ಸುಗ್ಗಿಯಿಂದ ಹಿಗ್ಗಿದ ಡಾ.ಬೆಸಗರಹಳ್ಳಿ ರಾಮಣ್ಣ

Date:

ಕಥೆಗಾರ್ತಿ ದಯಾ ಗಂಗನಘಟ್ಟ ಅವರ ‘ಉಪ್ಪುಚ್ಚಿ ಮುಳ್ಳು’ ಕಥಾ ಸಂಕಲನ, ಡಾ.ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿಗೆ ಆಯ್ಕೆಯಾಗಿದೆ. ಇಂದು ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಬೆಳಗ್ಗೆ 10ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ. ಆ ನೆಪದಲ್ಲಿ ಅಪ್ಪಟ ಹಳ್ಳಿಹೈದ ಡಾ.ಬೆಸಗರಹಳ್ಳಿ ರಾಮಣ್ಣರ ಕುರಿತು ಟಿಪ್ಪಣಿ…

‘ಮಂಡ್ಯಾ ಅಂದ್ರೆ ಇಂಡ್ಯಾ’ ಎಂದು ನಂಬಿದ್ದ, ಅದನ್ನು ತಮ್ಮ ಕೃತಿಗಳಲ್ಲಿ ಕಂಡರಿಸಿದ, ಹೆಸರಿನೊಂದಿಗೆ ಹಳ್ಳಿಯ ನಂಟನ್ನು ಅಂಟಿಸಿಕೊಂಡೇ ಬದುಕಿದ ರಾಮಣ್ಣ, ಅಪ್ಪಟ ಹಳ್ಳಿಗ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ಆಗಸ್ಟ್ 15, 1938ರಲ್ಲಿ ಜನಿಸಿದ ರಾಮಣ್ಣರಿಗೆ, ಕಣ್ಣು ಬಿಟ್ಟಾಕ್ಷಣ ಕಂಡದ್ದು ಹಳ್ಳಿ ಬದುಕು, ಕಿವಿ ತುಂಬಿದ್ದು ದೇಸೀ ಭಾಷೆ. ಬಾಲ್ಯದ ನೆನಪುಗಳು, ಹಳ್ಳಿ ಬದುಕು ಮತ್ತು ಭಾಷೆಯೇ ಅವರ ಆಸ್ತಿ. ಅದನ್ನೇ- ತಮ್ಮ ಸುತ್ತಲಿನ ಸಂಕಟ, ಸಂಭ್ರಮ, ಸೊಕ್ಕುಗಳನ್ನೇ- ಅಕ್ಷರರೂಪಕ್ಕಿಳಿಸಿದರು, ಕತೆಗಳನ್ನಾಗಿ ಕಟ್ಟಿಕೊಟ್ಟರು. ಕನ್ನಡ ಕಥಾ ಪರಂಪರೆಯನ್ನು ಸಮರ್ಥವಾಗಿ ಮುಂದುವರೆಸಿದರು, ಸಾಹಿತ್ಯ ಲೋಕವನ್ನು ಸಮೃದ್ಧಗೊಳಿಸಿದರು. ಹಳ್ಳಿಗಾಡಿನ ಅಸಲಿ ಕತೆಗಾರ ಡಾ.ಬೆಸಗರಹಳ್ಳಿ ರಾಮಣ್ಣ.

ಬೆಸಗರಹಳ್ಳಿ, ಕೊಪ್ಪ, ಮದ್ದೂರು, ಮೈಸೂರುಗಳಲ್ಲಿ ವಿದ್ಯಾಭ್ಯಾಸ ಮಾಡಿದ ರಾಮಣ್ಣ, ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯದತ್ತ ಒಲವು ಮೂಡಿತು. ಮೈಸೂರಿನ ಸಾಂಸ್ಕೃತಿಕ ಲೋಕ, ಸಾಹಿತಿಗಳ ಸಹವಾಸ ಅವರನ್ನು ಅಕ್ಷರಲೋಕಕ್ಕೆ ಎಳೆಯಿತು. ಸುಪ್ತವಾಗಿದ್ದ ಸಾಹಿತ್ಯ ಚಿಗುರಲು, ಅರಳಲು ಪರಿಸರ ಪ್ರೇರಣೆ ಒದಗಿಸಿತು. ಬಾಲ್ಯದ ಅನುಭವಗಳು ಬಳ್ಳಿಯಲ್ಲಿ ಹೂವು ಅರಳಿದಷ್ಟೇ ಸಹಜವಾಗಿ ಕತೆಗಳಾಗಿ ಅರಳತೊಡಗಿದವು. ಇಪ್ಪತ್ನಾಲ್ಕು ವರ್ಷಕ್ಕೇ, ವಿದ್ಯಾರ್ಥಿಯಾಗಿದ್ದಾಗಲೇ ‘ಹಾವಿಲ್ಲದ ಹುತ್ತ’ ಎಂಬ ಕತೆಯನ್ನು ಪ್ರಜಾವಾಣಿ ದೀಪಾವಳಿ ವಿಶೇಷಾಂಕಕ್ಕೆ, ವಿದ್ಯಾರ್ಥಿ ವಿಭಾಗದ ಕಥಾಸ್ಪರ್ಧೆಗೆ ಕಳಿಸಿದ್ದರು. ಈ ಕತೆ ತೀರ್ಪುಗಾರರ ಮೆಚ್ಚುಗೆ ಪಡೆಯಿತು. ಇದಾಗಿ ಮೂರು ವರ್ಷಗಳಾದ ಮೇಲೆ ಮತ್ತೆ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಗೆ ‘ಸುಗ್ಗಿ’ ಕತೆ ಕಳಿಸಿದರು. ಅದು ಪ್ರಥಮ ಬಹುಮಾನ ಗಳಿಸಿತು. ಇಲ್ಲಿಂದ ರಾಮಣ್ಣನವರ ಬರವಣಿಗೆಯ ಬದುಕು ಬಿಚ್ಚಿಕೊಳ್ಳಲಾರಂಭಿಸಿತು.

ಒಡಲಾಳದಲ್ಲಿ ಅವಿತು ಕೂತಿದ್ದ ಪಾತ್ರಗಳು, ಕಥೆಗಳು ಕಾವೇರಿ ನದಿಯಂತೆ ಹರಿಯತೊಡಗಿದವು- ಕನ್ನಂಬಾಡಿ ಕಟ್ಟೆಯೇ ಒಡೆದಂತೆ!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಒಂದು ಹುಡುಗಿಗೆ ಬಿದ್ದ ಕನಸು, ಘರ್ಜನೆ, ನೆಲದ ಒಡಲು, ಹರಕೆಯ ಹಣ, ನೆಲದ ಸಿರಿ, ಕನ್ನಂಬಾಡಿ, ಸುಗ್ಗಿ, ಕೊಳಲು, ಖಡ್ಗ ಎಂಬ ಕಥಾ ಸಂಕಲನಗಳನ್ನು; ರಕ್ತಕಣ್ಣೀರು, ತೋಳಗಳ ನಡುವೆ ಎಂಬ ಕಾದಂಬರಿಗಳನ್ನು; ಶೋಕಚಕ್ರ ಎಂಬ ಕವನ ಸಂಕಲನವನ್ನು ಹೊರತಂದು ಕನ್ನಡ ಸಾಹಿತ್ಯ ಲೋಕದಲ್ಲಿ ದಾಖಲಾಗಿಹೋದರು.

ಇದನ್ನು ಓದಿದ್ದೀರಾ?: ಎಚ್.ಡಿ ದೇವೇಗೌಡರ `ನೇಗಿಲ ಗೆರೆಗಳು’ ಕೃತಿ ಕುರಿತು ರಾಜಾರಾಂ ತಲ್ಲೂರ್ ಬರೆಹ

ಇತ್ತ ರಾಮಣ್ಣನವರು ವೈದ್ಯರಾಗಿ ಮಂಡ್ಯದ ಹಳ್ಳಿಗಳಲ್ಲಿ ಸೇವೆ ಸಲ್ಲಿಸುತ್ತ ಜನಾನುರಾಗಿಯಾಗುತ್ತಿದ್ದರೆ, ಅತ್ತ ಸಾಹಿತ್ಯ ವಲಯದಲ್ಲಿ ಕತೆಗಾರರಾಗಿ ಸಾಹಿತಿಗಳ ಆತ್ಮೀಯ ಮಿತ್ರನಾಗಿ ಮಾರ್ಪಾಡಾಗಿದ್ದರು. ರಾಮಣ್ಣ ಮೂಲತಃ ಸ್ನೇಹಜೀವಿ. ಮನೆಗೆ ಯಾರೇ ಬಂದರೂ, ಎಷ್ಟೇ ಹೊತ್ತಾದರೂ ಅವರಿಗೆ ಊಟ ಮಾಡಿಸಿ, ಬಾವುಣಿಕೆ ತೋರುವ ಅಪರೂಪದ ಅಂತಃಕರಣಿ. ಗಾಂಧಿ ಪ್ರೇಮಿ, ಬಾಡೂಟದ ಬಂಧು.

ನವೋದಯ, ನವ್ಯದ ಹೊತ್ತಲ್ಲೇ, ಬಂಡಾಯದ ಬೀಜ ಬಿತ್ತನೆ ಆರಂಭಿಸಿದ್ದ ಕಾಲದಲ್ಲಿಯೇ ಬೆಸಗರಹಳ್ಳಿಯ ರಾಮಣ್ಣ ಕೂಡ ಬರವಣಿಗೆಯ ಆರಂಬ ಮಾಡಿದ್ದರು. ಉಳುಮೆ, ಬಿತ್ತನೆ, ಕಳೆ, ದನಕರ, ಕಾಗೆ-ನಾಯಿ, ಸುಗ್ಗಿ, ಮೆದೆ, ಬದಗಳನ್ನು ಬಿಡಿಸಿಡುತ್ತಿದ್ದರು. ವ್ಯವಸ್ಥೆಯ ವಿರುದ್ಧ ಸಿಟ್ಟಿನಿಂದ ಸಿಡಿಯುತ್ತಿದ್ದ, ದಮನಿತರ ಪರ ದನಿ ಎತ್ತುತ್ತ ಅವರ ನೋವು, ಕ್ರೋಧಗಳಿಗೆ ಬರವಣಿಗೆಯ ಮುಲಾಮು ಹಚ್ಚುತ್ತಿದ್ದ ಭಾವಜೀವಿ ರಾಮಣ್ಣ, ಆ ಮೂಲಕ ಸಮಾಜಕ್ಕಂಟಿದ ರೋಗಕ್ಕೆ ಮದ್ದರೆಯುತ್ತಿದ್ದರು. ಚೆಲುವನ ಪರಂಗಿ ಗಿಡಗಳು ಎಂಬ ಕತೆ ಇದಕ್ಕೊಂದು ಉತ್ತಮ ಉದಾಹರಣೆ.

ಊರಿನ ಶ್ರೀಮಂತ ಗೌಡರಿಂದ ಸಾಲ ಪಡೆದ ದಲಿತನೊಬ್ಬ, ಜಮೀನನ್ನು ಅವರಿಗೆ ಬಿಟ್ಟುಕೊಟ್ಟು, ಅದೇ ಜಮೀನಿನಲ್ಲಿ ಕೂಲಿಕಾರನಾಗಿ ಗೇಯುತ್ತ, ಬೇಯುತ್ತ ಬದುಕುತ್ತಿದ್ದರೆ, ಆತನ ಮಗ ಒಂಚೂರು ಓದು ಬರಹ ಕಲಿತು, ತಿಳಿದವರಿಂದ ಪರಂಗಿಯ ಬಗ್ಗೆ ತಿಳಿವಳಿಕೆ ಪಡೆದು, ಪುಕ್ಕಟೆಯಾಗಿ ಸಿಕ್ಕ ಪರಂಗಿ ಬೀಜಗಳನ್ನು ತಂದು, ಅಪ್ಪನ ವಿರೋಧದ ನಡುವೆಯೂ ತಮ್ಮ ಜಮೀನಿನ ಒಂದು ಮೂಲೆಗೆ ಹಾಕಿ ಬೆಳೆಸುತ್ತಾನೆ. ಅವು ಆಳುದ್ದ ಬೆಳೆದು ಕಾಯಿ ಬಿಟ್ಟು ನಿಂತಾಗ ಖುಷಿಗೊಳ್ಳುತ್ತಾನೆ. ಆದರೆ ಅಪ್ಪ ಅದನ್ನೋಡಿ ಒಳಗೊಳಗೇ ನೋವು ನುಂಗುತ್ತಿರುತ್ತಾನೆ. ಅತ್ತ ಅಪ್ಪ ಇವು ಯಾರಿಗೂ ಸಿಗಬಾರದು ಎಂದು ಆ ಪರಂಗಿ ಗಿಡಗಳನ್ನೆಲ್ಲ ಕಡಿದು ಹಾಕುತ್ತಾನೆ. ಒಂದೇ ಸಮಯದಲ್ಲಿ ಚೆಲುವನಿಗೆ ಅಪ್ಪ-ಗೌಡ ಇಬ್ಬರೂ ತನ್ನ ಪಾಲಿನ ವಿಲನ್‌ಗಳಂತೆ ಕಾಣತೊಡಗುತ್ತಾರೆ. ಆದರೆ ಅಪ್ಪನ ಬೇಗುದಿಯೇ ಬೇರೆ, ಗೌಡನ ಗತ್ತಿನ ಗುಟುರೇ ಬೇರೆ, ಚೆಲುವನ ಚಿತ್ತವೇ ಬೇರೆ.

ಈ ಕಥೆಯನ್ನು ಕನ್ನಡದ ಸೃಜನಶೀಲ ನಿರ್ದೇಶಕರಾದ ಟಿ.ಎಸ್.ರಂಗಾ ‘ಉದ್ಭವ್’ ಎಂಬ ಹೆಸರಿನಲ್ಲಿ ಹಿಂದಿ ಭಾಷೆಯಲ್ಲಿ ಸಾಕ್ಷ್ಯಚಿತ್ರ ಮಾಡಿದ್ದಾರೆ. ಇವರ ಇನ್ನೊಂದು ಕಥೆ ಗಾಂಧಿಯನ್ನು ನಂಜುಂಡೇಗೌಡರು ‘ನಾನು ಗಾಂಧಿ ಅಲ್ಲ’ ಎಂಬ ಮಕ್ಕಳ ಚಿತ್ರ ಮಾಡಲು ಬಳಸಿಕೊಂಡಿದ್ದಾರೆ. ಇವರ ಕಥೆಗಳು ಬೇರೆ ಭಾಷೆಗೂ ಅನುವಾದಗೊಂಡಿವೆ. ರಾಮಣ್ಣರ ‘ಬೇಲಾ’ ಕಥೆಯನ್ನು ವಿಮರ್ಶಕ ಜಿ.ಎಚ್.ನಾಯಕರು ಕನ್ನಡದ ಶ್ರೇಷ್ಠ ಕತೆಗಳಲ್ಲೊಂದು ಎಂದು ಪ್ರಶಂಸಿಸಿದ್ದಾರೆ.

ನಂಬಿದ ಮೌಲ್ಯಗಳನ್ನು ಬಿಡದೆ ಬದುಕಿದ ರಾಮಣ್ಣ ನಿವೃತ್ತಿಯ ನಂತರ ಮಂಡ್ಯದಲ್ಲೊಂದು ಮನೆ ಮಾಡಿ, ಅದಕ್ಕೆ `ನೆಲದ ಒಡಲು’ ಎಂದು ಹೆಸರಿಟ್ಟು ಸರಳವಾಗಿ ಬದುಕಿದ ಸಜ್ಜನ. ಇಂತಹ ರಾಮಣ್ಣ ಜುಲೈ 13, 1998ರಂದು ಕೊನೆಯುಸಿರೆಳೆದಾಗ, ಅವರ ಬೆನ್ನಿಗಿದ್ದದ್ದು ಕೂಡ ಅವರು ನಂಬಿಕೊಂಡು ಬಂದ ಆದರ್ಶಗಳೆ. ‘ಭೂತಕಾಲದ ಪರಿಚಯವಿಲ್ಲದವನು ವರ್ತಮಾನ ಕಾಲದಲ್ಲಿ ಇದ್ದೂ ಸತ್ತಂತೆಯೆ. ಇಂಥವನು ಏನು ಬರೆದರೂ ಅದರಲ್ಲಿ ಮುಂಗಾಣ್ಕೆಯ ಕೊರತೆ ಎದ್ದು ಕಾಣುತ್ತದೆ…’ ಎಂದ ರಾಮಣ್ಣ ಭವಿಷ್ಯತ್ತಿನಲ್ಲಿ ಬದುಕುವಂತಹ ಕತೆಗಳನ್ನೇ ಕೊಟ್ಟು, ಈಗಲೂ ಆ ಕತೆಗಳ ಮೂಲಕವೇ ನಮ್ಮ ನಡುವೆ ಬದುಕಿರುವ ಅಪ್ಪಟ ಹಳ್ಳಿಹೈದ.

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...