ ಪತ್ರಿಕೆಯ ಮೇಲೊಮ್ಮೆ ಕಣ್ಣಾಡಿಸಿದರೆ ಸಾಕು. ಅದರ ವಿರಾಟ್‌ ರೂಪ ದರ್ಶನವಾಗುತ್ತದೆ. ಮಹಿಳೆಯರನ್ನು ಪೂರ್ಣಕುಂಭ ಸ್ವಾಗತಕ್ಕೆ, ವೇದಿಕೆಯಲ್ಲಿ ಹಾರ ತುರಾಯಿಯ ಟ್ರೇ ಹಿಡಿದು ಓಡಾಡಲು, ಪ್ರತಿನಿಧಿಗಳ ನೋಂದಣಿ, ಊಟ ಬಡಿಸಲು ಹೀಗೆ ಚಾಕರಿಗಷ್ಟೇ ಬಳಕೆ ಮಾಡಲಾಗುತ್ತಿದೆ. ಅದಕ್ಕೂ ಹೆಚ್ಚೆಂದರೆ ಸಾಂಸ್ಕೃತಿ ಕಾರ್ಯಕ್ರಮಕ್ಕೆ ಅವಕಾಶ ಸಿಗಬಹುದೇನೋ! ಇದು ಇಂದು ನೆನ್ನೆಯ ಆರೋಪವಲ್ಲ. ಪ್ರತಿಸಲವೂ ಇದೇ ಚಾಳಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಿಚಾರಗೋಷ್ಠಿಗಳಲ್ಲಿ ಅಧ್ಯಕ್ಷತೆಯ ಮಾತು ಪಕ್ಕಕ್ಕಿರಲಿ, ವಿಚಾರ ಮಂಡನೆ ಮಾಡುವ ತಂಡದಲ್ಲಿ ಒಬ್ಬ ಮಹಿಳೆಯೂ ಇರುವುದಿಲ್ಲ. ಮಹಿಳಾ ಪಾತಿನಿಧ್ಯ ಎಂಬುದು ಕೇಳಿ ಪಡೆಯುವ ವಿಷಯವಲ್ಲ. ಮಹಿಳೆ ಎಂದು ಗೌರವಿಸಿ ಕೊಡಬೇಕಾದ ಸ್ಥಾವವೂ ಅಲ್ಲ. ಇಲ್ಲಿ ಇರುವ ಸಮಸ್ಯೆಯೆಂದರೆ ಕಸಾಪ, ಗೌರವ ಸಮಿತಿ, ಅತಿಥಿಗಳ ಆಯ್ಕೆ ಸಮಿತಿ ಹೀಗೆ ಎಲ್ಲಾ ಸಮಿತಿಗಳಲ್ಲಿ ಪುರುಷರೇ ಇರುವುದು, ಸಾಹಿತ್ಯೇತರ ವ್ಯಕ್ತಿಗಳಿರೋದು ಸಾಮಾನ್ಯ. ಮಹಿಳೆಯರಿದ್ದರೂ ಅವರ ಇರುವಿಕೆಗೆ ಸ್ಥಳೀಯ ರಾಜಕಾರಣಿ, ಸಮಾಜ ಸೇವಕಿ, ಸಂಘಟಕಿಯಾಗಿ ಎಂಬ ಮಾನದಂಡ ಇರುತ್ತದೆಯೇ ಹೊರತು, ಸಾಹಿತ್ಯ ಕ್ಷೇತ್ರದ ಸಾಧಕರು ಆಗಿರುವುದಿಲ್ಲ. ಇನ್ನು ಸಮಿತಿಯಲ್ಲಿರುವವರಿಗೆ ತಮ್ಮದೇ ಆದ ಆಯ್ಕೆಗಳಿರುತ್ತದೆ. ಮತ್ಯಾರದೋ ಪ್ರಭಾವ ಇರುತ್ತದೆ. ನಮ್ಮವರು, ನಮ್ಮೂರಿನವರು, ನಮ್‌ ಜಾತಿಯವರು, ನಮ್‌ ಸಂಬಂಧಿ ಹೀಗೆ ಹತ್ತಾರು ಸ್ವಾರ್ಥಗಳಿರುತ್ತದೆ. ಹೀಗಾಗಿ ಅಲ್ಲಿ ಮಹಿಳಾ ಪ್ರಾತಿನಿಧ್ಯ ಗೌಣವಾಗಿಯೇ ಉಳಿಯುತ್ತದೆ.

ಪೂರ್ಣಕುಂಭ ಸ್ವಾಗತ

ಮಹಿಳೆಯರ ಕಡೆಗಣನೆ ಸಾಹಿತ್ಯ ಸಮ್ಮೇಳನಕ್ಕೆ ಮಾತ್ರ ಅನ್ವಯಿಸಿಲ್ಲ. ಎಲ್ಲಾ ಕ್ಷೇತ್ರಗಳಲ್ಲಿ ಇರುವ ನ್ಯೂನತೆ. ಸರ್ಕಾರದ ಅಂಗ ಸಂಸ್ಥೆಗಳ ನೇಮಕಾತಿಗಳಲ್ಲೂ ಇದು ಢಾಳಾಗಿ ಕಾಣಿಸುತ್ತದೆ. ಉದಾಹರಣೆಗಾಗಿ ನೋಡುವುದಾದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ಬರುವ 19 ಅಕಾಡೆಮಿ ಮತ್ತು ಪ್ರಾಧಿಕಾರಗಳಲ್ಲಿ ಸಂಗೀತ-ನೃತ್ಯ ಅಕಾಡೆಮಿ ಮತ್ತು ಮಾಧ್ಯಮ ಅಕಾಡೆಮಿ ಎರಡರ ಅಧ್ಯಕ್ಷ ಸ್ಥಾನದಲ್ಲಿ ಮಹಿಳೆಯರಿದ್ದಾರೆ. ಇನ್ನು ಅಕಾಡೆಮಿಗಳ ಸದಸ್ಯರ ಪಟ್ಟಿ ನೋಡಿದರೆ ಭ್ರಮನಿರಸನವಾಗುತ್ತದೆ. ಕೆಲ ಅಕಾಡೆಮಿಗಳಲ್ಲಿ ಮಹಿಳಾ ಸದಸ್ಯರೇ ಇಲ್ಲ.

ರಾಜಕಾರಣಿಗಳನ್ನು ಸಾಹಿತ್ಯದ ವೇದಿಕೆಯಿಂದ ದೂರವಿಡಿ

2023ರಲ್ಲಿ ಹಾವೇರಿಯಲ್ಲಿ ನಡೆದ 86ನೇ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಮತ್ತು ಸಮಾರೋಪ ಎರಡೂ ಸಮಾರಂಭದ ವೇದಿಕೆಗೆ ಒಬ್ಬ ಮಹಿಳೆಯೂ ಇರಲಿಲ್ಲ. ಹತ್ತಾರು ರಾಜಕಾರಣಿಗಳು, ಸ್ಥಳೀಯ ಪುಢಾರಿಗಳು ಸಾಹಿತ್ಯ ಸಮ್ಮೇಳನದ ಉದ್ಘಾಟನಾ ವೇದಿಕೆಯಲ್ಲಿ ತುಂಬಿದ್ದರು. ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲ ತಿಂಗಳಿರುವಾಗ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ಷೇತ್ರ ಹಾವೇರಿಯಲ್ಲಿ ಸಮ್ಮೇಳನ ಆಯೋಜನೆಗೊಂಡಿತ್ತು. ಇದರ ಹಿಂದೆ ರಾಜಕೀಯ ಲೆಕ್ಕಾಚಾರವೂ ಇತ್ತು ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಕಸಾಪ ಅಧ್ಯಕ್ಷ ಜೋಶಿಯವರ ಅವಧಿಯ ಮೊದಲ ಸಮ್ಮೇಳನವದು.

ಸಾಹಿತ್ಯ ಸಮ್ಮೇಳನ ಸರ್ಕಾರದ ದುಡ್ಡಿನಲ್ಲಿ ನಡೆಯುತ್ತದೆ ಎಂಬ ಕಾರಣಕ್ಕೆ ಮುಖ್ಯಮಂತ್ರಿಯಿಂದ ಹಿಡಿದು, ಕನ್ನಡ ಸಂಸ್ಕೃತಿ ಇಲಾಖೆ ಸಚಿವ, ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು, ವಿರೋಧ ಪಕ್ಷದ ನಾಯಕರು ಅಷ್ಟೇ ಅಲ್ಲ ಜಿಲ್ಲಾ ಪಂಚಾಯತ್‌ ಅಧ್ಯಕ್ಷರು, ಹೀಗೆ ಪಂಚಾಯತಿ ಮಟ್ಟದ ಪ್ರತಿನಿಧಿಗಳವರೆಗೆ ಎಲ್ಲರಿಗೂ ವೇದಿಕೆಯಲ್ಲಿ ಕುರ್ಚಿ ಹಾಕಿ ಕೂರಿಸಲಾಗುತ್ತಿದೆ. ಸಾಹಿತಿಗಳು, ಸಾಧಕರೆಲ್ಲ ಪ್ರೇಕ್ಷಕರ ಸಾಲಿನಲ್ಲಿ ಕೂತಿರುತ್ತಾರೆ. ಇದು ನಿಜವಾಗಿಯೂ ಸಾಹಿತ್ಯಕ್ಕೆ, ಸಾಹಿತಿಗಳಿಗೆ ಮಾಡುವ ಅಪಮಾನ. ಸಾಹಿತ್ಯದ ಗಂಧಗಾಳಿ ಗೊತ್ತಿಲ್ಲದ ಜನರ ಮಾತುಗಳನ್ನು, ಭ್ರಷ್ಟರ ಭಾಷಣವನ್ನು ಸಾಹಿತ್ಯ ಸಮ್ಮೇಳನದ ವೇದಿಕೆಯಿಂದ ಜನ ಆಲಿಸಬೇಕಾಗಿದೆ. ಇದು ಎಂದಿಗೆ ನಿಲ್ಲುತ್ತದೋ ಅಂದು ಸಾಹಿತ್ಯ ಸಮ್ಮೇಳನಕ್ಕೊಂದು ಅರ್ಥ ಬರುತ್ತದೆ. ಇಂತಹ ವೇದಿಕೆಗಳಿಂದ ರಾಜಕಾರಣಿಗಳೇ ದೂರ ಸರಿಯಬೇಕು ಎಂಬುದು ದುಬಾರಿ ಆಲೋಚನೆಯಾದೀತು. ಕಸಾಪ, ಸ್ವಾಗತ ಸಮಿತಿಯವರೆಲ್ಲ ಸೇರಿ ಇಂತಹದೊಂದು ಆದರ್ಶದ ನಿರ್ಧಾರ ಕೈಗೊಳ್ಳಬೇಕಿದೆ. ಇನ್ನೂ ಕಾಲ ಮಿಂಚಿಲ್ಲ. ಒಂದೂವರೆ ತಿಂಗಳು ಬಾಕಿ ಇದೆ.

ಮಂಡ್ಯ ಸಮ್ಮೇಳನ ಕುರಿತ ಎಲ್ಲ ಬರಹಗಳನ್ನು ಈ ಲಿಂಕ್‌ನಲ್ಲಿ ಓದಬಹುದು
https://eedina.com/tag/mandya-sahitya-sammelana/

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...