ತಾಯಿ ಮೇಲೆ ಆಣೆಯಿಟ್ಟ ಬೊಮ್ಮಾಯಿಯಿಂದ ಪಂಚಮಸಾಲಿಗಳಿಗೆ ಮೋಸ; ಸ್ವಾಮೀಜಿಯೇಕೆ ಹೀಗೆ ಮಾಡಿದರು?

Date:

ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಒಂದು ಸಮುದಾಯದ ಮೀಸಲಾತಿ ಕಿತ್ತುಕೊಂಡು 2% ಹೆಚ್ಚಳ ಮಾಡಿದ್ದಾರೆ. ಅದರಲ್ಲೂ 2% ಹೆಚ್ಚಿಸಿದ್ದು ಕೇವಲ ಪಂಚಮಸಾಲಿಯವರಿಗಾಗಿಯೇ? ಇಲ್ಲ! ಇದರಲ್ಲಿ ಇಡೀ ಲಿಂಗಾಯತ ಸಮುದಾಯದ ಉಳಿದ 101 ಪಂಗಡಗಳನ್ನು, ಜೈನರನ್ನು (ದಿಗಂಬರ) ಹಾಗೂ ಕ್ರೈಸ್ತರನ್ನು ಸೇರಿಸಿದ್ದಾರೆ.

ಪಂಚಮಸಾಲಿ ಸಮುದಾಯಕ್ಕೆ ರಾಜಕೀಯ ಹಾಗೂ ಸರ್ಕಾರಿ ಉದ್ಯೋಗದಲ್ಲಿ ಪ್ರಾತಿನಿಧ್ಯ ಸಿಕ್ಕಿದೆಯೋ, ಇಲ್ಲವೋ ಎನ್ನುವ ಚರ್ಚೆಯನ್ನು ಪಕ್ಕಕ್ಕಿಡೋಣ. ಹೋರಾಟದ ಕಡೆ ಮುರುಗೇಶ್ ನಿರಾಣಿ, ಸಿ ಸಿ ಪಾಟೀಲ್ ಇತ್ಯಾದಿ ಸಮುದಾಯದ ರಾಜಕಾರಣಿಗಳು ಇಣುಕಿಯೂ ನೋಡದಿದ್ದರೂ, ಹರಿಹರ ಪೀಠ ಈ ಹೋರಾಟದಿಂದ ಬಹುತೇಕ ದೂರವೇ ಉಳದಿದ್ದರೂ ಇಡೀ ಪಂಚಮಸಾಲಿಗರು ಒಂದಾಗಿ ‘ಪಂಚಮಸಾಲಿ ಹೋರಾಟ ಸಮಿತಿ’ಯ ನೇತೃತ್ವದಲ್ಲಿ ಎರಡು ವರ್ಷ ಹೋರಾಡಿದ್ದು ಸಾಮಾನ್ಯ ಸಂಗತಿಯಲ್ಲ.

ಪಂಚಮಸಾಲಿಗರ ಬೇಡಿಕೆ ಇದ್ದದ್ದು ಪ್ರವರ್ಗ 2Aಗೆ ಸೇರಲು! ಅದಕ್ಕಾಗಿಯೇ ಎರಡು ವರ್ಷ ಬೀದಿ ಹೋರಾಟ, ಪಾದಯಾತ್ರೆ, ಸಮಾವೇಶಗಳು ಹಾಗೂ ಸತ್ಯಾಗ್ರಹ ಮಾಡಿದರು. ಆದರೆ ಕೊನೆಗೆ ಪಡದಿದ್ದೇನು? ಅವರು ಈ 2 ಪ್ರತಿಶತ ಮೀಸಲಾತಿಗಾಗಿಯೇ ಎರಡು ವರ್ಷ ಹೋರಾಡಿದ್ದಾ? ‘ಮುಖ್ಯಮಂತ್ರಿ ಬೊಮ್ಮಾಯಿ ತಾಯಿಯ ಮೇಲೆ ಆಣೇ ಮಾಡಿ ನಿಮಗೆ ಪ್ರವರ್ಗ 2A ಅಡಿಯಲ್ಲಿ ಖಂಡಿತ ಸೇರಿಸುವೆ’ ಎಂದು ಜಯಮೃತ್ಯುಂಜಯ ಸ್ವಾಮೀಜಿ ಎದುರುಗಡೆ ಆಣೆ ಇಟ್ಟಿದ್ದು ಏನಾಯ್ತು? (ಬೊಮ್ಮಾಯಿ ಆಣೆ ಇಟ್ಟ ಮಾತು ಸ್ವತಃ ಸ್ವಾಮೀಜಿಯೇ ಸಾರ್ವಜನಿಕವಾಗಿ ಹತ್ತಾರು ಸಲ ಹೇಳಿದ್ದು) ಬೊಮ್ಮಾಯಿ ಮಾತಿಗೆ ತಪ್ಪಿದರೆ ಅವರಿಗೆ ಶಿಗ್ಗಾಂವಿ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆಂದು ಸ್ವಾಮೀಜಿಯವರು ಹೂಂಕರಿಸಿದರು.

ಇದನ್ನು ಓದಿದ್ದೀರಾ?: ಲಿಂಗಾಯತ ಪಂಚಮಸಾಲಿ ಉಪವರ್ಗಕ್ಕೆ ಮೀಸಲಾತಿ ಸಿಕ್ಕಿತೇ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮುಖ್ಯಮಂತ್ರಿ ಬೊಮ್ಮಾಯಿ ಮಾಧ್ಯಮಗಳೆದುರು ಪಂಚಮಸಾಲಿ ಸಮುದಾಯ ಒಳಗೊಂಡಂತೆ ಇಡೀ ವೀರಶೈವ ಲಿಂಗಾಯತರನ್ನು 3B ಇಂದ ಹೊಸದಾಗಿ ಸೃಷ್ಟಿಸಿದ ಪ್ರವರ್ಗ 2D ಗೆ ಸೇರಿಸಿದ್ದೇವೆ ಮತ್ತು ಮೊದಲು 5% ಮೀಸಲಾತಿ ಇತ್ತು, ಈಗ ನಾವು 2% ಹೆಚ್ಚಿಸಿ, ಒಟ್ಟಾರೆ 7% ಮಾಡಿದ್ದೇವೆಂದು ಹೇಳಿದರು.

ಹೋರಾಟದ ಮುಂದಾಳುಗಳಾದ ಯತ್ನಾಳ್, ಸ್ವಾಮೀಜಿ ಮತ್ತು ವಿಜಯಾನಂದ ಕಾಶಪ್ಪನವರ್ ಸೇರಿಕೊಂಡು ಮರುದಿನ ಪ್ರೆಸ್ ಮೀಟ್ ಕರೆದಿದ್ದರು. ಬಹುತೇಕರು ಸರ್ಕಾರದ ಈ ನಿರ್ಧಾರವನ್ನು ಒಕ್ಕೊರಲಿನಿಂದ ತಿರಸ್ಕರಿಸುತ್ತಾರೆಂದು ಭಾವಿಸಿದ್ದರು. ಆದರೆ ಮಾಧ್ಯಮಗಳೆದುರು ಸ್ವಾಮೀಜಿಯವರು ಆಡಿರುವ ಮಾತುಗಳು ಕೇಳಿ ಎಲ್ಲರೂ ಶಾಕ್ ಆದರು. ಆ ಪ್ರೆಸ್ ಮೀಟ್ ನಲ್ಲಿ ಸ್ವಾಮಿಯವರನ್ನು ಹಾಗೂ ಅವರ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರಾಡಿದ ಮಾತುಗಳು, ಅವರ ದೇಹಭಾಷೆ, ಅವರ ಮುಖಭಾವ ಸಪ್ಪೆ ಆಗಿದ್ದು ಎದ್ದು ಕಾಣುತ್ತಿತ್ತು. ಅಲ್ಲಿ ಅವರ ಅಸಹಾಯಕತೆ ಕಾಣುತ್ತಿತ್ತು. ಅವರನ್ನು ಪ್ರಾಯಶಃ ಹೆದರಿಸಿಯೋ ಅಥವಾ ಬೇರೆ ತರಹ ಮ್ಯಾನೇಜ್ ಮಾಡಿಯೋ ಮೋದಿ, ಬಿಜೆಪಿ ಮತ್ತು ಬೊಮ್ಮಾಯಿ ಗುಣಗಾನವನ್ನು ಅವರಿಂದ ಒತ್ತಾಯದಿಂದ ಮಾಡಿಸಿದಂತಿತ್ತು; ಸರ್ಕಾರದ ಆದೇಶವನ್ನು ಅವರನ್ನು ಸ್ವಾಗತಿಸಲು ಹೇಳಿ ಕೊಟ್ಟಂತಿತ್ತು. ಇಲ್ಲದಿದ್ದರೆ ನಾವೆಲ್ಲರೂ ಬಲ್ಲಂತ ಸ್ವಾಮೀಜಿ ಹೀಗೆ ‘ನಾವು ಯುದ್ಧದಲ್ಲಿ ಗೆದ್ದಿದೆವೆಂದು’ ಹುಸಿ ಮಾತನಾಡುತ್ತಿರಲಿಲ್ಲ!

ಪಂಚಮಸಾಲಿ ಹೋರಾಟ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಮಾತ್ರ ಸರ್ಕಾರದ ಆದೇಶ ಮತ್ತು ಸ್ವಾಮೀಜಿ ಹಾಗೂ ಯತ್ನಾಳ್ ನಿಲುವನ್ನು ಅದೇ ಪ್ರೆಸ್ ಮೀಟ್ ನಲ್ಲಿ ವಿರೋಧಿಸಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆಂದು ಘೋಷಿಸಿದರು. ಪಕ್ಕದಲ್ಲೇ ಕೂತಿದ್ದ ಯತ್ನಾಳ್ ರಾಗಲಿ, ಸ್ವಾಮೀಜಿ ಅವರಾಗಲಿ ಅವರನ್ನು ತಡೆಯುವ ಕನಿಷ್ಠ ಪ್ರಯತ್ನವನ್ನೂ ಮಾಡದಿದ್ದದ್ದೂ ಸ್ವಾಮೀಜಿಯವರ ಅಸಹಾಯಕತೆ ಸ್ಪಷ್ಟಪಡಿಸಿತ್ತು.

panchamasali 21647610533

ಕೇವಲ ತನ್ನ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಯಾರದೋ ಕಿತ್ತುಕೊಂಡು 2% ಹೆಚ್ಚಳ ಮಾಡಿದ್ದಾರೆ. ಅದು ಈ 2 ಪ್ರತಿಶತವಾದರು ಹೆಚ್ಚಿಸಿದ್ದು ಕೇವಲ ಪಂಚಮಸಾಲಿಗರಿಗಾಗಿಯೇ? ಅದು ಇಲ್ಲ! ಇದರಲ್ಲಿ ಇಡೀ ಲಿಂಗಾಯತ ಸಮುದಾಯದ ಉಳಿದ 101 ಪಂಗಡಗಳನ್ನು, ಜೈನರನ್ನು (ದಿಗಂಬರ) ಹಾಗೂ ಕ್ರೈಸ್ತರನ್ನು ಸೇರಿಸಿದ್ದಾರೆ.

ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಯತ್ನಾಳ್ ಸೇರಿಕೊಂಡು, ಸ್ವಾಮೀಜಿಯವರನ್ನು ಬಳಸಿಕೊಂಡು ಇಡೀ ಪಂಚಮಸಾಲಿಗರಿಗೆ ಕಲರ್ ಕಲರ್ ಮಕ್ಮಲ್ ಟೋಪಿಗಳು ಹಾಕಿದ್ದಾರೆ. ಬಿಜೆಪಿ ಸರ್ಕಾರ ದುಡಿದುಣ್ಣುವ, ರೈತಾಪಿಗಳಾದ ಪಂಚಮಸಾಲಿಗರಿಗೆ ಹೀಗೆ ಮೋಸ ಮಾಡಬಾರದಿತ್ತು. ಸರ್ಕಾರಕ್ಕೆ ನಾವು ಕೇಳಿದ್ದೇನು? ಈಗ ನೀವು ಕೊಟ್ಟಿದ್ದೇನು? ಸ್ವಾಮೀಜಿಯವರೇ ಮತ್ತು ಯತ್ನಾಳ್ ಅವರೇ ನಮಗೇನು ಸಿಕ್ಕಿದೆ ಎಂದು ನಾವು ಸಂಭ್ರಮಾಚರಣೆ ಮಾಡಬೇಕು? ಸರ್ಕಾರದ ಆದೇಶದಿಂದ ನಮಗಾದ ಉಪಯೋಗವೇನೆಂದು ಸಮುದಾಯದ ಜನಸಾಮಾನ್ಯರು ಕೇಳಿದರೆ ಎಲ್ಲರೂ ನಿರುತ್ತರ ಆಗುತ್ತಾರೆ. ಆದರೀಗ ಈ ಮೋಸವನ್ನು ಕೇಳುವವರ್ಯಾರು? ಹೋರಾಟಕ್ಕೆ ಫುಲ್ ಸ್ಟಾಪ್ ಇಟ್ಟಿದ್ದೇವೆಂದು ಘೋಷಿಸಿ ಸಂಭ್ರಮಾಚರಣೆಯಲ್ಲಿರುವವರಂತು ಕೇಳುವುದಿಲ್ಲ! ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಸಮುದಾಯದ ಜನಸಾಮಾನ್ಯರೇ ಸಂಭ್ರಮಾಚರಣೆ ಮಾಡುತ್ತಿರುವವರನ್ನು ಹಾಗೂ ಈ ಮೋಸದ ಸರ್ಕಾರವನ್ನು ಕೇಳಬೇಕು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೇವಲ 7 ದಿನದಲ್ಲೇ ದೇಶದಲ್ಲಿ ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ಸಮುದಾಯಕ್ಕೆ 10% ಮೀಸಲಾತಿ ನೀಡಿದೆ. ಅದು ಅವರು ಕೇಳದಿದ್ದರೂ, ಯಾವುದೇ ಹೋರಾಟ ಮಾಡದಿದ್ದರೂ ನೀಡಿದೆ. ಆದರೆ, ರೈತಾಪಿಗಳಾದ ಪಂಚಮಸಾಲಿಗರು ರಸ್ತೆಗಿಳಿದು ಎರಡು ವರ್ಷ ಹೋರಾಡಿದರೂ ಅವರಿಗೆ ಏನನ್ನೂ ನೀಡದೆ, ಎಲ್ಲವೂ ಪಡೆದಿದ್ದೇವೆಂದು ಅವರಾಗವರೇ ಒಪ್ಪಿಕೊಳ್ಳುವಂತೆ ಮಾಡಿ ಅವರನ್ನು ಬರಿಗೈಯಲ್ಲಿ ಮನೆಗೆ ಕಳುಹಿಸಿದ್ದಾರೆ. ಇದು ಬಿಜೆಪಿ ಸರ್ಕಾರ ಇಡೀ ಪಂಚಮಸಾಲಿ ಸಮುದಾಯಕ್ಕೆ ಮಾಡಿದ ಮೋಸವಲ್ಲದೆ ಮತ್ತೇನು? ಒಂದು ಸರ್ಕಾರ ಈ ರೀತಿಯಾಗಿ ಒಂದಿಡೀ ಸಮುದಾಯವನ್ನು ಹೀಗೆ ಮಾತು ಕೊಟ್ಟು ಮೋಸ ಮಾಡಿದ್ದು ಚರಿತ್ರೆಯಲ್ಲಿ ಎಲ್ಲಿಯೂ ಕಾಣಸಿಗುವುದಿಲ್ಲ.

ಇದನ್ನು ಓದಿದ್ದೀರಾ?: ಮೀಸಲಾತಿ | ಬಿಜೆಪಿಯ ತಂತ್ರಗಾರಿಕೆಯ ವೈಫಲ್ಯಕ್ಕೆ ಕಾರಣಗಳೇನು?

ಕೊನೆಗೊಂದು ಮಾತು : ಮುಸ್ಲಿಂರ ಮೀಸಲಾತಿ ಕಿತ್ತು, ಅದನ್ನು ಒಕ್ಕಲಿಗ ಹಾಗೂ ಲಿಂಗಾಯತರಿಗೆ ಹಂಚಿದ್ದರ ಹಿಂದೆ ಸರ್ಕಾರದ ದುರುದ್ದೇಶ ಇದ್ದಂತಿದೆ. ಮುಸ್ಲಿಂರಿಗಾದ ಅನ್ಯಾಯದಿಂದ ಅವರು ರೊಚ್ಚಿಗೆದ್ದು ಹೇಗೂ ರಸ್ತೆಗೆ ಇಳಿಯುತ್ತಾರೆ, ಆಗ ಸಹಜವಾಗಿ ಪಂಚಮಸಾಲಿಗರು ಮತ್ತು ಒಕ್ಕಲಿಗರು ಮುಸ್ಲಿಮರ ವಿರುದ್ಧ ದ್ವೇಷಕಾರಿ ರಸ್ತೆಯಲ್ಲಿ ಹೊಡೆದಾಟಕ್ಕೆ ಇಳಿಯುತ್ತಾರೆ. ಆಗ ಮುಸ್ಲಿಮಯೇತರ ಅದರಲ್ಲೂ ವಿಶೇಷವಾಗಿ ಮೇಲ್ಜಾತಿಯವರ ಮತಗಳು ಧ್ರುವೀಕರಣವಾಗಿ ಚುನಾವಣೆಯಲ್ಲಿ ನಮಗೆ ಲಾಭವಾಗುತ್ತದೆ ಎನ್ನುವ ಲೆಕ್ಕಾಚಾರ ಇದ್ದಂತಿದೆ. ಇಲ್ಲದಿದ್ದರೆ ಯಾವುದೇ ವೈಜ್ಞಾನಿಕ ಅಧ್ಯಯನದ ವರದಿಯೂ ಇಲ್ಲದೆ ಒಂದು ಸಮುದಾಯದ ಮೀಸಲಾತಿ ಕಿತ್ತು ಅದನ್ನು ಬೇರೆಯವರಿಗೆ ಹಂಚಲು ಹೇಗೆ ಸಾಧ್ಯ?

ಹೌದು! ಈ ಸರ್ಕಾರ ಸಂವಿಧಾನದಲ್ಲಿ ಧರ್ಮದ ಆಧಾರದಲ್ಲಿ ಮೀಸಲಾತಿಗೆ ಅವಕಾಶವೇ ಇಲ್ಲವೆಂದು ಸಮಜಾಯಿಷಿ ನೀಡಿ ಮುಸ್ಲಿಮರಿಗೆ 2(ಬಿ) ನಲ್ಲಿರುವ ಮೀಸಲಾತಿಯನ್ನು ಕಿತ್ತುಹಾಕಿದೆ‌. (ಮುಸ್ಲಿಮರಿಗೆ ಮೀಸಲಾತಿ ನೀಡಿದ್ದು ಧರ್ಮದ ಆಧಾರದಲ್ಲಲ್ಲ. ಮುಸ್ಲಿಂ ಸಮುದಾಯ ಆರ್ಥಿಕವಾಗಿ, ಸಾಮಾಜಿಕ ಹಿಂದುಳಿದಿದೆ ಎಂದು ಅಂದಿನ ಮುಖ್ಯಮಂತ್ರಿ ಹೆಚ್ ಡಿ ದೇವೇಗೌಡರು ಅನೇಕ ವರದಿಗಳನ್ನ ಆಧರಿಸಿ 1994 ರಲ್ಲಿ ಪ್ರವರ್ಗ 2B ಅಡಿಯಲ್ಲಿ 4% ಮೀಸಲಾತಿ ನೀಡಿದರು) ಮುಖ್ಯಮಂತ್ರಿಗಳು ಆಡಿರುವ ಮಾತನ್ನೇ ನಂಬುವುದಾದರೆ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶವೇ ಇಲ್ಲವೆಂದ ಮೇಲೆ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರುವ ಕ್ರಿಶ್ಚಿಯನ್ ಮತ್ತು ಜೈನ(ದಿಗಂಬರ) ಧರ್ಮೀಯರಿಗೆ ಖುದ್ದು ಬೊಮ್ಮಾಯಿ ನೇತೃತ್ವದ ಈ ಸರ್ಕಾರವೇ ಲಿಂಗಾಯತರ ಜೊತೆಯಲ್ಲಿ 2 (ಡಿ)ಯಲ್ಲಿ ಮೀಸಲಾತಿ ನೀಡಿದ್ದು ಹೇಗೆ? ಇದಕ್ಕೂ ಬೊಮ್ಮಾಯಿಯವರು ಹೇಗೆ ಸಮಜಾಯಿಷಿ ನೀಡುತ್ತಾರೋ?

49661542 294235811438250 5384525710729674752 n
ಸಿದ್ದಪ್ಪ ಮೂಲಗೆ
+ posts

ಪತ್ರಕರ್ತರು

ಪೋಸ್ಟ್ ಹಂಚಿಕೊಳ್ಳಿ:

ಸಿದ್ದಪ್ಪ ಮೂಲಗೆ
ಸಿದ್ದಪ್ಪ ಮೂಲಗೆ
ಪತ್ರಕರ್ತರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...