ಭತ್ತ ಬೆಳೆಯಲು ‘ಕೆಸರುಗದ್ದೆ’ಯ ಅಗತ್ಯವೇ ಇಲ್ಲ; ‘ಜಪಾನಿ ನಾಟಿ’ ಭಾರತದ್ದಲ್ಲ!

Date:

ಭತ್ತ ಬೆಳೆಯುವ ಈ ವಿಧಾನಕ್ಕೆ ಕೆಸರುಗದ್ದೆ(Puddling) ಎಂಬ ಹೆಸರಿದೆ. ಗದ್ದೆ ಮಾಡಬೇಕಾಗಿರುವ ಭೂ ಹಿಡುವಳಿಯನ್ನು ಹಣ್ಣುಗಾಯಿ ನೀರುಗಾಯಿ ಆಗುವಂತೆ ಉಳುಮೆ ಮಾಡಿ, ನೀರನ್ನು ತುಂಬುಗಟ್ಟಿ, ಮತ್ತೆ ಮತ್ತೆ ಉಳುಮೆ ಮಾಡುತ್ತಲೇ ಇದ್ದು, ನಾಟಿ ಮಾಡಲಿರುವ ಮುನ್ನಾ ದಿನವೂ ಉಳುಮೆ ಮಾಡಿ ಹಲುಬೆ ದಿಂಡನ್ನು ತಿರುಗಾ ಮುರುಗಾ ಮಾಡಿ ನೀರು ಗದ್ದೆಯ ಎಲ್ಲ ಮೂಲೆ ಮುಡುಕುಗಳಲ್ಲೂ ಸಮನಾಗಿ ನಿಲ್ಲುವಂತೆ ಸಮಗಟ್ಟಲಾಗುವುದು – ಹಿಂಗೆಲ್ಲ ಅನೇಕ ಸಲ ನೀರುಗಟ್ಟಿಸಿ ಉತ್ತ ನಂತರ ಒಂದು ವಾರ ಹಂಗೇ ಬಿಡಲಾಗುತ್ತದೆ; ಈ ಹಂಗೇ ಬಿಡಲಾಗುವುದಕ್ಕೆ ‘ಮಾಗ ಹಾಕುವುದು’ ಎಂಬ ಒಳ್ಳೆಯ ಹೆಸರು ಕಟ್ಟಲಾಗಿದೆ.

ವಾಸ್ತವಿಕವಾಗಿ, ಈ ಮಾಗ ಹಾಕುವ ಏಳು ದಿನಗಳ ಅವಧಿಯಲ್ಲಿ ಕೆಸರಿನ ಅಡಿಗೆ ತುಳಿಯಲಾದ ನಾರು ಬೇರು, ಕಳೆಗಳೆಲ್ಲವೂ ಕೊಳೆತು ಮಣ್ಣು ನಾರುನಾರಾಗುತ್ತದೆ. ಮಣ್ಣು ಹಿಂಗೆ ನಾರುಗಟ್ಟಿದ ಮೇಲೆ ಮತ್ತೆ ಉಳುಮೆ ಮಾಡಿ ಹಲುಬೆ ದಿಂಡು ಹೊಡೆದು ಮತ್ತೆ ಸಮಗಟ್ಟಿ ಭತ್ತದ ಪಯಿರನ್ನು ನಾಟಿ ಮಾಡುವ ಕಾರ್ಯ ಶುರುವಾಗುತ್ತದೆ.

WhatsApp Image 2024 07 28 at 11.59.14 AM

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನಾರು ಬೇರು ಕಳೆಗಳೆಲ್ಲವೂ ಆಮ್ಲಜನಕದ ಗೈರಿನಲ್ಲಿ ಕೊಳೆಯುವುದರಿಂದ ಮಣ್ಣಿನ ತಳಭಾಗದಲ್ಲಿ ಮಿಥೇನ್ ಅನಿಲ ಉತ್ಪಾದನೆಯಾಗುತ್ತಿರುತ್ತದೆ. ಭತ್ತ ಬೆಳೆಯುತ್ತ ಹೋದಂತೆ ಈ ಮಿಥೇನ್ ಅನಿಲ ಭತ್ತದ ಪಯಿರಿನ ‘ಏರೆಂಕೈಮಾ’ ಎಂಬ ಹೆಸರಿನ ಟೊಳ್ಳು ಕೋಶಗಳಿಗೆ ರವಾನೆಯಾಗಿ, ಪಯಿರಿನ ಗರಿಗಳ ಹಿಂಭಾಗದಲ್ಲಿ ಸ್ಥಿತಿಸ್ಥಾಪಕ ತತ್ವದ ಪ್ರಕಾರ ಕಾರ್ಯ ನಿರ್ವಹಿಸುವ ‘ಸ್ಟೊಮಾಟೊ’ ಅಂತಾ ಕರೆಯಲಾಗಿರುವ ಕವಾಟಗಳ ಮೂಲಕ ವಾತಾವರಣಕ್ಕೆ ಹೊಮ್ಮುತ್ತದೆ. ಈ ಮಿಥೇನ್ ಅನಿಲವು, ಮೋಟಾರು ವಾಹನಗಳಿಂದ ಹೊಮ್ಮುವ ಕಾರ್ಬನ್ ಡಯಾಕ್ಸೈಡ್/ ಮಾನಾಕ್ಸೈಡಿಗಿಂತಲೂ 25 ಪಟ್ಟು ಬೇಗ ಮತ್ತು 25 ಪಟ್ಟು ಹೆಚ್ಚು ಬಿಸಿಯಾಗುತ್ತದೆ (methane is 25 times more Global Warming Potential/ GWP than Carbon dioxide/ monoxide – IPCC report)

ಕರ್ನಾಟಕದ ಮಂಡ್ಯ, ಕೊಪ್ಪಳ ಜಿಲ್ಲೆಯ ಗಂಗಾವತಿ, ಬಳ್ಳಾರಿ ಜಿಲ್ಲೆಯ ಸಿರುಗುಪ್ಪ, ತುಂಗಭದ್ರ ಅಣೆಯ ಅಚ್ಚುಕಟ್ಟು ಪ್ರದೇಶದ ಎಲ್ಲೇ ನಿಂತರೂ ಮೂಗಿಗೆ ಬಡಿಯುವ ಕಮಟು ವಾಸನೆಯ ಮೂಲವೇ ಈ ಕೆಸರುಗದ್ದೆಗಳಿಂದ ಹೊಮ್ಮುತ್ತಿರುವ ಮಿಥೇನ್ ಅನಿಲ/ ಮಳೆ ಸುರಿಯುತ್ತಿರುವಾಗಲೂ ಒಂದು ತರದ ಮುಗ್ಗು ಸೆಕೆ ಇದೆ ಎಂದಾದರೆ ಅದಕ್ಕೆ ಈ ಮಿಥೇನ್ ಅನಿಲವೇ ಕಾರಣ.

WhatsApp Image 2024 07 28 at 11.58.54 AM

‘ಹಸಿರು ಕ್ರಾಂತಿ’ಗೆ (Green revolution) ಮುಂಚಿನ ದಿನಗಳಲ್ಲಿ ಭತ್ತ ಬೆಳೆಯುವ ಈ ಕೆಸರುಗದ್ದೆ ವಿಧಾನ ನಮ್ಮಲ್ಲಿ ಇರಲಿಲ್ಲ. ಹಸಿರು ಕ್ರಾಂತಿಯ ನಂತರವೇ ಹುಟ್ಟಿಕೊಂಡ ಈ ವಿಧಾನಕ್ಕೆ ‘ಜಪಾನಿ ನಾಟಿ’ ಎಂಬ ಹೆಸರು ಕೂಡ ಚಾಲ್ತಿಯಲ್ಲಿತ್ತು.

ಈ ಕೆಸರುಗದ್ದೆಯ ಇನ್ನೊಂದು ಮಗ್ಗುಲೆಂದರೆ ಇದಕ್ಕೆ ಸೋಂಕುವ ‘ಬೆಂಕಿ ರೋಗ’, ಮೊದಲಿಗೆ ಇಲ್ಲದ ಭತ್ತದ ಬೆಂಕಿರೋಗ ಶುರುವಾಗಿದ್ದು ಕೂಡ ಕೆಸರುಗದ್ದೆ ಮಾಡಿ ಭತ್ತ ಬೆಳೆಸುವ ಜಪಾನಿ ಷೋಕಿ ಶುರುವಾದ ಮೇಲೆ. ಕೀಟ ಶಾಸ್ತ್ರಜ್ಞರು ಹೇಳುವ ಪ್ರಕಾರ ಪರಿಸರ ವ್ಯವಸ್ಥೆಯಲ್ಲಿ ‘ಕಂದು ಜಿಗಿ ಹುಳ’ (Brown plant hopper) ಎಂಬ ಜೀವವೊಂದಿದೆ. ಮೊದಲಿಗೆ ಅದು ಶುಂಠಿ ಹುಲ್ಲಿನಲ್ಲೊ ಎಲ್ಲೋ ಒಂದ್ಕಡೆ ಜೀವನ ಮಾಡಿಕಂಡಿತ್ತು. ಯಾವಾಗ ಫಿಲಿಪೈನ್ಸ್ ದೇಶದಲ್ಲಿ ಸಾವಿರಾರು ಎಕರೆ ಭೂಮಿ ಕೆಸರುಗದ್ದೆಯಾಗಿ ಮಾರ್ಪಾಟಾಯಿತೊ ಆಗ ಭತ್ತದ ಬೆಳೆಗೆ ಅಮರಿಕೊಂಡಿತು. ಕೆಸರುಗದ್ದೆಯ ನಿಂತ ನೀರಿನ ಮೇಲಾಡಿಕೊಂಡಿರುವ ಈ ಕಂದು ಜಿಗಿ ಹುಳು ಭತ್ತದ ಪಯಿರನ್ನು ಕೊರೆದು ಅದರ ನಟ್ಟ ನಡುಭಾಗದಲ್ಲಿ ಮೊಟ್ಟೆಗಳನಿಟ್ಟು ಮರಿ ಮಾಡಿಕೊಳ್ಳುತ್ತದೆ. ಆಗ ಭತ್ತದ ಪಯಿರಿಗೆ ಪೋಷಕಗಳನ್ನು ಸಾಗಿಸುವ ಗ್ಸೈಲೆಮ್ (Xylem) ನಳಿಕೆಗಳು ಊನಗೊಂಡು ಭತ್ತದ ಪಯಿರುಗಳು ಸುಟ್ಟಂತೆ ಕಾಣುತ್ತವೆ – ಇದು ಬೆಂಕಿ ರೋಗದ ಕತೆ.

WhatsApp Image 2024 07 28 at 11.59.26 AM

ಹಂಗಾದರೆ, ‘ನಾವು ಭತ್ತ ಬೆಳೆಯುವುದು ಬೇಡವ, ಭತ್ತ ಬೆಳೆಯದೇ ಮಕ್ಕಳಿಗೆ ಉಣಲು ಅನ್ನ ಕೊಡಬೇಡವ’ ಎಂಬ ಪ್ರಶ್ನೆ ಈಗ ಎದುರಾಗಬಹುದು.

ವಾಸ್ತವಿಕವಾಗಿ, ಕೆಸರುಗದ್ದೆ ಮಾಡಿ ಹಿಡುವಳಿವಾರು ಎಷ್ಟು ಭತ್ತ ಬೆಳೆಯಬಹುದೋ ಅಷ್ಟೇ ಪ್ರಮಾಣದ ಭತ್ತವನ್ನು ಕೆಸರುಗದ್ದೆ ಮಾಡದೆಯೂ ಬೆಳೆದುಕೊಳ್ಳಬಹುದಾದ ಅನೇಕ ವಿಧಾನಗಳು ಭಾರತದಲ್ಲಿ ಇದ್ದವು. ಭತ್ತದ ಜೊತೆಬೆಳೆಯಾಗಿ ಅಕ್ಕಡಿ ಬೆಳೆಯುವ ಪದ್ದತಿಯೂ ಇತ್ತು. ಒಂದು ಸಲ ಸಾವಯವ ಬೇಸಾಯಗಾರ ನಾಡೋಜ ನಾರಾಯಣರೆಡ್ಡಿಯವರ ತೋಟ ನೋಡಲು ಹೋಗಿದ್ದೆ ಅದು ಅಕ್ಟೋಬರ್ ತಿಂಗಳ ಮೂರನೆಯ ವಾರ, ಅವರ ಭತ್ತದ ಗದ್ದೆಯ ಪಯಿರಿನ ತೆನೆಗಳಾಗಲೇ ಹಾಲು ತುಂಬಿ ಕೊರಳು ಬಾಗಿಸುತಿದ್ದವು.

ಆಗ ನಾರಾಯಣರೆಡ್ಡಿಯವರು, ‘ಪಯಿರು ಹಾಲುದುಂಬುವ ಕಾಲಕ್ಕೆ ಭತ್ತದ ಗದ್ದೆಗೆ ಆಗಾಗ ನೀರು ಕೊಟ್ಟರೂ ಸಾಕು, ಭತ್ತಕ್ಕೆ ಬೇರೆ ಬೆಳೆಗಳಿಗೆ ಬೇಕಿರುವಂತೆ ತೇವ ಮಾತ್ರ ಸಾಕು, ನೀರು ತುಂಬುಗಟ್ಟುವ ಅಗತ್ಯವೇ ಇಲ್ಲ’ ಎಂದಿದ್ದರು.

– ಎಲ್‌.ಸಿ ನಾಗರಾಜ್

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...