ಮಂಡ್ಯ ಸಾಹಿತ್ಯ ಸಮ್ಮೇಳನ | ಯಾರು ಬೇಕಾದರೂ ಅಧ್ಯಕ್ಷರಾದರೆ ಅದು ʼಸಾಹಿತ್ಯ ಸಮ್ಮೇಳನʼ ಹೇಗಾಗುತ್ತದೆ?

Date:

ಯಾರದೋ ಪ್ರತಿಷ್ಠೆ, ಇನ್ಯಾರದೋ ರಾಜಕೀಯ ಬೇಳೆ ಬೇಯಿಸಲಿಕ್ಕೆ ನಾಡು ನುಡಿಯ ಹೆಸರಲ್ಲಿ ಅವಕಾಶವಿರಬಾರದು. ಸಾಹಿತ್ಯ ಪರಿಷತ್ತನ್ನು ಮತ್ತು ಕನ್ನಡವನ್ನು ಕಟ್ಟಿ ಬೆಳೆಸಿದವರು ಇಂತಹ ಹುಚ್ಚಾಟಗಳಿಗೊಂದು ಕೊನೆ ಹಾಡಬೇಕಿದೆ.

ಮಂಡ್ಯದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ದಿನಗಣನೆ ಆರಂಭವಾಗಿದೆ. ಇದರೊಂದಿಗೆ ಸಮ್ಮೇಳನದ ಕುರಿತು, ಸಮ್ಮೇಳನದ ಅಧ್ಯಕ್ಷರ ಆಯ್ಕೆಯ ಕುರಿತು ಪರಿಷತ್ತಿನ ಅಧ್ಯಕ್ಷರಾದ ಮಹೇಶ್ ಜೋಶಿ ನೀಡಿದ ಹೇಳಿಕೆ ವಿವಾದವನ್ನು ಹುಟ್ಟು ಹಾಕಿದೆ. “ನನ್ನಂತೆ ಸಾಹಿತ್ಯೇತರ ವ್ಯಕ್ತಿಗಳು ‘ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷʼ ರಾಗಬಹುದಾದರೆ, ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿ ಅಲ್ಲದ ಯಾರಾದರೂ ಯಾಕೆ ಅಧ್ಯಕ್ಷರಾಗಬಾರದು?” ಇಂತಹ ಒಂದು ಪ್ರಶ್ನೆಯನ್ನು ಸಮಾಜದ ಮುಂದಿರಿಸುವ ಮೂಲಕ, ಸಾಹಿತಿಯಲ್ಲದವರಿಗೆ ಅಧ್ಯಕ್ಷರಾಗುವ ಅವಕಾಶ ನೀಡಿದ ಕನ್ನಡಿಗರ ಔದಾರ್ಯ ಎಂತಹ ಅವಾಂತರ, ಅಪಸವ್ಯಗಳಿಗೆ ಕಾರಣವಾಗಬಹುದು ಎನ್ನುವುದಕ್ಕೊಂದು ಸರಿಯಾದ ಉದಾಹರಣೆಯೇ ಆಗಿದ್ದಾರೆ.

ಕನ್ನಡ ನಾಡಿನ ಜನ ಸಾಹಿತ್ಯ ಪರಿಷತ್ತಿನಂತಹ ನುಡಿಯ ಗುಡಿಗೆ, ನಾಡು ನುಡಿಯನ್ನು ಜತನದಿಂದ ಪೊರೆಯುವ ಮತ್ತು ಸೃಜನಾತ್ಮಕ ಕಾರ್ಯಗಳ ಮೂಲಕ ಬೆಳೆಸುವ ಸಾಹಿತಿಯಲ್ಲದವರನ್ನು ಆಯ್ಕೆ ಮಾಡುವ ಮೂಲಕ ತಾವು ಎಂತಹ ತಪ್ಪು ಮಾಡಿದ್ದೇವೆ ಎನ್ನುವುದು ಈಗಲಾದರೂ ಅರ್ಥವಾಗಿದ್ದರೆ ಸಾಕು. ಜನಮನದ ಆಸೆ ಆಕಾಂಕ್ಷೆಗಳನ್ನು, ನೋವು ಸಂಕಟಗಳನ್ನ, ವರ್ತಮಾನದ ತವಕ, ತಲ್ಲಣಗಳನ್ನು ಕೇಂದ್ರವಾಗಿಟ್ಟುಕೊಂಡು ಚರ್ಚೆಗಳು ಸಂವಾದಗಳು ಗೋಷ್ಠಿಗಳನ್ನು ಆಯೋಜನೆ ಮಾಡಿ. ಕನ್ನಡದ ನೆಲ, ಜಲ, ನುಡಿ, ಸಂಸ್ಕೃತಿಯ ಬೆಳೆವಣಿಗೆಗಳನ್ನು ಕೇಂದ್ರವಾಗಿರಿಸಿದ ಒಂದು ಕಾರ್ಯಸೂಚಿಯನ್ನು ಸಾಹಿತ್ಯ ಸಮ್ಮೇಳನಗಳು ಲಾಗಾಯ್ತಿನಿಂದಲೂ ಆಳುವವರ ಮತ್ತು ಉಳುವವರ ಎದುರು ಪ್ರಸ್ತುತಪಡಿಸುತ್ತಾ ಬಂದಿವೆ. ಈ ಕೆಲಸವನ್ನು ಮುಂದುವರಿಸಬೇಕಿದ್ದರೆ ಅಧಿಕಾರ, ಅಹಂಕಾರ, ರಾಜಕೀಯ ನಂಟು ಇದ್ದರಷ್ಟೇ ಸಾಕಾಗುವುದಿಲ್ಲ. ಜನಮನದ ಆಸೆ, ಆಕಾಂಕ್ಷೆ, ದುಡಿಯುವ ಜನರ ಬೇನೆ, ಬೇಸರಿಕೆಗಳು, ಬದಲಾಗುತ್ತಿರುವ ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಸಮೀಕರಣದ ಹಿಂದಿನ ಕಾರ್ಯ, ಕಾರಣಗಳ ಬಗ್ಗೆ ಆಳವಾದ ಜ್ಞಾನ ವಿಲ್ಲದೇ ಹೋದರೂ ಕನಿಷ್ಠ ತಿಳಿವಳಿಕೆಯಾದರೂ ಇರಬೇಕು. ಒಂದು ವೇಳೆ ಅದಿಲ್ಲದೇ ಹೋದರೆ, ತಮ್ಮ ಅರಿವಿನ ಮಿತಿ, ಪರಿಮಿತಿಗಳ ಎಚ್ಚರವಿದ್ದರೂ ಸಾಕಾಗುತ್ತದೆ.

ಕಸಾಪ 1

ನಾಡು ಕಟ್ಟುವ ಕೆಲಸ ಯಾರಾದರೂ ಒಬ್ಬ ಮಾಡುವ ಕೆಲಸವಲ್ಲ. ಒಂದೊಮ್ಮೆ ಹಾಗೇನಾದರೂ ಇದ್ದರೆ ಅದು ನಾಡು ಕಟ್ಟುವ ಕೆಲಸವಾಗದೇ, ಯಾರದೋ ಹಬ್ಬದ ಲಾಡು ಕಟ್ಟುವ ಕೆಲಸವಷ್ಟೇ. ತನ್ನ ಮೂಗಿನ ನೇರಕ್ಕೆ ಎಲ್ಲವನ್ನೂ ಬಗ್ಗಿಸುವ, ತನ್ನಿಚ್ಛೆಗೆ ಸರಿಯಾಗಿ ಎಲ್ಲರನ್ನು ಒಗ್ಗಿಸುವ ಕೆಲಸ ಮಾಡುವುದಕ್ಕೆ ಜನರ ತೆರಿಗೆಯ ದುಡ್ಡು ಸುರಿಯುವ ದರ್ದು ಆದರೂ ಏನು?

ಸಾಹಿತ್ಯ ಸಮ್ಮೇಳನಕ್ಕೆ ಯಾರು ಬೇಕಾದರೂ ಅಧ್ಯಕ್ಷರಾಗಬಹುದಾದರೆ ಅದು ಸಾಹಿತ್ಯ ಸಮ್ಮೇಳನ ಹೇಗಾಗುತ್ತದೆ? ಅಂತಹ ಸಮ್ಮೇಳನಕ್ಕೆ ಜನರ ತೆರಿಗೆಯ ಹಣ ಯಾಕೆ ವ್ಯಯ ಆಗಬೇಕು? ಯಾರದೋ ಪ್ರತಿಷ್ಠೆ ಬೆಳೆಸುವ, ಇನ್ಯಾರದೋ ಬೇಳೆ ಬೇಯಿಸಲಿಕ್ಕೆ ನಾಡು ನುಡಿಯ ಹೆಸರಲ್ಲಿ ಅವಕಾಶವಿರಬಾರದು. ಸಾಹಿತ್ಯ ಪರಿಷತ್ತನ್ನು, ಕನ್ನಡವನ್ನು ಕಟ್ಟಿ ಬೆಳೆಸಿದವರು ಇಂತಹ ಹುಚ್ಚಾಟಗಳಿಗೊಂದು ಕೊನೆ ಹಾಡಬೇಕಿದೆ. ಸಾಹಿತ್ಯ ಪರಿಷತ್ತು ಮತ್ತು ಕನ್ನಡದ ಕುರಿತ ನಿಯತ್ತು ಉಳಿಯಬೇಕು, ಬೆಳೆಯಬೇಕು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿ ಮಂಡ್ಯ ಸಮ್ಮೇಳನ | ಜೋಶಿಯವರು ಸಾಹಿತ್ಯ ವೇದಿಕೆಯನ್ನು ರಾಡಿ ಎಬ್ಬಿಸಲು ಹೊರಟಿದ್ದಾರೆಯೇ?
ಇದನ್ನೂ ಓದಿ ಕರ್ನಾಟಕದಲ್ಲಿ ಸಾಹಿತಿಗಳಿಗೆ ಬರವಿದೆಯೇ? ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿಯೇ ಅಧ್ಯಕ್ಷರಾಗಲಿ; ಚಿಂತಕರ ಒತ್ತಾಯ

ಯಾರು ಬೇಕಾದರೂ ಸಮ್ಮೇಳನಾಧ್ಯಕ್ಷರಾಗಬಹುದಾದ ಸ್ಥಿತಿಗೆ ಕನ್ನಡ ಸಾಹಿತ್ಯ ಪರಿಷತ್ತು ತಲುಪಿದೆ ಎಂದಾದರೆ, ಅದು ಸಾಹಿತ್ಯ ಪರಿಷತ್ತು ಆಗಿ ಉಳಿದಿಲ್ಲ ಎಂದೇ ತಿಳಿಯಬೇಕಾಗಿದೆ. ಮಾತು ಮಾತಿಗೆ ಕಾನೂನು ಹೀಗಿದೆ, ಹಾಗಿದೆ ಎಂದು ಹೇಳುವ ಪ್ರಸ್ತುತ ಅಧ್ಯಕ್ಷರು ಕಾನೂನು ಹೇಳದೇ ಇರುವ, ನಾಡು ನುಡಿಯ ಭವಿಷ್ಯದ ಕುರಿತಂತೆ ಆರು ಕೋಟಿ ಕನ್ನಡಿಗರ ಮಾತು ಕೇಳುವ, ತಾಯಿ ಭುವನೇಶ್ವರಿಯ ಹಿರಿಮೆ- ಗರಿಮೆ ಅರಿತು ನಡೆಯುವ ಸೂಕ್ಷ್ಮತೆ ಕಳೆದುಕೊಂಡಿದ್ದಾರೆಯೇ ಎನ್ನುವ ಅನುಮಾನ ಕಾಡುತ್ತಿದೆ. ಇಂತಹ ಅನುಮಾನಗಳ ಮಧ್ಯೆ ಸಾಹಿತ್ಯ ಮತ್ತು ಪರಿಷತ್ತು ಎರಡೂ ಬೆಳೆಯಲಾರದು. ಸರಕಾರ ಈ ಕುರಿತು ಚಿಂತನೆ ನಡೆಸಿ ಸಾಹಿತ್ಯ ಮರೆತು, ಇನ್ನೇನನ್ನೋ ಮೆರೆಸಲು ಹೊರಟ ಪರಿಷತ್ತಿನ ಭವಿಷ್ಯ ನಿರ್ಧರಿಸಬೇಕಿದೆ.

WhatsApp Image 2025 11 17 at 3.51.43 PM
ಡಾ ಉದಯ್‌ ಕುಮಾರ್‌ ಇರ್ವತ್ತೂರು
+ posts

ನಿವೃತ್ತ ಪ್ರಾಂಶುಪಾಲರು, ಮಂಗಳೂರು

ಪೋಸ್ಟ್ ಹಂಚಿಕೊಳ್ಳಿ:

ಡಾ ಉದಯ್‌ ಕುಮಾರ್‌ ಇರ್ವತ್ತೂರು
ಡಾ ಉದಯ್‌ ಕುಮಾರ್‌ ಇರ್ವತ್ತೂರು
ನಿವೃತ್ತ ಪ್ರಾಂಶುಪಾಲರು, ಮಂಗಳೂರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...