ಮನುಷ್ಯನ ಪ್ರತಿಷ್ಠೆ ಪ್ರತಿಪಾದನೆ ಧರ್ಮವೊ – ಮನುಷ್ಯತ್ವ ಪ್ರತಿಪಾದನೆ ಧರ್ಮವೋ..?

Date:

ಧರ್ಮದ ಸಾರವಾದ, ಸಮಸಂಸ್ಕೃತಿಯ ಹಿನ್ನೆಲೆಯ ಮನುಷ್ಯತ್ವಧಾರಿತ ಸಮ ಸಂಸ್ಕೃತಿ ಪ್ರತಿಪಾದನೆ ಮಾಡುವ ಈ ಭಾರತದ ಮೂಲ ನಿವಾಸಿಗಳ ವಾರಸುದಾರಿಕೆಯ ಮಣ್ಣಿನಲ್ಲಿ ಬುದ್ಧ- ಬಸವ- ಬಸವಾದಿ ಶರಣ ಶರಣೆಯರು- ಕನಕದಾಸ- ಸೂಫಿ ಸಂತರು - ಅಂಬೇಡ್ಕರ್- ನಾರಾಯಣ ಗುರು- ಪೆರಿಯಾರ್ ಪ್ರತಿಪಾದನೆ ಮಾಡಿದ್ದು.

ಸತ್ಯ ಹೇಳಿದವನು ವಿವಾದವನ್ನು ಮೈಮೇಲೆ ಎಳೆದುಕೊಂಡಂತೆ ಆಗುತ್ತದೆ – ತಲೆಗೆ ಹೊಡೆದಂತೆ – ಕಣ್ಣಿಗೆ ಕಂಡರೂ ಕಾಣುತ್ತಲೇ ಇಲ್ಲ ಎಂದು ಸುಳ್ಳನ್ನು ಹೇಳಿ ಆ ಸುಳ್ಳಿನ ಮೇಲೆಯೇ ಬೃಹತ್ ಗಾಳಿ ಗೋಪುರವನ್ನು ಕಟ್ಟಿ ಮೆರೆಯುವವರು ರಾಷ್ಟ್ರಪ್ರೇಮಿಯಾಗುತ್ತಾನೆ. ಏಕೆಂದರೆ ವಾಸ್ತವದಲ್ಲಿ ‘ಧರ್ಮ’ ಎಂಬುದು ಮನುಷ್ಯತ್ವದ ಸಂಕೇತ – ಮನುಷ್ಯನ ಸಂಕೇತವಲ್ಲ.

ಮನುಷ್ಯ- ಮನುಷ್ಯತ್ವವನ್ನು ರೂಢಿಸಿಕೊಂಡಾಗ ಮಾತ್ರ ಅವನು ಧರ್ಮದ ಪರಿಮಿತಿಗೆ ಒಳಪಡುತ್ತಾನೆ. ಇದಲ್ಲದೆ ಕೇವಲ ‘ದೇವರ’ ಹೆಸರಿನಲ್ಲಿ ಸ್ವಾರ್ಥ ಸಾಧನೆಗಾಗಿ ಮನುಷ್ಯತ್ವವನ್ನು ಮರೆತು ಹುಟ್ಟಿನಿಂದ ಸಾಯುವವರೆಗೂ ಅನೇಕ ಸಂಕೋಲೆಗಳಿಗೆ ತಾನು ಮಾತ್ರ ಪರಮೋಚ್ಚ ಮನುಷ್ಯನಾಗಿ ಬದುಕಿದರೆ – ಇದರ ಪರಮೋಚ್ಚ ಸ್ಥಾನವನ್ನು ಉಳಿಸಿಕೊಳ್ಳಲು ತಾನೇ ಸೃಷ್ಟಿಸಿದ ದೇವರ ಮೂಲಕ ಧರ್ಮವನ್ನು ಪ್ರತಿಪಾದನೆ ಮಾಡುವುದಾದರೆ ಅದು ಧರ್ಮವೇ ಅಲ್ಲ. ಅದು ಕೇವಲ ಸ್ವಾರ್ಥಪರ ಬೂಟಾಟಿಕೆ.

ಧರ್ಮವನ್ನು ಸ್ವಾರ್ಥ ಸಾಧನೆಗಾಗಿ ಕೆಲವೇ ಕೆಲವರು ‘ಮನುಷ್ಯ’ ನ ಸಂಕೇತವನ್ನಾಗಿಸಿಕೊಂಡು – ‘ದಯೆಯೇ ಧರ್ಮದ ಮೂಲವಯ್ಯ’ ಎನ್ನುವ ಸಿದ್ಧಾಂತದ ಆಧಾರದಲ್ಲಿ ರೂಪಿತ ಗೊಂಡಿರುವ ಧರ್ಮದ ನಿಜ ಸ್ವರೂಪದ ‘ಮನುಷ್ಯತ್ವ’ವನ್ನು ಸಂಪೂರ್ಣವಾಗಿ ನಾಶಪಡಿಸಿ ಹಾಗೂ ಅದು ಪ್ರತಿಪಾದನೆ ಮಾಡುವ ‘ಸರ್ವರಿಗೂ ಸಮಪಾಲು- ಸರ್ವರಿಗೂ ಸಮಬಾಳು’ ಎಂಬ ಸಮಾನತೆಯ ತತ್ವ ಸಿದ್ಧಾಂತವನ್ನು ಅಲ್ಲಗಳೆದಿದ್ದೇವೆ. ನಮ್ಮ ಧರ್ಮದಲ್ಲಿ ತಲೆಯಿಂದ ಹುಟ್ಟಿದವರಿಗೆ- ಕೈಯಿಂದ ಹುಟ್ಟಿದವರಿಗೆ- ಹೊಟ್ಟೆಯಿಂದ ಹುಟ್ಟಿದವರಿಗೆ- ಹಾಗೂ ಪಾದದಿಂದ ಹುಟ್ಟಿದವರಿಗೆ ಬಹುಮುಖ್ಯವಾಗಿ ಹುಟ್ಟುವ ಜಾಗದಲ್ಲಿ ಹುಟ್ಟಿದ ಈ ಭಾರತದ ಮೂಲ ನಿವಾಸಿಗಳಾದ ಪಂಚಮರಿಗೆ ‘ಧಾರ್ಮಿಕ ಹಾಗೂ ಸಾಮಾಜಿಕ ಶ್ರೇಷ್ಠತೆ ಅಥವಾ ಸಾಮಾಜಿಕ ಹಾಗೂ ಧಾರ್ಮಿಕ ಕನಿಷ್ಠತೆಗಳು’ ಉಂಟಾದದ್ದು ‘ಮನುಷ್ಯತ್ವ’ ಎಂಬ ಧರ್ಮದಿಂದಲ್ಲ. ಆದರೆ ಧರ್ಮವನ್ನೇ ‘ಮನುಷ್ಯರು’ ತಮ್ಮದಾಗಿಸಿಕೊಂಡವರಿಂದ ಬಹುದೊಡ್ಡ ಅನ್ಯಾಯವಾಗಿದೆ ಎಂಬುದಕ್ಕೆ ಜ್ವಲಂತ ನಿದರ್ಶನಗಳೇ ಇವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಅಮಾನುಷ ನೀತಿಯ ವಿರುದ್ಧದ, ಅಂದರೆ ಮನುಷ್ಯ ತಾನು ಉಜ್ವಲವಾಗಿ ಬದುಕಲು ದೇವರ ಹೆಸರಿನಲ್ಲಿ ರೂಪಿಸಿಕೊಂಡ ಎಂಬ ‘ಪುರಾಣ’ ಕಲ್ಪಿತ ಅಹಂ ಮತ್ತು ಧರ್ಮಧರಿತ ಮನುಷ್ಯತ್ವ ಎಂಬ ‘ವಾಸ್ತವ’ ಆಧಾರಗಳ ನಡುವೆ ಸಿಲುಕಿಕೊಂಡಿರುವ ಮನುಷ್ಯ ಹಾಗೂ ಮನುಷ್ಯತ್ವದ ನಡುವಿನ ಚರ್ಚೆ ಆರಂಭಗೊಂಡಿದೆ ಬುದ್ಧನಿಂದ. ಇದನ್ನು ತಳಸ್ಪರ್ಶಯವಾಗಿ ಮುಂದೆ ತಂದವನು ಬಸವಣ್ಣ ಹಾಗೂ ಬಸವಾದಿ ಶರಣ ಶರಣೆಯರು. ನಂತರದ್ದು ಇವರಿಬ್ಬರ ವಾರಸುದಾರಿಕೆ ಪಡೆದಂತೆ ಈ ಭಾರತದ ಮಣ್ಣಿನಲ್ಲಿ ಜನಿಸಿದ ಬಾಬಾಸಾಹೇಬ್ ಅಂಬೇಡ್ಕರ್ ಅವರು.

ಇವರು ಶತಶತಮಾನಗಳಿಂದ ತಲೆಯಲ್ಲಿ ಬೇರೂರು ಇದ್ದ ಏಕಮುಖ ಚಿಂತನೆಯ ಮನುಷ್ಯನಲ್ಲಿ- ಬಹುಮುಖ ಚಿಂತನೆಯ ‘ಮನುಷ್ಯತ್ವ’ ಎಂಬ ನಿಜ ಧರ್ಮದ ಸಾರವನ್ನು ಪ್ರತಿಪಾದನೆ ಮಾಡಿದವರು. ಈ ನೆಲದಲ್ಲಿ ನಿಜ ಮಾನವ ಧರ್ಮ ಸಂಸ್ಥಾಪಕರೇ ಆದರು.

ಧರ್ಮದ ಸಾರವಾದ, ಸಮಸಂಸ್ಕೃತಿಯ ಹಿನ್ನೆಲೆಯ ಮನುಷ್ಯತ್ವಧಾರಿತ ಸಮ ಸಂಸ್ಕೃತಿ ಪ್ರತಿಪಾದನೆ ಮಾಡುವ ಈ ಭಾರತದ ಮೂಲ ನಿವಾಸಿಗಳ ವಾರಸುದಾರಿಕೆಯ ಮಣ್ಣಿನಲ್ಲಿ ಬುದ್ಧ- ಬಸವ- ಬಸವಾದಿ ಶರಣ ಶರಣೆಯರು- ಕನಕದಾಸ- ಸೂಫಿ ಸಂತರು – ಅಂಬೇಡ್ಕರ್- ನಾರಾಯಣ ಗುರು- ಪೆರಿಯಾರ್ ಪ್ರತಿಪಾದನೆ ಮಾಡಿದ್ದು.

ಇವರುಗಳು ಧರ್ಮದೊಳಗಿನ ಮನುಷ್ಯತ್ವದ ಪರವಾಗಿ ಮಾತನಾಡಿ ಸಮಾನತೆಯ ಧರ್ಮ ಪ್ರತಿಷ್ಠಾಪನೆ ಮಾಡಿದರು – ಹಾಗೆಯೇ ಮನುಷ್ಯತ್ವವನ್ನು ಮನುಷ್ಯ ಕೇಂದ್ರಿತವನ್ನಾಗಿ ಮಾಡಿಕೊಂಡವರ ವಿರುದ್ಧ ಕಠಿಣ ಶಬ್ದಗಳಲ್ಲಿ ಖಂಡಿಸಿದರು, ಮಾತನಾಡಿದರು. ಮಾತನಾಡುವಂತೆಯೂ ಮಾಡಿದರು.

ಇದನ್ನು ಓದಿ ಸಾಮಾಜಿಕ ನ್ಯಾಯ ಶಾಶ್ವತವಾಗಿ ಅರಳಲಿ: ಪತ್ರ ಮುಖೇನ ಬಿಜೆಪಿಗೆ ಉದಯನಿಧಿ ಸ್ಟಾಲಿನ್ ತಿರುಗೇಟು

ಮನುಷ್ಯತ್ವ ಧರ್ಮವನ್ನು ಪ್ರತಿಪಾದನೆ ಮಾಡಿದವರು ನಿಧನರಾಗಿದ್ದರೂ ಸಹ ನಡುವೆ ಬೌದ್ಧಿಕವಾಗಿ ಜೀವಂತವಾಗಿದ್ದಾರೆ. ಈ ಭೂಮಿಯಲ್ಲಿ ಯುಗಯುಗಗಳಿಗೂ ಜೀವಂತವಾಗಿಯೇ ಇರುತ್ತಾರೆ. ಆದರೆ, ಮನುಷ್ಯನ ಮೂಲಕ ತಮ್ಮ ಸ್ವಾರ್ಥ ಸಾಧನೆಗಾಗಿ ಧರ್ಮ ಪ್ರತಿಪಾದನೆ ಮಾಡಿದವರು ನಮ್ಮ ನಡುವೆ ಇವತ್ತು ವಿವಿಧ ಬಣ್ಣಗಳಲ್ಲಿ ಇದ್ದರೂ ಸಹ ತಮ್ಮ ಪಾರಂಪರಿಕವಾಗಿ ಅಂಟಿರುವ ಅಭೌತಿಕತೆಯಿಂದ ಯುಗ ಯುಗಗಳು ಕಳೆದರೂ ಸಹ ಸತ್ತಂತೆ ಇರುತ್ತಾರೆ .

‘ದೈಹಿಕವಾಗಿ ಜೀವಂತ ಇದ್ದು – ಬೌದ್ಧಿಕವಾಗಿ ಸತ್ತಂತೆ ಇರುವವರದು ಧರ್ಮವಾಗಬಾರದು, ದೈಹಿಕವಾಗಿ ಸತ್ತರೂ ನಮ್ಮ ನಡುವೆ ಬೌದ್ಧಿಕವಾಗಿ ಜೀವಂತ ಇರುವವರು ಪ್ರತಿಪಾದನೆ ಮಾಡಿದ್ದು ಧರ್ಮವಾಗಬೇಕು’ ಇಂತಹ ಮನುಷ್ಯತ್ವದ ಧರ್ಮವನ್ನು ಪ್ರತಿಪಾದನೆ ಮಾಡಿದ ಯಾರೂ ಸಹ ಅಯೋಗ್ಯರಲ್ಲ.

WhatsApp Image 2025 11 17 at 3.26.35 PM
ಎನ್ ಚಿನ್ನಸ್ವಾಮಿ ಸೋಸಲೆ
+ posts

ಪ್ರಾಧ್ಯಾಪಕ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಎನ್ ಚಿನ್ನಸ್ವಾಮಿ ಸೋಸಲೆ
ಎನ್ ಚಿನ್ನಸ್ವಾಮಿ ಸೋಸಲೆ
ಪ್ರಾಧ್ಯಾಪಕ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...