ಕೇಸರಿ-ಹಸಿರು ಗುಂಪುಗಳು; ಜಾತ್ಯತೀತ ಪರಂಪರೆಯ ನಡುವೆ ಸೀಳು ಮೂಡಿಸುವ ಸಮಾನಾಂತರ ಹಳಿಗಳು

Date:

ಎರಡು ವರ್ಷಗಳ ಹಿಂದೆ ರಾಜ್ಯದಲ್ಲಿ ತಲ್ಲಣ ಮೂಡಿಸಿದ್ದ ಡಿಜೆಹಳ್ಳಿ ಪ್ರಕರಣವು ಪ್ರವಾದಿ ಅವರ ವಿರುದ್ಧ ಮಾನಹಾನಿಕರವಾಗಿ ಸೋಷಿಯಲ್ ಮೀಡಿಯಾದಲ್ಲಿ ಬರೆಯಲಾಗಿತ್ತು ಎನ್ನುವುದರ ವಿರುದ್ಧ ಹುಟ್ಟಿಕೊಂಡಂತಹ ಬೆಂಕಿಯಾಗಿತ್ತು. ಆಗ ಜೈಲು ಸೇರಿಕೊಂಡ ಹುಡುಗರಲ್ಲಿ ಅಪರಾಧಿಗಳು ಹಾಗೂ ಕೆಲವು ಮುಗ್ಧರೂ ಕೂಡಾ ಈಗಲೂ ಅಲ್ಲೇ ಕೊಳೆಯುತ್ತಿದ್ದಾರೆ

ಪ್ರವಾದಿ ಮಹಮ್ಮದರ ಜನ್ಮದಿನವನ್ನು ಈದ್ ಮಿಲಾದ್ ಎಂದು ಸಂಭ್ರಮಿಸುವುದು ಮುಸ್ಲಿಮರಲ್ಲಿ ಸಾಮಾನ್ಯವಾಗಿ ನಡೆದುಕೊಂಡು ಬಂದಿರುವ ಪರಿಪಾಠ. ಇದನ್ನು ಮುಸ್ಲಿಮರಲ್ಲಿ ಕೆಲವು ಪಂಗಡಗಳು ತೀವ್ರವಾಗಿ ವಿರೋಧಿಸುತ್ತವೆ ಯಾಕೆಂದರೆ ಹುಟ್ಟು ಹಬ್ಬದ ಆಚರಣೆಯು ಇಸ್ಲಾಮಿನಲ್ಲಿ ಇಲ್ಲ ಎನ್ನುವ ಕಾರಣಕ್ಕಾಗಿ.

ಇದೀಗ ಶಿವಮೊಗ್ಗದಲ್ಲಿ ನಡೆದಿರುವ ಈದ್ ಮಿಲಾದ್ ಸಂಭ್ರಮದ ಬಗ್ಗೆ ನೋಡುವುದಾದರೆ ಇಲ್ಲಿನ ಹಲವು ಗುಂಪುಗಳು ಹಲವು ಕಾರಣಕ್ಕಾಗಿ ಈ ಘಟನೆಯನ್ನು ವಿರೋಧಿಸುತ್ತಿವೆ. ಒಂದನೆಯದು ಪ್ರವಾದಿ ಮಹಮ್ಮದರ ಹುಟ್ಟುಹಬ್ಬವನ್ನು ಆಚರಿಸುವುದು ಇಸ್ಲಾಮಿನಲ್ಲಿ ಇಲ್ಲ. ಹುಟ್ಟುಹಬ್ಬದ ಪರಿಕಲ್ಪನೆ ಇಸ್ಲಾಮಿನಲ್ಲಿ ನಿಷಿದ್ಧ ಎನ್ನುವುದಾಗಿದೆ.

ಎರಡನೇ ಕಾರಣ ಇಸ್ಲಾಮಿನಲ್ಲಿ ಮೂರ್ತಿ ಪೂಜೆ ಇಲ್ಲ. ಯಾವುದೇ ಸಚಿತ್ರ ವ್ಯಕ್ತಿಗಳ ಆರಾಧನೆಗೆ ಅವಕಾಶ ಇಲ್ಲ. ಪ್ರವಾದಿ ಅವರದೇ ಆಗಿರಲಿ, ಯಾರದೇ ಆಗಿರಲಿ ಫೋಟೋಗಳು ಇಸ್ಲಾಮಿನಲ್ಲಿ ಇಲ್ಲ. ಅಂತಹದ್ದರಲ್ಲಿ ಯಾರದೋ ಫೋಟೋವನ್ನು ಹಿಡಿದುಕೊಂಡು ಪ್ರವಾದಿಯೊಂದಿಗೆ ಸಮೀಕರಿಸುವುದು, ಸಂಭ್ರಮಿಸುವುದು ಇಸ್ಲಾಂನಲ್ಲಿ ಅನಾಚಾರ. ಹಾಗಾಗಿ ಇದು ಇಸ್ಲಾಂ ತತ್ವಕ್ಕೆ ವಿರುದ್ಧ ಎನ್ನುವುದು ಕೆಲವರ ನಿಲುವು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇನ್ನು ಕೆಲವರದು ಇಸ್ಲಾಮಿನಲ್ಲಿ ಸಂಗೀತ ನಿಷಿದ್ಧವಾಗಿದೆ. ಹಾಗಾಗಿ ಈ ಡಿಜೆ ಕುಣಿತ ಎಲ್ಲವನ್ನು ಇಸ್ಲಾಂನಲ್ಲಿ ಹರಾಮ್ ಎನ್ನುವ ಕಾರಣಕ್ಕಾಗಿ ಇದಕ್ಕೆ ಅವಕಾಶ ಮಾಡಿಕೊಡಕೂಡದು. ಇಸ್ಲಾಮಿನಾಚೆಗೂ ಶಬ್ದ ಮಾಲಿನ್ಯದಿಂದ ಕಿರಿಕಿರಿಗೊಳಗಾದವರು ಈ ಎಲ್ಲಾ ಡಿಜೆಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ತಮ್ಮ ತಮ್ಮ ಅಳಲುಗಳನ್ನು ಬೇರೆ ಬೇರೆ ಹಬ್ಬದ ಸಮಯದಲ್ಲಿ ತೋಡಿಕೊಳ್ಳುತ್ತಲೇ ಇರುತ್ತಾರೆ.

ಇದೀಗ ಔರಂಗಜೇಬನ ವಿಚಾರಕ್ಕೆ ಬರುವುದಾದರೆ ಮೊದಲನೆಯದಾಗಿ ಕೇಸರಿ ಪಡೆ ಮತ್ತು ಹಸಿರುಪಡೆ ಎಂದು ವಿವರಿಸುವುದಾದರೆ ಕೇಸರಿ ಪಡೆ ಹೇಗೆ ಮಾನವಂತ ಹಿಂದೂಗಳ ಮರ್ಯಾದೆಯನ್ನು ತೆಗೆಯಲು ಹೆಣಗುತ್ತದೆಯೋ ಅದೇ ರೀತಿಯಾಗಿ ಇಲ್ಲಿ ಹಸಿರುಪಡೆಗಳು ಸೌಹಾರ್ದಯುತ ಜೀವನವನ್ನು ಬಯಸುವಂತಹ ಮುಸ್ಲಿಮರು ತಲೆತಗ್ಗಿಸುವಂತೆ ಮಾಡುತ್ತಲೇ ಬಂದಿದೆ. ಅದರ ಒಂದು ಭಾಗವೇ ಸಾರ್ವಜನಿಕ ಡಿಜೆ ಕುಣಿತದ ವಿಕೃತ ಆಚರಣೆ.

ಇದೇ ಕೆಲವು ವರ್ಷಗಳ ಹಿಂದೆ ರಾಜ್ಯದಲ್ಲಿ ತಲ್ಲಣ ಮೂಡಿಸಿದ್ದ ಡಿಜೆಹಳ್ಳಿ ಪ್ರಕರಣವು ಪ್ರವಾದಿ ಅವರ ವಿರುದ್ಧ ಮಾನಹಾನಿಕರವಾಗಿ ಸೋಷಿಯಲ್ ಮೀಡಿಯಾದಲ್ಲಿ ಬರೆಯಲಾಗಿತ್ತು ಎನ್ನುವುದರ ವಿರುದ್ಧ ಹುಟ್ಟಿಕೊಂಡಂತಹ ಬೆಂಕಿಯಾಗಿತ್ತು. ಆಗ ಜೈಲು ಸೇರಿಕೊಂಡ ಹುಡುಗರಲ್ಲಿ ಅಪರಾಧಿಗಳು ಹಾಗು ಕೆಲವು ಮುಗ್ಧರೂ ಕೂಡ ಈಗಲೂ ಅಲ್ಲೇ ಕೊಳೆಯುತ್ತಿದ್ದಾರೆ. (ಅಲ್ಲಿ ಮದುವೆಯಾಗಿ ಅದೇ ತಾನೇ ಮರುದಿನ ಅತ್ತೆ ಮನೆಗೆ ಬಂದ ಹುಡುಗನೊಬ್ಬ ಕೂಡಾ ಜೈಲಿನಲ್ಲಿದ್ದಾನೆ ಎಂದು ಇತ್ತೀಚೆಗಷ್ಟೇ ಆ ಊರ ಜನ ತಿಳಿಸಿದ್ದರು)

muslim

ಆದರೆ, ಇಲ್ಲೂ ಕೂಡ ನಡೆದಿರುವುದು ಪ್ರವಾದಿ ಅವರ ವಿರುದ್ಧದ ಮಾನಹಾನಿಯೇ. ಆದರೆ ಪ್ರವಾದಿಯವರನ್ನು ಸಂಭ್ರಮಿಸುವ ಮರುಳುತನದ ಹಿಂದೆ ನಡೆದಿರುವಂತಹ ನಿಜವಾದ ಮಾನಹಾನಿ ಎನ್ನಬಹುದು. ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ಸದ್ವರ್ತನೆಗೆ ಬಹಳ ಹೆಸರುವಾಸಿಯಾಗಿದ್ದರು. ಅವರ ನಿಜಜೀವನದ ಚರ್ಯೆಯೇ ಸದಾಚಾರ ಮತ್ತು ಮೌಲ್ಯಗಳ ಪಾಠವಾಗಿತ್ತು. ಆದರೆ ಈ ಕಿಡಿಗೇಡಿಗಳು ಸದ್ಯದ ಹಿಂದೂ ಧರ್ಮದ ಹೊಸ ಪಾರ್ಶ್ವ ರೂಪಾಂತರವಾದ ಹಿಂದುತ್ವದ ಜನರು ಯಾವ ರೀತಿಯಾಗಿ ತಮ್ಮ ಧರ್ಮವನ್ನು ಅಭಿವ್ಯಕ್ತಿಗೊಳಿಸುತ್ತಿದ್ದಾರೋ ಅಂತಹ ಒಂದು ರೂಪಾಂತರಕ್ಕೆ ನಮ್ಮ ಧರ್ಮವೂ ನಿಲ್ಲಲಿ ಎಂಬ ಬಯಕೆಯ ಪ್ರತಿಫಲನವಿದು. ಆದರೆ ಯಾವ ಒಳಿತನ್ನೂ ಇತರ ಧರ್ಮಗಳಿಂದ ಕಲಿಯುವುದಿಲ್ಲ ಎನ್ನುವುದು ಮಾತ್ರ ಸರ್ವವಿಧಿತ. ಕೆಡುಕಿಗೆ ಇರುವ ಕಾಂತೀಯ ಗುಣ ಒಳಿತಿಗೆಲ್ಲಿದೆ ?

ಕೇಸರಿಹಸಿರು ಗುಂಪುಗಳು
ಭಾರತದ ಜಾತ್ಯತೀತ ಪರಂಪರೆಯ ನಡುವೆ ಸೀಳು ಮೂಡಿಸುವ ಕೋಮುವಾದಿ ರಸ್ತೆಯ ಸಮಾನಾಂತರ ಹಳಿಗಳು ಎನ್ನಬಹುದು. ಅದರ ಫಲವಾಗಿಯೇ ಈ ವಿಕೃತ ಮೆರವಣಿಗೆ ನಡೆದಿದೆ.

ಭಾರತದಂತಹ ಬಹುತ್ವದ ಪರಂಪರೆಯನ್ನು ಹೊಂದಿರುವಂತಹ ಮಣ್ಣಿನಲ್ಲಿ ಇತ್ತೀಚಿನ ಬೆಳವಣಿಗೆಗಳು ಮೂಡಿಸಿರುವಂತಹ ಅಭದ್ರತೆ ಮತ್ತು ಅಪಾಯಕಾರಿ ವಾತಾವರಣದ ಹಿನ್ನೆಲೆಯಲ್ಲಿ ಎಷ್ಟು ಅಚ್ಚುಕಟ್ಟಾಗಿ ನಡೆದರೂ ಸಾಲದು ಎನ್ನುವ ಪರಿಸ್ಥಿತಿಯಲ್ಲಿ ಅಲ್ಪಸಂಖ್ಯಾತರು ತಳಮಳಿಸುತ್ತಿರುವಾಗ, ಈ ಪುಂಡು ಪೋಕರಿಗಳ ಮೆರವಣಿಗೆಯನ್ನು ತಡೆಯುವ ಹಿರಿಯರು ಯಾರೂ ಆ ಊರಿನಲ್ಲಿ ಇರಲಿಲ್ಲವೇ? ಅಥವಾ ಕರಾವಳಿಯ ಸೋಂಕಿಗೊಳಗಾಗಿದ್ದ ಶಿವಮೊಗ್ಗದಲ್ಲಿ ರೋಗಲಕ್ಷಣ ಉಲ್ಭಣವಾದ ಲಕ್ಷಣವೇ?

ಅದರಲ್ಲೂ ಔರಂಗಜೇಬ್ ನಂತಹ ಒಬ್ಬ ಸಂಗೀತವನ್ನು, ಕುಣಿತವನ್ನು ಪ್ರಬಲವಾಗಿ ನಿಷೇಧಿಸಿದ ಕಟ್ಟರ್ ಇಸ್ಲಾಮಿಕ್ ವಾದಿ ಅರಸನನ್ನು ಇಟ್ಟುಕೊಂಡು ಡಿಜೆ ಸಂಗೀತ ಹಾಕಿ ಕುಣಿದ ಈ ಪೋಕರಿ ಹುಡುಗರು ಅತ್ತ ಔರಂಗಜೇಬನಿಗೂ ನ್ಯಾಯ ಸಲ್ಲಿಸಲಿಲ್ಲ, ಇತ್ತ ತಾವು ನಂಬಿದ್ದ ಧರ್ಮಕ್ಕೂ ನ್ಯಾಯ ಸಲ್ಲಿಸಲಿಲ್ಲ.

ಇದನ್ನೂ ಓದಿ ಕೋಮುಗಲಭೆಗೆ ಶಿವಮೊಗ್ಗದ ರಾಗಿಗುಡ್ಡವನ್ನೇ ಯಾಕೆ ಆಯ್ಕೆ ಮಾಡಲಾಯಿತು ?

ಇನ್ನೊಂದೆಡೆ ದೇಶದ ವಾಯುವ್ಯ ಭಾಗದಲ್ಲಿ ಅತ್ಯಂತ ವಿಸ್ತಾರವಾದ ಪ್ರದೇಶವನ್ನು ಒಳಗೊಂಡಂತೆ ಭಾರತದ ಭೂಪಟವನ್ನು ಕೈಯಾಡಿಸಿ ವಿಕೃತ ಮೆರೆದಿರುವ ಇವರ ಹುಚ್ಚಾಟಕ್ಕೆ ಮಿತಿ ಇಲ್ಲ. ಇದು ಯಾವ ಕೇಸಿನಡಿಯಲ್ಲಿ ಬರುತ್ತದೆ ಎಂಬ ಕಲ್ಪನೆಯೂ ಈ ಪುಂಡರಿಗಿಲ್ಲ. ಪೊಲೀಸರ ಮೇಲೆ ಬೇರೆ ಕಲ್ಲು ತೂರಿ ಬೆದರಿಕೆಯ ರೀತಿಯ ಮಾತುಗಳನ್ನು ಆಡಿರುವುದು ಎಲ್ಲವೂ ಮುಸ್ಲಿಂ ಸಮುದಾಯಕ್ಕೆ ಮಾರಕವಾಗಿ ಅಡಗಿಕೊಂಡಿರುವ ಕೋಮುವಾದಿ ಹುಣ್ಣನ್ನು ಎತ್ತಿ ತೋರಿಸುತ್ತಿದೆ. ಆ ಹುಣ್ಣಿನ ಆಳದಲ್ಲಿ ಕೋಮುವಾದಿ ಹುಳಗಳು ಹಿತಪಿತ ನಡೆಯುತ್ತಿದೆ. ಮರ್ಯಾದಸ್ಥರೂ ವಿವೇಕವುಳ್ಳವರೂ ಆದ ಮುಸ್ಲಿಮರಿಗೆ ಇಂತಹ ಧೂರ್ತರನ್ನು ಖಂಡಿಸುವುದೇ ಒಂದು ಪಾರ್ಟ್ ಟೈಮ್ ಕೆಲಸವಾಗಿ ನೋಡಿಕೊಳ್ಳುವಂತಹ ದರಿದ್ರ ಸ್ಥಿತಿಗೆ ತಲುಪಿದ್ದೇವೆ.

WhatsApp Image 2023 02 07 at 12.57.45 PM
ಯು ಟಿ ಫರ್ಝಾನ ಅಶ್ರಫ್
+ posts

ಲೇಖಕಿ, ಸಾಮಾಜಿಕ ಕಾರ್ಯಕರ್ತೆ

ಪೋಸ್ಟ್ ಹಂಚಿಕೊಳ್ಳಿ:

ಯು ಟಿ ಫರ್ಝಾನ ಅಶ್ರಫ್
ಯು ಟಿ ಫರ್ಝಾನ ಅಶ್ರಫ್
ಲೇಖಕಿ, ಸಾಮಾಜಿಕ ಕಾರ್ಯಕರ್ತೆ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...