ನರೇಂದ್ರ ಮೋದಿಯವರನ್ನು ಹೊಗಳುವ ಭರದಲ್ಲಿ ಮಾನವೀಯತೆ ಮರೆತ ಶೋಭಾ ಕರಂದ್ಲಾಜೆ

Date:

ಮಣಿಪುರದಲ್ಲಿ ಎರಡೂವರೆ ತಿಂಗಳಿನಿಂದ ನಡೆಯುತ್ತಿರುವ ಎರಡು ಸಮುದಾಯಗಳ ನಡುವಿನ ಗಲಭೆ, ಹಿಂಸಾಚಾರವನ್ನು ತಡೆಯುವ ನಿಟ್ಟಿನಲ್ಲಿ ಯಾವುದೇ ಶ್ರಮ ವಹಿಸದ ಮೋದಿ ಸರ್ಕಾರ ಮತ್ತು ಮಣಿಪುರದ ಬಿಜೆಪಿ ಸರ್ಕಾರ ಜಗತ್ತಿನ ಮುಂದೆ ಬೆತ್ತಲಾಗಿವೆ. ಆದರೂ ಒಬ್ಬ ಸ್ತ್ರೀಯಾಗಿ ಮಣಿಪುರದ ಹೆಣ್ಣುಮಕ್ಕಳ ಬೆತ್ತಲೆ ಮೆರವಣಿಗೆಯನ್ನು ಖಂಡಿಸಲಾಗದ ಸಚಿವೆ ಶೋಭಾ ಕರಂದ್ಲಾಜೆ ನಮ್ಮ ತುಳುನಾಡಿನವರು ಎಂದು ಹೇಳಲು ನಾಚಿಕೆಯಾಗುತ್ತಿದೆ

ಮಣಿಪುರದಲ್ಲಿ ನಡೆಯುತ್ತಾ ಇರುವ ಗಲಭೆ ಮೋದಿಯವರ ಹೆಸರು ಕೆಡಿಸಲು ನಡೆಸುತ್ತಾ ಇರುವುದು” ಎಂದು ಸಚಿವೆ ಶೋಭಾ ಹೇಳಿರುವುದು ನೋಡಿ ಸಖೇದಾಶ್ಚರ್ಯವಾಯಿತು. ಒಮ್ಮೆಗೆ ಅದನ್ನು ಒಪ್ಪಿದರೂ ಮೋದಿ‌ ಹೆಸರು ಕೆಡಿಸಲು ಮಾಡುವ ಗಲಭೆಯನ್ನು ನಿಲ್ಲಿಸಲು ಮೋದಿಗೆ ಸಾಧ್ಯವಿಲ್ಲವೇ ಎಂಬ ಪ್ರಶ್ನೆಯನ್ನೂ ಅವರಿಗೆ ಕೇಳಬೇಕಾಗುತ್ತೆ. ಅದಕ್ಕೆ ಅವರು ಉತ್ತರ ನೀಡಲೇಬೇಕು.

ಹೆಣ್ಣುಮಕ್ಕಳನ್ನು ಸಾರ್ವಜನಿಕರ ಮುಂದೆ ಬೆತ್ತಲೆ ಮಾಡಿ‌, ಅವರ ಅಂಗಗಳ ಮೇಲೆಲ್ಲಾ ಅಸಭ್ಯವಾಗಿ ಕೈಯಾಡಿಸುತ್ತಾ ಮೆರವಣಿಗೆ ಮಾಡಿದ ಘಟನೆಯನ್ನು ಇಡೀ ವಿಶ್ವ ಒಕ್ಕೊರಲಿನಿಂದ ಖಂಡಿಸುತ್ತಾ ಇರುವಾಗ ಬಿಜೆಪಿ ಮತ್ತು ಶೋಭಾ ಕರಂದ್ಲಾಜೆಯಂತಹ ಹಲವರು ಇದನ್ನು‌ ಬಹು ಲಘುವಾಗಿ ಸ್ವೀಕರಿಸಿದ್ದು ನಾಚಿಕೆಗೇಡು. ಒಬ್ಬ ಮಹಿಳೆಯಾಗಿ ಆ ಇಬ್ಬರು ನಗ್ನರಾದ ಮಹಿಳೆಯರ ಮಾನಸಿಕ ವೇದನೆಯನ್ನು ಅರಿತುಕೊಳ್ಳದೇ ಇರುವುದು ಶೋಭಾರವರ ಅಸಂವೇದನೀಯ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.

ಯಾವುದೇ ಸರಕಾರಕ್ಕೆ ರಾಜ್ಯದಲ್ಲಿ‌ ಕಾನೂನು ಸುವ್ಯವಸ್ಥೆ ಇಂದಿನ ದಿನಗಳಲ್ಲಿ ಕಾಪಾಡಲು ಸಾಧ್ಯ ಇಲ್ಲ ಎಂಬುದು ನಂಬಲಾಗುವುದಿಲ್ಲ. ಇಷ್ಟೆಲ್ಲಾ ತಂತ್ರಜ್ಞಾನ ಇದ್ದಾಗ ಮನಸ್ಸು ‌ಮಾಡಿದರೆ ಕೂಡಲೇ ಶಾಂತಿ‌ ಸ್ಥಾಪನೆ ಮಾಡಬಹುದು. ಇಲ್ಲಿ ಹಿಂದೆ ಗುಜರಾತ್ ದಂಗೆ ಆದಾಗ ಯಾವ ರೀತಿ ಅಂದಿನ ಮುಖ್ಯಮಂತ್ರಿ ಜಾಣ‌ಕುರುಡುತನ ಹಾಗೂ ಕಿವುಡುತನ ತೋರಿದರೋ‌ ಅದೇ ರೀತಿ ಅದೇ‌ ಮೋದಿ ಪ್ರಧಾನಿ ಸ್ಥಾನದಲ್ಲಿ ಕೂತು ವರ್ತಿಸುತ್ತಿದ್ದಾರೆ. ಮಣಿಪುರದ ಮುಖ್ಯಮಂತ್ರಿಯೂ ಅದನ್ನೇ ಮಾಡುತ್ತಾ ಇದ್ದಾರೆ. ಶೋಭಾ‌‌ ಆದಿಯಾಗಿ ಬಿಜೆಪಿಯ‌ ಎಲ್ಲಾ ಐ ಟಿ‌ ಸೆಲ್ ನ ವೀರಾಧಿವೀರರು ನಿತ್ಯ ನಿರಂತರ ಮಣಿಪುರದ‌ ಬಗ್ಗೆ ಹೊಸ ಹೊಸ ಸುಳ್ಳುಗಳನ್ನು‌ ಸಂಶೋಧಿಸುವಲ್ಲಿ ಹಾಗೂ ಹರಡುವಲ್ಲಿ ಸಂಪೂರ್ಣವಾಗಿ ತೊಡಗಿಸಿ ಕೊಂಡಿದ್ದಾರೆ.

ಮಾನವೀಯತೆಯ ಮೌಲ್ಯಗಳನ್ನು ಅರಿಯದ ಭಾಜಪಾದ ನಾಯಕರು ಇವತ್ತು ಮಣಿಪುರದಲ್ಲಿ ನಡೆಯುತ್ತಾ ಇರುವ ಕೊಲೆ, ಅತ್ಯಾಚಾರ, ದೊಂಬಿ, ಹಲ್ಲೆ ಇವೆಲ್ಲವುದಕ್ಕೆ ಮೌನವಾಗಿ ಬೆಂಬಲ ಸೂಚಿಸುತ್ತಾ ಇದ್ದಾರೆ.

1683414560 new project 2023 05 07t043757 638

ಶೋಭಾ‌ರವರು ಅಧಿಕಾರ‌ ಶಾಶ್ವತ ಅಲ್ಲ ಎಂಬ ಸತ್ಯಾಂಶ ತಿಳಿದು, ಕೂಡಲೇ ಮೋದಿಯವರ ಭಜನೆ ನಿಲ್ಲಿಸಿ ಜನಪರ ನಿಲುವನ್ನು ವ್ಯಕ್ತಪಡಿಸಬೇಕು. ಏಕೆಂದರೆ ಕರ್ನಾಟಕದ ಜನ ಮೊನ್ನೆಯಷ್ಟೇ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕಪಾಳಮೋಕ್ಷ ಮಾಡಿದ್ದಾರೆ. ಶೋಭಾ ಕರಂದ್ಲಾಜೆ, ನಳಿನ್‌ ಕುಮಾರ್,‌ ಪ್ರತಾಪ್‌ ಸಿಂಹ, ತೇಜಸ್ವಿ ‌ಸೂರ್ಯ‌ ಇನ್ನಿತರ ಸಂಸದರಿಗೆ ಮನೆ ಬಾಗಿಲನ್ನು ತೋರಿಸಲು‌ ಮತದಾರರು‌ ಸಜ್ಜಾಗಿದ್ದಾರೆ. ಇಂತಹ ಹೇಳಿಕೆಗಳು ಅವರ ಸೋಲಿನ ಅಂತರವನ್ನು‌ ಇನ್ನೂ‌ ಜಾಸ್ತಿ‌ ಮಾಡುತ್ತವೆ, ಹೊರತು‌‌ ಪಡಿಸಿ ಯಾವುದೇ ರಾಜಕೀಯ ‌ಲಾಭ‌‌ ತರುವುದಿಲ್ಲ ಎಂದು ಶೋಭಾ ಅರ್ಥಮಾಡಿಕೊಂಡರೆ ಒಳಿತು.

ಮೊನ್ನೆ ಮಣಿಪುರದಲ್ಲಿ‌ ಗಲಭೆ‌ ಪ್ರಾರಂಭವಾದಾಗ ಇದೇ ಶೋಭಾ ಮತ್ತು ರಾಜ್ಯದ ಬಿಜೆಪಿ ಮುಖಂಡರು ಇದೇ ಮೋದಿಯವರಿಗೆ ಪುಷ್ಪವರ್ಷ ಮಾಡುವುದರಲ್ಲಿ‌‌ ಮಗ್ನರಾಗಿದ್ದರು. ರಾಜ್ಯದ ಪುಣ್ಯ, ಮೋದಿಯವರ ಅಪಾರ ಅಬ್ಬರದ‌ ಪ್ರಚಾರದ ಬಳಿಕವೂ ಬಿಜೆಪಿ‌‌ ಹೀನಾಯವಾಗಿ ಸೋತಿತು. ಮಣಿಪುರದಲ್ಲಿ ಶಾಂತಿ‌ ನೆಲೆಸಬೇಕಾದರೆ ಬಿಜೆಪಿ ವಿರುದ್ಧ ‌ದೇಶದಾದ್ಯಂತ ಅಲೆ ಏಳಬೇಕು. ಅದನ್ನು ಶೀಘ್ರದಲ್ಲೇ ಆಶಿಸೋಣ‌.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
WhatsApp Image 2025 11 17 at 3.16.03 PM
ಅಮೃತ್‌ ಶೆಣೈ
+ posts

ಅಧ್ಯಕ್ಷರು, ʼಸಹಬಾಳ್ವೆʼ ಉಡುಪಿ‌

ಪೋಸ್ಟ್ ಹಂಚಿಕೊಳ್ಳಿ:

ಅಮೃತ್‌ ಶೆಣೈ
ಅಮೃತ್‌ ಶೆಣೈ
ಅಧ್ಯಕ್ಷರು, ʼಸಹಬಾಳ್ವೆʼ ಉಡುಪಿ‌

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಷಾರಾಮಿ ಕ್ರೂಸ್‌ಗಳ ಮಾಂಸಕ್ಕಿಲ್ಲದ ಪಾಪ, ಕಾರ್ಮಿಕರ ‘ಇಫ್ತಾರ್’ ಬಿರಿಯಾನಿಗೇಕೆ?

ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು...

ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ...

ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ...

ಮಣಿಪುರ | ಕರಾಳ ಘಟನೆಗೆ 3 ವರ್ಷ; ಕಾಗದದಲ್ಲೇ ಉಳಿದ ಕೇಂದ್ರ ಸರ್ಕಾರದ ‘ನಾರೀ ಸಮ್ಮಾನ’

ನ್ಯಾಯದ ವಿಳಂಬವು ಅನ್ಯಾಯಕ್ಕೆ ಸಮಾನ ಎಂಬ ಮಾತಿದೆ. ಮಣಿಪುರದ ಈ ಪ್ರಕರಣವು...