ಪ್ರಭಾಕರ ಭಟ್ಟರ ಹೇಳಿಕೆ ಬಿಜೆಪಿ ಪರಿವಾರದ ಚುನಾವಣಾ ‘ಟೂಲ್ ಕಿಟ್’

Date:

ಸದಾ ಸಂಸ್ಕೃತಿಯ ಬಗ್ಗೆ ಉಪದೇಶ ಮಾಡುವ ಸಂಘದ ಸಂಸ್ಕಾರ ಯಾವುದು? ತಮ್ಮ ರಾಜಕೀಯ ಸಾಧನೆಗಾಗಿ ಮುಗ್ಧ ತಾಯಂದಿರನ್ನೇ ವೇಶ್ಯೆಯರಿಗೆ ಹೋಲಿಸುವುದನ್ನ ಸಂಘ ಪ್ರಭಾಕರ ಭಟ್ಟರಿಗೆ ಕಲಿಸಿದೆಯಾ? ಇದು ಖಂಡಿತ ಈ ನೆಲದ ಅಥವಾ ಸನಾತನ ಸಂಸ್ಕೃತಿ ಅಲ್ಲವೇ ಅಲ್ಲ.

 

ಮುಸ್ಲಿಂ ಮಹಿಳೆಯರ ಕುರಿತು ಕಲ್ಲಡ್ಕ ಪ್ರಭಾಕರ ಭಟ್ಟರ ಹೇಳಿಕೆ ವಿಕೃತ ಮನಸ್ಥಿತಿಯದ್ದಾಗಿದೆ. ಚುನಾವಣೆ ಹತ್ತಿರದಲ್ಲಿರುವಾಗ ಇಂತಹ ಹೇಳಿಕೆ ನೀಡಿ ಕೋಮು ಗಲಭೆ ನಡೆಸುವ ಬಿಜೆಪಿ ಪರಿವಾರದ ಟೂಲ್‌ಕಿಟ್‌ನ ಮೊದಲ ಹಂತ ಇದಾಗಿದೆ.

ಅಮಾಯಕ ಯುವಕರು ಪರಸ್ಪರ ಕಾದಾಡಿಕೊಳ್ಳಲೇ ಬೇಕು ಅನ್ನುವ ವಾತಾವರಣ ಸೃಷ್ಟಿಸಲು ಇಂತಹ ಹೇಳಿಕೆ ಬರುತ್ತಿದೆ. ಕಳೆದ 4 ವರ್ಷಗಳ ಕಾಲ ಮೌನವಾಗಿದ್ದ ಅನಂತಕುಮಾರ ಹೆಗಡೆ ಇದೀಗ ಕೋಮು ಹೇಳಿಕೆ ಶುರು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಶೋಭಾ, ಸಿ ಟಿ ರವಿ, ಇತರರು ಹಾಗೂ ಪರಿವಾರದ ನಾಯಕ ಕೋಮು ಹೇಳಿಕೆ ನಿರಂತರವಾಗಿ ಬರುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹೀಗೆ ಉಂಟಾಗುವ ಕ್ರಿಯೆ ಮತ್ತು ಪ್ರತಿಕ್ರಿಯೆಯಿಂದ ಕೋಮು ಸೌಹಾರ್ದತೆ ಹಾಳಾಗಿ ಅಶಾಂತಿ ಮೂಡುವುದನ್ನೇ ಚುನಾವಣೆಗೆ ಬಂಡವಾಳ ಮಾಡುವುದು ಈ ಪರಿವಾರದ ಉದ್ದೇಶವಾಗಿದೆ. ಬಿಜೆಪಿ ರಾಜ್ಯ ಸರ್ಕಾರ ಇದ್ದಾಗ ಬಾಯಿಗೆ ಬೀಗ ಹಾಕಿದ್ದ ನಾಯಕರು ಈಗ ಬಾಯಿಗೆ ಬಂದಂತೆ ಹೇಳಿಕೆ ಕೊಡುವಂತೆ ಪರಿವಾರದ ನಾಯಕರ ಸೂಚನೆ ಬಂದಂತಿದೆ.

ಇದರಿಂದಾಗಿ ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನೂ ಇಕ್ಕಟ್ಟಿಗೆ ಸಿಲುಕಿಸುವುದು ಪರಿವಾರದ ಟೂಲ್‌ಕಿಟ್‌ನ ತಂತ್ರವಾಗಿದೆ. ಈ ರೀತಿ ಪುಂಖಾನು ಪುಂಖವಾಗಿ ಹೇಳಿಕೆ ಕೊಡುವ ನಾಯಕರನ್ನು ಸರ್ಕಾರ ಬಂಧನ ಮಾಡಲು ಪ್ರಾರಂಭಿಸಿದರೆ ರಾಜ್ಯವ್ಯಾಪಿ ಪ್ರತಿಭಟನೆ ಮತ್ತು ಸೌಹಾರ್ದತೆಗೆ ಬೆಂಕಿ ಹಚ್ಚುವ ಕೆಲಸಕ್ಕೆ ಮುಗ್ಧ ಯುವಕರನ್ನು ಬಳಸುವುದು ಮತ್ತು ಸಹಜವಾಗಿ ಅದಕ್ಕೆ ಅನ್ಯಮತದವರು ನೀಡುವ ಪ್ರತಿಕ್ರಿಯೆಯಿಂದ ರಾಜ್ಯ ರಣರಂಗವಾಗುತ್ತದೆ. ಇದು ಬಿಜೆಪಿ ಟೂಲ್ ಕಿಟ್ ನ ಸಮಗ್ರ ಸಂಗತಿಯಾಗಿದೆ. ನನ್ನ ಈ ಮಾತು ಸುಳ್ಳು ಎಂದಾದರೆ ಪ್ರಭಾಕರ ಭಟ್ಟರ ಮಾತನ್ನು ಬಿಜೆಪಿ ಮತ್ತು ಸಂಘ ಪರಿವಾರ ಖಂಡಿಸಬೇಕು.

ಸದಾ ಸಂಸ್ಕೃತಿಯ ಬಗ್ಗೆ ಉಪದೇಶಮಾಡುವ ಸಂಘದ ಸಂಸ್ಕಾರ ಯಾವುದು? ತಮ್ಮ ರಾಜಕೀಯ ಸಾಧನೆಗಾಗಿ ಮುಗ್ಧ ತಾಯಂದಿರನ್ನೇ ವೇಶ್ಯೆಯರಿಗೆ ಹೋಲಿಸುವುದನ್ನ ಸಂಘ ಪ್ರಭಾಕರ ಭಟ್ಟರಿಗೆ ಕಲಿಸಿದೆಯಾ? ಇದು ಖಂಡಿತ ಈ ನೆಲದ ಅಥವಾ ಸನಾತನ ಸಂಸ್ಕೃತಿ ಅಲ್ಲವೇ ಅಲ್ಲ. ಇಂದು ನವ ಹಿಂದುತ್ವದ ಪರಿವಾರದ ಹೀನ ವಿಕೃತ ಮನಸ್ಸಿನ ಪ್ರತಿಫಲನವಾಗಿದೆ. ಅಮಾಯಕ ತಾಯಂದಿರ ಶಾಪ ಇವರಿಗೆ ತಾಗದೇ ಇರದು.

ಇದು ಬಿಜೆಪಿ ಪರಿವಾರದ ಟೂಲ್ ಕಿಟ್ ಅಲ್ಲಾ ಅಂತಾದರೆ, ಅವರ ಮೇಲೆ ಕ್ರಮಕ್ಕೆ ಒಪ್ಪಬೇಕು. ಇಲ್ಲವೆಂದಾದರೆ ಇದು ಚುನಾವಣೆಯ ಟೂಲ್‌ಕಿಟ್ ಎಂದೇ ಸಿದ್ಧವಾಗುತ್ತದೆ

ಇಂತಹ ಸೂಕ್ಷ್ಮ ಪರಿಸ್ಥಿತಿಯನ್ನು ಜನಸಾಮಾನ್ಯರು ಅರ್ಥ ಮಾಡಿಕೊಂಡು ಜಾಣ ನಡೆ ಇಡಬೇಕಿದೆ. ಅವರ ಕುತಂತ್ರಕ್ಕೆ ರಾಜ್ಯದ ಜನರ ಜೀವ ಬಲಿಯಾಗದಂತೆ ನೋಡಿಕೊಳ್ಳುವುದು ಜಾತ್ಯತೀತ ಹಿಂದು ಮುಸ್ಲಿಂ ಕ್ರೈಸ್ತರ ಸಂಕಲ್ಪವಾಗಬೇಕು.

ಸರ್ಕಾರ ನ್ಯಾಯಾಲಯದ ಮೂಲಕವೇ ಕಠಿಣ ಕಾನೂನು ಕ್ರಮ ಕೈ ತೆಗೆದುಕೊಳ್ಳಬೇಕು. ಚುನಾವಣೆ ಗೆಲ್ಲಲು ಯಾವ ಹೀನ ಮಟ್ಟಕ್ಕೂ ಇಳಿಯುವ ಬಿಜೆಪಿ ಪರಿವಾರವನ್ನು ಶಾಂತಿ ಸಮಾಧಾನದ ರಾಜಕೀಯ ನಡೆಯ ಮೂಲಕವೇ ಸೋಲಿಸಬೇಕು. ಹಿಂದೂ ಮುಸ್ಲಿಂ ಅಮಾಯಕ ಯುವಕರ ಪ್ರತಿ ಕ್ಷಣವು ಜಾಗೃತವಾಗಿರಬೇಕಾದ ಪರಸ್ಥಿತಿಯಿದೆ. ತಂದೆ ತಾಯಂದಿರೂ ನಿಮ್ಮ ಮಕ್ಕಳು ಇಂತಹ ಹುನ್ನಾರಕ್ಕೆ ಬಲಿಯಾಗದಂತೆ ನೋಡಿಕೊಳ್ಳಬೇಕು. ಮಹಾತ್ಮ ಗಾಂಧೀಜಿಯವರ ಶಾಂತಿ ಮತ್ತು ಅಹಿಂಸಾ ಮಾರ್ಗದಿಂದ ಮಾತ್ರ ಇಂತಹ ಟೂಲ್‌ಕಿಟ್ ಗಳನ್ನು ಧ್ವಂಸ ಮಾಡಬಹುದು

WhatsApp Image 2025 11 17 at 3.25.04 PM
ಎಂ ಜಿ ಹೆಗಡೆ, ಮಂಗಳೂರು
+ posts

ಲೇಖಕ, ಜನಪರ ಹೋರಾಟಗಾರ

ಪೋಸ್ಟ್ ಹಂಚಿಕೊಳ್ಳಿ:

ಎಂ ಜಿ ಹೆಗಡೆ, ಮಂಗಳೂರು
ಎಂ ಜಿ ಹೆಗಡೆ, ಮಂಗಳೂರು
ಲೇಖಕ, ಜನಪರ ಹೋರಾಟಗಾರ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...